Andolana originals

ದಸರೆಗೆ ಕಾವಾ ಚಿತ್ರಕಲೆಯ ರಂಗು

 

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಲಲಿತಕಲೆ ಉಪ ಸಮಿತಿಯು ‘ ಬಣ್ಣ ಬಣ್ಣ’ದ ರಂಗು ಹಾಗೂ ‘ಕಲಾಕೃತಿಗಳ ಸ್ಪರ್ಶ’ ವನ್ನು ನೀಡಲಿದೆ.

ದಸರಾ ಮಹೋತ್ಸವದ ಅಂಗವಾಗಿ ನಗರದ ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜು (ಕಾವಾ) ಆವ ರಣದಲ್ಲಿ ‘ಕಲ್ಲಿನ ಕಲಾಕೃತಿ ಗಳು’ ಅರಳಲಿವೆ. ಅಷ್ಟೇ ಅಲ್ಲ, ಏಕೀ ಕರಣ ಚಳವಳಿಯ ನಾಯಕರು, ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಬಿಂಬಿಸುವ ಚಿತ್ರಪಟಗಳು ಈ ಬಾರಿ ಪ್ರವಾಸಿಗರನ್ನು ಕೈ ಬೀಸಿ ಕರೆಯುವರೀತಿಯಲ್ಲಿ ರಾರಾಜಿಸಲಿವೆ.

ಲಲಿತಕಲೆ ಉಪ ಸಮಿತಿಯು ಈ ಬಾರಿಯ ದಸರಾ ಮಹೋತ್ಸವದ ಕಾರ್ಯಕ್ರಮಗಳನ್ನು ವಿಭಿನ್ನವಾಗಿ ಆಯೋಜಿಸಲು ಮುಂದಾಗಿದೆ. ಮುಖ್ಯ ವಾಗಿ ರಾಜ್ಯ ಮಟ್ಟದ ಶಿಲ್ಪ ಕಲೆ ಶಿಬಿರ, ಚಿತ್ರಕಲೆ ಶಿಬಿರ ಹಾಗೂ ಶಾಲಾ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ ಆಯೋಜಿಸಲು ತೀರ್ಮಾನಿ ಸಿದೆ. ‘ಭಾರತದ ಸ್ವಾತಂತ್ರ್ಯ ಚಳವಳಿ’, ‘ಸಂವಿ ಧಾನದ ಮಹತ್ವ’, ‘ಸ್ವಾತಂತ್ರ್ಯ ಚಳವಳಿಯ ನಾಯಕರು’, ‘ಕರ್ನಾಟಕ ಏಕೀಕರಣ ಚಳ ವಳಿ’, ‘ಸುವರ್ಣ ಕರ್ನಾಟಕ’ ವಿಷಯಗಳ ಮೇಲೆ ಈ ಬಾರಿಯ ಕಾರ್ಯಕ್ರಮ ನಡೆಯಲಿವೆ.

ರಾಜ್ಯ ಮಟ್ಟದ ಕಲ್ಲಿನ ಕಲಾಕೃತಿ ಕೆತ್ತನೆ ಶಿಬಿರ ದಸರೆಗೆ ಮೆರುಗು ನೀಡಲಿದೆ. ಈ ಸಂಬಂಧ ಶಿಬಿರಕ್ಕೆ ಕಲಾವಿದರನ್ನು ಆಯ್ಕೆ ಮಾಡುವಂತೆ ಶಿಲ್ಪಕಲಾ ಅಕಾಡೆಮಿಗೆ ಸಮಿತಿ ಕೋರಿದೆ. ಶಿಲ್ಪಕಲಾ ಅಕಾಡೆಮಿ ಕಲಾವಿದರಿಂದ ಅರ್ಜಿ ಆಹ್ವಾನಿಸಲಿದೆ. ಒಟ್ಟಾರೆ ಸಲ್ಲಿಕೆಯಾಗುವ ಅರ್ಜಿಗಳ ಪೈಕಿ 10 ಕಲಾವಿದರನ್ನು ಮಾತ್ರ ಶಿಬಿರಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆ ಕಲಾವಿದರು ದಸರಾ ಮಹೋತ್ಸವ ಉದ್ಘಾಟ ನೆಗೂ ಮುನ್ನ ‘ಕರ್ನಾಟಕ ಏಕೀಕರಣ ಚಳವಳಿ, ‘ಸುವರ್ಣ ಕರ್ನಾಟಕ, ‘ಏಕೀಕರಣ ಚಳವಳಿಯ ರೂವಾರಿಗಳು’ ವಿಷಯಕ್ಕೆ ಸಂಬಂಧಿಸಿ ದಂತೆ ಕಲಾಕೃತಿಗಳನ್ನು ಶಿಲೆಯಲ್ಲಿ ರಚಿಸಲಿದ್ದಾರೆ.

