Andolana originals

ಗಣಪತಿ ವಿಗ್ರಹ ತಯಾರಿಕೆ ಬಿಡಿಸಲಾಗದ ಬಂಧ

ಕಿಕ್ಕೇರಿ ಸ್ವಾಮಿಗೆ ವಂಶದ ಬಳುವಳಿಯಾಗಿ ಬಂದಿರುವ ಕಲೆ ‘

ಮೈಸೂರು: ಈ ಕಲೆಯಿಂದ ಬಿಡಿಸಿಕೊಳ್ಳಲಾಗದ ನಂಟು… ಬದುಕು ಕಟ್ಟಿಕೊಡದಿದ್ದರೂ ಕಲೆಯ ಮೇಲಿನ ಪ್ರೀತಿ, ಅಭಿಮಾನ ಗಣಪತಿ ವಿಗ್ರಹಗಳನ್ನು ತಯಾರಿಸಲು ಉತ್ತೇಜಿಸುತ್ತದೆ… ಅದೂ ಪರಿಸರ ಸ್ನೇಹಿಯಾಗಿರುವ ಮಣ್ಣಿನ ಮೂರ್ತಿಗಳು ಅವು… ಹಾಗಾಗಿಯೇ ಸುಮಾರು 30 ವರ್ಷಗಳಿಂದಲೂ ಹಬ್ಬದ ವೇಳೆಗೆ ಇಡೀ ಕುಟುಂಬದವರು ಈ ಕಾಯಕದಲ್ಲಿ ತನ್ಮಯರಾಗಿ ತೊಡಗುತ್ತಾರೆ. ಗಳಿಸಿದಷ್ಟೇ ಆದಾಯಕ್ಕೆ ತೃಪ್ತಿಪಟ್ಟುಕೊಳ್ಳುತ್ತಾರೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿಯಲ್ಲಿ ವಾಸಿಸುತ್ತಿರುವ ಸ್ವಾಮಿ ಅವರೇ ಈ ಶ್ರಮಜೀವಿ. ಅವರಿಗೆ ಗಣೇಶ ತಯಾರಿಕೆ ವಂಶ ಪಾರಂಪರವಾಗಿ ಬಂದಿರುವ ಕಲೆ. ಆದರೆ, ಇದರಿಂದ ನಿತ್ಯದ ಬದುಕು ಸಾಗಿಸುವುದು ಕಠಿಣವಾಗಿಬಿಟ್ಟಿತು. ಹಾಗಾಗಿ ಜೀವನಕ್ಕೆ ಬೇರೆ ದುಡಿಮೆಯ ದಾರಿ ಕಂಡುಕೊಂಡಿದ್ದಾರೆ. ಆದರೆ, ಗೌರಿ- ಗಣೇಶ ಹಬ್ಬದ ಸಮಯದಲ್ಲಿ ಮಾತ್ರ ಮಣ್ಣಿನ ಗಣಪನ ತಯಾರಿಕೆಗೆ ಟೊಂಕ ಕಟ್ಟಿ ನಿಲ್ಲುತ್ತಾರೆ. ಅವರಿಗೆ ಇಡೀ ಕುಟುಂಬ ಸಹಕಾರ ನೀಡುತ್ತದೆ.

ವಿಗ್ರಹಕ್ಕೆ ನೈಸರ್ಗಿಕ ಸುಗಂಧ ದ್ರವ್ಯ ಬಳಕೆ
ಸ್ವಾಮಿ ಅವರು ಮಣ್ಣಿನ ಗಣಪತಿ ಮೂರ್ತಿ ತಯಾರಿಕೆಯಲ್ಲಿ ನೈಸರ್ಗಿಕ ಸುಗಂಧವನ್ನು ಸೇರಿಸುತ್ತಾರೆ. ಇದು ಗಣಪತಿಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಅಂಶಗಳನ್ನು ಉತ್ತಮಗೊಳಿಸುತ್ತದೆ. ಪ್ರತಿಮೆಗೆ ವಾಟರ್ ಪೇಯಿಂಟ್ ಬಳಸದೆ, ಆಯಿಲ್ ಪೇಯಿಂಟ್ ಉಪಯೋಗಿಸುತ್ತಾರೆ. ನಂತರ ಗಣಪತಿಯ ಮುಖದಲ್ಲಿ ಕಣ್ಣುಗಳು, ದಂತಗಳು ಮತ್ತಿತರ ಚಿತ್ತಾರಗಳನ್ನು ಮೂಡಿಸುತ್ತಾರೆ.

ಸ್ವಾಮಿ ತಯಾರಿಸುವ ವಿಗ್ರಹ ಪ್ರಸಿದ್ಧಿ:
ಸ್ವಾಮಿ ಅವರ ಮೂರ್ತಿ ತಯಾರಿಕೆ ಮತ್ತು ಬಣ್ಣ ಹಾಕುವ ಕಾರ್ಯವು ಕಿಕ್ಕೇರಿ ಪಟ್ಟಣದಲ್ಲಿ ಬಹಳ ಪ್ರಸಿದ್ಧವಾಗಿದೆ.

