Andolana originals

ಏಪ್ರಿಲ್‌.7ರಿಂದ ಗೋಣಿಕೊಪ್ಪದಲ್ಲಿ ಕೊಡವ ಫುಟ್ಬಾಲ್‌ ಉತ್ಸವ

ನವೀನ್ ಡಿಸೋಜ

ಬೇತ್ರಿಯ ಮುಕ್ಕಾಟಿರ ಕುಟುಂಬದಿಂದ ಆಯೋಜನೆ

ಕೊಡವ ಕುಟುಂಬಗಳನ್ನು ಒಗ್ಗೂಡಿಸುವ ವೇದಿಕೆ

ಮಡಿಕೇರಿ: ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯಂತೆಯೇ ಕೊಡವ ಕುಟುಂಬಗಳ ನಡುವಿನ ಫುಟ್ಬಾಲ್ ಪಂದ್ಯಾವಳಿಯೂ ಕೂಡ ಕಳೆದ ಕೆಲ ವರ್ಷಗಳಿಂದ ಆಯೋಜನೆಗೊಳ್ಳುತ್ತಿದ್ದು, ಈ ಬಾರಿ ಏ.೭ರಿಂದ ೧೨ರವರೆಗೆ ಕೊಡವ ಫುಟ್ಬಾಲ್ ಉತ್ಸವ ನಡೆಯಲಿದೆ.

ಕೊಡಗು ಜಿಲ್ಲೆಯಲ್ಲಿ ವರ್ಷಕ್ಕೊಮ್ಮೆ ನಡೆಯುವ ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿ ಜನಮನ್ನಣೆಗಳಿಸುವುದರೊಂದಿಗೆ ವಿಶ್ವ ಮಟ್ಟದಲ್ಲಿ ಗಮನ ಸೆಳೆದಿದೆ. ಪ್ರತಿವರ್ಷ ಕುಟುಂಬವೊಂದು ಆಯೋಜಿಸುವ ಹಾಕಿ ಪಂದ್ಯಾವಳಿಯಲ್ಲಿ ೩೦೦ಕ್ಕೂ ಅಧಿಕ ಕುಟುಂಬಗಳ ತಂಡಗಳು ಭಾಗವಹಿಸುತ್ತವೆ. ಕೊಡವರು ಒಂದೆಡೆ ಬೆರೆಯುವುದರೊಂದಿಗೆ ಸಂಸ್ಕೃತಿ, ಆಚಾರ-ವಿಚಾರಗಳ ಅನಾವರಣಕ್ಕೂ ಹಾಕಿ ಪಂದ್ಯಾವಳಿ ವೇದಿಕೆಯಾಗುತ್ತಿದೆ.

ಇದೀಗ ಕೊಡವ ಕುಟುಂಬಗಳ ನಡುವೆ ಕ್ರಿಕೆಟ್ ಸೇರಿದಂತೆ ಇತರ ಕ್ರೀಡೆಗಳನ್ನು ಕೂಡ ಆಯೋಜಿಸಲಾಗುತ್ತಿದ್ದು, ಅದರಂತೆ ಏ.೭ರಿಂದ ಕೊಡವ ಕೌಟುಂಬಿಕ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಲ್ಪಟ್ಟಿದೆ.

