Andolana originals

ಮತ್ತೆ ಮತ್ತೆ ಕುವೆಂಪು; 32 ಲೇಖನಗಳ ಗುಚ್ಛ

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಾರ್ಥಕ ಕಾರ್ಯ 

ಡಾ. ಮುಳ್ಳೂರು ನಂಜುಂಡಸ್ವಾಮಿ

ಮೈ ಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಡಾ. ಎನ್. ಕೆ. ಲೋಲಾಕ್ಷಿ ಅವರ ಪ್ರಧಾನ ಸಂಪಾದಕತ್ವದಲ್ಲಿ ರೂಪಿತಗೊಂಡಿರುವ ‘ಮತ್ತೆ ಮತ್ತೆ ಕುವೆಂಪು’ ಕೃತಿಯು ಕುವೆಂಪು ಅವರ ಸೂಕ್ಷ ಸಂವೇದನೆಯ ಕವಿ ಗುಣ, ವೈಚಾರಿಕತೆಯ ನಿಲುವು ಗಳು, ವಿಶ್ವ ಮಾನವ ಸಂದೇಶದ ಪುನರ್ ಮನನಕ್ಕೆ ಅವಕಾಶ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಸಮರ್ಥವಾಗಿದೆ. ಇದೇ ಅದರ ವಿಶೇಷತೆ ಕೂಡ.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ವಿಶ್ವಕೋಶ ವಿಭಾಗ, ಸಂಪಾದನಾ ವಿಭಾಗ, ಅನುವಾದ ವಿಭಾಗ, ಎಪಿಗ್ರಾಫಿಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂಪಾದಕ ವರ್ಗ, ಸಂಶೋಧನಾ ಸಹಾಯಕರು, ಅಧ್ಯಾಪಕೇತರರು ಮತ್ತು ಸಂಶೋಧನಾ ವಿದ್ಯಾರ್ಥಿಗಳೂ ಸೇರಿ ಕುವೆಂಪು ಮತ್ತು ಅವರ ಸಾಹಿತ್ಯದ ಒಳನೋಟವನ್ನು ಕುರಿತು ಲೇಖನಗಳನ್ನು ಬರೆದಿದ್ದಾರೆ.

 

ಈ ಕೃತಿಯಲ್ಲಿ ಒಟ್ಟು ೩೨ ಲೇಖನಗಳಿವೆ. ಲೋಲಾಕ್ಷಿ ಅವರ ‘ಕುವೆಂಪು ಸಾಹಿತ್ಯ : ಸಬಾಲ್ಟ್ರನ್ ಓದು’ ಲೇಖನದಿಂದ ಪ್ರಾರಂಭವಾಗಿ ಸಂಶೋಧನಾ ವಿದ್ಯಾರ್ಥಿ ಬಿ. ಭವಿತ ಅವರ ‘ಮಹಿಳೆಯ ಪ್ರತಿನಿಽಕರಣ’ ಲೇಖನದವರೆಗೆ ಕುವೆಂಪು ಅವರ ಎಲ್ಲಾ ಪ್ರಕಾರದ ಸಾಹಿತ್ಯ ಚಿತ್ರಣವನ್ನು ಒಳಗೊಂಡ ಅಪರೂಪದ ಕೃತಿಯಾಗಿದೆ.

 

ಕುವೆಂಪು ಸಾಹಿತ್ಯವು ಸಬಾಲ್ಟ್ರನ್ ಚಿಂತನೆಗಳಿಂದ ಪ್ರಭಾವಿತವಾಗಿರುವುದನ್ನು ಲೋಲಾಕ್ಷಿ ಅವರು ಅರ್ಥಪೂರ್ಣವಾಗಿ ತಮ್ಮ ಲೇಖನದಲ್ಲಿ ವಿವರಿಸಿದ್ದಾರೆ.

