ಎಸ್.ಎಸ್.ಭಟ್
ಗ್ರಾಮದಲ್ಲಿ ಐದಾರು ಆಡು, ಕುರಿ, ನಾಯಿಗಳನ್ನು ತಿಂದಿರುವ ಚಿರತೆ; ಸೆರೆಹಿಡಿಯಲು ಆಗ್ರಹ
ವರುಣ: ಮೈಸೂರು ತಾಲ್ಲೂಕಿನ ಕೆಂಚನಗೂಡಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಭಯದಿಂದ ಜೀವನ ನಡೆಸುವಂತಾಗಿದೆ.
ಈಗಾಗಲೇ ಗ್ರಾಮದಲ್ಲಿ ಐದಾರು ಆಡು, ಕುರಿ, ನಾಯಿಗಳನ್ನು ತಿಂದಿರುವಚಿರತೆ ಈ ಗ್ರಾಮದ ಕೆರೆ ಬಳಿ ಮೂರು ಮರಿಗಳಿಗೆ ಜನ್ಮ ನೀಡಿದ್ದು, ಕೆರೆಯ ಬಳಿ ಹೋದವರಿಗೆ ಭೀತಿ ಮೂಡಿಸುತ್ತಿದೆ.
ಈ ಗ್ರಾಮದ ಸುತ್ತ ಕೆಎಚ್ಬಿ ಸೇರಿದಂತೆ ಅನೇಕ ಖಾಸಗಿ ಬಡಾವಣೆಗಳಿದ್ದು, ಅವುಗಳು ಅಭಿವೃದ್ಧಿಯಾಗದೆ ಕುರುಚಲು ಕಾಡಿನಿಂದ ಆವೃತವಾಗಿ ಕಾಡು ಪ್ರಾಣಿಗಳ ವಾಸದ ಗೂಡಾಗಿವೆ. ಈಗಾಗಲೇ ಚಿರತೆ ಸಾಕುಪ್ರಾಣಿಗಳನ್ನು ಚಿರತೆ ತಿಂದುಹಾಕಿದೆ.
ಚಿರತೆಯನ್ನು ಸೆರೆಹಿಡಿದು ಗ್ರಾಮದಲ್ಲಿನ ಚಿರತೆ ಹಾವಳಿಯ ಆತಂಕ ನಿವಾರಿಸಬೇಕು ಎಂದು ಮೈಸೂರಿನ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪ.
ಚಿರತೆ ಈಗ ಅಲ್ಲೇ ತನ್ನ ಮೂರೂ ಮರಿಗಳೊಂದಿಗೆ ಸುತ್ತಾಡಲಾರಂಬಿಸಿದೆ. ಗುರುವಾರ ಮಧ್ಯಾಹ್ನ ಗ್ರಾಮದ ಜೋಗನಾಯಕ ಅಡು, ಕುರಿಗಳೊಂದಿಗೆ ಕೆರೆಗೆ ನೀರು ಕುಡಿಸಲು ಹೋದಾಗ ಆಡಿನ ಹಿಂಡಿನ ಮೇಲೆ ಚಿರತೆ ಬಂದು ಎರಗಿದೆ.
ಆಗ ಜೋಗನಾಯಕ ಜೋರಾಗಿ ಕಿರುಚಾಡಿದ್ದು, ಅದರಿಂದ ಗಾಬರಿಯಾದ ಚಿರತೆ ಕುರುಚಲು ಕಾಡಿನತ್ತ ತೆರಳಿದೆ. ಹೀಗಾಗಿ ಜೋಗನಾಯಕ ಆಡು ಕುರಿಗಳೊಂದಿಗೆ ಗ್ರಾಮ ಸೇರಿಕೊಂಡಿದ್ದಾರೆ.
ಈ ಘಟನೆಯಿಂದಾಗಿ ಈ ಗ್ರಾಮದ ರಸ್ತೆಗಳಲ್ಲಿ ನಿತ್ಯ ಸಂಚರಿಸುವ ಜನರುಭಯಭೀತರಾಗಿ ಆ ರಸ್ತೆಯನ್ನು ಬಿಟ್ಟು ಬಳಸು ಹಾಕಿ ಭಯದಿಂದಲೇ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ಈವರೆಗೆ ಆಡು, ಕುರಿ, ನಾಯಿಗಳ ಮೇಲೆ ಎರಗಿದ ಚಿರತೆ ಮನುಷ್ಯರ ಮೇಲೆ ಎರಗುವ ಮೊದಲು ಅದನ್ನು ಸೆರೆಹಿಡಿದು ಗ್ರಾಮಸ್ಥರ ಆತಂಕ ವನ್ನು ದೂರ ಮಾಡಬೇಕು ಎಂದು ಕೆಂಚಲಗೂಡಿನ ಜನತೆ ಆಗ್ರಹಿಸಿದ್ದಾರೆ.
