Andolana originals

ನನ್ನ ಓದು ಆರಂಭವಾಗಿದ್ದೇ ʼಆಂದೋಲನʼದಿಂದ: ದರ್ಶನ್‌

ನಂಜನಗೂಡು: ನನ್ನ ಓದು ಆರಂಭವಾಗಿದ್ದೇ ‘ಆಂದೋಲನ’ ಪತ್ರಿಕೆಯಿಂದ ಎಂದು ಶಾಸಕ ದರ್ಶನ್ ಧ್ರುವನಾರಾಯಣ ತಿಳಿಸಿದರು. ತಾಲ್ಲೂಕು ಆಡಳಿತ ಭವನದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ‘ಆಂದೋಲನ’ದ ೫೨ನೇ ವರ್ಷದ ವಿಶೇಷ ಸಂಚಿಕೆಯನ್ನು ಲೋಕಾರ್ಪ ಣೆಗೊಳಿಸಿ ಅವರು ಮಾತನಾಡಿದರು. ನಾನು ಚಿಕ್ಕವನಾಗಿದ್ದಾಗ ಮನೆಗೆ ಬರುತ್ತಿದ್ದ ‘ಆಂದೋಲನ’ದ ಅಕ್ಷರ ಗಳನ್ನು ಓದಿಯೇ ಕನ್ನಡ ಕಲಿತಿದ್ದು. ಕೋಟಿಯವರು ಕಟ್ಟಿ ಬೆಳೆಸಿದ ಈ ಸಮಾಜಮುಖಿ ಸಂಸ್ಥೆಯನ್ನು ಇಂದು ಅವರ ಮಕ್ಕಳು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಪತ್ರಿಕೆ ಶತನೋತ್ಸವ ಕಾಣುವಂತಾಗಲಿ ಎಂದರು. ಹೋರಾಟಗಾರ ಚುಂಚನಹಳ್ಳಿ ಮಲ್ಲೇಶ ಮಾತನಾಡಿ, ೭೦ – ೮೦ರ ದಶಕದಲ್ಲಿ ‘ಆಂದೋಲನ’ ರೈತ, ದಲಿತ ಚಳವಳಿಗಳ ಹೋರಾಟಗಾರರ ಬೆನ್ನೆಲು ಬಾಗಿ ಕೆಲಸ ಮಾಡಿತ್ತು ಎಂದು ಸ್ಮರಿಸಿ ದರು. ಮಾಜಿ ಶಾಸಕ ಕಳಲೆ ಕೇಶವ ಮೂರ್ತಿ, ತಹಸಿಲ್ದಾರ್ ಶಿವಕುಮಾರ್ ಕ್ಯಾಸನೂರು, ತಾಪಂ ಇಒ ಜೆರಾಲ್ಡ್ ರಾಜೇಶ್, ಮಲ್ಲಳ್ಳಿ ನಾರಾಯಣ, ಚುಂಚನ ಹಳ್ಳಿ ಮಲ್ಲೇಶ, ಕಾರ್ಯ ಬಸವಣ್ಣ, ವಿಜಯಕುಮಾರ್, ಸ್ವಾಮಿ, ಬೊಕ್ಕಹಳ್ಳಿ ಲಿಂಗಯ್ಯ, ದೇವರಾಜು, ಮಹದೇವಯ್ಯ, ರಾಜೇಶ, ಸಿ. ಎಂ. ಶಂಕರ್, ದೇವನೂರು ಶಿವಪ್ಪದೇವರು, ವಿಜಯ ಕುಮಾರ್, ದೊರೆಸ್ವಾಮಿ ನಾಯಕ, ಹಗಿನವಾಳು ಬಸವಣ್ಣ ಹಾಜರಿದ್ದರು.

andolana

Recent Posts

ಕೊಡಗು ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಸುರಿದ ಮಳೆಯ ವಿವರ

ಕೊಡಗು: ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 37 ಮಿ.ಮೀ. ಮಳೆಯಾಗಿದೆ. ಕಳೆದ…

12 hours ago

ಹಾರಂಗಿ ಜಲಾಶಯದ ಇಂದಿನ ನೀರಿನ ಮಟ್ಟ

ಮಡಿಕೇರಿ: ಹಾರಂಗಿ ಜಲಾಶಯದಲ್ಲಿ ನೀರಿನ ಮಟ್ಟ ಗರಿಷ್ಠ ಮಟ್ಟಕ್ಕೆ ತಲುಪಿದೆ. ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಇಂದು 2,858.45…

12 hours ago

ತಮಿಳುನಾಡಿಗೆ ನಿತ್ಯ 9 ಸಾವಿರ ಕ್ಯೂಸೆಕ್ ನೀರು ಹರಿಸಿ – CWRC ಶಿಫಾರಸು ಎತ್ತಿಹಿಡಿದ CWMA

ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿಯ, ಅಂದರೆ CWRCಯ ಶಿಫಾರಸನ್ನು ಕಾವೇರಿ ನೀರು…

12 hours ago

ಓದುಗರ ಪತ್ರ: ಭವಿಷ್ಯದ ಬೆಳಕಾಗಲಿ!

ಭವಿಷ್ಯದ ಬೆಳಕಾಗಲಿ! ಎಲ್ಲರ ಒಳಗೊಳ್ಳುವ ಎಲ್ಲರ ಹಿತ ಅಭ್ಯುದಯದ ಹೊಸ ದೇಶ ಕಟ್ಟುವುದಾಗಿ ಗುಡುಗುತಿದೆ ಜೆನ್ ಝೀ ಪಡೆ! ಈ…

15 hours ago

ಓದುಗರ ಪತ್ರ: ಓದುಗರ ಪತ್ರ ಚಾಮುಂಡಿಬೆಟ್ಟ: ನೋ-ಫ್ಲೈಝೋನ್ ಆಗಲಿ

ತಿರುಪತಿಯ ಮಾದರಿಯಲ್ಲಿ ಮೈಸೂರಿನ ಚಾಮುಂಡಿಬೆಟ್ಟಕ್ಕೂ ನೋ -ಫ್ಲೈಝೋನ್ ಘೋಷಣೆಗೆ ಗಂಭೀರವಾಗಿ ಪರಿಶೀಲಿಸುವಂತೆ ಸಂಸದ ಯದುವೀರ್ ಅವರು ಕೇಂದ್ರ ನಾಗರಿಕ ವಿಮಾನಯಾನ…

15 hours ago

ಓದುಗರ ಪತ್ರ: ಪ್ರೇಕ್ಷಕರ ಆಸಕ್ತಿಗೆ ತಕ್ಕಂತೆ ಕಾರ್ಯಕ್ರಮ ಆಯೋಜಿಸಿ

ಈ ವರ್ಷದ ನಾಡ ಹಬ್ಬ ದಸರಾದಲ್ಲಿ ನಡೆಯುವ ಕವಿಗೋಷ್ಠಿಗೆ, ಕವಿಗೋಷ್ಠಿಯ ಉಪಸಮಿತಿಯವರು ಅರ್ಜಿ ಸಲ್ಲಿಸಲು ತಿಳಿಸಿದ್ದಾರೆ. ಪ್ರಧಾನ ಕವಿಗೋಷ್ಠಿ, ಯುವ…

15 hours ago