Andolana originals

ಜಲಾವೃತವಾಗುವ ಕುಳ್ಳಂಕನಹುಂಡಿ

ಮೈಸೂರು: ನಂಜನಗೂಡಿನಿಂದ ತಿ.ನರಸೀಪುರ ರಸ್ತೆಯಲ್ಲಿ ಹೊರಟು, ಸುಮಾರು 5 ಕಿ.ಮೀ. ಸಾಗಿದ ಬಳಿಕ ಸಿಗುವ ಮುಳ್ಳೂರು ಗ್ರಾಮದ ಗೇಟ್‌ನಲ್ಲಿ ಎಡಕ್ಕೆ ತಿರುವು ಪಡೆದು ನೇರವಾಗಿ ತೆರಳಿದರೆ, ಅಂದಾಜು 5 ಕಿ.ಮೀ. ದೂರದಲ್ಲಿ ಕುಳ್ಳಂಕನಹುಂಡಿ ಗ್ರಾಮ ಸಿಗುತ್ತದೆ. ಅದರ ಮಗ್ಗುಲಿನಲ್ಲೇ ಕಪಿಲಾ ನದಿಯ ಹರಿವು. ಕಣ್ಣನ ತಂಪು ಮಾಡುವ ನದಿಯ ಭವ್ಯ ನೋಟ; ಸ್ಥಳೀಯರನ್ನು ಜಡಗೊಳಿಸಿದೆ ಎನ್ನಬಹುದು.

ಕಾರಣವಿಷ್ಟೇ, ಹೊಸದಾಗಿ ಆ ಊರಿಗೆ ಭೇಟಿ ನೀಡುವ ಮಂದಿಯನ್ನು ನದಿಯು ಅತ್ಯಂತ ಆಕರ್ಷಕವಾಗಿ, ಸೂಜಿಗಲ್ಲಿನಂತೆ ಸೆಳೆಯಬಹದು. ಆದರೆ, ಗ್ರಾಮಸ್ಥರಿಗೆ ನದಿಯ ಅಬ್ಬರದ್ದೇ ಆತಂಕ. ಇತ್ತೀಚೆಗೆ ನದಿಯ ಒಡಲುಕ್ಕಿ ನೀರು ಹರಿದಾಗ, ಹಲವು ಮನೆಗಳಿಗೆ ನೀರು ನುಗ್ಗಿತ್ತು. ಅವರನ್ನು ಗ್ರಾಮದ ಎತ್ತರದ ಪ್ರದೇಶಕ್ಕೆ ಸ್ಥಳಾಂತರ ಗೊಳಿಸಲಾಗಿತ್ತು. 125 ಮನೆಗಳಿರುವ ಈ ಪುಟ್ಟ ಹಳ್ಳಿಯಲ್ಲಿ ಹತ್ತಾರು ಕುಟುಂಬದವರು ಸಾಮಾನ್ಯವಾಗಿ ನೆರೆಯ ಬರೆಗೆ ಒಳಗಾಗುತ್ತಾರೆ. ಉಳಿದವರು ಸುರಕ್ಷಿತವಾಗಿರುತ್ತಾರೆ. ಅವರಿಗೆ ಪ್ರವಾಹ, ನೆರೆಯ ಭಯವಿಲ್ಲ.

ಆದರೆ, ಕಪಿಲಾ ನದಿಯಲ್ಲಿ ಪ್ರವಾಹ ಉಂಟಾದರೆ, ಕುಳ್ಳಂಕನಹುಂಡಿ ಮತ್ತು ಮುಳ್ಳೂರು ಗ್ರಾಮದ ನಡುವಿನ ರಸ್ತೆಯ ಸಂಪರ್ಕ ಕಡಿದು ಹೋಗುತ್ತದೆ. ನದಿಯ ಇನ್ನೊಂದು ಭಾಗದಿಂದ ನೀರು ಊರೊಳಗೆ ನುಗ್ಗುತ್ತದೆ. ಅಂದರೆ ಬಹುತೇಕ ಗ್ರಾಮ ದ್ವೀಪದಂತಾಗುತ್ತದೆ. ಆದರೆ, ದಿನಸಿಗಳಿಗೆ ತಾಪತ್ರಯ ಆಗುವುದಿಲ್ಲ ಎನ್ನುತ್ತಾರೆ ಗ್ರಾಮದವರಾದ ಲೋಕೇಶ್, ರಂಗಸ್ವಾಮಿ, ಅಂಕ, ಜಯಕುಮಾರ್ ಮತ್ತು ರಾಜೇಶ್ ಅವರು.

ಆದರೆ, ಶಾಶ್ವತವಾಗಿ ಈ ಸಮಸ್ಯೆಯಿಂದ ರಕ್ಷಣೆ ಪಡೆಯಲು ಗ್ರಾಮವನ್ನೇ ಸ್ಥಳಾಂತರ ಮಾಡಬೇಕು ಎಂಬುದಕ್ಕೆ ಭಿನ್ನ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಕೆಲವರು ಆಮೇಲೆ ನೋಡೋಣ ಬಿಡಿ ಎಂದು ಜಾರಿಕೊಂಡರೆ, ಇನ್ನಷ್ಟು ಮಂದಿ ಪಲ್ಲಟವಾಗಲಿ ಎನ್ನುತ್ತಾರೆ.

