Andolana originals

27ನೇ ಕೊಡವ ಕೌಟುಂಬಿಕ ಹಾಕಿ ಉತ್ಸವಕ್ಕೆ ಅಜ್ಜಿಕುಟ್ಟಿರ ನೇತೃತ್ವ

ಪುನೀತ್ ಮಡಿಕೇರಿ

೨೦೨೭ರ ಏಪ್ರಿಲ್-ಮೇನಲ್ಲಿ ನಡೆಯಲಿರುವ ಹಾಕಿ ಉತ್ಸವಕ್ಕೆ ಸಿದ್ಧತೆ; ಟರ್ಫ್, ಹೊನಲು ಬೆಳಕಿನ ಪಂದ್ಯಾವಳಿಗೆ ಚಿಂತನೆ

ಮಡಿಕೇರಿ: ೨೬ನೇ ಕೊಡವ ಕೌಟುಂಬಿಕ ಹಾಕಿ ಉತ್ಸವ ಚೇನಂಡ ಹಾಕಿ ನಮ್ಮೆ ಯಶಸ್ವಿಯಾಗಿ ನಡೆದ ಬೆನ್ನಲ್ಲೇ ೨೭ನೇ ಕೊಡವ ಕೌಟುಂಬಿಕ ಹಾಕಿ ಉತ್ಸವದ ಆಯೋಜನೆಗೆ ಅಜ್ಜಿಕುಟ್ಟಿರ ಕುಟುಂಬ ಸಿದ್ಧತೆ ನಡೆಸಿಕೊಂಡಿದೆ.

ಚೇನಂಡ ಕುಟುಂಬದ ಬಳಿಕ ೨೭ನೇ ಹಾಕಿ ಉತ್ಸವವನ್ನು ಆಯೋಜಿಸುವ ಜವಾಬ್ದಾರಿಯನ್ನು ಕೊಡವ ಕುಟುಂಬಗಳಲ್ಲೊಂದಾದ ಅಜ್ಜಿಕುಟ್ಟಿರ ಕುಟುಂಬ ಹೊತ್ತುಕೊಂಡಿದೆ. ೨೦೨೭ರ ಏಪ್ರಿಲ್- ಮೇ ತಿಂಗಳಲ್ಲಿ ನಡೆಯಲಿರುವ ಅಜ್ಜಿಕುಟ್ಟಿರ ಹಾಕಿ ಉತ್ಸವಕ್ಕೆ ಈಗಾಗಲೇ ಸಿದ್ಧತೆ ಆರಂಭಿಸಿರುವ ಕುಟುಂಬಸ್ಥರು, ದಕ್ಷಿಣ ಕೊಡಗಿನಲ್ಲಿ ಅದ್ಧೂರಿಯಾಗಿ ಹಾಕಿ ನಮ್ಮೆ ನಡೆಸಲು ಅಣಿಯಾಗುತ್ತಿದ್ದಾರೆ.

