Andolana originals

ಮಗಳು, ಮೊಮ್ಮಗಳ ಜೀವ ಉಳಿಸಿ ಕತ್ತಲಲ್ಲಿ ಕಣ್ಮರೆಯಾದ ಅಜ್ಜಿ

  • ಸಾಲೋಮನ್‌

ಮೈಸೂರು: ಕಾರ್ಗತ್ತಲ ಇರುಳಲ್ಲಿ ಧೋ… ಎಂದು ಸುರಿಯುತ್ತಿದ್ದ ಮಳೆಯ ಜೊತೆಗೆ ಕಿವಿಗಪ್ಪಳಿಸುವ ಮಿಂಚು ಗುಡುಗಿನ ಶಬ್ದ. ಮನೆ ಮುಳುಗಡೆಯಾಗುವ ಆತಂಕ… ಮೊದಲು ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸ ಬೇಕೆಂದುಕೊಂಡ ಹಿರಿಯ ಜೀವ, ಮೊದಲು ಮಗಳು, ಮೊಮ್ಮಗಳನ್ನು ಮನೆ ಆಟ್ಟದ ಮೇಲಕ್ಕೆ ಕಳುಹಿಸಿ, ಇನ್ನೇನು ತಾನು ಹತ್ತಬೇಕು ಎನ್ನುವಷ್ಟ ರಲ್ಲಿ ನೆಲ ಕುಸಿಯಿತು! ಕ್ಷಣ ಮಾತ್ರದಲ್ಲಿ ಅಜ್ಜಿ ಕಾರಿರುಳಲ್ಲಿ ಪ್ರವಾಹದಲ್ಲಿ ಕಣ್ಮರೆಯಾಗಿಬಿಟ್ಟರು…

ಇದು ವಯನಾಡಿನ ‘ವೆಲ್ಲಮಲಾ ಶಾಲೆ ಸಮೀಪದಲ್ಲಿ ನಡೆದ ಘಟನೆ. ದುರಂತದಲ್ಲಿ ಊರಿಗೆ ಊರೇ ಕೊಚ್ಚಿ ಹೋಗಿ ಸ್ಮಶಾನವಾದ ಪ್ರದೇಶದಿಂದ ರಾತೋರಾತ್ರಿ ಜೀವ ಉಳಿಸಿಕೊಂಡು ಗಡಿಭಾಗದ ಮೇಪ್ಪಾಡಿಯ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತ ಮಹೇಶ್ ‘ಆಂದೋಲನ’ ದಿನಪತ್ರಿಕೆಯೊಂದಿಗೆ ಮಾತನಾಡುತ್ತಾ ತಮ್ಮ ಅನುಭವವನ್ನು ಹಂಚಿಕೊಂಡರು.

ಘಟನೆ ನಡೆದ ಆ ಕರಾಳ ರಾತ್ರಿಯಲ್ಲಿ ‘ಸೆಂಟ್ರಲ್ ರಾಕ್ ಎಸ್ಟೇಟ್’ನಲ್ಲಿದ್ದ ಮಹೇಶ್ ಹಾಗೂ ಅವರ ತಂದೆ-ತಾಯಿಯನ್ನು ನೆರೆಮನೆಯವರು ಕೂಗಿ ಕೊಂಡು ಎಚ್ಚರಿಸಿದಾಗ ರಾತ್ರಿ 1.30. ಅಕ್ಕ ಪಕ್ಕದ ಮೂರ್ನಾಲ್ಕು ಮನೆಗಳಿಗೆ ನೀರು ನುಗ್ಗಿತ್ತು. ಅದರಿಂದ ಆ ಮನೆಗಳವರು ಸುರಕ್ಷತೆಗಾಗಿ ಎತ್ತರದ ಪ್ರದೇಶದ ಕಡೆಗೆ ಹೋಗುತ್ತಿದ್ದರು. ಎಸ್ಟೇಟ್‌ನಲ್ಲಿ ಸುಮಾರು 100ಕ್ಕೂ ಹೆಚ್ಚು ಮಂದಿ ಇದ್ದರು, ಸುಮಾರು 20 ಮಂದಿ ಎಚ್ಚೆತ್ತು ಬೇರೆ ಸ್ಥಳಕ್ಕೆ ಹೋದರು. ಒಂದಷ್ಟು ಜನರು ಪ್ರವಾಹದಲ್ಲಿ ಕೊಚ್ಚಿ ಹೋದರು ಎಂದು ತಿಳಿದು ಬಂತು. ಬಹಳ ಕತ್ತಲು ಇದ್ದುದರಿಂದ ಸುತ್ತಲೂ ಏನು ನಡೆಯುತ್ತಿದೆ ಎಂದು ಗೊತ್ತೇ ಆಗುತ್ತಿರಲಿಲ್ಲ. ಕೊಚ್ಚಿಹೋದ ಅಜ್ಜಿಯ ಬದುಕುಳಿದ ಮಗಳು, ಮೊಮ್ಮಗಳು ನನ್ನೊಂದಿಗೆ ದುರಂತವನ್ನು ವಿವರಿಸಿದರು ಎಂದು ಮಹೇಶ್ ಸ್ಮರಿಸಿದರು.

