Andolana originals

ಕೆಂಚಲಗೂಡಿನಲ್ಲಿ ಚಿರತೆ ಹಾವಳಿ; ಗ್ರಾಮಸ್ಥರಲ್ಲಿ ಭೀತಿ

ಎಸ್.ಎಸ್.ಭಟ್

ಗ್ರಾಮದಲ್ಲಿ ಐದಾರು ಆಡು, ಕುರಿ, ನಾಯಿಗಳನ್ನು ತಿಂದಿರುವ ಚಿರತೆ; ಸೆರೆಹಿಡಿಯಲು ಆಗ್ರಹ

ವರುಣ: ಮೈಸೂರು ತಾಲ್ಲೂಕಿನ ಕೆಂಚನಗೂಡಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಭಯದಿಂದ ಜೀವನ ನಡೆಸುವಂತಾಗಿದೆ.

ಈಗಾಗಲೇ ಗ್ರಾಮದಲ್ಲಿ ಐದಾರು ಆಡು, ಕುರಿ, ನಾಯಿಗಳನ್ನು ತಿಂದಿರುವಚಿರತೆ ಈ ಗ್ರಾಮದ ಕೆರೆ ಬಳಿ ಮೂರು ಮರಿಗಳಿಗೆ ಜನ್ಮ ನೀಡಿದ್ದು, ಕೆರೆಯ ಬಳಿ ಹೋದವರಿಗೆ ಭೀತಿ ಮೂಡಿಸುತ್ತಿದೆ.

ಈ ಗ್ರಾಮದ ಸುತ್ತ ಕೆಎಚ್‌ಬಿ ಸೇರಿದಂತೆ ಅನೇಕ ಖಾಸಗಿ ಬಡಾವಣೆಗಳಿದ್ದು, ಅವುಗಳು ಅಭಿವೃದ್ಧಿಯಾಗದೆ ಕುರುಚಲು ಕಾಡಿನಿಂದ ಆವೃತವಾಗಿ ಕಾಡು ಪ್ರಾಣಿಗಳ ವಾಸದ ಗೂಡಾಗಿವೆ. ಈಗಾಗಲೇ ಚಿರತೆ ಸಾಕುಪ್ರಾಣಿಗಳನ್ನು ಚಿರತೆ ತಿಂದುಹಾಕಿದೆ.

ಚಿರತೆಯನ್ನು ಸೆರೆಹಿಡಿದು ಗ್ರಾಮದಲ್ಲಿನ ಚಿರತೆ ಹಾವಳಿಯ ಆತಂಕ ನಿವಾರಿಸಬೇಕು ಎಂದು ಮೈಸೂರಿನ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ಚಿರತೆ ಈಗ ಅಲ್ಲೇ ತನ್ನ ಮೂರೂ ಮರಿಗಳೊಂದಿಗೆ ಸುತ್ತಾಡಲಾರಂಬಿಸಿದೆ. ಗುರುವಾರ ಮಧ್ಯಾಹ್ನ ಗ್ರಾಮದ ಜೋಗನಾಯಕ ಅಡು, ಕುರಿಗಳೊಂದಿಗೆ ಕೆರೆಗೆ ನೀರು ಕುಡಿಸಲು ಹೋದಾಗ ಆಡಿನ ಹಿಂಡಿನ ಮೇಲೆ ಚಿರತೆ ಬಂದು ಎರಗಿದೆ.

ಆಗ ಜೋಗನಾಯಕ ಜೋರಾಗಿ ಕಿರುಚಾಡಿದ್ದು, ಅದರಿಂದ ಗಾಬರಿಯಾದ ಚಿರತೆ ಕುರುಚಲು ಕಾಡಿನತ್ತ ತೆರಳಿದೆ. ಹೀಗಾಗಿ ಜೋಗನಾಯಕ ಆಡು ಕುರಿಗಳೊಂದಿಗೆ ಗ್ರಾಮ ಸೇರಿಕೊಂಡಿದ್ದಾರೆ.

ಈ ಘಟನೆಯಿಂದಾಗಿ ಈ ಗ್ರಾಮದ ರಸ್ತೆಗಳಲ್ಲಿ ನಿತ್ಯ ಸಂಚರಿಸುವ ಜನರುಭಯಭೀತರಾಗಿ ಆ ರಸ್ತೆಯನ್ನು ಬಿಟ್ಟು ಬಳಸು ಹಾಕಿ ಭಯದಿಂದಲೇ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ಈವರೆಗೆ ಆಡು, ಕುರಿ, ನಾಯಿಗಳ ಮೇಲೆ ಎರಗಿದ ಚಿರತೆ ಮನುಷ್ಯರ ಮೇಲೆ ಎರಗುವ ಮೊದಲು ಅದನ್ನು ಸೆರೆಹಿಡಿದು ಗ್ರಾಮಸ್ಥರ ಆತಂಕ ವನ್ನು ದೂರ ಮಾಡಬೇಕು ಎಂದು ಕೆಂಚಲಗೂಡಿನ ಜನತೆ ಆಗ್ರಹಿಸಿದ್ದಾರೆ.