ಅಜ್ಜಿಕುಟ್ಟಿರ ಹಾಕಿ ಉತ್ಸವ ಪೊನ್ನಂಪೇಟೆಯಲ್ಲಿ ಆಯೋಜನೆಗೊಳ್ಳಲಿದೆ. ಅಜ್ಜಿಕುಟ್ಟಿರ ಕುಟುಂಬಸ್ಥರು ಸಮಿತಿ ರಚಿಸಿಕೊಂಡಿದ್ದು, ಒಟ್ಟು ಮೂರು ಮೈದಾನಗಳಲ್ಲಿ ಪಂದ್ಯಾವಳಿ ಆಯೋಜಿಸುವ ಚಿಂತನೆ ಮಾಡಲಾಗಿದೆ. ಪೊನ್ನಂಪೇಟೆ ಟರ್ಫ್ ಮೈದಾನವನ್ನು ಮುಖ್ಯ ಮೈದಾನವಾಗಿಸಿ ಕೊಳ್ಳುವ ಉದ್ದೇಶವಿದೆ ಎಂದು ಅಜ್ಜಿಕುಟ್ಟಿರ ಕುಟುಂಬಸ್ಥರು ತಿಳಿಸಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆದರೆ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಹಾಕಿ ನಮ್ಮೆಯ ಪ್ರಮುಖ ಪಂದ್ಯಗಳು ಜರುಗಲಿವೆ. ಅಲ್ಲದೆ, ತಡವಾದರೆ ಫ್ಲಡ್ ಲೈಟ್(ಹೊನಲು ಬೆಳಕು)ನಲ್ಲಿ ಪಂದ್ಯಾವಳಿಯನ್ನಾಡಿಸುವ ಯೋಜನೆ ಕೂಡ ಇದೆ. ಇದೆಲ್ಲಾ ನಡೆದಲ್ಲಿ ಕೊಡವ ಹಾಕಿ ಉತ್ಸವದ ಇತಿಹಾಸದಲ್ಲಿಯೇ ಟರ್ಫ್ ಮೈದಾನದಲ್ಲಿ ಮತ್ತು ಫ್ಲಡ್‌ಲೈಟ್‌ನಲ್ಲಿ ನಡೆದ ಮೊದಲ ಪಂದ್ಯಾವಳಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಕೊಡವ ಹಾಕಿ ಉತ್ಸವವನ್ನು ಅಜ್ಜಿಕುಟ್ಟಿರ ಕುಟುಂಬದಿಂದ ಆಯೋಜಿಸಬೇಕೆಂಬುದು ಶಾಸಕ ಎ.ಎಸ್.ಪೊನ್ನಣ್ಣ ಅವರ ಇಚ್ಛೆಯಾಗಿತ್ತು. ಈ ಹಿಂದೆ ಮಡಿಕೇರಿಯಲ್ಲಿ ನಡೆದ ಮುದ್ದಂಡ ಹಾಕಿ ಉತ್ಸವದ ಸಮಾರಂಭದಲ್ಲಿ ಪೊನ್ನಣ್ಣ ವೇದಿಕೆಯಲ್ಲಿಯೇ ಹಾಕಿ ಅಕಾಡೆಮಿಗೆ ಈ ಸಂಬಂಧ ಬೇಡಿಕೆಯಿಟ್ಟಿದ್ದರು. ಕೊಡವ ಹಾಕಿ ಅಕಾಡೆಮಿಯು ಚೇನಂಡ ಹಾಕಿ ಉತ್ಸವದ ಬಳಿಕ ಅಜ್ಜಿಕುಟ್ಟಿರ ಕುಟುಂಬಕ್ಕೆ ಜವಾಬ್ದಾರಿಯನ್ನು ನೀಡಿದ್ದು, ಪೊನ್ನಣ್ಣ ಅವರ ಸಹೋದರ ಎ.ಎಸ್.ನರೇನ್ ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಹಾಕಿ ಉತ್ಸವ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಸಮಿತಿಯ ಪೋಷಕ ಅಧ್ಯಕ್ಷರಾಗಿ ಎ.ಎಸ್.ಪೊನ್ನಣ್ಣ ಅವರೂ ಉತ್ಸವದ ಯಶಸ್ವಿಗೆ ಕೈಜೋಡಿಸಲಿದ್ದಾರೆ.

ಹೀಗಾಗಿ ಅಜ್ಜಿಕುಟ್ಟಿರ ಹಾಕಿ ಉತ್ಸವ ಅತಿ ವಿಜೃಂಭಣೆಯಿಂದ, ನಾನಾ ವಿಶೇಷತೆಗಳೊಂದಿಗೆ ನಡೆಯಲಿದ್ದು, ಈಗಾಗಲೇ ಹಾಕಿ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

” ಅಜ್ಜಿಕುಟ್ಟಿರ ಹಾಕಿ ಉತ್ಸವಕ್ಕೆ ಈಗಾಗಲೇ ಸಿದ್ಧತೆ ಆರಂಭಿಸಿzವೆ. ಪೊನ್ನಂಪೇಟೆಯಲ್ಲಿ ನಡೆಯಲಿರುವ ಹಾಕಿ ಉತ್ಸವದ ಪ್ರಮುಖ ಪಂದ್ಯಗಳನ್ನು ಟರ್ಫ್ ಮೈದಾನದಲ್ಲಿ ನಡೆಸುವ ಚಿಂತನೆಯಿದೆ. ಅಲ್ಲದೆ ಮೊದಲ ಬಾರಿಗೆ ಫ್ಲಡ್‌ಲೈಟ್‌ನಲ್ಲಿ ಕೆಲ ಪಂದ್ಯಗಳು ನಡೆಯುವ ಸಾಧ್ಯತೆ ಇದೆ. ಈ ಸಂಬಂಧ ಇನ್ನೂ ಅಂತಿಮ ತೀರ್ಮಾನವಾಗಬೇಕಿದೆ.”