ಅದು ಮಂಜರೆ ಗ್ರಾಮ, ಸುಮಾರು 500 ಮನೆಗಳಿದ್ದಿರಬಹುದು. ಅವುಗಳೆಲ್ಲ ಕೊಚ್ಚಿಹೋಗಿವೆ. ಬೆಳಿಗ್ಗೆ 6 ಗಂಟೆ ಹೊತ್ತಿಗೆ ಸೂರ್ಯೋದಯ ವಾದಾಗಲೇ, ಇಡೀ ಪ್ರದೇಶ ಕೊಚ್ಚಿ ಹೋಗಿ ಕೆಸರು ಗದ್ದೆಯಂತಾಗಿದ್ದು ಗೊತ್ತಾಯಿತು. ನಿತ್ಯ ನಮ್ಮೊಟ್ಟಿಗೆ ಪ್ರೀತಿಯಿಂದ ಮಾತನಾಡುತ್ತಾ ಕಷ್ಟು ಸುಖ ಹಂಚಿಕೊಂಡವರು ಬೆಳಗಾಗುವಷ್ಟರಲ್ಲಿ ಕಣ್ಣೆದುರೇ ಹೆಣವಾಗಿ ಇಡೀ ದೇಹವೆಲ್ಲ ಸಂಪೂರ್ಣ ಕೆಸರಾಗಿ ಗುರುತೇ ಸಿಗದಂತಾಗಿದ್ದವು ಎಂದ ಮಹೇಶ್ ಅವರ ಧ್ವನಿಯಲ್ಲಿ ಅಪಾರ ನೋವು ಇತ್ತು.

“ಅದು ನನ್ನ ಬದುಕಿನ ಕರಾಳ ರಾತ್ರಿ’
ಸೋಮವಾರ ರಾತ್ರಿ ಬದುಕಿನ ಕರಾಳ ರಾತ್ರಿಯಾಗಿದ್ದು, ಮಂಗಳವಾರ ಮುಂಜಾನೆ ಆ ಭೀಕರತೆಯನ್ನು ನೋಡಿ ಇಡೀ ದೇಹ ಕಂಪಿಸುತ್ತಿತ್ತು. ಈ ಸುಂದರ ಪ್ರದೇಶ ಹೀಗೆ ಕೆಸರಿನಂತೆ ಆಗುತ್ತದೆ ಎನ್ನುವ ಕಲ್ಪನೆಯೂ ಇರಲಿಲ್ಲ. ಅಚ್ಚ ಹಸಿರಾಗಿ ಮೋಹಕ ನಗು ಬೀರುತ್ತಿದ್ದ ಊರನ್ನೇ ಆಪೋಶನ ತೆಗೆದುಕೊಂಡು ರೌದ್ರ ರೂಪ ತಾಳಿ ಅಟ್ಟಹಾಸ ಮೆರೆಯುತ್ತಿದೆ ಅನಿಸುತ್ತಿದೆ.

