ಆಕರ್ಷಿಸುತ್ತಿರುವ ಸರ್ಕಲ್ಗಳು; ಪ್ರವಾಸಿಗರ ಜೊತೆಗೆ ಸವಾರರಿಗೂ ಅನುಕೂಲ
ಸಾಲೋಮನ್
ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂ ಸವಾರಿ ಸಾಗುವ ಮಾರ್ಗ ದಲ್ಲಿನ ವೃತ್ತಗಳಲ್ಲಿ ಅತ್ಯಾಧುನಿಕ ತಂತ್ರಗಾರಿಕೆ ಆಧರಿಸಿದ ತ್ರೀ ಡೈಮೆನ್ಷನ್ (ತ್ರಿಡೀ) ರೇಡಿಯಂ ಚಿತ್ರಗಳನ್ನು ಬಿಡಿಸಿ ವೃತ್ತದ ಸೌಂದರ್ಯವನ್ನು ಇನ್ನಷ್ಟು ಆಕರ್ಷಕಗೊಳಿಸಲಾಗಿದೆ.
ಇದೇ ಮೊದಲ ಬಾರಿಗೆ ಮೈಸೂರು ಮಹಾನಗರ ಪಾಲಿಕೆ ಜಂಬೂ ಸವಾರಿ ಮಾರ್ಗದ ವೃತ್ತಗಳ ಸುತ್ತಲೂ ಕೋಲ್ಡ್ ಪ್ಲಾಸ್ಟಿಕ್ ಟೆಕ್ನಾಲಜಿ ಅಳವಡಿಸಿಕೊಂಡು ನಗರದ ಪಾರಂಪರಿಕ ಸೌಂದರ್ಯಕ್ಕೆ ಸ್ಪಂದಿಸುವ ಚಿತ್ರಗಳನ್ನು ಬಿಡಿಸಿ ವೃತ್ತಗಳಿಗೆ ಮೆರುಗು ನೀಡಿದೆ. ಈ ತ್ರೀಡಿ ಚಿತ್ರಗಳು ಪ್ರವಾಸಿಗರನ್ನು ಆಕರ್ಷಿಸುತ್ತಿರುವುದು ಮಾತ್ರವಲ್ಲದೆ, ವಾಹನ ಸವಾರರಿಗೂ ಉಪಯುಕ್ತವಾಗಿರುವುದು ವಿಶೇಷತೆಯಾಗಿದೆ.
ದಸರಾದ ವಿಜಯದಶಮಿಯಂದು ಜಂಬೂ ಸವಾರಿ ಸಾಗುವ ಮಾರ್ಗದ ಅರಮನೆ ಮುಂಭಾಗದ ಚಾಮರಾಜ ವೃತ್ತ, ಕೃಷ್ಣರಾಜ ವೃತ್ತ, ಆಯುರ್ವೇದ ಆಸ್ಪತ್ರೆ ವೃತ್ತ ಹಾಗೂ ಹೈವೇ ವೃತ್ತಗಳಲ್ಲಿ ಈ ಚಿತ್ತಾಕರ್ಷಕ ಕಲೆಯು ಕಲಾವಿದರ ಕೈಚಳಕದಲ್ಲಿ ಮೂಡಿಬಂದಿದೆ.
ವೃತ್ತದ ಸುತ್ತಲೂ ತ್ರೀಡಿ ರೇಡಿಯಂ ಪೈಂಟಿಂಗ್ ಮಾಡಿ ಅದರ ಒಳಗೆ ಆನೆ, ಎಲೆಗಳು, ಕಮಲ, ನವಿಲು ಮುಂತಾದ ಆಕರ್ಷಕ ವಿನ್ಯಾಸದ ಚಿತ್ರಗಳನ್ನು ಬಿಡಿಸಲಾಗಿದೆ.