ಚಿರತೆ ಹಾವಳಿ ತಡೆಯಬೇಕಾಗಿದ್ದ ಅರಣ್ಯಾಧಿಕಾರಿಗಳು ಗ್ರಾಮ ಪಂಚಾಯಿತಿ ಹಾಗೂ ಖಾಸಗಿ ಬಡಾವಣೆಗಳ ಮಾಲೀಕರು ಚಿರತೆ ಹಾವಳಿ ತಡೆಯಲು ಮುಂದಾಗದೆ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಜಾರಿಕೊಳ್ಳುತ್ತಿದ್ದಾರೆ.
ಚಿರತೆ ಹಾವಳಿ ಇದೇ ರೀತಿ ಮುಂದುವರಿದಲ್ಲಿ ಮೈಸೂರಿನ ಅರಣ್ಯ ಇಲಾಖೆ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ರಾಜ್ಯ ರೈತ ಸಂಘದ ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಮರಂಕಯ್ಯ ಎಚ್ಚರಿಸಿದ್ದಾರೆ.
” ಚಿರತೆಯು ಕುರಿಗಳ ಹಿಂಡಿನ ಮೇಲೆಎರಗಿದ್ದನ್ನು ಕಂಡ ನಾನು ಜೋರಾಗಿಕಿರುಚಾಡಿದಾಗ ಅದು ಕುರಿಯನ್ನು ಬಿಟ್ಟು ಕುರುಚಲು ಕಾಡಿನತ್ತ ಸಾಗಿತು. ನಾನು ಭಯದಿಂದ ಗ್ರಾಮದತ್ತ ಓಡಿ ಬಂದೆ.”
-ಜೋಗನಾಯಕ, ಕುರಿಗಾಹಿ, ಕೆಂಚಲಗೂಡು
ಹೊಸದಿಲ್ಲಿ : ದೇಶದಾದ್ಯಂತ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆದ ನೀಟ್-ಯುಜಿ ಮರುಪರೀಕ್ಷೆಯಲ್ಲಿ 22 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ದೇಶದ…
ಚೆನ್ನೆ : ಇಲ್ಲಿನ ತಿರುವಳ್ಳೂರಿನಲ್ಲಿರುವ ಸೀಗಡಿ ಸಂಸ್ಕರಣಾ ಕಾರ್ಖಾನೆಯಲ್ಲಿ ಭಾನುವಾರ ಮಧ್ಯಾಹ್ನ ಅಮೋನಿಯಾ ಅನಿಲ ಸೋರಿಕೆಯಾಗಿ, ಏಳು ಮಂದಿ ಮಹಿಳಾ…
ಆಧಾರ್ ಕಾರ್ಡ್ ಪರಿಶೀಲನೆ ನಂತರ ಶಂಕೆ ನಿವಾರಣೆ ಮೈಸೂರು : ಪಶ್ಚಿಮ ಬಂಗಾಳದಿಂದ ಬಂದವರನ್ನು ಬಾಂಗ್ಲಾ ದೇಶದ ನಿವಾಸಿಗಳೆಂದು ತಿಳಿದ…
ರೈತರು, ದನಗಾಹಿಗಳಲ್ಲಿ ಆತಂಕ ಬೇಗ ಹುಲಿ ಸೆರೆ ಹಿಡಿಯಲು ಆಗ್ರಹ ಚಾಮರಾಜನಗರ : ತಾಲ್ಲೂಕಿನ ಸಿದ್ದಲಿಂಗಪುರದ ಸಮೀಪ ಭಾನುವಾರ ಮಧ್ಯಾಹ್ನ…
ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ವಿಳಂಬವಾಗಿದ್ದು, ಇದು ಉತ್ಪಾದನೆಯ ಮೇಲೆ ಪರಿಣಾಮ ಬೀರಬಹುದು. ಕೃಷಿ ಇಲಾಖೆಯ ಅಧಿಕಾರಿಗಳು ಬಿತ್ತನೆ ಗುರಿಯ ಶೇಕಡಾ…
ರಾಮನಗರ: ಟೌನ್ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ಕೈಗೊಂಡಿರುವ ಕೈಗೊಂಡಿರುವ ಬೃಹತ್ ಪಾದಯಾತ್ರೆಯಲ್ಲಿ ಮಾತನಾಡಿದ ಯುವನಾಯಕ ನಿಖಿಲ್ ಕುಮಾರಸ್ವಾಮಿ ಇದು ಕೇವಲ…