Andolana originals

ಡಾ.ಬಿ.ಆರ್.ಅಂಬೇಡ್ಕರ್ ಗ್ರಂಥಾಲಯ- ಗೃಹ ಪ್ರವೇಶ

ಮಲ್ಕುಂಡಿ ಮಹದೇವಸ್ವಾಮಿ

ನೀವು ಒಂದು ದೇವಾಲಯ ನಿರ್ಮಿಸಿದರೆ ನೂರಾರು ಜನ ಭಿಕ್ಷುಕರು ಹುಟ್ಟಿಕೊಳ್ಳುತ್ತಾರೆ. ಆದರೆ ಒಂದು ಗ್ರಂಥಾಲಯ ನಿರ್ಮಿಸಿದರೆ ನೂರಾರು ಜನ ಜ್ಞಾನಿಗಳು ಉದಯಿಸುತ್ತಾರೆ’ ಎಂಬುದಾಗಿ ಗ್ರಂಥಾಲಯದ ಮಹತ್ವವನ್ನು ಕುರಿತ ಡಾ.ಅಂಬೇಡ್ಕರ್ ಅವರ ಮಾತುಗಳನ್ನು ನಾವು ಆಗಾಗ ಓದುತ್ತಿರುತ್ತೇವೆ.

ಡಾ.ಅಂಬೇಡ್ಕರ್ ಅವರನ್ನು ಸದಾ ಜೀವಂತೀಕರಿಸುವುದು ಆಚರಣೆಗಳಿಂದಲ್ಲ. ಅಂಬೇಡ್ಕರ್‌ರ ಸದಾ ಶಯ, ಮಾನವತೆ ಪ್ರೇರಿತ ನಡವಳಿಕೆಯಿಂದ. ಈ ನಿಟ್ಟಿನಲ್ಲಿ ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆಯ, ಡಿ.ಶಬ್ರೀನಾ ಮತ್ತು ಮೊಹಮ್ಮದ್ ಅಲಿ ದಂಪತಿ ಡಾ.ಅಂಬೇಡ್ಕರ್ ಮತ್ತು ದಾರ್ಶನಿಕರ ಚಿಂತನೆಗಳ ಜೀವಂತ ಸಾಕ್ಷಿಯಾಗಿ ಕಾಣಿಸುತ್ತಾರೆ.

ಮುಸ್ಲಿಂ ಸಮುದಾಯದ ಈ ದಂಪತಿ ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದು, ತಾವು ಹೊಸದಾಗಿ ನಿರ್ಮಿಸಿದ ಮನೆಗೆ ‘ಕನ್ನಡ ಕೌಸ್ತುಭ’ ನಿಲಯ ಎಂದು ಹೆಸರಿಟ್ಟು, ಆ ಮನೆಯಂಗಳದಲ್ಲಿಯೇ ಸಾರ್ವಜನಿಕರಿಗಾಗಿ ‘ಪುಸ್ತಕ ಪ್ರೇಮಿ ಡಾ.ಅಂಬೇಡ್ಕರ್‌ ಗ್ರಂಥಾಲಯ ಎಂಬ ಅರ್ಥಪೂರ್ಣ ಗ್ರಂಥಾಲಯವೊಂದನ್ನು ತೆರೆದಿದ್ದಾರೆ. ಅಲ್ಲಿ ನೂರಾರು ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ಫುಲೆ ದಂಪತಿ, ಶಾಹು ಮಹಾರಾಜ್, ನಾಲ್ವಡಿ ಕೃಷ್ಣರಾಜ ಒಡೆಯರ್, ಸಂತ ಶಿಶುನಾಳ ಶರೀಫ, ಬಸವಣ್ಣ, ಫಾತಿಮಾ, ಕುವೆಂಪು, ವಿವೇಕಾನಂದ, ಗಾಂಧಿ ಮುಂತಾದವರ ಭಾವಚಿತ್ರಗಳನ್ನು ಅಳವಡಿಸಿದ್ದಾರೆ. ಜಗತ್ತಿನ ಮಹಾಜ್ಞಾನಿಗಳ ಸುಪ್ರಸಿದ್ಧ ಹೇಳಿಕೆಗಳನ್ನು ಸಂಗ್ರಹಿಸಿದ್ದಾರೆ.