ಇವು ಪೈಂಟ್ ವಾಷಬಲ್ ಕೂಡ ಆಗಿದ್ದು, ಈ ಭಾಗದಲ್ಲಿ ರಾತ್ರಿ ವೇಳೆ ಸಂಚರಿಸುವಾಗ ಪೈಂಟಿಂಗ್ ಪ್ರಜ್ವಲಿಸುವುದರಿಂದ ಆಕರ್ಷಣೆ ಜೊತೆಗೆ ವಾಹನ ಚಾಲಕರಿಗೆ ಸುರಕ್ಷತೆಯನ್ನೂ ನೀಡುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ವಿಶ್ವದಾದ್ಯಂತ ಮಹಾನಗರಗಳ ಸೌಂದರ್ಯ ಹೆಚ್ಚಿಸಲು ಈ ತಂತ್ರಜ್ಞಾನ ಬಳಸಲಾಗಿದ್ದು, ಭಾರತದ ವಿವಿಧ ನಗರಗಳಲ್ಲಿ ವಿಶಾಲವಾದ ರಸ್ತೆಗಳಲ್ಲಿ ವಾಹನಗಳ ಟ್ಯಾಕ್ಗಳು, ಫುಟ್ಪಾತ್ಗಳು ಹಾಗೂ ವೃತ್ತಗಳಿಗಳಿಗೆ ಕೋಲ್ ಪ್ಲಾಸ್ಟಿಕ್ ಟೆಕ್ನಾಲಜಿ ಆಧರಿಸಿ ‘ರೇಡಿಯಂ ಪೇಯಿಂಟ್’ಗಳನ್ನು ರಚಿಸಲಾಗಿದೆ. ದಿಚಕ್ರ ವಾಹನಗಳು ಈ ಚಿತ್ರಗಳ ಮೇಲೆ ಚಲಿಸಿದರೂ ಬಣ್ಣ ಮಾಸ ದಿರುವುದು ಇದರ ವಿಶೇಷತೆಯಾಗಿದೆ.
ಪುಣೆಯ ‘ಕೆಟಲೈನ್ ಇನ್ಪ್ರಾ ಪ್ರಾಡೆಕ್ಟ್ ಪೈ.ಲಿ, ಕಂಪನಿ’ಗೆ ಈ ಜವಾಬ್ದಾರಿಯನ್ನು ವಹಿಸಿ 45 ಲಕ್ಷ ರೂ.ಗೆ ಗುತ್ತಿಗೆಗೆ ನೀಡಲಾಗಿದೆ. ಈ ಚಿತ್ರಗಳು ಸುಮಾರು ಎರಡು ವರ್ಷಗಳವರೆಗೂ ಹಾಳಾಗುವುದಿಲ್ಲ ಹಾಗೂ ಅವುಗಳ ನಿರ್ವಹಣೆಯನ್ನೂ ಇದೇ ಕಂಪನಿಯು ನಿರ್ವಹಿಸಲಿದೆ.
ರೋಮಾಂಚಕ ವಿನ್ಯಾಸಗಳು ಮತ್ತು ಕ್ರಿಯಾತ್ಮಕ ಗುರುತುಗಳನ್ನು ಸಂಯೋಜಿಸುವ ಮೂಲಕ, ನಗರದ ಸಾರ್ವಜನಿಕ ಸ್ಥಳಗಳು ಸೌಂದರ್ಯ ಪರಿಕಲ್ಪನೆಯಡಿ ಪರಿವರ್ತನೆ ಕಂಡಿವೆ. ಸುರಕ್ಷತೆ, ಸೌಂದರ್ಯ ಮತ್ತು ಪರಿಸರ ಪ್ರಜ್ಞೆಯ ಸಮ್ಮಿಲನವನ್ನು ಇಲ್ಲಿ ಕಾಣಬಹುದಾಗಿದೆ.