 

ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಅಭಿವ್ಯಕ್ತಗೊಂಡಿರುವ ಮಾಟ ಮಂತ್ರಗಳು, ಅಂದಿನ ಕಾಲದಲ್ಲಿದ್ದ ಅತಿಮಾನುಷ ಮತ್ತು ಮಾನುಷ ಶಕ್ತಿಗಳ ಮೇಲೆ ಜನರಿಗಿದ್ದ ನಂಬಿಕೆಯನ್ನು, ಪುರೋಹಿತರು, ಮಾಂತ್ರಿಕರು ನೀಡುತ್ತಿದ್ದ ಪ್ರಸಾದ, ವಿಭೂತಿ, ಮಂತ್ರ ಚೀಟಿಗಳ ಪದ್ಧತಿಯನ್ನು ಪ್ರೊ. ನಂಜಯ್ಯ ಹೊಂಗನೂರು ಅವರು ಜಾನಪದ ಪ್ರಜ್ಞೆಯ ಹಿನ್ನೆಲೆಯಲ್ಲಿ ತಿಳಿಸಿದ್ದಾರೆ.

ಕುವೆಂಪು ಅವರು ವರ್ಣ ಸಂಘರ್ಷವನ್ನು ಕುರಿತು ಅವರ ನಾಟಕಗಳಲ್ಲಿ ವ್ಯಕ್ತಪಡಿಸಿರುವ ನಿಲುವುಗಳನ್ನು ಪ್ರೊ. ಎಸ್. ಡಿ. ಶಶಿಕಲಾ ಅವರು ‘ಕುವೆಂಪು ನಾಟಕಗಳಲ್ಲಿ ವರ್ಣ ಸಂಘರ್ಷ ಇತ್ಯಾತ್ಮಕತೆ ಲೇಖನದಲ್ಲಿ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ.

ಈ ಕೃತಿಯಲ್ಲಿ ಕುವೆಂಪು ಅವರ ಕಾವ್ಯ, ನಾಟಕ, ಕಾದಂಬರಿ ಮತ್ತು ಇನ್ನಿತರ ಸಾಹಿತ್ಯ ರೂಪಗಳಲ್ಲೂ ದೇವರು ಮತ್ತು ಮೂಢತೆಯ ನಿರಾಕರಣೆ ವಿಭಿನ್ನವಾಗಿ ಮೂಡಿಬಂದಿದೆ.

ಪ್ರಕೃತಿಯಲ್ಲಿ ದೇವರನ್ನು ಕಾಣುವ ಕುವೆಂಪು ಅವರು, ಆ ದೇವರ ಹೆಸರಿನಲ್ಲಿ ನಡೆಯುವ ಬ್ರಾಹ್ಮಣ್ಯದ ಹುನ್ನಾರ, ಡಾಂಭಿಕ ಪೂಜೆ, ಬಲಿ, ಮೌಢ್ಯ ಮುಂತಾದ ಶೋಷಣೆಗಳನ್ನು ತಿರಸ್ಕರಿಸಿರುವುದನ್ನು ಇಲ್ಲಿರುವ ಬೇರೆ ಬೇರೆ ಲೇಖನಗಳಲ್ಲಿ ದಾಖಲಿಸಲಾಗಿದೆ.

