Andolana originals

ದಸರಾ ದರ್ಶನ: ಶತಮಾನ ದಾಟಿದರೂ ಕಳೆಗುಂದದ ಬಂಗಾರದ ಸೀರೆ

ಧರ್ಮೇಂದ್ರ ಕುಮಾರ್‌ ಮೈಸೂರು

ಒಂದು ಸೀರೆಯನ್ನು ಶತಮಾನ ಕಳೆದರೂ ಕಾಪಿಡುವುದು ಸಾಧ್ಯವೇ? ಅದೂ ಮುಕ್ಕಾಗದಂತೆ, ಮಸುಕಾಗದಂತೆ ಉಳಿಸಿಕೊಳ್ಳಬಹುದು ಅಂದರೆ ನಂಬುವುದು ಹೇಗೆ? ಇದು ಸಾಧ್ಯ ಎನ್ನುತ್ತದೆ ಮೈಸೂರು ಮಹಾರಾಜರು ಕೊಡುಗೆ ನೀಡಿರುವ ಒಂದು ಸೀರೆ.

ಅಂತಿಂಥ ಸೀರೆ ಅಲ್ಲ, ಅಪ್ಪಟ ಬಂಗಾರದ್ದು! ಸುಮಾರು ೬ ತಲೆಮಾರು ಗಳಿಂದ ಉಳಿದುಕೊಂಡು ಬಂದಿದೆ. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ೧೯೧೭ರಲ್ಲಿ ತ ಮ್ಮ ಆತ್ಮೀಯ ಗೆಳೆಯ ಹಾಗೂ ಅರಮನೆಯ ಪ್ರಧಾನ ಶರಾ- ಆಗಿದ್ದ ತುಂಗಾ ಆದಪ್ಪ ಶೆಟ್ಟರಿಗೆ ನೀಡಿದ್ದ ಬಂಗಾರದ ಸೀರೆ ಇಂದಿಗೂ ಮೈಸೂರಿನಲ್ಲೇ ಇದೆ. ಆ ಸೀರೆ ವಿಶ್ವದ ಏಕೈಕ ಬಂಗಾರದ ಸೀರೆಯಾಗಿದೆ. ಅದು ೧೧೨ ವರ್ಷಗಳ ಹಳೆಯ ಸೀರೆಯಾಗಿದ್ದರೂ ಇಂದಿಗೂ ನಾವೀನ್ಯತೆ ಹಾಗೂ ಶ್ರೇಷ್ಠತೆಯನ್ನು ಕಾಪಾಡಿಕೊಂಡಿದೆ. ಬೆಂಗಳೂರಿನ ನಿವಾಸಿಗಳಾಗಿರುವ ಸೌಮ್ಯ ಕಮಲ್ ದಂಪತಿ ತುಂಗಾ ಆದಪ್ಪ ಶೆಟ್ಟರ ವಂಶಜರು. ಈ ಅಮೂಲ್ಯವಾದ ಕೊಡುಗೆಯನ್ನು ಅತ್ಯಂತ ಜೋಪಾನವಾಗಿ ಆಪ್ಯಾಯಮಾನದಿಂದ ಕಾಪಾಡಿಕೊಂಡು ಬಂದಿದ್ದಾರೆ.

