Andolana originals

ಜಂಬೂ ಸವಾರಿಯಲ್ಲಿ ಸೌಹಾರ್ದತೆ ಮೆರೆದ ನಾಲ್ವಡಿ

ನಾಲ್ವಡಿಯವರು ಮಿರ್ಜಾ ಇಸ್ಮಾಯಿಲ್ ಅವರನ್ನು ಅಂಬಾರಿ ಮೇಲೆ ಕೂರಿಸಿಕೊಂಡ ಪ್ರಸಂಗ ಇಲ್ಲಿದೆ

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಆಳ್ವಿಕೆಯಲ್ಲಿ ಸರ್ವ ಸಮುದಾಯಗಳ ನಡುವೆ ಸೌಹಾದತೆಗೆ ಒತ್ತು ನೀಡಿದ್ದರು ಎಂಬುದಾಗಿ ಪ್ರೊ.ಎಸ್.ಚಂದ್ರಶೇಖರ್ ಅವರು ರಚಿಸಿರುವ ‘ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಆಧುನಿಕ ಮೈಸೂರು’ ಕೃತಿಯಲ್ಲಿ ದಾಖಲಾಗಿದೆ. ದಸರಾ ಉದ್ಘಾಟನೆಗೆ ಬುಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ವಿವಾದ ಉಂಟಾಗಿರುವ ಹಿನ್ನೆಲೆಯಲ್ಲಿ, ಆ ಪುಸ್ತಕದ ಆಯ್ದ ಭಾಗವನ್ನು ಇಲ್ಲಿ ಪ್ರಕಟಿಸಲಾಗಿದೆ.
ಅಕ್ಟೋಬರ್ ೨೭, ೧೯೨೭ರಂದು ನಡೆದ, ದಸರ ಮಹೋತ್ಸವದ ಸಂದರ್ಭದಲ್ಲಿ ಮಹಾರಾಜರು, ಮಿರ್ಜಾ ಅವರನ್ನು ಆನೆ ಅಂಬಾರಿಯ ಮೇಲೆ ಕುಳ್ಳಿರಿಸಿಕೊಂಡು ಮೈಸೂರಿನ ರಾಜಮಾರ್ಗಗಳಲ್ಲಿ ಮೆರವಣಿಗೆ ಹೊರಟಿದ್ದು ಸಂಪ್ರದಾಯಕ್ಕೆ, ಧರ್ಮಕ್ಕೆ ಆದ ಅಪಚಾರವೆಂದು ಬಗೆಯಲಾಯಿತು. ಅಲ್ಲಿಯವರೆಗೆ ಯಾರಿಗೂ ಸಿಗದ ಗೌರವ ಒಬ್ಬ ಮುಸಲ್ಮಾನನಿಗೆ ದೊರೆತದನ್ನು ಕೆಲವರು ಸಹಿಸಲಾಗದೆ ಅಂಬಾರಿಯ ಕಡೆಗೆ ಚಪ್ಪಲಿಗಳನ್ನೂ ಎಸೆದು, ಅಂಬಾರಿ ಹೊತ್ತಿದ್ದ ಆನೆಯನ್ನು ಬೆದರಿಸುವಂಥ ಕೃತ್ಯವೂ ನಡೆದಿತ್ತು. ಮತೀಯ ಕಿಡಿ ಹಚ್ಚಲು ಇದೂ ಒಂದು ಕಾರಣವಾಯಿತು. ಆದರೆ ಬೆಂಗಳೂರು ಗಲಭೆಗಳು ಆದ ನಂತರ ಅಂದರೆ ಮರುವರ್ಷವೇ ನಾಲ್ವಡಿಯವರು ಮತ್ತೊಮ್ಮೆ ಮಿರ್ಜಾರನ್ನು ಅಂಬಾರಿ ಮೇಲೆ ಕೂರಿಸಿ ತಮ್ಮ ವಿಶ್ವಾಸವನ್ನು ಮೆರೆದರು. ಮಹಾರಾಜರು ಧೃತಿಗೆಡಲಿಲ್ಲ. ಮಿರ್ಜಾ ಅವರಿಗೂ ಧೈರ್ಯ ತುಂಬಿ ತಮ್ಮ ಬೆಂಬಲ ವ್ಯಕ್ತಪಡಿಸಿ, ಒಂದು ಪತ್ರವನ್ನೂ ಬರೆದರು.

ನಿಮಗೆ ಕೆಲವು ವಾಕ್ಯಗಳ ಪತ್ರ ಬರೆಯದೆ ನಾನು ಸುಮ್ಮನಿರಲಾರೆ. ಕಳೆದ ಕೆಲವು ದಿನಗಳಿಂದ ನಿಮ್ಮ ಸುತ್ತ ನಡೆದಿರುವ ನಿಮಗೆ ಉಂಟಾಗಿರುವ ತೊಂದರೆಗಳು ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗದಿರಲೆಂದು ಪ್ರಾರ್ಥಿಸುತ್ತೇನೆ. ಇದು ದಿವಾನರ ಬಗ್ಗೆ ಇರಿಸಿಕೊಂಡಿದ್ದ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಯಾರು ನಿಸ್ಪೃಹರಾಗಿ, ರಾಜ್ಯಕ್ಕೆ ಮತ್ತು ತಮಗೆ ವಿಧೇಯರಾಗಿ ಸಲ್ಲಿಸುವರೋ ಅವರಿಗೆ ಮಹಾರಾಜರ ಬೆಂಬಲ, ನಿಷ್ಠೆ ಇದೇ ಪ್ರಮಾಣದಲ್ಲಿ ದೊರೆತವು.