ಕುವೆಂಪು ಅವರ ಕಾದಂಬರಿಗಳಲ್ಲಿ ಬಳಸಿರುವಂತಹ ಭಾಷೆ, ಕುವೆಂಪು ಮತ್ತು ಅಡಿಗರ ಕಾವ್ಯಾನುಸಂಧಾನ, ಯುಗದ ಕವಿಗೆ ಜಗದ ಸಾಲು, ನನ್ನ ಮನೆ ಕವನ ಸಂಕಲನದಲ್ಲಿ ಬಳಕೆಯಾಗಿರುವ ಶಿಶು ಸಾಹಿತ್ಯ ಮತ್ತು ಕವಿಶೈಲದ ವರ್ಣನೆ, ವಿಶ್ವಮಾನವ ಗೀತೆಯಾದ ಅನಿಕೇತನ ಕವಿತೆಯ ವಸ್ತು ಮತ್ತು ಛಂದಸ್ಸು, ಕುವೆಂಪು ಅನುವಾದಗಳ ಪಕ್ಷಿ ನೋಟ, ಮಲೆನಾಡಿನ ಚಿತ್ರಣ, ಜಲಗಾರ ನಾಟಕದಲ್ಲಿ ಅಸ್ಪೃಶ್ಯತೆಯನ್ನು ಖಂಡಿಸುವುದು, ಜನಸಾಮಾನ್ಯರ ಬಗೆಗೆ ಕುವೆಂಪು ಅವರ ಸಾಹಿತ್ಯದ ದೃಷ್ಟಿಕೋನ, ನಾಡು-ನುಡಿಯ ಬಗೆಗಿನ ಅಪಾರವಾದ ಪ್ರೀತಿ, ಗೌರವ, ಸ್ತ್ರೀ ವೇದನೆಯ ಚಿಂತನೆಗಳು, ರಾಷ್ಟ್ರೀಯತೆ ಮತ್ತು ವಿಶ್ವಮಾನವ ಸಂದೇಶದ ಪ್ರತಿಪಾದನೆ, ಕುವೆಂಪು ಅವರ ಆಪ್ತ ವೈದ್ಯರಾಗಿದ್ದ ಡಾ. ಲಕ್ಷ್ಮೀನಾರಾಯಣ್ ಅವರ ಸಂದರ್ಶನ, ತಾರತಮ್ಯದ ವಿರೋಧದ ದನಿ, ಕಿಂಕಿಣಿ ಕವನ ವಚನಾವಲೋಕನ, ಅನಿಕೇತನದ ಅನಂತತೆ, ಅಂಬೇಡ್ಕರ್ ಮತ್ತು ಕುವೆಂಪು ಅವರ ವಿಶ್ವ ಮಾನವ ಸಂದೇಶ, ಕುವೆಂಪು ಕವಿತೆಗಳಲ್ಲಿ ರೈತನಿಗೆ ಸಿಗಬೇಕಾದ ನ್ಯಾಯದ ಬಗೆಗೆ, ಮಹಾರಾತ್ರಿ ನಾಟಕದಲ್ಲಿ ಬರುವ ಬುದ್ಧನ ವಿಚಾರಗಳ ಅಗತ್ಯತೆ, ವೈಚಾರಿಕ ಆಯಾಮಗಳು, ಸ್ವಾತಂತ್ರ್ಯ ದನಿ, ಕುವೆಂಪು ಕಾನನದೊಳಗೆ ಸಂಚರಿಸಿದ ದೇವರು, ಕುವೆಂಪು ಅವರ ಮಂತ್ರ ಮಾಂಗಲ್ಯ ಸೇರಿದಂತೆ, ಕುವೆಂಪು ಅವರ ಇನ್ನಿತರ ಸಾಹಿತ್ಯದ ಒಳನೋಟವನ್ನು, ಅವರ ವೈಚಾರಿಕತೆಯನ್ನು ಈ ಕೃತಿಯಲ್ಲಿರುವ ಲೇಖನಗಳು ಕಟ್ಟಿಕೊಡುತ್ತವೆ.

ಹೀಗೆ ಕುವೆಂಪು ಅವರ ಹೆಸರನ್ನು ಒಳಗೊಂಡ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯು ಮೈಸೂರು ವಿವಿಯ ಹೆಮ್ಮೆಯ ಸಂಸ್ಥೆಯಾಗಿದೆ. ಕನ್ನಡಕ್ಕೆ ಪ್ರಥಮ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕುವೆಂಪು ಕುರಿತು ಸಂಸ್ಥೆಯ ಎಲ್ಲರೂ ಸೇರಿ ಹೊರತಂದಿರುವ ಈ ಕೃತಿಯು ವಿಶೇಷವಾದ ಮಹತ್ವವನ್ನು ಪಡೆದಿದೆ.