ಮಹಾರಾಜರ ಮೇಲಿನ ಅಭಿಮಾನದಿಂದ ಪ್ರತಿ ವರ್ಷ ದಸರಾ ವೇಳೆಯಲ್ಲಿ ಈ ಸೀರೆಯನ್ನು ಹೊರಗೆ ತೆಗೆದು ದೇವರ ಮನೆಯಲ್ಲಿಟ್ಟುನಿತ್ಯವೂ ಪೂಜಿಸಿ ನಂತರ ಜೋಪಾನವಾಗಿ ಒಳಗೆ ಇಡುತ್ತಾ ಅನೇಕ ವರ್ಷಗಳಿಂದ ಕಾಪಾಡಿದ್ದಾರೆ. ಇದು ನಮಗೆ ಸಿಕ್ಕಿರುವ ಅಮೂಲ್ಯವಾದ ನಿಧಿ, ಇದು ಅಂಬಾವಿಲಾಸ ಅರಮನೆಯ ಬಗ್ಗೆ ಅನೇಕ ವಿಷಯಗಳನ್ನು ಹೇಳುತ್ತದೆ. ಆಗಿನ ಕಾಲದಲ್ಲಿ ನೇಯ್ಗೆ ಮಾಡಿರುವುದು. ರಾಜರು ಕೊಟ್ಟ ಈ ಉಡುಗೊರೆ ನಮ್ಮ ಮನೆಯಲ್ಲಿದೆ ಎನ್ನುವುದೇ ನಮಗೆ ಹೆಮ್ಮೆ. ಪ್ರತೀ ವರ್ಷ ಈ ಸೀರೆಯನ್ನು ದಸರಾ ವೇಳೆ ದೇವರ ಮನೆಯಲ್ಲಿಟ್ಟು ಪೂಜೆ ಮಾಡುತ್ತೇವೆ. ಬಳಿಕ ಸ್ವಸ್ಥಾನದಲ್ಲಿ ಇಡುತ್ತೇವೆ ಎನ್ನುತ್ತಾರೆ ಸೌಮ್ಯ ಕಮಲ್. ಇಷ್ಟು ವರ್ಷಗಳು ನಾವು ಈ ಸೀರೆಯನ್ನು ಕಾಪಾಡಿಕೊಂಡು ಬಂದಿದ್ದೇವೆ. ನಮ್ಮ ಮುಂದಿನ ಪೀಳಿಗೆಯ ನಮ್ಮ ಸೊಸೆಯಂದಿ ರಿಗೂ ಇದನ್ನೇ ಹೇಳಿ ಈ ಸೀರೆಯನ್ನು ಜೋಪಾನ ಮಾಡಲು ತಿಳಿಸುತ್ತೇನೆ ಎನ್ನುತ್ತಾರೆ ಅವರು.

ಸೀರೆ ಕೊಟ್ಟಿದ್ದು ಈ ಕಾರಣಕ್ಕೆ : ೧೮೯೭ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಹೋದರಿಯ ವಿವಾಹದ ಸಂದರ್ಭದಲ್ಲಿ ಕರ್ಟನ್‌ಗೆ ಬೆಂಕಿ ತಗುಲಿದ್ದರಿಂದ ಇಡೀ ಅರಮನೆ ಸತತ ೧೧ ದಿನಗಳ ಕಾಲ ಉರಿದು ಸುಟ್ಟು ಹೋಗಿದ್ದು ಗೊತ್ತೇ ಇದೆ. ಅದೇ ಸ್ಥಳದಲ್ಲಿ ಹೊಸ ಅರಮನೆ ನಿರ್ಮಾಣ ಕಾಮಗಾರಿ ಆರಂಭವಾಗಿ ೧೯೧೨ರಲ್ಲಿ ಪೂರ್ಣಗೊಂಡಿತು. ಅದೇ ವರ್ಷ ಗೃಹ ಪ್ರವೇಶ ಮಾಡಿದಾಗ ಮಹಾರಾಜರು ಎಲ್ಲರಿಗೂ ಉಡುಗೊರೆ ನೀಡಿದರು. ಆಗ ತುಂಗಾ ಅದಪ್ಪ ಶೆಟ್ಟರಿಗೆ ಮಹಾರಾಜರು ಬಹು ಪ್ರೀತಿಯಿಂದ ಈ ಬಂಗಾರದ ಸೀರೆಯನ್ನು ಉಡುಗೊರೆಯಾಗಿ ನೀಡಿದರು.