ಶಿಲ್ಪ ಕೆತ್ತನೆ ಶಿಬಿರವು 12 ದಿನಗಳ ಕಾಲ ಕಾವಾ ಕಾಲೇಜು ಆವರಣದಲ್ಲಿ ನಡೆಯಲಿದೆ. ಶಿಬಿರಕ್ಕೆ ಅಗತ್ಯ ತಯಾರಿ ನಡೆಯುತ್ತಿದೆ. ಕೆತ್ತನೆಗೆ ಬೇಕಾದ ಕಲ್ಲುಗಳ ಆಯ್ಕೆ ಹಾಗೂ ಕಲ್ಲುಗಳನ್ನು ತರಿಸುವ ನಿಟ್ಟಿನಲ್ಲಿ ಲಲಿತಕಲೆ ಉಪ ಸಮಿತಿ ಕಾರ್ಯನಿರತವಾಗಿದೆ. ಶಿಬಿರದ ಬಳಿಕ ಎಲ್ಲ ಕಲಾಕೃತಿಗಳನ್ನೂ ಕಾವಾ ಕಾಲೇಜು ಆವರಣದಲ್ಲೇ ಪ್ರದರ್ಶನಕ್ಕಿಡಲು ನಿರ್ಧರಿಸಲಾಗಿದೆ ಚಿತ್ರಕಲಾ ಶಿಬಿರ: ಲಲಿತಕಲೆ ಉಪ ಸಮಿತಿಯು ಕಲ್ಲಿನ ಕಲಾಕೃತಿ ಕೆತ್ತನೆ ಶಿಬಿರದ ಜತೆಗೆ ಚಿತ್ರಕಲಾ ಶಿಬಿರವನ್ನೂ ಆಯೋಜಿ ಸುತ್ತಿದೆ. ಶಿಬಿರದಲ್ಲಿ 10 ಕಲಾವಿದರು ಭಾಗವಹಿಸಲು ಮಾತ್ರ ಅವಕಾಶ ನೀಡಲಾಗುತ್ತಿದೆ. ಶಿಬಿರಕ್ಕೆ ಕಲಾವಿದರನ್ನು ಆಯ್ಕೆ ಮಾಡುವಂತೆ ಲಲಿತಕಲಾ ಅಕಾಡೆಮಿಗೆ ಸಮಿತಿ ಕೋರಿದೆ. ಕಲಾವಿದರಿಂದ ಅರ್ಜಿ ಆಹ್ವಾನಿಸಿ, 10 ಕಲಾ ವಿದರನ್ನು ಮಾತ್ರ ಶಿಬಿರಕ್ಕೆ ಆಯ್ಕೆ ಮಾಡಿ ಕೊಳ್ಳಲಾಗುತ್ತದೆ. ಆ ಕಲಾವಿದರು 5 ದಿನಗಳ ಕಾಲ ಕಾವಾ ಕಾಲೇಜು ಆವರಣದಲ್ಲಿ ‘ಏಕೀ ಕರಣ ಚಳವಳಿಯ ನಾಯಕರು’, ‘ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಬಿಂಬಿಸುವ ಚಿತ್ರ ಗಳನ್ನು ರಚಿಸಲಿದ್ದಾರೆ. ಬಳಿಕ ಎಲ್ಲ ಚಿತ್ರಗಳನ್ನೂ ದಸರಾ ಮುಗಿಯುವವರೆಗೂ ಕಾವಾ ಆವರಣ ದಲ್ಲಿ ಪ್ರದರ್ಶನಕ್ಕಿಡಲು ನಿರ್ಧರಿಸಲಾಗಿದೆ.