ಅಂಬೇಡ್ಕರ್ ಅವರ ಬದುಕು, ಬರಹ, ವಿಧಾನವನ್ನು ವಿಸ್ತರಿಸಿದ್ದಾರೆ. ಇಂತಹ ಅದ್ಭುತವಾದ ಗ್ರಂಥಾಲಯವನ್ನು ಸ್ಥಳೀಯ ಬುದ್ದಿಜೀವಿಗಳು, ಕವಿಗಳು, ಚಿಂತಕರಿಂದ ಉದ್ಘಾಟಿಸುವುದರ ಮೂಲಕ, ತಮ್ಮ ಮನೆಯ ಗೃಹಪ್ರವೇಶವನ್ನು ಅರ್ಥಪೂರ್ಣವಾಗಿ ನೆರವೇರಿಸಿ ದ್ದಾರೆ. ಯಾವುದೇ ವಿಧಿವಿಧಾನ, ಮೌಡ್ಯ, ಕಂದಾಚಾರ, ಐಷಾರಾಮಿ ಚಟುವಟಿಕೆಗಳನ್ನು ಅನುಸರಿಸದೆ, ಜ್ಞಾನ ಭಂಡಾರವನ್ನು ನಿರ್ಮಾಣ ಮಾಡಿದ್ದಾರೆ.

ಈ ಗ್ರಂಥಾಲಯಕ್ಕೆ ಗ್ರಾಮದ ಎಲ್ಲರಿಗೂ ಮುಕ್ತ ಪ್ರವೇಶ ಇದೆ. ವಿಶೇಷವಾಗಿ ಆ ಗ್ರಾಮದಲ್ಲಿ ವಾಸಿಸುವ ಎಲ್ಲಾ ಮಕ್ಕಳೂ ಜಾತಿ, ಧರ್ಮ, ಕುಲ, ಗೋತ್ರಗಳನ್ನು ಕಳಚಿ ಬಂದು ಅಲ್ಲಿ ಸಮಭಾವದಿಂದ ಆಸೀನ ರಾಗಬೇಕು. ಪುಸ್ತಕಗಳನ್ನು ಮನೆಗಳಿಗೆ ಎರವಲು ಪಡೆಯಬಹುದು. ವಿಶೇಷವಾಗಿ ಹೆಣ್ಣುಮಕ್ಕಳ ಓದಿಗಾಗಿ ಅವಕಾಶ ಕಲ್ಪಿಸಲಾಗಿದೆ. ಆ ಗ್ರಂಥಾಲಯದ ಉಸ್ತುವಾರಿ ಮತ್ತು ಗ್ರಂಥಪಾಲಕರು ಶಬ್ರೀನಾರವರೇ ಆಗಿದ್ದಾರೆ.

ನಾನು ಈ ಕುರಿತು, ಶಬೀನಾರನ್ನು ಮಾತಿಗೆ ಎಳೆದೆ. ಅವರು ಮೊದಲ ವಾಕ್ಯದಲ್ಲಿಯೇ, ‘ಅಂಬೇಡ್ಕರ್ ಅವರ ಹುಟ್ಟು ನಮಗೆ ವರ’ ಎಂದರು. ಮುಂದುವರಿದು, ಅವರು ಹುಟ್ಟಿರಲಿಲ್ಲ ಅಂದರೆ ನಾವೆಲ್ಲ ಅಡುಗೆ ಮನೆಗೆ ಸೀಮಿತರಾಗಬೇಕಿತ್ತು. ಶಿಕ್ಷಣ ಮತ್ತು ಜ್ಞಾನ ಎರಡೂ ಬಹುದೊಡ್ಡ ಅಸ್ತ್ರಗಳೆಂದು ನಮಗೆ ಅವರು ತಿಳಿಸಿ ಹೋಗಿದ್ದಾರೆ. ಈ ನೆಲದಲ್ಲಿ ಒಂದು ಬಡಜೀವ ತನ್ನ ಇಷ್ಟದಂತೆ ತಾನು ಬದುಕು ಕಟ್ಟಿಕೊಂಡು, ತನ್ನ ಪಾಡಿಗೆ ತಾನು ಸ್ವತಂತ್ರವಾಗಿ ಬದುಕಲು, ಡಾ. ಅಂಬೇಡ‌ ರವರು ನೇರ ಕಾರಣ. ನಾವು ಭಾರತೀಯ ಹೆಣ್ಣುಮಕ್ಕಳು ಅವರಿಗೆ ಚಿರಋಣಿಯಾಗಿರಬೇಕು ಎಂದರು.