ಹಿಂದೆ ಕೂಡು ಕುಟುಂಬದಲ್ಲಿದ್ದಾಗಲೇ ಸ್ವಾಮಿ ಅವರಿಗೆ ಗಣಪನ ತಯಾರಿಕೆ ಕಲೆ ಕರಗತವಾಗಿತ್ತು. ಮದುವೆಯಾದ ನಂತರ ದಂಪತಿ ಪ್ರತ್ಯೇಕವಾಗಿ ವಾಸಿಸಲು ಆರಂಭಿ ಸಿದರು. ಕಲೆಯನ್ನು ಬಿಡದೆ ಗಣಪನನ್ನು ತಯಾರಿಸಿ ಮಾರಾಟ ಮುಂದುವರಿಸಿದ್ದರು. ಅವರಿಗೆ ಪತ್ತಿ ಕಲಾವತಿ ಸಹಕಾರ ನೀಡಿ ದರು. ಈ ಕೆಲಸ ಹೊಟ್ಟೆತುಂಬಿಸು ವುದು ಕಷ್ಟವಾದಾಗ ಸ್ವಾಮಿ ಅವರು, ಮನೆಗಳಿಗೆ ಬಣ್ಣ ತುಂಬುವ ಕೆಲಸ ಶುರು ಮಾಡಿದರು.

ಅಲ್ಲದೆ, ಕಲಾವತಿ ಅವರು ಖಾಸಗಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಪ್ರತಿ ವರ್ಷ ಹಬ್ಬದ ಸಂದರ್ಭದಲ್ಲಿ ಗಣಪತಿ ತಯಾರಿಕೆ ಯನ್ನು ಮುಂದುವರಿಸಿ ದ್ದಾರೆ. ಸ್ವಾಮಿ ದಂಪತಿ ಜೊತೆ ಅವರ ಪುತ್ರ ಮೋಕ್ಷಿತ್ ಕೂಡ ಗಣಪ ವಿಗ್ರಹ ತಯಾರಿ ಸುವುದನ್ನು ಆಸಕ್ತಿಯಿಂದ ಕಲಿಯುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ, ಮಣ್ಣಿನ ಗಣಪತಿಯ ತಯಾರಿಕೆಯಲ್ಲಿ ಪರಿಸರ ಸ್ನೇಹಿ ತತ್ವಗಳು ಗಾಳಿಗೆ ತೂರುತ್ತಿರುವುದರಿಂದ, ಪರಿಸರದ ಪಾಲನೆಯ ದೃಷ್ಟಿಯಿಂದ ಮಣ್ಣಿನ ಗಣಪತಿ ಮೂರ್ತಿಯನ್ನೇ ಹೆಚ್ಚಾಗಿ ಪೂಜಿಸಿ ಪರಿಸರಕ್ಕೆ ಹಾನಿ ಮಾಡದಂತೆ ಹಬ್ಬ ಆಚರಿಸಲು ಜನತೆಮುಂದಾಗಬೇಕು.
-ಸ್ವಾಮಿ, ಕಿಕ್ಕೇರಿ, ಮಂಡ್ಯ ಜಿಲ್ಲೆ.

ಆಂದೋಲನ ಡೆಸ್ಕ್

Recent Posts

ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿಗೆ ಸುಪ್ರೀಂಕೋರ್ಟ್‌ ರಿಲೀಫ್‌

ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಸುಬ್ಬಾರೆಡ್ಡಿಗೆ ಸುಪ್ರೀಂಕೋರ್ಟ್‌ ಬಗ್‌ ರಿಲೀಫ್‌ ನೀಡಿದೆ. ಶಾಸಕ ಸ್ಥಾನದಿಂದ ಅವರನ್ನು…

15 mins ago

ಶ್ರೀಮಂತರು ಗ್ಯಾರಂಟಿ ಯೋಜನೆಗಳನ್ನು ಬಿಟ್ಟು ಕೊಡುವುದರಲ್ಲಿ ತಪ್ಪೇನು: ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ಶ್ರೀಮಂತರು ಗ್ಯಾರಂಟಿ ಯೋಜನೆಗಳನ್ನು ಬಿಟ್ಟು ಕೊಡುವುದರಲ್ಲಿ ತಪ್ಪೇನಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರಶ್ನೆ ಮಾಡಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ…

24 mins ago

ಹೈಕೋರ್ಟ್‌ ಮೆಟ್ಟಿಲೇರಿದ ಮಲ್ಲಿಕಾರ್ಜುನ ಮುತ್ಯಾ

ಕಲಬುರ್ಗಿ: ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸ್ವಯಂಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಕಲಬುರ್ಗಿ…

35 mins ago

ಶಾಸಕ ವಿನಯ್‌ ಕುಲಕರ್ಣಿಗೆ ಬಿಗ್‌ ರಿಲೀಫ್:‌ ಜಾಮೀನು ಮಂಜೂರು

ನವದೆಹಲಿ: ಯೋಗೀಶ್‌ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿಗೆ ಸುಪ್ರೀಂ ಕೋರ್ಟ್‌ ಜಾಮೀನು…

45 mins ago

ತಮಿಳುನಾಡು ಮಾಜಿ ಸಿಎಂ ಪನ್ನೀರ್‌ ಸೆಲ್ವಂ ಡಿಎಂಕೆಗೆ ಸೇರ್ಪಡೆ

ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ಮೆಚ್ಚಿನ ಶಿಷ್ಯರಾಗಿದ್ದ ಪನ್ನೀರ್…

1 hour ago

ಅರವಿಂದ್‌ ಕೇಜ್ರಿವಾಲ್‌, ಮನೀಶ್‌ ಸಿಸೋಡಿಯಾಗೆ ಬಿಗ್‌ ರಿಲೀಫ್

ನವದೆಹಲಿ: ದೆಹಲಿಯ ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಹಾಗೂ ಮಾಜಿ ಡಿಸಿಎಂ ಮನೀಶ್‌ ಸಿಸೋಡಿಯಾ ಅವರನ್ನು ದೆಹಲಿ ಅಬಕಾರಿ ನೀತಿ…

1 hour ago