Andolana originals

‘ನಾನು ಬೆಳೆಸಿದ ಕಾಡಿನಲ್ಲಿ ನನಗೆ ವಾಸಕ್ಕೆ ಜಾಗ ಇಲ್ವಾ?’

ಮಂಜು ಕೋಟೆ

೪೦ ವರ್ಷಗಳ ಕಾಲ ಆದಿವಾಸಿಗಳ ಪರ ಹೋರಾಟ ನಡೆಸಿದ ದಿಟ್ಟ ಮಹಿಳೆ ಸೋಮಮ್ಮ ಇನ್ನು ನೆನಪು ಮಾತ್ರ

ಎಚ್.ಡಿ.ಕೋಟೆ: ಕೆಲದಿನಗಳ ಹಿಂದೆ ಅಗಲಿದ, ಆದಿವಾಸಿ ಜನರ ಪರವಾಗಿ ೪೦ ವರ್ಷಗಳಿಂದಲೂ ಹೋರಾಟ ನಡೆಸುತ್ತಿದ್ದ ದಿಟ್ಟ ಆದಿವಾಸಿ ಮಹಿಳೆ ಆನೆಮಾಳ ಹಾಡಿಯ ಸೋಮಮ್ಮ ಅವರನ್ನು ತಾಲ್ಲೂಕಿನ ಗಿರಿ ಜನರು ಸದಾ ಸ್ಮರಿಸುತ್ತಾರೆ.

ತಾಲ್ಲೂಕಿನ  ದೊಡ್ಡಭೈರನ ಕುಪ್ಪೆ ಗ್ರಾಪಂ ವ್ಯಾಪ್ತಿಯ ಆನೆ ಮಾಳಹಾಡಿ ನಿವಾಸಿ ಸೋಮಮ್ಮ ಅವರದ್ದು ಹೋರಾಟದ ಮತ್ತು ಸ್ವಾಭಿಮಾನದ ಬದುಕು. ‘ಕಾಡು ನಿನ್ನಪ್ಪನದಾ, ಕಾಡು ಬೆಳೆಸಿದ್ದು ಯಾರು? ನಾನು ಬೆಳೆಸಿದ ಕಾಡಿನಲ್ಲಿ ನನಗೆ ವಾಸಕ್ಕೆ ಜಾಗ ಇಲ್ವಾ? ಕಾಡಿನ ಬಗ್ಗೆ, ಪ್ರಾಣಿಗಳ ಬಗ್ಗೆ ಫಾರೆಸ್ಟ್ ನವನಿಗೆ ಏನು ಗೊತ್ತು?

ನೂರಾರು ವರ್ಷಗಳಿಂದ ಕಾಡು ಬೆಳೆಸಿ, ಕಾಡು ಉಳಿಸಿ, ಪ್ರಾಣಿ-ಪಕ್ಷಿಗಳ ಜೊತೆಗೆ ಪ್ರತಿನಿತ್ಯ ಬದುಕುತ್ತಿರುವವರು ನಾವು. ನಮ್ಮನ್ನೇ ಕಾಡಿಂದ ಹೊರಹಾಕಲು ಬಂದಿ ದ್ದೀರಾ ಎಂದು ತುಂಬಿದ ಸಭೆ ಯಲ್ಲಿ ಅಧಿಕಾರಿಗಳನ್ನು, ಶಾಸಕ, ಸಚಿವರನ್ನು ತರಾಟೆಗೆ ತೆಗೆದುಕೊಳ್ಳುತ್ತಿ ದ್ದುದನ್ನು ಆದಿವಾಸಿಗಳು ಎಂದಿಗೂ ಮರೆಯುವುದಿಲ್ಲ.