ಶಿಲ್ಪಕಲೆ ಹಾಗೂ ಚಿತ್ರಕಲೆಗೆ ಉಡುಪಿ, ರಾಯಚೂರು, ಕಲಬುರಗಿ, ಚಿಕ್ಕಮಗಳೂರು, ಮೈಸೂರು, ಮಂಡ್ಯ, ಬೆಂಗಳೂರು, ತುಮ ಕೂರು, ಹಾಸನ, ಚಾಮರಾಜನಗರ, ಮಡಿ ಕೇರಿ ಮುಂತಾದ ಕಡೆಗಳಿಂದ ಕಲಾವಿದರು ಆಗಮಿಸುವ ನಿರೀಕ್ಷೆ ಇದೆ.

ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ
ಈ ಬಾರಿ ಮಕ್ಕಳಿಗೆ ಅ.6ರಂದು ಒಂದು ದಿನದ ರಾಜ್ಯ ಮಟ್ಟದ ಚಿತ್ರಕಲೆ ಸ್ಪರ್ಧೆ ಆಯೋಜಿ ಸಲು ಲಲಿತ ಕಲೆ ಉಪ ಸಮಿತಿ ಮುಂದಾಗಿದೆ. 5 ರಿಂದ 8 ಹಾಗೂ 9 ರಿಂದ 12ನೇ ತರಗತಿ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಉತ್ತಮ ಚಿತ್ರ ರಚಿಸಿದ ಮಕ್ಕಳಿಗೆ ಬಹುಮಾನ ನೀಡಲು ನಿರ್ಧರಿಸಿದೆ. ಅಂದೇ 1ರಿಂದ 4ನೇ ತರಗತಿ ಮಕ್ಕಳಿಗೆ ಜೇಡಿಮಣ್ಣಿನಿಂದ ಮಣ್ಣಿನ ಕಲಾಕೃತಿ ಮಾಡುವ ಸ್ಪರ್ಧೆಯೂ ನಡೆಯಲಿದೆ. ಜತೆಗೆ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್ ಕಲೆ, ಅನ್ವಯ ಕಲೆ, ಕರಕುಶಲ, ಇಲ್ಲೆ ಸೇರಿದಂತೆ ರಾಜ್ಯ ಮಟ್ಟದ 8 ಬಗೆಯ ಲಲಿತಕಲಾ ಸ್ಪರ್ಧೆ ಹಾಗೂ ನಾನಾ ಕಲೆಗಳಿಗೆ ಸಂಬಂಧಿಸಿದ ಪ್ರದರ್ಶನ ಆಯೋಜಿಸುವ ಸಂಬಂದ ಚರ್ಚೆಯೂ ನಡೆಯುತ್ತಿದೆ. ನಾನಾ ಕಲೆಗಳ ಪ್ರಾತ್ಯಕ್ಷಿಕೆ ಆಯೋಜಿಸಿ ಸಾರ್ವಜನಿಕರಿಗೆ ತಿಳಿಸುವ ಸಂಬಂಧವೂ ಚರ್ಚೆ ನಡೆಯುತ್ತಿದ್ದು ಅಂತಿಮವಾಗಬೇಕಿದೆ.