 

andolana

Recent Posts

ಬೀದಿನಾಯಿ ದಾಳಿ : ಇಬ್ಬರು ವಿದ್ಯಾರ್ಥಿಗಳೂ ಸೇರಿದಂತೆ ನಾಲ್ವರಿಗೆ ಗಾಯ

ಗೋಣಿಕೊಪ್ಪ : ಪಟ್ಟಣದಲ್ಲಿ ಬೀದಿನಾಯಿ ದಾಳಿಗೆ ಇಬ್ಬರು ವಿದ್ಯಾರ್ಥಿಗಳೂ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಈ ಘಟನೆಯಿಂದ ಎಚ್ಚೆತ್ತ ಸ್ಥಳೀಯರು ಮತ್ತಷ್ಟು…

1 min ago

ಕನ್ನಡ ನಾಡು ನುಡಿ ನಮ್ಮ ಹೆಮ್ಮೆ : ಹಾಡಿ ಹೊಗಳಿದ ಪ್ರಧಾನಿ ಮೋದಿ

ಹೊಸದಿಲ್ಲಿ : ಕನ್ನಡ ನಾಡು-ನುಡಿ ನಮ್ಮ ಹೆಮ್ಮೆ, ಕನ್ನಡ ಭೂಮಿ ನಮ್ಮ ಹೆಮ್ಮೆಯಾಗಿದೆ ಎಂದು ಪ್ರಧಾನಿ ನರೇಂದ್ರಮೋದಿ ಅವರು ಮುಕ್ತಕಂಠದಿಂದ…

3 mins ago

ಕಾಂಗ್ರೆಸ್ಸೇ ಅಹಿಂದ : ಸಿಎಂ ಸಿದ್ದರಾಮಯ್ಯಗೆ ಹಳ್ಳಿಹಕ್ಕಿ ವಿಶ್ವನಾಥ್‌ ಟಾಂಗ್‌

ಮೈಸೂರು : ಕಾಂಗ್ರೆಸ್ ಪಕ್ಷ ಎಂದರೆ ಅದು ಅಹಿಂದ. ಅದನ್ನು ಅರಿಯದೆ ಅಹಿಂದ ಸಮಾವೇಶ ಮಾಡಿ ಕಾಂಗ್ರೆಸ್ ಪಕ್ಷವನ್ನು ಮುಚ್ಚಲು…

7 mins ago

ಮೈಸೂರು ಅರಮನೆ ವೀಕ್ಷಣೆಗೂ ಬಂಕಿಂಗ್‌ ಹ್ಯಾಮ್‌ ಮಾದರಿ ತರಲಿ : ವಿಶ್ವನಾಥ್‌ ಆಗ್ರಹ

ಮೈಸೂರು : ಲಂಡನ್‌ನ ಬಂಕಿಂಗ್ ಹ್ಯಾಮ್ ಅರಮನೆಯಲ್ಲಿ ಎಲ್ಲರಿಗೂ ಪ್ರವೇಶ ಇಲ್ಲ. ದಿನಕ್ಕೆ ಇಂತಿಷ್ಟೇ ಜನ ಭೇಟಿ ನೀಡಬೇಕು ಎಂಬ…

34 mins ago

ರಾಜ್ಯದಲ್ಲಿ ಪದೇ ಪದೇ ಡ್ರಗ್ಸ್‌ ಜಾಲ ಪತ್ತೆ : ಪೊಲೀಸರನ್ನ ತೀವ್ರ ತರಾಟೆಗೆ ತೆಗೆದುಕೊಂಡ ಹೋಂ ಮಿನಿಸ್ಟರ್‌

ಬೆಂಗಳೂರು : ಬೆಂಗಳೂರಿನಲ್ಲಿ ಮಾದಕ ವಸ್ತುಗಳ ತಯಾರಿಕೆಯ ಘಟಕಗಳು ಪತ್ತೆಯಾಗಿರುವುದಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಿಡಿಮಿಡಿಯಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳನ್ನು…

1 hour ago

ಮುಂದಿನ ಎರಡ್ಮೂರು ತಿಂಗಳಲ್ಲಿ ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಚುನಾವಣೆ : ಕಾರ್ಯಕರ್ತರು ತಯಾರಾಗಿರಲು ಡಿಕೆಶಿ ಕರೆ

ಬೆಂಗಳೂರು : ಮುಂದಿನ ಎರಡು ಮೂರು ತಿಂಗಳ ಒಳಗಾಗಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯಿತಿ ಗಳಿಗೆ ಚುನಾವಣೆ ನಡೆಸಲು…

1 hour ago