ಕೋಲ್ಡ್ ಪ್ಲಾಸ್ಟಿಕ್:
ಕೋಲ್ ಪ್ಲಾಸ್ಟಿಕ್ ನಗರದ ಸೌಂದರ್ಯ ಹೆಚ್ಚಿಸುವಲ್ಲಿ ವಿಶ್ವದಾದ್ಯಂತ ಕ್ರಾಂತಿಯನ್ನುಂಟು ಮಾಡುತ್ತಿದೆ, ಇದು ಪರಿಸರ ಸ್ನೇಹಿ ಮತ್ತು ಸ್ಕಿಡ್ನಿರೋಧಕ ಆಗಿದೆ. ನಗರದ ಪ್ರದೇಶದಲ್ಲಿ ಸೈಕಲ್ ಟ್ರ್ಯಾಕ್ಗಳು, ಪಾದಚಾರಿ ಕ್ರಾಸಿಂಗ್ ಗಳು, ವಾಕ್ ವೇಗಳು, ಜಂಕ್ಷನ್ಗಳು ಮತ್ತು ರೋಟರಿಗಳಲ್ಲಿ ವ್ಯಾಪಕವಾಗಿ ಇದನ್ನೇ ಬಳಸಲಾಗುತ್ತಿದೆ. ಈ ಪೈಂಟಿಂಗ್ ನಗರ ಪ್ರದೇಶಗಳನ್ನು ಸುಂದರಗೊಳಿಸುವುದಲ್ಲದೆ ವಾಹನ ಸವಾರರ ಸುರಕ್ಷತೆಯನ್ನೂ ಹೆಚ್ಚಿಸುತ್ತದೆ. ಇದರ ಆಂಟಿ-ಸ್ಲಿಪ್ ಗುಣಲಕ್ಷಣಗಳು ಸುಗಮ ಮತ್ತು ಸುರಕ್ಷಿತ ಚಲನೆಗೆ ಸಹಕಾರಿಯಾಗಿದ್ದು, ಅಪಘಾತಗಳು, ಅಪಾಯವನ್ನು ಕಡಿಮೆ ಮಾಡುತ್ತದೆ. ಕೋಲ್ಡ್ ಪ್ಲಾಸ್ಟಿಕ್ನ ಬಾಳಿಕೆ ಮತ್ತು ಪರಿಸರ ಸಂರಕ್ಷಿತ ಪ್ರಯೋಜನಗಳು ಸುಸ್ಥಿರ ನಗರ ಯೋಜನೆಗೆ ಆದ್ಯತೆ ನೀಡಿದೆ.
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಅರಣ್ಯದಲ್ಲಿ ನೂತನ ವರ್ಷಾಚರಣೆಗೆ ಕಡಿವಾಣ ಹಾಕಲಾಗಿದೆ. ಈ ಬಾರಿ ವಾಸ್ತವ್ಯದ…
ಬೆಂಗಳೂರು: ದೇಶದೆಲ್ಲೆಡೆ ವೈಕುಂಠ ಏಕಾದಶಿ ಸಂಭ್ರಮ ಮನೆ ಮಾಡಿದ್ದು, ವೈಕುಂಠ ಏಕಾದಶಿಯಂದು ಸ್ವರ್ಗದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆ ಇದೆ.…
ಕುವೆಂಪು ಮಲೆನಾಡಿನಲಿ ಹುಟ್ಟಿದರು ಮೈಸೂರಿಗೆ ಕಾಲಿಟ್ಟರು ಕವಿಯಾಗಿ ಕನ್ನಡದ ಮೊದಲ ಜ್ಞಾನಪೀಠ ಗಳಿಸಿದರು ಮೂಢನಂಬಿಕೆಯನು ಬದಿಗೊತ್ತಿ ವಿಜ್ಞಾನದ ಬೀಜ ಬಿತ್ತಿ…
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿ (ಕೆಎಸ್ಒಯು) ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಮಳೆಗಾಲದಲ್ಲಿ ಈ…
ಹೆಗ್ಗಡದೇವನಕೋಟೆ ತಾಲ್ಲೂಕಿನ ಹಂಪಾಪುರ ಗ್ರಾಮದಿಂದ ಜಿನ್ನಹಳ್ಳಿ -ಮಲಾರದಹುಂಡಿಗೆ ತೆರಳುವ ಮುಖ್ಯ ರಸ್ತೆ ಹಾಳಾಗಿದ್ದು, ವಿಪರೀತ ಹಳ್ಳ-ಕೊಳ್ಳಗಳಿಂದ ಕೂಡಿದೆ. ಹಲವಾರು ಬಾರಿ…
ಹೊಸ ವರ್ಷದ ಆಚರಣೆ ಡಿ.೩೧ರ ರಾತ್ರಿ ಮತ್ತು ಜನವರಿ ೧ ರಂದು ನಡೆಯುತ್ತದೆ. ಯುವ ಜನತೆಗೆ ಹೊಸ ವರ್ಷದ ಆಚರಣೆ…