ಮಹೇಶ್, ಮೇಪ್ಪಾಡಿ, ವಯನಾಡು ಜಿಲ್ಲೆ, ಕೇರಳ

 

ಆಂದೋಲನ ಡೆಸ್ಕ್

Recent Posts

ಭಾರತದೊಂದಿಗಿನ ವ್ಯಾಪಾರ ಒಪ್ಪಂದ ಐತಿಹಾಸಿಕ : ಟ್ರಂಪ್ ಬಣ್ಣನೆ

ನ್ಯೂಯಾರ್ಕ್ : ಭಾರತದೊಂದಿಗಿನ ವ್ಯಾಪಾರ ಒಪ್ಪಂದವನ್ನು ಐತಿಹಾಸಿಕ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ಲಾಘಿಸಿದ್ದಾರೆ. ಅಮೆರಿಕವು ದೇಶಕ್ಕೆ ಮತ್ತು…

41 mins ago

ಬಿಕ್ಲು ಶಿವ ಕೊಲೆ ಪ್ರಕರಣ : ಪೊಲೀಸರ ವಶವಾದ ಬೈರತಿ ಬಸವರಾಜು

ಬೆಂಗಳೂರು : ರೌಡಿ ಶೀಟರ್ ಬಿಕ್ಲು ಶಿವ (ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ) ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಕೆ.ಆರ್.ಪುರಂ ಕ್ಷೇತ್ರದ…

1 hour ago

ಸರ್ಕಾರಿ ಅಧಿಕಾರಿಗಳಿಗೆ ಲೋಕಾ ಶಾಕ್‌ : ಮೈಸೂರು ಸೇರಿ ಹಲವೆಡೆ ದಾಳಿ

ಮೈಸೂರು : ಲೋಕಾಯುಕ್ತ ಅಧಿಕಾರಿಗಳು ಮೈಸೂರು, ದಾವಣಗೆರೆ, ಬೆಂಗಳೂರು, ಧಾರವಾಡ, ಶಿವಮೊಗ್ಗ ಸೇರಿ ರಾಜ್ಯದ ಹಲವೆಡೆ ಏಕಕಾಲದಲ್ಲಿ ಮಿಂಚಿನ ದಾಳಿ…

2 hours ago

ಭಾರತ್‌ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಹೊಸದಿಲ್ಲಿ : ಕೇಂದ್ರ ಸರ್ಕಾರದ ಕಾರ್ಮಿಕ, ರೈತ ಮತ್ತು ’ಕಾರ್ಪೊರೇಟ್ ಪರ’ ನೀತಿಗಳನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಗಳ ಜಂಟಿ…

2 hours ago

ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ : ಮಂಡ್ಯ ರಮೇಶ್, ಸಾಧು ಕೋಕಿಲಾ ಕೇಸ್‌ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು : ಕನ್ನಡದ ಜನಪ್ರಿಯ ನಟ, ಸಂಗೀತ ನಿರ್ದೇಶಕ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿರುವ ಸಾಧು ಕೋಕಿಲಾ ಹಾಗೂ…

3 hours ago

ಯತೀಂದ್ರ ಸಿದ್ಧರಾಮಯ್ಯ ಅವಹೇಳನ ಪ್ರಕರಣ: ಪ್ರತಾಪ್ ಸಿಂಹ ಹಾಗೂ ಬಿಜೆಪಿ ಐಟಿ ಸೆಲ್ ವಿರುದ್ಧ ದೂರು ದಾಖಲು

ಮೈಸೂರು: ಎಂಎಲ್‌ಸಿ ಯತಿಂದ್ರ ಸಿದ್ದರಾಮಯ್ಯ ವಿರುದ್ಧ ಅವಹೇಳನ ಪೋಸ್ಟ್‌ ಮಾಡಿದ್ದ ಮಾಜಿ ಸಂಸದ ಪ್ರತಾಪ್‌ ಸಿಂಹ ಹಾಗೂ ಬಿಜೆಪಿ ಐಟಿ…

6 hours ago