ಅರಣ್ಯ, ಪೊಲೀಸ್ ಅಧಿಕಾರಿಗಳಿಗೆ ಎದೆಗುಂದದೆ ತನ್ನ ಬದುಕಿನುದ್ದಕ್ಕೂ ಆದಿವಾಸಿ ಸಮುದಾಯಕ್ಕಾಗಿ ಹೋರಾಟ ಮಾಡಿದ ಸೋಮಮ್ಮ ಅವರು ಒಮ್ಮೆ ಅರಣ್ಯದಿಂದ ಆದಿವಾಸಿಗಳನ್ನು ಹೊರ ಹಾಕುವ ಸಲುವಾಗಿ ಆದಿವಾಸಿಗಳು ಕಟ್ಟಿಕೊಂಡಿದ್ದ ಗುಡಿಸಲುಗಳನ್ನು ತೆರವು ಮಾಡಲು ಬಂದ ಅರಣ್ಯ ಇಲಾಖೆಯವರನ್ನು ಕಂಡು ಕಾಡಿನೊಳಗೆ ಓಡು ತ್ತಿದ್ದ ತನ್ನ ಹಾಡಿ ಜನರನ್ನು ನಿಲ್ಲಿಸಿ, ಅರಣ್ಯ ಇಲಾಖೆಯ ಜೀಪ್‌ಗೆ ಅಡ್ಡಲಾಗಿ ಮಲಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಾಗ ಅಧಿಕಾರಿಗಳು ಅಲ್ಲಿಂದ ಕಾಲ್ಕಿತ್ತಿದ್ದರು.

ಇವರ ಹೋರಾಟ, ಎದೆಗಾರಿಕೆಯನ್ನು ಮೆಚ್ಚಿ ಆದಿವಾಸಿ ಪರ ಸಂಘಟನೆಗಳು ಇವರನ್ನು ಸಾಕಷ್ಟು ಸಭೆ ಸಮಾರಂಭಗಳಿಗೆ ದಿಲ್ಲಿ, ಪಂಜಾಬ್, ಒಡಿಶಾ, ತಮಿಳು ನಾಡು, ಕೇರಳ, ಆಂಧ್ರಪ್ರದೇಶ ಮುಂತಾದ ರಾಜ್ಯಗಳಿಗೆ ಕರೆದುಕೊಂಡು ಹೋಗಿ ಇವರ ಹೋರಾಟದ ಬದುಕನ್ನು ಪರಿಚಯಿಸಿವೆ.

ಇವರ ಜೀವಮಾನದ ಹೋರಾಟದ ಸಾಧನೆಗಾಗಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಗೌರವ ಸನ್ಮಾನಗಳು ಲಭಿಸಿವೆ. ೧೯೮೪ರಿಂದಲೂ ಬುಡಕಟ್ಟು ಕೃಷಿಕ ಸಂಘದ ಜೊತೆಗೂಡಿ ಸಂಘದ ಸಲಹೆಗಾರರಾಗಿ ಆದಿವಾಸಿಗಳ ಎಲ್ಲಾ ರೀತಿಯ ಹೋರಾಟಗಳಲ್ಲಿ ಮುಂದಾಳತ್ವ ವಹಿಸುತ್ತಿದ್ದರು. ಬುಡಕಟ್ಟು ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆ ೨೦೦೬ ಅನುಷ್ಠಾನಕ್ಕಾಗಿ ಒತ್ತಾಯಿಸುತ್ತಿದ್ದ ಸೋಮಮ್ಮ ಹೈಕೋರ್ಟ್ ತೀರ್ಪು, ಡಾ.ಮುಜಾಫರ್ ಅಸ್ಸಾದಿ ವರದಿ ಆಧರಿಸಿ ನಮಗೆ ಮೂಲಸೌಕರ್ಯಗಳನ್ನು ಕೊಡಿ ಎಂದು ಆಗ್ರಹಿಸಿ ಹಲವು ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ‘ಆಂದೋಲನ’ ದಿನಪತ್ರಿಕೆ ನಡೆಸಿದ ಕಾರ್ಯಕ್ರಮ ಹಾಗೂ ತಾಲ್ಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

” ಸೋಮಮ್ಮ ಅವರು ೪೦ ವರ್ಷಗಳಿಂದಲೂ ಬುಡಕಟ್ಟು ಕೃಷಿಕರ ಸಂಘದ ಮೂಲಕ ಆದಿವಾಸಿ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ನಡೆಸಿದ ನಿರಂತರ ಹೋರಾಟದಿಂದ ರಾಜ್ಯ ಮತ್ತು ಕೇಂದ್ರ, ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಅರಿವು ಉಂಟಾಗಿ ಗಿರಿಜನರ ಅಲ್ಪಸ್ವಲ್ಪ ಕೆಲಸಗಳು ನಡೆದಿವೆ. ಸೋಮಮ್ಮ ಅಂಥವರ ಹೋರಾಟ ನಮಗೆಲ್ಲಾ ಸೂರ್ತಿ. ಅವರ ನಿಧನ ನಮ್ಮ ಸಮುದಾಯಕ್ಕೆ ತೀವ್ರ ನೋವು ಉಂಟುಮಾಡಿದೆ.”

