ಮೈಸೂರು: ನಮ್ಮ ಮಾತೃಭಾಷೆ ಕನ್ನಡವನ್ನು ಎಂದಿಗೂ ಬಿಟ್ಟುಕೊಡ ಬೇಡಿ. ಅದುವೇ ಕನ್ನಡಿಗರೆಲ್ಲರ ಮೂಲ ಎಂದು ಇನೋಸಿಸ್ ಪ್ರತಿಷ್ಠಾನದ ಸಂಸ್ಥಾಪಕರೂ ಆದ ರಾಜ್ಯಸಭಾ ಸದಸ್ಯೆ ಡಾ. ಸುಧಾ ಮೂರ್ತಿ ಹೇಳಿದರು. ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಕಾರ್ಯಸೌಧದಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ವಿಶ್ವಕೋಶ-೧೦ ಮತ್ತು ೧೩ನೇ ಸಂಪುಟಗಳ ಬಿಡುಗಡೆ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.
ಇಂಗ್ಲಿಷ್ ಇದೀಗ ಅನಿ ವಾರ್ಯ. ಉದ್ಯೋಗಾವಕಾಶ ಕ್ಕಾಗಿ ಮತ್ತು ಹೊರ ರಾಜ್ಯ, ವಿದೇಶಗಳಿಗೆ ತೆರಳಲು ಅದು ಅಗತ್ಯ ನಿಜ. ಹಾಗೆಂದ ಮಾತ್ರಕ್ಕೆ ಇಂಗ್ಲಿಷ್ಗಾಗಿ ಕನ್ನಡವನ್ನು ಬಿಡ ಬೇಕೆಂದು ಎಲ್ಲಿಯೂ ಹೇಳಿಲ್ಲ. ಇಂಗ್ಲಿಷ್ ಕಲಿಯಿರಿ, ಕನ್ನಡ ಬಿಡಬೇಡಿ ಎಂದು ಹೇಳಿದರು. ನಮ್ಮ ಮೂಲ ಹುಡುಕಾಟಕ್ಕೆ ಕನ್ನಡ ಭಾಷೆ ಬೇಕು. ಹೀಗಾಗಿ, ಇದನ್ನು ಬಿಡಬಾರದು. ಕನ್ನಡ ಪುಸ್ತಕ, ವಿಶ್ವಕೋಶಗಳನ್ನು ತೆಗೆದುಕೊಂಡು ಓದಬೇಕು. ಮಕ್ಕಳಿಗೂ ಓದುವ ಅಭ್ಯಾಸ ಮಾಡಿಸಿ. ತಾಯಂದಿರೂ ಓದಬೇಕು. ಇದು ನಿಮ್ಮ ಕರ್ತವ್ಯ ಎಂದರು.
ಈಗ ಶುದ್ಧ ಕನ್ನಡದ ಬಳಕೆಯೇ ಇಲ್ಲದಂತಾಗಿದೆ. ಅದರಲ್ಲೂ ಬೆಂಗಳೂರು ಸಮೀಪಿಸುತ್ತಿದ್ದಂತೆಯೇ ಕನ್ನಡದ ಸ್ಥಿತಿ ನೆನೆದರೆ ನೋವಾಗುತ್ತದೆ. ಜಗತ್ತಿನ ಎಲ್ಲಿಗೇ ಹೋದರೂ ನಾನು ಕನ್ನಡಿಗಳೇ. ಹಲವು ಭಾಷೆಗಳು ಗೊತ್ತಿದ್ದರೂ ಕನ್ನಡವೇ ನನ್ನ ತಾಯಿ. ತಲೆತಲಾಂತರದಿಂದ ಬಂದಿರುವ ಈ ಕನ್ನಡ ಪರಂಪರೆಯನ್ನು ಮರೆಯ ಬಾರದು. ಇದುವೇ ನಿಜವಾದ ಆಸ್ತಿ. ಬಂಗಾರ, ಹಣ, ನಿವೇಶನವಲ್ಲ ಎಂದರು.
ಉತ್ತಮ ಆಡಳಿತಗಾರನಿಗೆ ಪಾರದರ್ಶಕತೆ ಇರಬೇಕು. ಉತ್ತರದಾಯಿತ್ವವೂ ಮುಖ್ಯ. ಮಾತುಗಳು ಕೃತಿಯಾಗಬೇಕು. ತಪ್ಪು ಮಾಡಿದ್ದರೆ ಕ್ಷಮೆ ಕೇಳ ಬೇಕು. ಆಗ ಬೇರೆಯವರು ತಪ್ಪು ಮಾಡಿದಾಗ ಅದನ್ನು ಪ್ರಶ್ನಿಸಲು ಧೈರ್ಯ ಬರುತ್ತದೆ. -ಸುಧಾ ಮೂರ್ತಿ, ರಾಜ್ಯಸಭಾ ಸದಸ್ಯೆ
ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…
ಅಮರಾವತಿ: ಜಗತ್ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…
ಮುಂಬೈ: ಬಾಲಿವುಡ್ನ ಭಾಯಿಜಾನ್ ಸಲ್ಮಾನ್ ಖಾನ್ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…
ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…
ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…
ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…