-ಎ.ಎಸ್.ನರೇನ್ ಕಾರ್ಯಪ್ಪ, ಅಧ್ಯಕ್ಷರು, ಅಜ್ಜಿಕುಟ್ಟಿರ ಹಾಕಿ ನಮ್ಮೆ

 

 

ಆಂದೋಲನ ಡೆಸ್ಕ್

Recent Posts

ಮಕ್ಕಳ ಮನದಂಗಳದಲ್ಲಿ ಗಾಂಧಿ ಚಿಂತನೆಯ ಬೇರುಗಳು

ಮಹಾತ್ಮನ ಚಿಂತನೆಯ ಹಾದಿಯಲ್ಲಿ ನಡೆಯಬೇಕಿದೆ ನಾನು ಕಂಡ ಗಾಂಧಿಜಿಯವರಲ್ಲಿ, ಅವರ ಜೀವನದಲ್ಲಿ ನನ್ನನ್ನು ಅತ್ಯಂತ ಹೆಚ್ಚಾಗಿ ಆಕರ್ಷಿಸಿದ ವಿಷಯ ಎಂದರೆ…

42 mins ago

ಮನುಷ್ಯ ಕುಲದ ಪ್ರಜ್ಞಾವಂತಿಕೆ ವಿಕಾಸಕ್ಕೆ ಗಾಂಧೀಜಿ ಕೈಮರ

ಗಾಂಧಿಜಿಯವರ ಜೀವನ ಚರಿತ್ರೆ ದೇಶ, ಖಂಡಗಳ ಗಡಿ ದಾಟಿ ಮನುಷ್ಯರೆಲ್ಲರ ಒಳಿತನ್ನು ಬಯಸುವ ಬಯಕೆಯನ್ನು ಭಾವಿಸಿ, ಜೀವಿಸಿ ತೋರಿಸಿದವರ ಪುಣ್ಯ…

48 mins ago

ಗಾಂಧಿ ಮೈಮೇಲೆ ಬಂದಂತೆ ಬದುಕಿದ್ದ ಹುಚ್ಚೇಗೌಡರು

ಸ್ವಾಮಿ ಪೊನ್ನಾಚ್ಚಿ ನಾನು ಹುಚ್ಚೇಗೌಡರನ್ನು ನೋಡಿದ್ದು ಇತ್ತೀಚೆಗೆ. ಅದೂ ಅತ್ತಿಖಾನೆ ಎಸ್ಟೇಟ್ ಸ್ಥಾಪಕ ಮಾರಿಸ್ ಬಗ್ಗೆ ತಿಳಿಯಲು ಹೋದಾಗ. ಸಿಕ್ಕ…

52 mins ago

ವಿಲಾಯತಿಗೆ ಹೊರಟವನು ಜಾತಿ ಬಾಹಿರನಾದೆ

ನಮ್ಮ ಜಾತಿಯ ಜನರು ನನ್ನ ವಿದೇಶ ಪ್ರಯಾಣವನ್ನು ಕುರಿತು ಗೊಂದಲವನ್ನು ಎಬ್ಬಿಸಿದರು. ಅಲ್ಲಿಯವರೆಗೆ ಮೋಧ್ ಬನಿಯರ ಪೈಕಿ ಯಾರೂ ವಿಲಾಯತಿಗೆ…

57 mins ago

ಓದುಗರ ಪತ್ರ: ಪಾದಚಾರಿ ಮಾರ್ಗ ಒತ್ತುವರಿ ತೆರವು ಸ್ವಾಗತಾರ್ಹ

ಬೆಂಗಳೂರಿನ ನಾಗರಿಕರಿಗೆ ಸುರಕ್ಷಿತವಾಗಿ ಪಾದಚಾರಿ ಮಾರ್ಗದಲ್ಲಿ ನಡೆಯುವ ಹಕ್ಕಿದೆ.ಪಾದಚಾರಿ ಮಾರ್ಗಗಳ ಒತ್ತುವರಿ ಎಂದರೆ ನಾಗರಿಕರ ಸುರಕ್ಷತೆ ಕಸಿದುಕೊಂಡಂತೆ. ಇದು ಕೇವಲ…

1 hour ago

ಓದುಗರ ಪತ್ರ: ಚರಂಡಿ ಕಾಮಗಾರಿ ಪೂರ್ಣಗೊಳಿಸಿ

ಮೈಸೂರಿನ ಹಯಗ್ರೀವ ಕಾಲೇಜು ಹಿಂಭಾಗದ ದಿವಾನ್ಸ್ ರಸ್ತೆಯಲ್ಲಿ ಬಾಕ್ಸ್ ಚರಂಡಿ ಕಾಮಗಾರಿ ಅಪೂರ್ಣಗೊಂಡಿದ್ದು, ಕಾಮಗಾರಿಗಾಗಿ ತೆಗೆದಿರುವ ಮಣ್ಣನ್ನು ರಸ್ತೆಯ ಮೇಲೆ…

1 hour ago