-ವಿಜಯ್ ಕುಮಾರ್, ಗಿರಿಜನ ಮುಖಂಡ

 

 

ಆಂದೋಲನ ಡೆಸ್ಕ್

Recent Posts

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ | ಆಳುವ ಸರ್ಕಾರ ಎಚ್ಚರ ತಪ್ಪಿದರೆ ಪ್ರತಿರೋಧ ಖಚಿತ

ಆರ್ಥಿಕ ಸಂಕಷ್ಟದ ಸಮಯದಲ್ಲಿ ಜಾಗ್ರತೆಯಿಂದ ಕಾರ್ಯನಿರ್ವಹಣೆ ಅಗತ್ಯ ಇದು ಇಪ್ಪತ್ತೈದು ವರ್ಷಗಳ ಹಿಂದೆ ನಡೆದ ಘಟನೆ. ಅವತ್ತು ಮುಖ್ಯಮಂತ್ರಿಯಾಗಿದ್ದ ಎಸ್.…

11 mins ago

ಆಂದೋಲನ ಸಂಪಾದಕೀಯ | ಇಂಧನ ದರ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮುಂದಾಗಲಿ

ಕೇವಲ ಹತ್ತು ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಮೂರು ಬಾರಿ ಹೆಚ್ಚಳವಾಗಿದೆ. ಇದು ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ…

30 mins ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಮೇ.25 ಸೋಮವಾರ

3 hours ago

ಭಟ್ಕಳ ದುರಂತ | ಕಪ್ಪೆ ಚಿಪ್ಪು ಆರಿಸಲು ಹೋಗಿದ್ದ 8 ಮಂದಿ ಸಾವು!

ನದಿಗೆ ಇಳಿದು ಕೊಚ್ಚಿ ಹೋದ ಕುಟುಂಬ ಭಟ್ಕಳ : ಭಟ್ಕಳದಲ್ಲಿ ಚಪ್ಪೆಕಲ್ಲು ಆರಿಸಲು ಹೋಗಿದ್ದ ಒಂದೇ ಕುಟುಂಬದ 8 ಜನರು…

20 hours ago

ಬಲೂಚಿಸ್ತಾನ | ಸೇನಾ ಸಿಬ್ಬಂದಿ ಇದ್ದ ರೈಲು ಗುರಿಯಾಗಿಸಿ ಸ್ಫೋಟ ; 24 ಸಾವು

ಪೇಶಾವರ : ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಸೇನಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ರೈಲನ್ನು ಗುರಿಯಾಗಿಸಿಕೊಂಡು ನಡೆಸಿದ ಸ್ಪೋಟದಲ್ಲಿ 24 ಮಂದಿ ಸಾವು ಸೇರಿದಂತೆ…

22 hours ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ | ಜನಸಂಖ್ಯೆ ಏರುಪೇರು : ಆಂಧ್ರದ ನೀತಿ ಅನುಕರಣೀಯವೇ?

ದೇಶದ ಜನಸಂಖ್ಯೆಯಲ್ಲಾಗುತ್ತಿರುವ ಏರುಪೇರು ರಾಷ್ಟ್ರೀಯ ಜನಸಂಖ್ಯೆ ನಿರ್ವಹಣೆಯ ನೀತಿಯ ದಿಕ್ಕನ್ನೇ ಬದಲಿಸುತ್ತಿದೆ. ಉತ್ತರ ಭಾರತದ ಜನಸಂಖ್ಯೆ ಪ್ರಮಾಣ ಲಂಗು ಲಗಾಮಿಲ್ಲದೆ…

24 hours ago