Andolana originals

ನೀಳವಾದ ಕೇಶರಾಶಿಗೆ ಭೃಂಗರಾಜ

• ರಮ್ಯ ಅರವಿಂದ್

ನಾವು ಬಾಲ್ಯದಿಂದಲೂ ಟಿವಿ ಹಾಗೂ ರೇಡಿಯೋ ಜಾಹೀರಾತುಗಳಲ್ಲಿ ‘ನೀಳ ಕೂದಲಿಗಾಗಿ ಶೃಂಗರಾಜ ತೈಲ ಬಳಸಿ’ ಎಂಬು ದನ್ನು ನೋಡಿರುತ್ತೇವೆ, ಅದರ ಬಗ್ಗೆ ಕೇಳಿರುತ್ತೇವೆ. ಈ ಶೃಂಗರಾಜ ಸೊಪ್ಪಿಗೆ ನಾವು ಕನ್ನಡದಲ್ಲಿ ‘ಗರಗದ ಸೊಪ್ಪು’ ಎಂದು ಕರೆಯುತ್ತೇವೆ.

ಶೃಂಗರಾಜ ಒಂದು ರೀತಿಯಲ್ಲಿ ‘ಗಿಡಮೂಲಿಕೆಗಳ ರಾಜ’ ಎಂದರೆ ತಪ್ಪಾಗ ಲಾರದು. ಸಾಮಾನ್ಯವಾಗಿ ಇದು ಎಲ್ಲೆಡೆ ಕಳೆಯ ಸಸ್ಯಗಳಂತೆ ಬೆಳೆದುಕೊಂಡಿರುತ್ತದೆ. ಇದು ನೈಸರ್ಗಿಕವಾಗಿ ಕಪ್ಪು ವರ್ಣದ ಗುಣವನ್ನು ಹೊಂದಿದ್ದು, ಕೂದಲಿಗೆ ಬಣ್ಣ ಕೊಡುವ ಮತ್ತು ತಲೆಕೂದಲನ್ನು ಸೋಂಪಾಗಿ ಬೆಳೆಸುವ ಗುಣ ಹೊಂದಿದೆ. ಆದ್ದರಿಂದಲೇ ಇದನ್ನು ಸಂಸ್ಕೃತದಲ್ಲಿ ‘ಕೇಶರಂಜನ’ ಅಥವಾ ‘ಕೇಶರಾಜ’ ಎಂದು ಕರೆಯಲಾಗುತ್ತದೆ.

ಶೃಂಗರಾಜ ಗಿಡಮೂಲಿಕೆಯಲ್ಲಿಯೂ 2 ವಿಧಗಳಿವೆ. ಒಂದು ಹಳದಿ ಬಣ್ಣದ ಹೂ ಬಿಡುವ ಗಿಡವಾದರೆ ಮತ್ತೊಂದು ಬಿಳಿ ಬಣ್ಣದ ಹೂ ಬಿಡುತ್ತದೆ. ಇದರಲ್ಲಿ ಸಾಕಷ್ಟು ಔಷಧೀಯ ಗುಣಗಳಿದ್ದು, ಪ್ರಾಚೀನ ಕಾಲದಿಂದಲೂ ಆಯುರ್ವೇದದಲ್ಲಿ ವಿವಿಧ ಉದ್ದೇಶಗಳಿಗಾಗಿ ಈ ಗಿಡಮೂಲಿಕೆಯನ್ನು ಬಳಸಲಾಗುತ್ತಿದೆ.

ಕೆಲ ಅಧ್ಯಯನಗಳ ಪ್ರಕಾರ ಭ್ರಂಗರಾಜ ಗಿಡಮೂಲಕೆಯ ತೈಲವು ನೆತ್ತಿ ಹಾಗೂ ಕೂದಲಿನ ಬೇರುಗಳಿಗೆ ಪುಷ್ಟಿಯನ್ನು ನೀಡಿ ರಕ್ತ ಪರಿಚಲನೆಯನ್ನು ಹೆಚ್ಚುಸುವಲ್ಲಿ ಸಹಕಾರಿಯಾಗಿದೆ. ಇದರಿಂದಾಗಿ ದಟ್ಟವಾದ ಕೇಶರಾಶಿ ಹಾಗೂ ಕೂದಲಿನ ಕಾಂತಿಯನ್ನೂ ಹೆಚ್ಚಿಸುವಲ್ಲಿ ಈ ಭ್ರಂಗರಾಜವು ಹೆಚ್ಚು ಪರಿಣಾಮಕಾರಿಯಾಗಿದೆ. ಭ್ರಂಗರಾಜದಿಂದ ತಯಾರಿಸಿದ ತೈಲವನ್ನು ಕೂದಲಿಗೆ ಲೇಪಿಸಿ ವೃತ್ತಾಕಾರದ ಚಲನೆಯಲ್ಲಿ 10 ನಿಮಿಷಗಳ ಕಾಲ ಮಸಾಜ್ ಮಾಡುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದಾಗಿದೆ.