ಮುಕ್ಕಾಟಿರ(ದೇವಣಗೇರಿ) ಕುಟುಂಬದ ವತಿಯಿಂದ ಈ ಬಾರಿ ಪಂದ್ಯಾವಳಿ ನಡೆಯಲಿದ್ದು, ೫+೨ ಮಾದರಿಯಲ್ಲಿ ಕೊಡವ ಫುಟ್ಬಾಲ್ ಉತ್ಸವ ನಡೆಯಲಿದೆ. ಗೋಣಿಕೊಪ್ಪದ ಆಥ್ಲಾನ್ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದೆ. ದೀರ್ಘಕಾಲದ ಕೊಡವ ಹಾಕಿ ಉತ್ಸವದ ಅಪ್ರತಿಮ ಯಶಸ್ಸಿನಿಂದ ಸ್ಛೂರ್ತಿ ಪಡೆದು ಕೊಡವ ಫುಟ್ಬಾಲ್ ಉತ್ಸವವನ್ನು ಆಯೋಜಿಸಲಾಗುತ್ತಿದೆ. ಅಲ್ಲದೇ, ಕೊಡವ ಕುಟುಂಬಗಳನ್ನು ಒಗ್ಗೂಡಿಸಲು, ಕ್ರೀಡಾಕ್ಷೇತ್ರಕ್ಕೆ ಯುವ ಸಮೂಹವನ್ನು ಉತ್ತೇಜಿಸಲು ಮತ್ತು ಕೊಡಗಿನ ಖ್ಯಾತ ಕ್ರೀಡ ಪರಂಪರೆಯನ್ನು ಕಾಪಾಡಿಕೊಳ್ಳಲು ಇಂತಹ ಕ್ರೀಡಾ ಕೂಟಗಳಿಂದ ಸಾಧ್ಯವಾಗುತ್ತದೆ. ಆದ್ದರಿಂದ ಮುಕ್ಕಾ ಟಿರ(ದೇವಣಗೇರಿ) ಕುಟುಂಬ ವತಿಯಿಂದ ೫ನೇ ವರ್ಷದ ಕೊಡವ ಫುಟ್ಬಾಲ್ ಉತ್ಸವವನ್ನು ಸುಮಾರು ೨೫-೨೭ ಲಕ್ಷ ರೂ.ಗಳ ವೆಚ್ಚದಲ್ಲಿ ಆಯೋಜಿಸಲಾಗುತ್ತಿದೆ ಎಂದು ಕುಟುಂಬದ ಅಧ್ಯಕ್ಷ ಮುಕ್ಕಾಟಿರ ಸಿ.ಕರುಂಬಯ್ಯ ತಿಳಿಸಿದ್ದಾರೆ.

ಕಳೆದ ವರ್ಷ ನಡೆದ ಫುಟ್ಬಾಲ್ ಉತ್ಸವದಲ್ಲಿ ೭೪ ತಂಡಗಳು ಭಾಗವಹಿಸಿದ್ದವು. ಪ್ರಸಕ್ತ ಸಾಲಿನ ಕ್ರೀಡಾಕೂಟದಲ್ಲಿ ೧೦೦ ಕೊಡವ ಕುಟುಂಬ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ನಾಕೌಟ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿದ್ದು, ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನ ಹಾಗೂ ವೈಯಕ್ತಿಕ ಬಹುಮಾನ ನೀಡಿ ಗೌರವಿಸಲಾಗುತ್ತದೆ. ಫುಟ್ಬಾಲ್ ಉತ್ಸವದ ಜೊತೆಯಲ್ಲಿ ಸಾಂಸ್ಕೃತಿಕ ಕಾರ್ಯ ಕ್ರಮಗಳು, ವಿವಿಧ ಬಗೆಯ ಖಾದ್ಯಗಳು ಮತ್ತು ಕೊಡವ ಸಮುದಾಯದ ಬಾಂಧವ್ಯ ಗಮನ ಸೆಳೆಯಲಿವೆ.

೨೦೨೦ರಿಂದಲೂ ಫುಟ್ಬಾಲ್ ಉತ್ಸವ: 

