Andolana originals

ಯಂಗ್ ಆಗಿ ಕಾಣೋದು ಹೆಂಗೆ?

• ಎಚ್.ವಿ.ನಂದಿನಿ, ಚನ್ನಪಟ್ಟಣ

ಯಾವಾಗಲೂ ಯಂಗ್ ಆಗಿ ಕಾಣಿಸ ಬೇಕು, ವಯಸ್ಸಾಗಿದ್ದರೂ ಆಗಿರದಂತೆ ಕಾಣಬೇಕು ಎಂದರೆ ಹಣ್ಣುಗಳನ್ನು ತಿನ್ನಬೇಕು.

ಮುಪ್ಪು ಎಲ್ಲರಿಗೂ ಬರಲೇಬೇಕು. ಅದು ಪ್ರಕೃತಿಯ ನಿಯಮ. ಅದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ವಯಸ್ಸಾಗುವಿಕೆಯ ಪರಿಣಾಮ ಗಳನ್ನು ಸ್ವಲ್ಪ ನಿಧಾನಿಸಬಹುದು ಅಷ್ಟೇ. ಅದಕ್ಕಾಗಿ ಸರಿಯಾದ ಆಹಾರ ಕ್ರಮ, ದೈಹಿಕವಾಗಿ ಮತ್ತು ಮಾನಸಿ ಕವಾಗಿ ಯಾವುದೇ ದುಶ್ಚಟಗಳಿಲ್ಲದೆ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿದರೆ ಮಾತ್ರ ಸಾಧ್ಯ. ಹೀಗಾದಾಗ ವೃದ್ಧಾಪ್ಯದಲ್ಲೂ ಯಂಗ್ ಆಗಿಕಾಣಿಸಿಕೊಳ್ಳಬಹುದು.

ವಯಸ್ಸಾಗಿದೆ ಎಂಬುದು ಮೊದಲಿಗೆ ತಿಳಿಯುವುದೇ ಮುಖ ನೋಡಿದಾಗ, ನಮ್ಮ ಮುಖದ ಚರ್ಮ ಹೊಳೆಯುವಂತೆ ಚರ್ಮದ ಆರೋಗ್ಯ ಕಾಪಾಡಿಕೊಂಡರೆ ನಾವು ಸುಂದರವಾಗಿ ಕಾಣಲು ಸಾಧ್ಯ. ಇದಕ್ಕಾಗಿ ನಾವು ಲೋಷನ್ ಮತ್ತು ಸೀರಮ್ ಅನ್ನು ಬಳಸುತ್ತೇವೆ. ಆದರೆ ಇದು ಚರ್ಮಕ್ಕೆ ಹಾನಿಯನ್ನುಂಟು ಮಾಡಬಹುದು. ಆದ್ದರಿಂದ ಯಾವುದೇ ರಾಸಾಯನಿಕ ಕ್ರೀಮ್ ಬಳಸದೆಯೇ ನಾವು ಹಣ್ಣುಗಳನ್ನು ತಿನ್ನುವ ಮೂಲಕ ಯಂಗ್ ಆಗಿ ಕಾಣಿಸಿಕೊಳ್ಳಬಹುದು. ಇದಕ್ಕಾಗಿ ನೈಸರ್ಗಿಕವಾಗಿ ಲಭ್ಯವಿರುವ ಈ 5 ಹಣ್ಣುಗಳನ್ನು ತಿಂದರೆ ನಮ್ಮ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು.

ಬೆರಿ ಹಣ್ಣುಗಳು: ಬೆರಿ ಹಣ್ಣುಗಳನ್ನು ಸೂಪರ್ ಫುಡ್‌ಗಳ ಪಟ್ಟಿ ಯಲ್ಲಿ ಸೇರಿಸಲು ಹಲವು ಕಾರಣಗಳಿವೆ. ಈ ಸಣ್ಣ ಹಣ್ಣು ಕಡು ನೀಲಿ ಬಣ್ಣದಿಂದ ಕೂಡಿದ್ದು, ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದರಲ್ಲಿರುವ ಆಂಥೋಸಯಾನಿನ್ ನಿಮ್ಮತ್ವಚೆ ವಯಸ್ಸಾಗುವುದನ್ನು ತಡೆಯುತ್ತದೆ. ಅಲ್ಲದೇ, ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಇದು ನಮ್ಮ ಚರ್ಮವು ಮೃದುವಾಗಿರಲು ಸಹಾಯ ಮಾಡುತ್ತದೆ.

