Andolana originals

ಓದುಗರ ಪತ್ರ: ನೆರೆಯ ಚೀನಾ ನಂಬಿಕೆಗೆ ಅರ್ಹವೇ?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ, ಚೀನಾ ಮೊದಲಾದ ಏಷ್ಯಾ ಖಂಡದ ರಾಷ್ಟ್ರಗಳ ಮೇಲೆ ಮನಸೋ ಇಚ್ಛೆ ಆಮದು ಸುಂಕ ವಿಧಿಸಿರುವ ಹಿನ್ನೆಲೆಯಲ್ಲಿ ಆ ದೇಶಕ್ಕೆ ಸಡ್ಡು ಹೊಡೆದು ಚೀನಾ- ಭಾರತ ಬಾಯಿ ಬಾಯಿ ಎಂದು ಚೀನಾದೊಂದಿಗೆ ಭಾರತ ಸ್ನೇಹವನ್ನು ಉತ್ತುಂಗಕ್ಕೇರಿಸಿಕೊಂಡಿದೆ.

ಸ್ನೇಹಿತರನ್ನು ಬದಲಿಸಿಕೊಳ್ಳಬಹುದು ಆದರೆ ನೆರೆಯವರನ್ನು ಬದಲಿಸಿಕೊಳ್ಳಲಾಗುವುದಿಲ್ಲವೆಂಬ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಮಾತನ್ನು ಸದಾ ತಲೆಯೊಳಗಿಟ್ಟುಕೊಂಡಿರುವ ಭಾರತದ ಪ್ರಯತ್ನವೇನೋ ಸರಿ. ಆದರೆ ಚೀನಾ ಭಾರತದ ಒಳ್ಳೆಯ ಉದ್ದೇಶವನ್ನು ಅದೆಷ್ಟು ಅರ್ಥ ಮಾಡಿಕೊಳ್ಳಬಹುದು ಎಂಬುದು ಯಕ್ಷ ಪ್ರಶ್ನೆಯಾಗಿದೆ. ಇತಿಹಾಸವನ್ನು ಗಮನಿಸಿದರೆ ಚೀನಾ ಸ್ನೇಹದ ವಿಷಯದಲ್ಲಿ ನಂಬಿಕೆಗೆ ಅರ್ಹವಾದ ದೇಶವಂತೂ ಅಲ್ಲವೇ ಅಲ್ಲ.

ಇದನ್ನು ಓದಿ:ಇಂಡಿಗೋ ವಿಮಾನಕ್ಕೆ ಪಕ್ಷಿ ಡಿಕ್ಕಿ: ತಪ್ಪಿದ ಭಾರೀ ಅನಾಹುತ

ಇದೇ ಚೀನಾದ ಅಧ್ಯಕ್ಷರಾದ ಕ್ಷಿ ಪಿಂಗ್ ಅವರನ್ನು ಈ ಹಿಂದೆ ಪ್ರಧಾನಿ ಮೋದಿಯವರು ಭಾರತಕ್ಕೆ ಕರೆಸಿಕೊಂಡು ಮಹಾಬಲಿಪುರಂ ಬಂಡೆಯನ್ನು ತೋರಿಸಿ ಸ್ನೇಹದ ಕನಸು ಕಾಣುತ್ತಾ ಕಳುಹಿಸಿಕೊಟ್ಟ ಸ್ವಲ್ಪ ಸಮಯದಲ್ಲೇ ಆಕ್ಸಾಯ್ ಚಿನ್ ಗಡಿಯಲ್ಲಿ ಭಾರತದ ಪ್ರದೇಶವನ್ನು ಅತಿಕ್ರಮಣ ಮಾಡಿ ನಮ್ಮವರೊಂದಿಗೆ ಗುದ್ದಾಟಕ್ಕಿಳಿದು ಸಂಬಂಧ ಹಳಸಿ ಹೋದ ಪ್ರಕರಣವನ್ನು ನೆನೆದರೆ ಚೀನಾ ಅಧ್ಯಕ್ಷ ಕ್ಷಿ ಅವರನ್ನು ಎಷ್ಟರ ಮಟ್ಟಿಗೆ ನಂಬಬಹುದು ಎನ್ನುವ ಪ್ರಶ್ನೆ ಎದುರಾಗುತ್ತದೆ.

ಸದ್ಯ ಚೀನಾಕ್ಕೂ ಅಮೆರಿಕ ಬದ್ಧ ವೈರಿಯಾಗಿರುವುದರಿಂದ ಮತ್ತು ರಷ್ಯಾ ದೇಶವು ನಮ್ಮೊಂದಿಗೆ ವಿಶ್ವಾಸದಿಂದ ಇರುವುದರಿಂದ ಚೀನಾ ವಿಧಿ ಇಲ್ಲದೆ ಭಾರತದೊಂದಿಗೆ ನಗುವಿನ ಮುಖವಾಡ ಹಾಕಿ ನಿಂತಿದೆ. ಚೀನಾದೊಂದಿಗೆ ನಾವು ಸ್ನೇಹ ಕುದುರಿಸಿದಲ್ಲಿ ಸದಾ ಚೀನಾದ ಮಿತ್ರರು ನಮ್ಮ ಮಿತ್ರರಾಗಿ ಚೀನಾದ ಶತ್ರುಗಳು ನಮ್ಮ ಶತ್ರುಗಳಾಗ ಬೇಕಾದ ಸಂದಿಗ್ಧ ಪರಿಸ್ಥಿತಿ ಬರಬಹುದು. ಚೀನಾ ಅಮೆರಿಕದೊಂದಿಗೆ ದ್ವೇಷದ ಕಾರಣಕ್ಕಾಗಿ ನಮ್ಮನ್ನು ಪರಮ ಮಿತ್ರ ಸ್ಥಾನದಲ್ಲಿ ಕೂರಿಸಿ ನಮ್ಮನ್ನು ಸಹಿಸಿಕೊಳ್ಳುತ್ತದೆಯೇ? ಇವುಗಳನ್ನೆಲ್ಲಾ ಗಮನಿಸಿದರೆ ಕ್ಷಿ ಮೋದಿ ಅವರನ್ನು ಅಪ್ಪಿಕೊಂಡುದುದು ಪ್ರಸಕ್ತ ಪರಿಸ್ಥಿತಿಗೆ ಮಾತ್ರವೇ ಹೊರತು ಇದು ಅವರ ಮನಃ ಪರಿವರ್ತನೆಯಲ್ಲ ಮತ್ತು ಶಾಶ್ವತವೂ ಅಲ್ಲ.