೨೦೨೦ರಿಂದಲೂ ಫುಟ್ಬಾಲ್ ಉತ್ಸವ ನಡೆಯುತ್ತಿದೆ. ಆಕ್ಸ್ ಸ್ಪೋಟ್ಸ್ – ಎಂಟರ್‌ಟೈನ್‌ಮೆಂಟ್ ಸಂಸ್ಥೆಯ ಹೆಸರಿನಲ್ಲಿ ಯುವಕರ ತಂಡವೊಂದು ಪೊನ್ನಂಪೇಟೆ ಕೊಡವ ಸಮಾಜದ ಸಹಯೋಗದಲ್ಲಿ ೨೦೨೦ರಲ್ಲಿ ಫುಟ್ಬಾಲ್ ಪಂದ್ಯಾವಳಿ ಆರಂಭಿಸಿತು. ೨೦೨೧-೨೨ರಲ್ಲಿ ಚೌರೀರ ಕುಟುಂಬ ಪಂದ್ಯಾವಳಿಯ ನೇತೃತ್ವ ವಹಿಸಿತ್ತು. ೨೦೨೩ರಲ್ಲಿ ಮತ್ತೆ ಆಕ್ಸ್ ಸ್ಪೋರ್ಟ್ಸ್ – ಎಂಟರ್‌ಟೈನ್‌ಮೆಂಟ್ ಸಂಸ್ಥೆ ಅಜ್ಜಿಕುಟ್ಟೀರ ಸುಬ್ಬಯ್ಯ ಹಾಗೂ ಪೊನ್ನಮ್ಮ ಚಾರಿಟಬಲ್ ಟ್ರಸ್ಟ್‌ನ ಸಹಯೋಗದಲ್ಲಿ ಪಂದ್ಯಾವಳಿ ಆಯೋಜಿಸಿತ್ತು. ೨೦೨೪ರಲ್ಲಿ ಕಾರಣಾಂತರಗಳಿಂದ ಪಂದ್ಯಾವಳಿ ನಡೆಯಲಿಲ್ಲ. ೨೦೨೫ರಲ್ಲಿ ಬೇತ್ರಿಯ ಮುಕ್ಕಾಟೀರ ಕುಟುಂಬ ಪಂದ್ಯಾವಳಿ ಆಯೋಜಿಸಿದ್ದು, ೨೦೨೬ರಲ್ಲಿ ದೇವಣಗೇರಿಯ ಮುಕ್ಕಾಟೀರ ಕುಟುಂಬ ಪಂದ್ಯಾವಳಿಯ ನೇತೃತ್ವವಹಿಸಲಿದೆ.

” ಕೊಡವ ಹಾಕಿ ಉತ್ಸವದ ಯಶಸ್ಸಿನಿಂದ ಸ್ಛೂರ್ತಿ ಪಡೆದು ಕೊಡವ ಫುಟ್ಬಾಲ್ ಉತ್ಸವವನ್ನು ಆಯೋಜಿಸಲಾಗುತ್ತಿದೆ. ಈ ಬಾರಿ ಏ.೭ರಿಂದ ೧೨ರವರೆಗೆ ಗೋಣಿಕೊಪ್ಪದಲ್ಲಿ ಪಂದ್ಯಾವಳಿ ನಡೆಯಲಿದ್ದು, ಮೊದಲು ನೋಂದಣಿಯಾಗುವ ೧೦೦ ತಂಡಗಳಿಗೆ ಆಡಲು ಅವಕಾಶ ಕಲ್ಪಿಸಲಾಗುವುದು. ಅತಿಥಿ ಆಟಗಾರರೂ ಆಡಲು ಅವಕಾಶವಿದ್ದು, ಹೆಚ್ಚಿನ ಮಾಹಿತಿಗಾಗಿ ಮೊ.ಸಂ.೯೩೪೧೯೫೭೮೯೫, ೯೮೪೫೩೪೩೯೭೦ ನ್ನು ಸಂಪರ್ಕಿಸಬಹುದು.”