ಆವಕಾಡೊ: ಕೆನೆಯ ರುಚಿಯನ್ನು ಹೊಂದಿರುವ ಆವಕಾಡೊ ನಮ್ಮ ಚರ್ಮಕ್ಕೆ ಅಗತ್ಯವಿರುವ ಅನೇಕ ಪೋಷಕಾಂಶಗಳನ್ನು ಒದಗಿಸುತ್ತದೆ. ಆವಕಾಡೊಗಳು ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತವೆ, ಇದು ನಿಮ್ಮ ಚರ್ಮವನ್ನು ಹೈಡ್ರೆಟ್ ಆಗಿಸಿ ಹೊಳೆಯುವಂತೆ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ ಕಾಲಜನ್ ಪ್ರಚೋದನೆಯನ್ನು ಉಂಟುಮಾಡುತ್ತದೆ.

ದಾಳಿಂಬೆ ಹಣ್ಣು: ದಾಳಿಂಬೆಯಲ್ಲಿ ಪಾಲಿಫಿನಾಲ್ ಎಂಬ ಆಂಟಿ ಆಕ್ಸಿಡೆಂಟ್ ಅಂಶ ಇದ್ದು, ಅದು ನಮ್ಮ ತ್ವಚೆಗೆ ಅತ್ಯುತ್ತಮ ರಕ್ಷಣೆ ನೀಡುತ್ತದೆ. ಇದು ಯುವಿ ಕಿರಣಗಳಿಂದ ನಮ್ಮ ಚರ್ಮ ವನ್ನು ರಕ್ಷಿಸುತ್ತದೆ. ಜೊತೆಗೆ ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡಿ, ಸದಾ ಯಂಗ್ ಆಗಿ ಕಾಣುವಂತೆ ಮಾಡುತ್ತದೆ.

ಪಪ್ಪಾಯ ಹಣ್ಣು: ಪಪ್ಪಾಯಿಯಲ್ಲಿ ವಿಟಮಿನ್‌ಗಳು, ಖನಿಜ ಗಳು ಮತ್ತು ಕಿಣ್ವಗಳಿವೆ ಪಪ್ಪಾಯಿಯಲ್ಲಿ ವಿಟಮಿನ್ ಎ, ಸಿ ಮತ್ತು ಇ ಸಮೃದ್ಧ ವಾಗಿದೆ, ಇದು ಚರ್ಮದ ಹಾನಿಯನ್ನು ಸು ಪಡಿಸಲು ಸಹಾಯ ಮಾಡುತ್ತದೆ ಪಪ್ಪಾಯಿ ಯಲ್ಲಿರುವ ಪಾಪೈನ್ ಎಂಬ ಕಿಣ್ವವು ಸತ್ತ ಜೀವಕೋಶಗಳನ್ನು ತೆಗೆದು ಹಾಕಲು ಮತ್ತು ಚರ್ಮದ ರಂಧ್ರಗಳನ್ನು ಮುಚ್ಚಲು ಸಹಾಯ ಮಾಡುತ್ತದೆ. ಪಪ್ಪಾಯಿ ಹಣ್ಣನ್ನು ನಿಯಮಿತ ವಾಗಿ ಸೇವಿಸುವುದರಿಂದ ಚರ್ಮವು ನಯವಾಗಿ ಹೊಳೆಯುತ್ತದೆ.

ಕಿವಿಫ್ರೂಟ್: ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇದು ನಮ್ಮ ದೇಹದಲ್ಲಿ ಕಾಲಜನ್ ಉತ್ಪಾದನೆ ಯನ್ನು ಉತ್ತೇಜಿಸುತ್ತದೆ ಮತ್ತು ಚರ್ಮವನ್ನು ಮೃದುಗೊಳಿಸುತ್ತದೆ. ಅಲ್ಲದೇ, ಈ ಹಣ್ಣಿನಲ್ಲಿ ರುವ ವಿಟಮಿನ್ ಇ ಮತ್ತು ಆ್ಯಂಟಿ ಆಕ್ಸಿಡೆಂಟ್‌ಗಳಿಂದಾಗಿ ಇದು ಚರ್ಮದ ಮೇಲಿನ ನೆರಿಗೆ ಮತ್ತು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.

ಕೆಲವು ಇತರ ಸಲಹೆಗಳು: ಈ ಹಣ್ಣುಗಳು ನಿಮ್ಮ ತ್ವಚೆಯನ್ನು ಯೌವನವಾಗಿ ಕಾಣುವಂತೆ ಸಹಾಯ ಮಾಡುತ್ತವೆಯಾದರೂ, ಸಮ ತೋಲಿತ ಆಹಾರ, ಸರಿಯಾದ ಜಲಸಂಚಯನ ಹಿತ ಮಿತ ವಾಗಿದ್ದರೆ ಆರೋಗ್ಯಕರ ಜೀವನಶೈಲಿಯು ನಿಮ್ಮದಾಗುತ್ತದೆ. ಇದರಿಂದ ಆರೋಗ್ಯ ದಲ್ಲಿ ಪ್ರಮುಖವಾದ ಮುಖ್ಯ ಪಾತ್ರವನ್ನು ವಹಿಸುತ್ತದೆ. ನೀವು ಶಾಶ್ವತವಾಗಿ ಯಂಗ್ ಆಗಿ ಉಳಿಯಲು ಬಯಸಿದರೆ ನಿಮ್ಮ ತ್ವಚೆಯ ರಕ್ಷಣೆ ನಿಮ್ಮ ಕೈಯಲ್ಲೆ ಇದೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಪುಷ್ಪ ವೃಷ್ಟಿ..!