 

ಆಂದೋಲನ ಡೆಸ್ಕ್

Recent Posts

ಮೈಕ್ರೋ ಫೈನಾನ್ಸ್‌ ಕಿರುಕುಳ: ವ್ಯಕ್ತಿ ಆತ್ಮಹತ್ಯೆ

ಹುಣಸೂರು: ತಾಲೂಕಿನ ನಂಜಾಪುರ ಗ್ರಾಮದಲ್ಲಿ ಖಾಸಗಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ನಂಜಾಪುರದಲ್ಲಿ…

57 mins ago

ರಾಜ್ಯದ 101 ತಾಲ್ಲೂಕುಗಳು ಬರ ತಾಲ್ಲೂಕುಗಳೆಂದು ಘೋಷಣೆ: ಡಿಸಿಎಂ ಜಿ.ಪರಮೇಶ್ವರ್‌

ಮೈಸೂರು: ರೈತರಿಗೆ ಬರ ಪರಿಹಾರ ನೀಡುವ ವಿಚಾರವಾಗಿ ಮಾತನಾಡಿರುವ ಡಿಸಿಎಂ ಪರಮೇಶ್ವರ್‌, ರಾಜ್ಯದ 101 ತಾಲೂಕುಗಳನ್ನು ಬರ ತಾಲೂಕುಗಳೆಂದು ಘೋಷಣೆ…

1 hour ago

ಓದುಗರ ಪತ್ರ: ಉಳುವ ‘ಯೋಗಿ’ ಕೂಗಿಗೆ ಸರ್ಕಾರ ತರ್ತಾಗಿ ಸ್ಪಂದಿಸಲಿ

ರಾಜ್ಯದ ೧೭೫ ತಾಲ್ಲೂಕುಗಳು ಭೀಕರ ಬರಕ್ಕೆ ತತ್ತರಿಸಿ, ಶೇಕಡಾ ೮೦ ಕ್ಕೂ ಹೆಚ್ಚು ಬೆಳೆ ನಷ್ಟದಿಂದ ಅನ್ನದಾತರು ಸಂಪೂರ್ಣ ಕಂಗಾಲಾಗಿದ್ದರೂ…

2 hours ago

ಓದುಗರ ಪತ್ರ: ರಾಷ್ಟ್ರಕವಿ ಶ್ಲಾಘನೆಯ ಸ್ಮರಣೆ

೧೯೮೬ರ ಆಗಸ್ಟ್ ೨೯ರಂದು (ಜಗದ್ಗುರು ವೀರಸಿಂಹಾಸನ ಮಹಾಸಂಸ್ಥಾನ ಮಠದ ೨೩ ನೇ ಮಠಾಧಿಪತಿ) ಶಿವರಾತ್ರಿ ರಾಜೇಂದ್ರ ಶ್ರೀಗಳ ಅಮೃತ ಮಹೋತ್ಸವದ…

2 hours ago

ಓದುಗರ ಪತ್ರ: ಸೈಬರ್ ವಂಚನೆ: ಜಾಗೃತಿಯೂ ಫಲ ನೀಡುತ್ತಿಲ್ಲವಲ್ಲ…

ರಾಜ್ಯದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ ಏಳು ತಿಂಗಳ ಅವಧಿಯಲ್ಲಿ ಸುಮಾರು ರೂ.೬೦೦ ಕೋಟಿಯಷ್ಟು ಹಣ ಸೈಬರ್ ವಂಚಕರ…

2 hours ago

ಸೇವೆ, ಶಿಕ್ಷಣ, ಸಂಸ್ಕಾರದ ಸಂಗಮವಾಗಿದ್ದ ರಾಜೇಂದ್ರ ಶ್ರೀ

ಡಾ.ಕೆ.ಪಿ.ಸಿದ್ಧಲಿಂಗಸ್ವಾಮಿ ಇಂದು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ೧೧೧ನೇ ಜಯಂತಿ ಕೆಲವರು ತಮ್ಮ ಕಾಲದಲ್ಲಿ ಬದುಕುತ್ತಾರೆ; ಕೆಲವರು ತಮ್ಮ ಕಾಲವನ್ನೇ…

5 hours ago