-ದೊಡ್ಡಕಮರವಳ್ಳಿ ಸಿದ್ದಲಿಂಗಪ್ಪ, ಜೆ.ಪಿ.ನಗರ, ಮೈಸೂರು

 

ಆಂದೋಲನ ಡೆಸ್ಕ್

Recent Posts

ಹಾರ್ಮುಜ್‌ ಜಲಸಂಧಿ ಬಳಿ ಅಮೇರಿಕಾ ಅಬ್ಬರ: ಇರಾನ್‌ನ 16 ನೌಕೆಗಳು ಧ್ವಂಸ

ಟೆಹರಾನ್:‌ ವಿಶ್ವದ ಪ್ರಮುಖ ಇಂಧನ ಸಾಗಣೆ ಮಾರ್ಗವಾದ ಹಾರ್ಮುಜ್‌ ಜಲಸಂಧಿಯ ಬಳಿ ನೌಕಾ ಮೈನ್‌ಗಳನ್ನು ಅಳವಡಿಸಲು ಸಜ್ಜಾಗಿದ್ದ ಇರಾನ್‌ನ 16…

2 hours ago

90 ದಿನದೊಳಗೆ ಅಂಗನವಾಡಿ ಖಾಲಿ ಹುದ್ದೆ ಭರ್ತಿಗೆ ಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

ಬೆಂಗಳೂರು: ಅಂಗನವಾಡಿ ಕೇಂದ್ರಗಳಲ್ಲಿ ಯಾವುದೇ ಹುದ್ದೆ ಖಾಲಿಯಾದ 90 ದಿನಗಳ ಒಳಗಾಗಿ ಭರ್ತಿ ಮಾಡಬೇಕು ಎಂದು ಕಳೆದ ಡಿಸೆಂಬರ್‌ನಲ್ಲೇ ಜಿಲ್ಲಾಧಿಕಾರಿಗಳು…

2 hours ago

ಗೃಹ ಬಳಕೆಯ ಗ್ಯಾಸ್‌‍ ಸಿಲಿಂಡರ್‌ನ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ: ಸಚಿವ ಕೆ.ಎಚ್.ಮುನಿಯಪ್ಪ

ಬೆಂಗಳೂರು: ಗೃಹ ಬಳಕೆಯ ಗ್ಯಾಸ್‌‍ ಸಿಲಿಂಡರ್‌ನ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ…

2 hours ago

ಮಂಡ್ಯ: ಕುಡಿಯುವ ನೀರಿನ ಗುಣಮಟ್ಟಕ್ಕೆ ಆದ್ಯತೆ ನೀಡಿ: ಜಿಲ್ಲಾಧಿಕಾರಿ ಡಾ.ಕುಮಾರ

ಮಂಡ್ಯ: ಕುಡಿಯುವ ನೀರಿನ ಗುಣಮಟ್ಟವು ನೇರವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಸುರಕ್ಷಿತ, ಶುದ್ಧ ಮತ್ತು ರಾಸಾಯನಿಕ ಮುಕ್ತ ನೀರನ್ನು…

3 hours ago

ನಾಳೆ ಮೈಸೂರಿಗೆ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬಜೆಟ್‌ ಅಧಿವೇಶನದ ನಡುವೆಯೇ ಸಿಎಂ ಸಿದ್ದರಾಮಯ್ಯ ನಾಳೆ ಮೈಸೂರಿಗೆ ಆಗಮಿಸಲಿದ್ದಾರೆ. ನಾಳೆ ಬೆಳಿಗ್ಗೆ 10 ಗಂಟೆಗೆ ಎಚ್‌ಎಎಲ್‌ ವಿಮಾನ…

3 hours ago

ಎಲ್‌ಪಿಜಿ ಸಿಲಿಂಡರ್‌ ಪೂರೈಕೆಯಲ್ಲಿ ವ್ಯತ್ಯಯ: ಗೃಹ ಸಚಿವ ಪರಮೇಶ್ವರ್‌ ಹೇಳಿದ್ದಿಷ್ಟು.!

ಬೆಂಗಳೂರು: ಇರಾನ್‌-ಇಸ್ರೇಲ್‌ ಯುದ್ಧ ಭಾರತದ ಮೇಲೂ ಪರಿಣಾಮ ಬೀರಿದ್ದು, ಗ್ಯಾಸ್‌ ಸಿಲಿಂಡರ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಈ ಬಗ್ಗೆ ಗೃಹ…

5 hours ago