Andolana originals

ಹಲಸಿನ ತೊಳೆಯ ಕುಮಾರಣ್ಣ

• ರಂಗಸ್ವಾಮಿ ಸಂತೆಬಾಚಳ್ಳಿ

ಕೆ.ಆ‌ರ್.ಪೇಟೆ ತಾಲ್ಲೂಕು ಸಂತೆ ಬಾಚಳ್ಳಿಯ ಕುಮಾರಣ್ಣ ಓದಿದ್ದು ಎಂಟನೇ ತರಗತಿ. ಬಾಲ್ಯದಲ್ಲಿಯೇ ಎದುರಾದ ಕಣ್ಣಿನ ದೋಷ ಮತ್ತು ಕಡು ಬಡತನ. ತಂದೆಯ ಜೊತೆ ಹಲಸಿನ ಹಣ್ಣು ಕೊಯ್ದು ಮಾರುವುದು, ಸಂಜೆಯ ಸಮಯ ವಡೆ ಬೋಂಡಾ ಮಾಡಿ ಮಾರುವುದು ಇವರ ನಿತ್ಯದ ಬದುಕಾಯಿತು.

ಕಬಡ್ಡಿ ಎಂದರೆ ಚಿಕ್ಕಂದಿನಿಂದ ಪ್ರಿಯವಾಗಿದ್ದ ಕಾರಣ ಈಗಲೂ ಶಾಲಾ ಮೈದಾನಕ್ಕೆ ಹೋಗು ವುದು, ಮಕ್ಕಳ ಜೊತೆ ಕಬಡ್ಡಿ ಆಡುವುದು, ಸುತ್ತಮುತ್ತ ಜಾತ್ರೆಗಳಲ್ಲಿ ಕಬಡ್ಡಿಯ ಆಟ ಏರ್ಪಡಿಸಿದರೆ, ಅತ್ಯುತ್ತಮವಾಗಿ ರೈಡ್ ಮಾಡುತ್ತಾರೆ. ತಂದೆ ಮಾಡಿದ ಮಿಠಾಯಿ, ಹಲಸಿನ ತೊಳೆಗಳನ್ನು ತಟ್ಟೆಯಲ್ಲಿ ಇಟ್ಟುಕೊಂಡು ಹೊರಟರೆ, ಮಿಡ್ಸ್ ಸ್ಕೂಲ್, ಹೈಸ್ಕೂಲ್ ಮೈದಾನ ಗಳಲ್ಲಿ ಮಾರುತ್ತಾ, ಮಕ್ಕಳ ಜೊತೆ ದಿನನಿತ್ಯ ಆಟಗಳನ್ನು ಆಡುತ್ತಾ, ಅಲ್ಲಿ ರುವ ದೈಹಿಕ ಶಿಕ್ಷಕರನ್ನು ಮನವೊಲಿಸಿ ಕೊಂಡು ಮಕ್ಕಳಿಗೂ ಕಲಿಸುತ್ತಾ ಜೀವನ ಪ್ರಾರಂಭಿಸುತ್ತಾರೆ. ಮಕ್ಕಳ ಕ್ರೀಡಾಕೂಟ ತಾಲ್ಲೂಕು ಮಟ್ಟ, ಜಿಲ್ಲಾಮಟ್ಟ ರಾಜ್ಯಮಟ್ಟ ಎಲ್ಲೇ ನಡೆದರೂ, ಅಲ್ಲಿಗೆ ಮಕ್ಕಳನ್ನು ಶಿಕ್ಷಕರ ಜೊತೆ ಕರೆದುಕೊಂಡು ಹೋಗಿ, ಮಕ್ಕಳನ್ನು ಪ್ರೋತ್ಸಾಹಿಸುವ ಕ್ರೀಡಾ ಪ್ರೇಮಿ ಇವರು.

ಪ್ರತಿನಿತ್ಯ ವ್ಯಾಪಾರದಿಂದ ಉಳಿಯುವ ಚಿಲ್ಲರೆ ಕಾಸು ಗಂಜಿಯನ್ನಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಸುಮಾರು 45 ವರ್ಷಗಳಿಂದ ಇವರ ಜೀವನ ನಡೆದು ಬಂದಿರುವುದೇ ಹೀಗೆ.

