Andolana originals

ಕೆಂಚಲಗೂಡಿನಲ್ಲಿ ಚಿರತೆ ಹಾವಳಿ; ಗ್ರಾಮಸ್ಥರಲ್ಲಿ ಭೀತಿ

ಎಸ್.ಎಸ್.ಭಟ್

ಗ್ರಾಮದಲ್ಲಿ ಐದಾರು ಆಡು, ಕುರಿ, ನಾಯಿಗಳನ್ನು ತಿಂದಿರುವ ಚಿರತೆ; ಸೆರೆಹಿಡಿಯಲು ಆಗ್ರಹ

ವರುಣ: ಮೈಸೂರು ತಾಲ್ಲೂಕಿನ ಕೆಂಚನಗೂಡಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಭಯದಿಂದ ಜೀವನ ನಡೆಸುವಂತಾಗಿದೆ.

ಈಗಾಗಲೇ ಗ್ರಾಮದಲ್ಲಿ ಐದಾರು ಆಡು, ಕುರಿ, ನಾಯಿಗಳನ್ನು ತಿಂದಿರುವಚಿರತೆ ಈ ಗ್ರಾಮದ ಕೆರೆ ಬಳಿ ಮೂರು ಮರಿಗಳಿಗೆ ಜನ್ಮ ನೀಡಿದ್ದು, ಕೆರೆಯ ಬಳಿ ಹೋದವರಿಗೆ ಭೀತಿ ಮೂಡಿಸುತ್ತಿದೆ.

ಈ ಗ್ರಾಮದ ಸುತ್ತ ಕೆಎಚ್‌ಬಿ ಸೇರಿದಂತೆ ಅನೇಕ ಖಾಸಗಿ ಬಡಾವಣೆಗಳಿದ್ದು, ಅವುಗಳು ಅಭಿವೃದ್ಧಿಯಾಗದೆ ಕುರುಚಲು ಕಾಡಿನಿಂದ ಆವೃತವಾಗಿ ಕಾಡು ಪ್ರಾಣಿಗಳ ವಾಸದ ಗೂಡಾಗಿವೆ. ಈಗಾಗಲೇ ಚಿರತೆ ಸಾಕುಪ್ರಾಣಿಗಳನ್ನು ಚಿರತೆ ತಿಂದುಹಾಕಿದೆ.

ಚಿರತೆಯನ್ನು ಸೆರೆಹಿಡಿದು ಗ್ರಾಮದಲ್ಲಿನ ಚಿರತೆ ಹಾವಳಿಯ ಆತಂಕ ನಿವಾರಿಸಬೇಕು ಎಂದು ಮೈಸೂರಿನ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ಚಿರತೆ ಈಗ ಅಲ್ಲೇ ತನ್ನ ಮೂರೂ ಮರಿಗಳೊಂದಿಗೆ ಸುತ್ತಾಡಲಾರಂಬಿಸಿದೆ. ಗುರುವಾರ ಮಧ್ಯಾಹ್ನ ಗ್ರಾಮದ ಜೋಗನಾಯಕ ಅಡು, ಕುರಿಗಳೊಂದಿಗೆ ಕೆರೆಗೆ ನೀರು ಕುಡಿಸಲು ಹೋದಾಗ ಆಡಿನ ಹಿಂಡಿನ ಮೇಲೆ ಚಿರತೆ ಬಂದು ಎರಗಿದೆ.

ಆಗ ಜೋಗನಾಯಕ ಜೋರಾಗಿ ಕಿರುಚಾಡಿದ್ದು, ಅದರಿಂದ ಗಾಬರಿಯಾದ ಚಿರತೆ ಕುರುಚಲು ಕಾಡಿನತ್ತ ತೆರಳಿದೆ. ಹೀಗಾಗಿ ಜೋಗನಾಯಕ ಆಡು ಕುರಿಗಳೊಂದಿಗೆ ಗ್ರಾಮ ಸೇರಿಕೊಂಡಿದ್ದಾರೆ.

ಈ ಘಟನೆಯಿಂದಾಗಿ ಈ ಗ್ರಾಮದ ರಸ್ತೆಗಳಲ್ಲಿ ನಿತ್ಯ ಸಂಚರಿಸುವ ಜನರುಭಯಭೀತರಾಗಿ ಆ ರಸ್ತೆಯನ್ನು ಬಿಟ್ಟು ಬಳಸು ಹಾಕಿ ಭಯದಿಂದಲೇ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ಈವರೆಗೆ ಆಡು, ಕುರಿ, ನಾಯಿಗಳ ಮೇಲೆ ಎರಗಿದ ಚಿರತೆ ಮನುಷ್ಯರ ಮೇಲೆ ಎರಗುವ ಮೊದಲು ಅದನ್ನು ಸೆರೆಹಿಡಿದು ಗ್ರಾಮಸ್ಥರ ಆತಂಕ ವನ್ನು ದೂರ ಮಾಡಬೇಕು ಎಂದು ಕೆಂಚಲಗೂಡಿನ ಜನತೆ ಆಗ್ರಹಿಸಿದ್ದಾರೆ.