ಶೃಂಗರಾಜ ಗಿಡದಿಂದ ತೈಲವನ್ನು ತಯಾರಿಸುವ ವಿಧಾನ: ಈ ಭ್ರಂಗರಾಜ ತೈಲವನ್ನು ನಾವು ಮನೆಯಲ್ಲಿಯೇ ತಯಾರಿಸಿ ಕೊಳ್ಳಬಹುದು. ಇದಕ್ಕಾಗಿ ನಾವು ಸಾಧ್ಯವಾದಷ್ಟು ಪ್ರಮಾಣದಲ್ಲಿ ಭಂಗರಾಜ ಎಲೆಗಳನ್ನು ಸಂಗ್ರಹಿಸಿ, ಈ ಎಲೆಗಳನ್ನು 2ರಿಂದ 3 ಸಲವಾ ದರೂ ಶುದ್ಧನೀರಿನಿಂದ ಚೆನ್ನಾಗಿ ತೊಳೆದು, ನಂತರ ಒಂದು ಹತ್ತಿ ಬಟ್ಟೆಯ ಮೇಲೆ ಹರಡಿ ನೆರಳಿನಲ್ಲಿ ಸುಮಾರು ಒಂದು ತಾಸು ಒಣಗಿಸಬೇಕು. ನಂತರ ಒಂದು ಪಾತ್ರೆಯಲ್ಲಿ (ಕಬ್ಬಿಣದಾದರೇ ಸೂಕ್ತ) ಒಂದು ಲೀ. ಕೊಬ್ಬರಿ ಎಣ್ಣೆ ಅಥವಾ ಎಳ್ಳಿನ ಎಣ್ಣೆಯನ್ನು ಹಾಕಿ, ಒಣಗಿಸಿದ ಎಲೆಗಳನ್ನು ಮಿಶ್ರಣ ಮಾಡಿ, ಒಲೆಯ ಮೇಲಿಟ್ಟು ಕಡಿಮೆ ಉರಿಯಲ್ಲಿ 8-10 ನಿಮಿಷಗಳ ಕಾಲ ಕುದಿಯಲು ಬಿಡುವುದು. ಎಣ್ಣೆಯು ಗಾಢ ಹಸಿರು ಬಣ್ಣಕ್ಕೆ ಬದಲಾಗುತ್ತದೆ. ಆರಿದ ನಂತರ ಒಂದು ಗಾಜಿನ ಬಾಟಲಿಗೆ ಶೋಧಿಸಿ ಕೊಂಡು, ಆ ತೈಲವನ್ನು ವಾರಕ್ಕೆ ಎರಡು ಬಾರಿ ಯಂತೆ 5-6 ತಿಂಗಳುಗಳ ಕಾಲ ಕೂದಲಿಗೆ ಹಚ್ಚು ವುದರಿಂದ ಒಳ್ಳೆಯ ಫಲಿತಾಂಶ ನಿರೀಕ್ಷಿಸಬಹುದು.

ಅಡುಗೆಯಲ್ಲಿಯೂ ಶೃಂಗರಾಜ ಬಳಸಬಹುದು : ಶೃಂಗರಾಜ ಎಲೆಗಳನ್ನು ಸಣ್ಣಗೆ ಕತ್ತರಿಸಿ ದೋಸೆ ಹಿಟ್ಟಿಗೆ ಬೆರೆಸಿ ದೋಸೆಯನ್ನು ಸವಿಯಬಹುದು. ಅಲ್ಲದೆ ಅಕ್ಕಿ ಹಿಟ್ಟಿನ ಜತೆ ಸ್ವಲ್ಪ ಉಪ್ಪು, ಜೀರಿಗೆ ಸೇರಿಸಿ ಅಕ್ಕಿರೊಟ್ಟಿಯನ್ನೂ ಸಿದ್ಧಪಡಿಸಿ ಸವಿಯ ಬಹುದು. ಇದರಿಂದ ಆರೋಗ್ಯಕ್ಕೂ ಉತ್ತಮ. ಪ್ರತಿಮನೆಯ ಹಿತ್ತಲಿನಲ್ಲಿ ಹಾಗೂ ಪಾಟ್‌ಗಳಲ್ಲಿ ಇಂತಹ ಅಮೂಲ್ಯವಾದ ಗಿಡಮೂಲಿಕೆಯನ್ನು ಬೆಳೆಸುವ ಜತೆಗೆ ಅವುಗಳನ್ನು ನಾವೂ ಉಪಯೋಗಿಸುವುದರಿಂದ ನಮ್ಮ ದೇಹದ ಆರೋಗ್ಯ ಮತ್ತು ಕೂದಲಿನ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು.
abigna.ramya@gmail.com

ಆಂದೋಲನ ಡೆಸ್ಕ್

Recent Posts

59 ಸಾವಿರ ಶಿಕ್ಷಕರ ಹುದ್ದೆ ಖಾಲಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…

1 hour ago

ಮೈಸೂರಿಗೆ ತೆರಳಲು ಅನುಮತಿ ಕೋರಿ ಕೋರ್ಟ್‌ ಮೋರಿ ಹೋದ ದರ್ಶನ್‌

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…

2 hours ago

ನಾನು ಅಶ್ಲೀಲ ಪದ ಬಳಸಿಲ್ಲ : ಪೊಲೀಸರ ಬಳಿ ಸಿ.ಟಿ ರವಿ ಹೇಳಿಕೆ

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…

2 hours ago

ವೈದ್ಯ ಮೇಲೆ ಹಲ್ಲೆ: ದೂರು ದಾಖಲು

ಮೈಸೂರು: ನಗರದ ಅಲ್‌ ಅನ್ಸಾರ್‌ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ  ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…

2 hours ago

ವಿಶೇಷ ಚೇತನ ಮಕ್ಕಳು ಸಮಾಜಕ್ಕೆ ಶಾಪವಲ್ಲ, ವರ; ದೀಪಕ್‌ ಅಭಿಮತ

' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…

4 hours ago

ಸಕ್ಕರೆ ನಗರಿ ಅಂದ ಹೆಚ್ಚಿಸಿದ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…

4 hours ago