ಸ್ಥಳಾಂತರಿಸಿದರೆ ಹೋಗುವುದಕ್ಕೆ ಸಿದ್ಧ
ಕುಳ್ಳಂಕನಹುಂಡಿ ಗ್ರಾಮವು ಪ್ರವಾಹ ಬಂದಾಗಲೆಲ್ಲ ಕಂಗಾಲಾಗುತ್ತಿದ್ದು, ಶಾಶ್ವತವಾಗಿ ಸ್ಥಳಾಂತರ ಮಾಡುವ ಉದ್ದೇಶದಿಂದ ಸುಮಾರು 30 ವರ್ಷಗಳ ಹಿಂದೆ ಶಾಸಕರಾಗಿದ್ದ ಡಿ.ಟಿ.ಜಯ ಕುಮಾರ್‌ ಅವರು ನಂಜನಗೂಡು- ತಿ.ನರಸೀಪುರ ರಸ್ತೆಯಲ್ಲಿ ಮುಳ್ಳೂರು ಗೇಟ್ ಬಳಿ ನಿವೇಶನ ಗುರುತಿಸಿದ್ದರು. ಆದರೆ, ನಮ್ಮ ಹಿರೀಕರು ಒಪ್ಪಲಿಲ್ಲ. ಈಗಲೂ ಸ್ಥಳಾಂತರ ಮಾಡಿದರೆ ಹೋಗುವುದಕ್ಕೆ ನಮ್ಮ ಕುಟುಂಬ ಸಿದ್ಧ.
-ಮಹದೇವನಾಯಕ, ಕುಳ್ಳಂಕನಹುಂಡಿ.

 

ಆಂದೋಲನ ಡೆಸ್ಕ್

Recent Posts

ಗುಂಡ್ಲುಪೇಟೆ | ಉಪಟಳ ನೀಡುತಿದ್ದ ಹುಲಿ ಸೆರೆ ; ಮತ್ತೊಂದು ದರ್ಶನ

ಗುಂಡ್ಲುಪೇಟೆ : ತಾಲ್ಲೂಕಿನ ಬೊಮ್ಮಲಾಪುರ ಬಳಿ ಅನೇಕ ದಿನಗಳಿಂದ ರೈತರಿಗೆ ಉಪಟಳ ನೀಡಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿಯನ್ನು…

3 hours ago

ಬೆಳ್ತಂಗಡಿ | ಮಹೇಶ್‌ ಶೆಟ್ಟಿ ತಿಮರೋಡಿ ಮತ್ತೆ ಗಡಿಪಾರು

ಬೆಳ್ತಂಗಡಿ : ಧರ್ಮಸ್ಥಳ ವಿರುದ್ಧ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಎರಡನೇ ಬಾರಿಗೆ ಗಡಿಪಾರು ಮಾಡಿ ಪುತ್ತೂರು ಎ.ಸಿ.ಆದೇಶ…

3 hours ago

ಲೋಕಸಭೆ | ವಿಭಾ ಜಿರಾಮ್‌ ಮಸೂದೆ ಅಂಗೀಕಾಋ : ಪ್ರತಿಪಕ್ಷಗಳಿಂದ ಪ್ರತಿ ಹರಿದು ಆಕ್ರೋಶ

ಹೊಸದಿಲ್ಲಿ : ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಅಸ್ತಿತ್ವದಲ್ಲಿರುವ ‘ಮನ್ರೇಗಾ ಯೋಜನೆ’(ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ)ಯಿಂದ…

3 hours ago

ಸಿಎಂ ಕುಟುಂಬ ನಿವೇಶನ ಪಡೆದ ಪ್ರಕರಣ : ಡಿ.23ಕ್ಕೆ ವಿಚಾರಣೆ ಮುಂದೂಡಿಕೆ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ಸದಸ್ಯರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಈಗ ಎಂಡಿಎ)ದಿಂದ ಕಾನೂನು ಬಾಹಿರವಾಗಿ…

3 hours ago

ಭಾರತ-ಒಮಾನ್‌ ಮುಕ್ತ ವ್ಯಾಪಾರ ಒಪ್ಪಂದ : ಉಭಯ ದೇಶಗಳಿಗೂ ಶಕ್ತಿ ; ಮೋದಿ ಬಣ್ಣನೆ

ಒಮಾನ್ : ಭಾರತ ಮತ್ತು ಒಮಾನ್ ನಡುವಿನ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ) ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ವಿಶ್ವಾಸ…

5 hours ago

ನೇಮಕಾತಿ ವಿಳಂಬ | ಪ್ರತಿಧ್ವನಿಸಿದ ಪ್ರತಿಭಟನೆಗಳು

ಬೆಳಗಾವಿ : ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿ ವಿಳಂಬ ಮತ್ತು ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗಳು ವಿಧಾನಸಭೆಯಲ್ಲಿ ಪ್ರತಿಧ್ವನಿಸಿದವು. ಪ್ರತಿಪಕ್ಷದ ನಾಯಕ ಆರ್.ಅಶೋಕ್…

5 hours ago