ಚಿರತೆ ಹಾವಳಿ ತಡೆಯಬೇಕಾಗಿದ್ದ ಅರಣ್ಯಾಧಿಕಾರಿಗಳು ಗ್ರಾಮ ಪಂಚಾಯಿತಿ ಹಾಗೂ ಖಾಸಗಿ ಬಡಾವಣೆಗಳ ಮಾಲೀಕರು ಚಿರತೆ ಹಾವಳಿ ತಡೆಯಲು ಮುಂದಾಗದೆ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಜಾರಿಕೊಳ್ಳುತ್ತಿದ್ದಾರೆ.

ಚಿರತೆ ಹಾವಳಿ ಇದೇ ರೀತಿ ಮುಂದುವರಿದಲ್ಲಿ ಮೈಸೂರಿನ ಅರಣ್ಯ ಇಲಾಖೆ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ರಾಜ್ಯ ರೈತ ಸಂಘದ ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಮರಂಕಯ್ಯ ಎಚ್ಚರಿಸಿದ್ದಾರೆ.

” ಚಿರತೆಯು ಕುರಿಗಳ ಹಿಂಡಿನ ಮೇಲೆಎರಗಿದ್ದನ್ನು ಕಂಡ ನಾನು ಜೋರಾಗಿಕಿರುಚಾಡಿದಾಗ ಅದು ಕುರಿಯನ್ನು ಬಿಟ್ಟು ಕುರುಚಲು ಕಾಡಿನತ್ತ ಸಾಗಿತು. ನಾನು ಭಯದಿಂದ ಗ್ರಾಮದತ್ತ ಓಡಿ ಬಂದೆ.”

-ಜೋಗನಾಯಕ, ಕುರಿಗಾಹಿ, ಕೆಂಚಲಗೂಡು

ಆಂದೋಲನ ಡೆಸ್ಕ್

Recent Posts

ವೋಟ್‌ ಚೋರಿ | ಸತ್ಯದ ಬೆನ್ನಿಗೆ ನಿಂತು ಮೋದಿ, ಶಾ, ಆರ್‌ಎಸ್‌ಎಸ್‌ ಅನ್ನು ಖಾಲಿ ಮಾಡಿಸುತ್ತೇವೆ : ಕಾಂಗ್ರೆಸ್‌ ಶಪಥ

ಹೊಸದಿಲ್ಲಿ : ವೋಟ್ ಚೋರಿ ವಿರುದ್ಧ ಮತ್ತೆ ರಾಷ್ಟ್ರ ಮಟ್ಟದಲ್ಲಿ ಅಬ್ಬರಿಸಿರುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮತ್ತು…

4 mins ago

ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ

ಬೆಂಗಳೂರು : ಕಾಂಗ್ರೆಸ್‌ನ ಹಿರಿಯ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ(95) ಅವರು ನಿಧನರಾಗಿದ್ದಾರೆ.…

1 hour ago

ಆಯ್ತಪ್ಪ ನಾಳೆ ʻಗ್ಯಾರಂಟಿʼ ನಿಲ್ಲಿಸಿತ್ತೀವಿ ಬಿಡಿ : ಪರಮೇಶ್ವರ್‌ ಹೀಗೆ ಹೇಳಿದ್ಯಾಕೆ?

ತುಮಕೂರು : ವಿರೋಧ ಪಕ್ಷದವರು ಪದೇ ಪದೆ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯನ್ನು ವಿರೋಧಿಸುತ್ತಾರೆ. ಗ್ಯಾರಂಟಿ ಕೊಡದೆ ರಸ್ತೆ,…

1 hour ago

ಇಂದಿರಾಗಾಂಧಿ ತ್ಯಾಗದ ಮುಂದೆ ನಮ್ಮದೇನು ಇಲ್ಲ : ಖರ್ಗೆ ಭಾವುಕ ನುಡಿ

ಹೊಸದಿಲ್ಲಿ : ಇಂದು ನನ್ನ ಮಗನಿಗೆ ಎಂಟು ಗಂಟೆಯ ಆಪರೇಷನ್‌ ಇತ್ತು. ಪತ್ನಿ, ಮಗಳು ಎಲ್ಲರೂ ಫೋನ್‌ ಮಾಡಿ ಬಹಳ…

1 hour ago

ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ ; ಸಾರ್ವಜನಿಕರಲ್ಲಿ ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ!

ಮೈಸೂರು : ನಿರ್ದಿಷ್ಟ ಬ್ರಾಂಡ್‌ನ ಮೊಟ್ಟೆಗಳಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ 'ಜಿನೋಟಾಕ್ಸಿಕ್ ಅಂಶ' ಪತ್ತೆಯಾಗಿದೆ ಎಂದು ಹೇಳುವ ವೈರಲ್ ವಿಡಿಯೋ ಇದೀಗ…

2 hours ago

ಶಿವಾಜಿ ಮುಸ್ಲಿಂರ ವಿರೋಧಿಯಾಗಿರಲಿಲ್ಲ :ಸಚಿವ ಕಾರ್ಮಿಕ ಸಂತೋಷ ಲಾಡ್‌

ಬೆಳಗಾವಿ : ಮರಾಠರು ಮುಸ್ಲಿಂ ವಿರೋಧಿ ಅಂತ‌ ಹಣೆಪಟ್ಟಿ ಕಟ್ಟಿಕೊಂಡಿದ್ದೇವೆ. ನಾವು ಮೊಘಲರ ವಿರುದ್ಧ ಇದ್ದೆವು. ಆದರೆ ಮುಸ್ಲಿಂರ ವಿರೋಧಿಗಳಾಗಿರಲಿಲ್ಲ.…

2 hours ago