ಮತೀಯ ಸೌಹಾರ್ದಕ್ಕೆ ಮೈಸೂರು ಮೊದಲಿನಿಂದಲೂ ಹೆಸರುವಾಸಿ. ನಾಲ್ವಡಿಯವರು ಮತ್ತು ಅವರ ಎಲ್ಲ ದಿವಾನರೂ ಆ ಬಗ್ಗೆ ಗರ್ವಪಡುತ್ತಿದ್ದರು. ಆ ಬಗ್ಗೆ ಮಿರ್ಜಾ ಅವರು ತಮ್ಮ ‘ಸಾರ್ವಜನಿಕ ಜೀವನ’ ಎಂಬ ಆತ್ಮಚರಿತ್ರೆಯಲ್ಲಿ ವಿಪುಲವಾಗಿ ಬರೆದಿರುವರು.‘ ನಾಲ್ವಡಿಯವರು ಎಲ್ಲ ಧರ್ಮೀಯರ ಸಮುದಾಯದವರ ಧಾರ್ಮಿಕ ಸಂಪ್ರದಾಯಗಳ ಬಗ್ಗೆ ಅಪಾರ ಗೌರವವನ್ನು ಇಟ್ಟುಕೊಂಡಿದ್ದರು. ಮತ್ತು ಅರ್ಥಪೂರ್ಣವಾದ ಸಂಪ್ರದಾಯಗಳನ್ನು ಅನುಸರಿಸುತ್ತಿದ್ದರು.

ಆಂದೋಲನ ಡೆಸ್ಕ್

Recent Posts

2026ರ ದಸರಾ ಗಜಪಡೆ ಪಟ್ಟಿ ಬಿಡುಗಡೆ: ಅಂಬಾರಿ ಸಾರಥಿ ಅಭಿಮನ್ಯುವಿಗೆ ಕೊಕ್‌

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಈ ಬಾರಿ ದಸರಾ ಗಜಪಡೆಯ ಪಟ್ಟಿಯಲ್ಲಿ ಮಹತ್ವದ…

2 hours ago

ಹನೂರು ಶೂಟೌಟ್‌ ಪ್ರಕರಣ: ತಮಿಳುನಾಡು ಸರ್ಕಾರದಿಂದಲೂ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ

ಚೆನ್ನೈ: ಹನೂರು ಶೂಟೌಟ್ ಪ್ರಕರಣದಲ್ಲಿ ಮೃತರ ಕುಟುಂಬಗಳಿಗೆ ತಮಿಳುನಾಡು ಸರ್ಕಾರದಿಂದಲೂ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ.…

3 hours ago

ಗ್ಯಾರೇಜ್‌ಗೆ ಬೆಂಕಿ ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

ಗುಂಡ್ಲುಪೇಟೆ: ಪಟ್ಟಣದ ಕೇರಳ ರಸ್ತೆಯಲ್ಲಿರುವ ಗ್ಯಾರೇಜ್‌ಗೆ ಬೆಂಕಿ ತಗುಲಿ ಸಂಪೂರ್ಣ ಗ್ಯಾರೇಜ್ ಸುಟ್ಟುಹೋಗಿರುವ ಘಟನೆ ನಡೆದಿದೆ. ಪಟ್ಟಣದ ವಾಹಿದ್ ಎಂಬುವವರಿಗೆ…

3 hours ago

ಕೆಆರ್‌ಎಸ್‌ನಿಂದ ತಮಿಳುನಾಡಿಗೆ 4917 ಕ್ಯೂಸೆಕ್‌ ನೀರು ಬಿಡುಗಡೆ

ಮಂಡ್ಯ: ರಾಜ್ಯದಲ್ಲಿ ಕೆಆರ್‌ಎಸ್‌ ಜಲಾಶಯದ ನೀರಿನ ವಿಚಾರವೂ ಚರ್ಚೆಗೆ ಬಂದಿದ್ದು, ಕೇವಲ 1951 ಕ್ಯೂಸೆಕ್ಸ್‌ ನೀರು ಹರಿದು ಬರುತ್ತಿರುವ ಡ್ಯಾಂನಿಂದ…

4 hours ago

ಕಾಡಾನೆಗಳ ಸೆರೆಗೆ ಕಾರ್ಯಾಚರಣೆ: ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ಜಾರಿ

ಕೊಡಗು: ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಮೂರು ಗಂಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಆದೇಶ ನೀಡಿದೆ. ಇಂದು ಬೆಳಿಗ್ಗೆ 10…

9 hours ago

ಹನೂರು ಎನ್‌ಕೌಂಟರ್: ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದೆವು: ACF ಮರಿಸ್ವಾಮಿ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಹನೂರು ಎನ್‌ಕೌಂಟರ್ ಬಗ್ಗೆ ಮೊದಲ ಬಾರಿಗೆ ಕಾವೇರಿ ವನ್ಯಧಾಮದ ACF ಮರಿಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ…

9 hours ago