ಮೈಸೂರಿನ ಕಾವಾ ಕಾಲೇಜು ಆವ ರಣದಲ್ಲಿ ಅ.4 ರಿಂದ 7ರವರೆಗೆ ದಸರಾ ಲಲಿತಕಲೆ ಉಪ ಸಮಿತಿ ವತಿಯಿಂದ ಈ ಬಾರಿ ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಲು ಚಿಂತಿಸಲಾಗಿದೆ. ರಾಜ್ಯ ಮಟ್ಟದ ಶಿಲ್ಪಕಲೆ ಶಿಬಿರ, ಚಿತ್ರಕಲೆ ಶಿಬಿರ ಹಾಗೂ ಶಾಲಾ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ ಆಯೋಜಿಸಲು ತೀರ್ಮಾನಿಸಲಾಗಿದೆ. ರಾಜ್ಯ ಮಟ್ಟದ ನಾನಾ ಬಗೆಯ ಲಲಿತಕಲೆ ಸ್ಪರ್ಧೆ ಆಯೋಜಿಸಲಾಗುತ್ತದೆ. -ಎ.ದೇವರಾಜು, ಉಪ ವಿಶೇಷಾಧಿಕಾರಿ, ದಸರಾ ಲಲಿತಕಲೆ ಉಪ ಸಮಿತಿ,

• ಗಮನ ಸೆಳೆಯಲಿವೆ
. ಕಲ್ಲಿನ ಕಲಾಕೃತಿ, ಚಿತ್ರಪಟಗಳು
 ರಾಜ್ಯ ಮಟ್ಟದ ಶಿಲ್ಪ ಕಲೆ ಶಿಬಿರ, ಸ್ಪರ್ಧೆ

• ನಾಲ್ಕು ವಿಷಯಗಳನ್ನು ಆಧರಿಸಿ ಚಿತ್ರಕಲಾ ಶಿಬಿರ ಆಯೋಜನೆ
ಶಿಬಿರಕ್ಕೆ 10 ಮಂದಿ ಕಲಾವಿದರ ಆಯ್ಕೆ

 

ಕೆ.ಬಿ. ರಮೇಶ ನಾಯಕ

ಪ್ರಸ್ತುತ ಆಂದೋಲನ ದಿನಪತ್ರಿಕೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿರುವ ನಾನು ಮೂಲತಃ ಚಾಮರಾಜನಗರ ತಾಲ್ಲೂಕು ಮತ್ತು ಜಿಲ್ಲೆಯ ಕಣ್ಣೇಗಾಲ ಗ್ರಾಮದವನು. ಚಾಮರಾಜನಗರ ತಾಲ್ಲೂಕಿನ ಆಲೂರು ಗ್ರಾಮದಲ್ಲಿ ಪ್ರಾಥಮಿಕ,ಪ್ರೌಢಶಿಕ್ಷಣ, ಚಾಮರಾಜನಗರದಲ್ಲಿ ಪಿಯುಸಿ ವ್ಯಾಸಂಗ ಮಾಡಿದ ನಾನು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದೇನೆ. 1992ರಿಂದ 2002ರವರೆಗೆ ಮೈಸೂರು ಮಿತ್ರ ಪತ್ರಿಕೆಯಲ್ಲಿ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಸೇವೆ ಸಲ್ಲಿಸಿದ ಬಳಿಕ 2002ರಿಂದ 2012ರವರೆಗೆ ಸಂಯುಕ್ತ ಕರ್ನಾಟಕ ಮೈಸೂರು ಪ್ರಾದೇಶಿಕ ಕಚೇರಿಯಲ್ಲಿ ವರದಿಗಾರನಾಗಿ, 2013ರಿಂದ 2015ರವರೆಗೆ ಹಾಸನ ಮತ್ತು ಮೈಸೂರಿನಲ್ಲಿ ವಿಜಯ ಕರ್ನಾಟಕ ಹಿರಿಯ ವರದಿಗಾರನಾಗಿ, 2015ರಿಂದ 2017ರವರೆಗೆ ಸಂಯುಕ್ತ ಕರ್ನಾಟಕ ಮುಖ್ಯ ವರದಿಗಾರನಾಗಿ, 2017ರಿಂದ 2020 ಜೂನ್‌ವರಗೆ ವಿಶ್ವವಾಣಿ ಮೈಸೂರು ಬ್ಯೂರೋ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿದ್ದೇನೆ.