ಚಿರತೆ ಹಾವಳಿ ತಡೆಯಬೇಕಾಗಿದ್ದ ಅರಣ್ಯಾಧಿಕಾರಿಗಳು ಗ್ರಾಮ ಪಂಚಾಯಿತಿ ಹಾಗೂ ಖಾಸಗಿ ಬಡಾವಣೆಗಳ ಮಾಲೀಕರು ಚಿರತೆ ಹಾವಳಿ ತಡೆಯಲು ಮುಂದಾಗದೆ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಜಾರಿಕೊಳ್ಳುತ್ತಿದ್ದಾರೆ.

ಚಿರತೆ ಹಾವಳಿ ಇದೇ ರೀತಿ ಮುಂದುವರಿದಲ್ಲಿ ಮೈಸೂರಿನ ಅರಣ್ಯ ಇಲಾಖೆ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ರಾಜ್ಯ ರೈತ ಸಂಘದ ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಮರಂಕಯ್ಯ ಎಚ್ಚರಿಸಿದ್ದಾರೆ.

” ಚಿರತೆಯು ಕುರಿಗಳ ಹಿಂಡಿನ ಮೇಲೆಎರಗಿದ್ದನ್ನು ಕಂಡ ನಾನು ಜೋರಾಗಿಕಿರುಚಾಡಿದಾಗ ಅದು ಕುರಿಯನ್ನು ಬಿಟ್ಟು ಕುರುಚಲು ಕಾಡಿನತ್ತ ಸಾಗಿತು. ನಾನು ಭಯದಿಂದ ಗ್ರಾಮದತ್ತ ಓಡಿ ಬಂದೆ.”

-ಜೋಗನಾಯಕ, ಕುರಿಗಾಹಿ, ಕೆಂಚಲಗೂಡು

ಆಂದೋಲನ ಡೆಸ್ಕ್

Recent Posts

ರಾಮನಗರ: ಮನೆ ಬೀಗ ಮುರಿದು ಅರ್ಧ ಕೆಜಿ ಚಿನ್ನ ದೋಚಿದ ಕಳ್ಳರು

ರಾಮನಗರ: ಮನೆ ಬೀಗ ಮುರಿದು ಅರ್ಧ ಕೆಜಿ ಚಿನ್ನ ದೋಚಿರುವ ಘಟನೆ ರಾಮನಗರದ ದ್ಯಾವರಸೇಗೌಡನದೊಡ್ಡಿ ಸಮೀಪ ನಡೆದಿದೆ. ಸಾಫ್ಟ್‌ವೇರ್‌ ಉದ್ಯೋಗಿಯಾಗಿರುವ…

39 mins ago

ಜೋಳದ ಫಸಲು ಕಾಯುವ ವೇಳೆ ಕಾಡಾನೆ ದಾಳಿ: ರೈತನಿಗೆ ಗಂಭೀರ ಗಾಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಜಮೀನಿನಲ್ಲಿ ಜೋಳದ ಪಸಲು ಕಾಯುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ…

1 hour ago

ಓದುಗರ ಪತ್ರ: ಸ್ವಾಗತಾರ್ಹ ತೀರ್ಪು!

ಅಧಿಕ ಸುಂಕ ಹೇರಿಕೆ ಚಟ ಬ್ರಹ್ಮಾಸ್ತ್ರವಾಗಿತ್ತು ಟ್ರಂಪಣ್ಣನಿಗೆ ವಿವಿಧ ದೇಶಗಳನು ನಿಯಂತ್ರಿಸಲು! ಆದರೀಗ ರದ್ದುಗೊಳಿಸಿದೆ ಅಮೆರಿಕದ ಸುಪ್ರೀಂ ಕೋರ್ಟ್ ಅಽಕ…

2 hours ago

ಓದುಗರ ಪತ್ರ: ಮಕ್ಕಳಿಗೆ ಮೊಬೈಲ್ ನಿಷೇಧದ ಚಿಂತನೆ: ಸ್ವಾಗತಾರ್ಹ

ರಾಜ್ಯದಲ್ಲಿ ೧೬ ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿರುವುದು ಸ್ವಾಗತಾರ್ಹ.…

2 hours ago

ಓದುಗರ ಪತ್ರ: ಮಕ್ಕಳು ಅಗತ್ಯವಿರುವಷ್ಟೇ ಮೊಬೈಲ್ ಬಳಸಲಿ

ಶಾಲಾ -ಕಾಲೇಜುಗಳಲ್ಲಿ, ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆಯನ್ನು ನಿಷೇಧಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಉಪಮುಖ್ಯಮಂತ್ರಿ, ಡಿ.ಕೆ.ಶಿವಕುಮಾರ್ ಅವರು ಹೇಳಿರುವುದು ಮಾಧ್ಯಮಗಳಲ್ಲಿ…

2 hours ago

ಓದುಗರ ಪತ್ರ: ಸಿಲ್ಕ್ ಫಿಲೇಚರ್ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಕೈಬಿಡಿ

ಮೈಸೂರಿನಲ್ಲಿ ೧೯೧೨ರಲ್ಲಿ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ ರೇಷ್ಮೆ ಉದ್ಯಮವು ಜಾಗತಿಕ ಮಟ್ಟದಲ್ಲಿ ಮೈಸೂರು ಸಿಲ್ಕ್ ಸೀರೆ…

2 hours ago