ಶಬ್ರೀನಾ ಮುಂದುವರಿದು, ಶಂಕರ್ ದೇವನೂರು ಅವರ ಪ್ರವಚನಗಳು ನಮ್ಮ ಬದುಕಿನ ಬೆಳಕಾಗಿವೆ. ಅವರ ಭಾಷೆ, ಸರಳತೆ, ವಾಗರಿ, ಮೌಲ್ಯಗಳು ನಮ್ಮ ಬದುಕನ್ನು ಮತ್ತಷ್ಟು ಸರಳಗೊಳಿಸಿವೆ. ‘ಬುದ್ಧ ಬೀಜ, ಬಸವಣ್ಣ ಮರ, ಅಂಬೇಡ್ಕರ್ ಫಲ, ನಾವೆಲ್ಲ ಅವರ ಫಲಾನುಭವಿಗಳು ಎಂಬ ಅವರ ಚೈತನ್ಯದಾಯಕ ಸ್ಫೂರ್ತಿಯ ನುಡಿಗಳು ಈ ನಾಡನ್ನು ಎಚ್ಚರಿಸುತ್ತಿವೆ. ಪ್ರಸ್ತುತ ಸಮಾಜದ ಸೌಹಾರ್ದ ಸಂಕೇತದಂತಿವೆ ಎಂದರು.

ಈ ಪ್ರೇರಣಾ ನುಡಿಗಳ ನಂತರ, ಮೈಸೂರು ಸೀಮೆಯ ಜ್ಞಾನವೊಂದು ಸ್ಫೋಟಿಸಿ, ಸಮಾಜದ ಅಂತರಂಗದಲ್ಲಿ ಬದಲಾವಣೆ ತಂದಂತೆ, ಶಂಕರ್ ದೇವನೂರು ಅವರು ನನಗೆ ಕಾಣಿಸುತ್ತಾರೆ ಎಂಬುದು ಶಬ್ರೀನಾ ಅವರ ಭಾವುಕ ನುಡಿ,

ಆಂದೋಲನ ಡೆಸ್ಕ್

Recent Posts

ಮೈಸೂರು ಕೇಂದ್ರೀಯ ಸಂಪರ್ಕ ಬ್ಯೂರೋ-CBC ಕಚೇರಿ ಸ್ಥಗಿತ ಬೇಡ : ಕೇಂದ್ರ ವಾರ್ತಾ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರ ಬರೆದ ಸಚಿವ ಎಚ್‌ಡಿಕೆ

ಹೊಸದಿಲ್ಲಿ : ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ಸಂಪರ್ಕ ಬ್ಯೂರೋ…

11 hours ago

ಉನ್ನಾವೋ ಅತ್ಯಾಚಾರ ಪ್ರಕರಣ : ರಾಹುಲ್‌ಗಾಂಧಿ ಭೇಟಿಯಾದ ಸಂತ್ರಸ್ತೆ ಕುಟುಂಬ

ಹೊಸದಿಲ್ಲಿ : ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಸಂಜೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರನ್ನು…

11 hours ago

ಉನ್ನಾವೊ ಪ್ರಕರಣ : ಸೆಂಗರ್‌ ಶಿಕ್ಷೆ ಅಮಾನತು ; ಸಂತ್ರಸ್ತೆ ತಾಯಿ ಹೇಳಿದಿಷ್ಟು?

ಹೊಸದಿಲ್ಲಿ : 2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಕುಲದೀಪ್ ಸಿಂಗ್ ಸೆಂಗಾರ್‌ಗೆ ಜಾಮೀನು ದೊರೆತಿರುವುದನ್ನು ವಿರೋಧಿಸಿ ಸಂತ್ರಸ್ತೆ…

11 hours ago

ಚಂದನವನದಲ್ಲಿ ಸ್ಟಾರ್‌ ವಾರ್‌ : ನಟಿ ರಕ್ಷಿತಾ ಪ್ರೇಮ್‌ ಹೇಳಿದಿಷ್ಟು?

ಬೆಂಗಳೂರು : ಮಾರ್ಕ್‌ʼ ಸಿನಿಮಾದ ಪ್ರೀ-ರಿಲೀಸ್‌ ಈವೆಂಟ್‌ನಲ್ಲಿ ಕಿಚ್ಚ ಸುದೀಪ್‌ ಹೇಳಿದ ಮಾತೊಂದು ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ…

12 hours ago

ರೈತರಿಗೆ ಅಗತ್ಯವಿರುವ ಸೌಲಭ್ಯ ಒದಗಿಸಲು ಸರ್ಕಾರ ಬದ್ದ : ಸಚಿವ ಕೆ.ವೆಂಕಟೇಶ್

ಚಾಮರಾಜನಗರ : ಅನ್ನದಾತರಾಗಿರುವ ರೈತರ ಬಗ್ಗೆ ಆತ್ಮೀಯ ಕಾಳಜಿಯಿದ್ದು, ಅವರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದೆ…

12 hours ago

ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ನೇಮಕಾತಿ ; ಆಸಕ್ತರು ಇಂದೇ ಅರ್ಜಿ ಸಲ್ಲಿಸಿ

ಬೆಂಗಳೂರು : ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಅಧಿಕೃತ ಅಧಿಸೂಚನೆಯ ಮೂಲಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು…

12 hours ago