-ಮುಕ್ಕಾಟಿರ ಸಿ. ಕರುಂಬಯ್ಯ, ಮುಕ್ಕಾಟಿರ ಕುಟುಂಬದ ಅಧ್ಯಕ್ಷರು

ಆಂದೋಲನ ಡೆಸ್ಕ್

Recent Posts

ಸಂಪ್ರದಾಯವಾಗಿ ನಡೆಯದ ವಿವಾಹ ಅಮಾನ್ಯ ; ಗುಜರಾತ್ ಹೈಕೋರ್ಟ್ ತೀರ್ಪು

ಸಪ್ತಪದಿ ಹಿಂದೂ ವಿವಾಹದ ಅಡಿಪಾಯ ; ಗುಜರಾತ್‌ ಹೈಕೋರ್ಟ್‌ ತೀರ್ಪು ಅಹಮದಾಬಾದ್ : ಸಪ್ತಪದಿಯಂತಹ ಸಾಂಪ್ರದಾಯಿಕ ವಿಧಿವಿಧಾನಗಳು ಮತ್ತು ಸಮಾರಂಭಗಳನ್ನು…

7 hours ago

ಬೋರ್‌ವೆಲ್, ಪಂಪ್‌ಸೆಟ್ ಕೇಬಲ್‌ ಕಳ್ಳತನ ಯುವಕರಿಗೆ ಧರ್ಮದೇಟು

ಮಂಡ್ಯ : ಬೋರ್‌ವೆಲ್, ಪಂಪ್‌ಸೆಟ್ ಕೇಬಲ್ ಕಳವು ಮಾಡುತ್ತಿದ್ದ ಅಪ್ರಾಪ್ತ ಬಾಲಕ ಸೇರಿದಂತೆ ಮೂವರನ್ನು ಸಾರ್ವಜನಿಕರೇ ಹಿಡಿದು ಕಂಬಕ್ಕೆ ಕಟ್ಟಿ…

8 hours ago

ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ ; ಸುಟ್ಟು ಹೋದ 6 ಎಕರೆ ಕಬ್ಬು

ಹನೂರು : ಅತಿಯಾದ ಗಾಳಿಯ ರಭಸಕ್ಕೆ ವಿದ್ಯುತ್ ತಂತಿ ಒಂದಕ್ಕೊಂದು ಸ್ಪರ್ಶಿಸಿ ಬೆಂಕಿ ಹೊತ್ತಿಕೊಂಡು ಜಮೀನಿನಲ್ಲಿದ್ದ 6 ಎಕರೆ ಕಬ್ಬು…

10 hours ago

ಆಷಾಢ ಶುಕ್ರವಾರ, ಶನಿವಾರ, ಭಾನುವಾರ ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ

ಮೈಸೂರು: ಆಷಾಢ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಸಚಿವ ಯತೀಂದ್ರ…

13 hours ago

ಕಾರಂಜಿ ಕೆರೆ ಉದ್ಯಾನದಲ್ಲಿ ‘ಪರಿಸರ ಅನುಭವ ವಲಯ’

ಮೈಸೂರು: ಜೀವವೈವಿಧ್ಯ ತಾಣವಾಗಿರುವn ಹಾಗೂ ಪ್ರಕೃತಿಯ ಸೊಬಗಿನ ವಾತಾವರಣದಿಂದ ಕೂಡಿರುವ ಕಾರಂಜಿ ಕೆರೆ ಉದ್ಯಾನದಲ್ಲಿ ‘ಪರಿಸರ ಅನುಭವ ವಲಯ’ ನಿರ್ಮಾಣ…

15 hours ago

ಅಲೆಮಾರಿ ಜನಾಂಗ ನಾಡಿನ ಸಂಸ್ಕೃತಿಯ ಜೀವಂತಿಕೆ

ಟಿ.ಕೆ.ಹರೀಶ್ ಸಮುದಾಯಗಳಿಗೆ ಸೂರು, ಶಿಕ್ಷಣ ಒದಗಿಸುವುದು ಅತ್ಯಗತ್ಯ ಭಾರತೀಯ ಅಲೆಮಾರಿ ಜನಾಂಗಗಳು ಕೇವಲ ಸಂಚಾರಿಗಳಲ್ಲ; ಅವರು ನಮ್ಮ ಶ್ರೀಮಂತ ಸಾಂಸ್ಕೃತಿಕ…

20 hours ago