ಶಾಲಾಮಕ್ಕಳಿಗೆ ಕೋಲಾಟ ಹಾಡುಗಳು, ನಾಟಕ ಗೀತೆಗಳನ್ನು ನೃತ್ಯ ಭಂಗಿಯ ಜೊತೆಗೆ ಕಲಿಸಿಕೊಡುತ್ತಾರೆ. ಬಿಡುವಾಯಿತೆಂದರೆ ಹಳ್ಳಿಗಳಲ್ಲಿ ನಡೆಯುವ ಶನಿ ಮಹಾತ್ರೆಯ ನಾಟಕದ ಅನೇಕ ಪಾತ್ರಗಳಿಗಾಗಿ ರಂಗವೇರಿದ್ದಾರೆ. ಇವರ ಕಣ್ಣು ಮಂಜಾಗಿದ್ದರೂ ಜೀವನ ಪರ್ಯಂತ ಕಲಾ ಸೇವೆ ಯನ್ನು ಮಾಡುವ ಕಾಯಕ ಮಾತ್ರ ನಿರಂತರ ಸಾಗುತ್ತಿದೆ. ಅಂತರರಾಷ್ಟ್ರೀಯ ಬ್ಯಾಸ್ಕೆಟ್ ಬಾಲ್ ಪಟು ಸವಿತಾ, ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಪಟು ರೋಹಿತ್ ಗೌಡ, ರಾಜ್ಯ ಮಟ್ಟದ ಆಟಗಾರರಾದ ಪ್ರೇಮ, ಪವಿತ್ರ, ನಂದನ್ ಕುಮಾ‌ರ್ ಸೇರಿದಂತೆ ಅನೇಕ ವಿದ್ಯಾರ್ಥಿಗಳ ಪ್ರತಿಭೆಗೆ ಸ್ಫೂರ್ತಿ ತುಂಬಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಸಂತೆಬಾಚಳ್ಳಿಯ ಬಸ್‌ಸ್ಟ್ಯಾಂಡ್ ಸರ್ಕಲ್‌ನಲ್ಲಿ ಪುಟ್ಟ ಚಿಲ್ಲರೆ ಅಂಗಡಿ ಇಟ್ಟುಕೊಂಡು ಬದುಕು ಸಾಗಿಸುತ್ತಿರುವ ಇವರಿಗೆ ಪುಟ್ಟ ಶೀಟಿನ ಮನೆ ಬಿಟ್ಟರೆ ಯಾವ ಆಸ್ತಿಯೂ ಇಲ್ಲ. ಒಂಟಿ ಜೀವನದ ಬದುಕಿನಲ್ಲಿ ಇವರ ಆಸ್ತಿಯೆಂದರೆ ಸಾವಿರಾರು ಮಕ್ಕಳ ಪ್ರೀತಿ ಮತ್ತು ಕೃತಜ್ಞತೆ.

msnehaswamy rangaswamy@gmail.com

ಆಂದೋಲನ ಡೆಸ್ಕ್

Recent Posts

ಸೆಲ್ಫಿ ವಿಡಿಯೋ ಮಾಡಿ ಆಟೋ ಚಾಲಕ ಆತ್ನಹತ್ಯೆಗೆ ಯತ್ನ

ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…

25 mins ago

ಮಂಡ್ಯದಲ್ಲಿ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು

ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…

2 hours ago

ರಾಜ್ಯದಲ್ಲಿ ಮೂರು ದಿನ ದಟ್ಟ ಮಂಜು ಕವಿದ ವಾತಾವರಣ: ತೀವ್ರ ಚಳಿ ಮುನ್ಸೂಚನೆ

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…

3 hours ago

ಯೂರಿಯಾ ಗೊಬ್ಬರ ತಿಂದು 11 ಮೇಕೆಗಳು ಸಾವು

ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…

3 hours ago

ಚಾಮರಾಜನಗರ| ಹುಚ್ಚುನಾಯಿ ದಾಳಿಯಿಂದ 7 ಮಂದಿಗೆ ಗಾಯ

ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…

3 hours ago

ದುಬಾರಿ ಗಿಫ್ಟ್‌ ತೆಗೆದುಕೊಳ್ಳುವುದು ತಪ್ಪಾಗುತ್ತದೆ: ಸಂಸದ ಯದುವೀರ್‌ ಒಡೆಯರ್‌

ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…

4 hours ago