ಪುಷ್ಪ ವೃಷ್ಟಿ..! ಅತಿವೃಷ್ಟಿ, ಅನಾವೃಷ್ಟಿಯ ವರದಿ ಬರೆಯುತಿಹರಂತೆ ಸಚಿವರು... ‘ಒಂಬತ್ತು ಜಿಗಳಲ್ಲಿ ಮೋಡ ಕವಿದ ವಾತಾವರಣ ಕಾರಣ, ಅಲ್ಲಿಗಿಲ್ಲ ಮಂತ್ರಿ…

9 hours ago

ಓದುಗರ ಪತ್ರ: ರೈತ ಮಕ್ಕಳ ವಿದ್ಯಾಭ್ಯಾಸ ಶುಲ್ಕದಲ್ಲಿ

ರಿಯಾಯಿತಿಗೆ ಸರ್ಕಾರ ಕ್ರಮ ಕೈಗೊಳ್ಳಲಿ ರಾಜ್ಯದ ಹಲವು ಭಾಗಗಳಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ನಿರೀಕ್ಷಿಸಿದಷ್ಟು ಮಳೆಯಿಲ್ಲದ ಕಾರಣ ಕೃಷಿ ಕ್ಷೇತ್ರ…

9 hours ago

ಓದುಗರ ಪತ್ರ: ಧಾರ್ಮಿಕ ಮುಖಂಡರು ರೈತರ ಬೆನ್ನಿಗೆ ನಿಲ್ಲಬೇಕು

ರಾಜ್ಯದಲ್ಲಿ ನಗರೀಕರಣದ ವೇಗದಿಂದಾಗಿ ಕೃಷಿ ಭೂಮಿಯ ವಿಸ್ತೀರ್ಣ ಸುಮಾರು ಶೇ. ೧೩ರಷ್ಟು ಕುಸಿದಿದೆ ಎಂದು ವರದಿಗಳು ಹೇಳಿವೆ. ಮೂಲಸೌಕರ್ಯಗಳ ಹೆಸರಿನಲ್ಲಿ…

9 hours ago

ಧ್ರುವೀಕರಣದ ನೆಲೆಗಟ್ಟಿನ ಮೇಲೆ ರಾಜ್ಯ ರಾಜಕಾರಣ

ಆರ್.‌ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕರ್ನಾಟಕದ ರಾಜಕಾರಣ ಧ್ರುವೀಕರಣದ ನೆಲೆಗಟ್ಟಿಗೆ ಬಂದು ತಲುಪಿದೆ. ಅಂದ ಹಾಗೆ ಧ್ರುವೀಕರಣಕ್ಕೆ ಅಸಮಾ ಧಾನ,ಅತೃಪ್ತಿ,ಭಿನ್ನಾಭಿಪ್ರಾಯಗಳೇ…

9 hours ago

ಪಕ್ಕದಲ್ಲೇ ನದಿಯಿದ್ದರೂ ಚಿಕ್ಕಮಂದಗೆರೆ ಗ್ರಾಮಕ್ಕಿಲ್ಲ ನೀರು!

ಮಹೇಶ್ ಕರೋಟಿ ಹೇಮಾವತಿ ನದಿ ದಡದಲ್ಲೇ ನೀರಿಗಾಗಿ ಹಾಹಾಕಾರ ಕಿಕ್ಕೇರಿ: ಮಂದಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಮಂದಗೆರೆ ಗ್ರಾಮವು ಹೇಮಾವತಿ…

10 hours ago

ಕೊಡಗಿನಲ್ಲಿ1,20,874 ಮಕ್ಕಳಿಗೆ ಮಾತ್ರೆ ವಿತರಣೆ ಗುರಿ

ನವೀನ್ ಡಿಸೋಜ ಇಂದು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಜಂತುಹುಳು ಬಾಧೆ ತಡೆಗೆ ಆರೋಗ್ಯ ಇಲಾಖೆಯ ಮಹತ್ವದ ಹೆಜ್ಜೆ ಮಡಿಕೇರಿ:…

10 hours ago