Recent Posts

ಡಿಕೆಶಿ ಸಂಪುಟದಲ್ಲಿ ಡಾ.ಎಚ್‌ಸಿಎಂ ಕೈ ಬಿಟ್ಟಿದ್ದಕ್ಕೆ ದಸಂಸ ತೀವ್ರ ಅಸಮಾಧಾನ

ಮೈಸೂರು:  ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಹಿರಿಯ, ಅನುಭವಿ, ಹಾಗೂ ವೈಚಾರಿಕ ಪ್ರಜ್ಞೆಯ   ಸಮರ್ಥ ದಲಿತ ರಾಜಕಾರಣಿಯಾಗಿದ್ದ ಮಾಜಿ…

4 hours ago

ನನ್ನ ಗೆಲುವು ಜೆಡಿಎಸ್ ಭಿಕ್ಷೆ ಅಲ್ಲ, ನಾಗಮಂಗಲ ಜನರ ಭಿಕ್ಷೆ : ಸಚಿವ ಚಲುವರಾಯಸ್ವಾಮಿ

ನಾಗಮಂಗಲ : ನಾಲ್ಕನೇ ಬಾರಿ ಸಚಿವರಾದ ನಂತರ ಪ್ರಥಮ ಬಾರಿಗೆ ಸ್ವಕ್ಷೇತ್ರ ನಾಗಮಂಗಲಕ್ಕೆ ಆಗಮಿಸಿದ ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ…

5 hours ago

ಓದುಗರ ಪತ್ರ: ಪುಷ್ಪ ವೃಷ್ಟಿ..!

ಪುಷ್ಪ ವೃಷ್ಟಿ..! ಅತಿವೃಷ್ಟಿ, ಅನಾವೃಷ್ಟಿಯ ವರದಿ ಬರೆಯುತಿಹರಂತೆ ಸಚಿವರು... ‘ಒಂಬತ್ತು ಜಿಗಳಲ್ಲಿ ಮೋಡ ಕವಿದ ವಾತಾವರಣ ಕಾರಣ, ಅಲ್ಲಿಗಿಲ್ಲ ಮಂತ್ರಿ…

15 hours ago

ಓದುಗರ ಪತ್ರ: ರೈತ ಮಕ್ಕಳ ವಿದ್ಯಾಭ್ಯಾಸ ಶುಲ್ಕದಲ್ಲಿ

ರಿಯಾಯಿತಿಗೆ ಸರ್ಕಾರ ಕ್ರಮ ಕೈಗೊಳ್ಳಲಿ ರಾಜ್ಯದ ಹಲವು ಭಾಗಗಳಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ನಿರೀಕ್ಷಿಸಿದಷ್ಟು ಮಳೆಯಿಲ್ಲದ ಕಾರಣ ಕೃಷಿ ಕ್ಷೇತ್ರ…

15 hours ago

ಓದುಗರ ಪತ್ರ: ಧಾರ್ಮಿಕ ಮುಖಂಡರು ರೈತರ ಬೆನ್ನಿಗೆ ನಿಲ್ಲಬೇಕು

ರಾಜ್ಯದಲ್ಲಿ ನಗರೀಕರಣದ ವೇಗದಿಂದಾಗಿ ಕೃಷಿ ಭೂಮಿಯ ವಿಸ್ತೀರ್ಣ ಸುಮಾರು ಶೇ. ೧೩ರಷ್ಟು ಕುಸಿದಿದೆ ಎಂದು ವರದಿಗಳು ಹೇಳಿವೆ. ಮೂಲಸೌಕರ್ಯಗಳ ಹೆಸರಿನಲ್ಲಿ…

15 hours ago

ಧ್ರುವೀಕರಣದ ನೆಲೆಗಟ್ಟಿನ ಮೇಲೆ ರಾಜ್ಯ ರಾಜಕಾರಣ

ಆರ್.‌ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕರ್ನಾಟಕದ ರಾಜಕಾರಣ ಧ್ರುವೀಕರಣದ ನೆಲೆಗಟ್ಟಿಗೆ ಬಂದು ತಲುಪಿದೆ. ಅಂದ ಹಾಗೆ ಧ್ರುವೀಕರಣಕ್ಕೆ ಅಸಮಾ ಧಾನ,ಅತೃಪ್ತಿ,ಭಿನ್ನಾಭಿಪ್ರಾಯಗಳೇ…

15 hours ago