ಓದುಗರ ಪತ್ರ
ದೊಡ್ಡಾಸ್ಪತ್ರೆ ಎಂದೇ ಖ್ಯಾತಿ ಪಡೆದಿರುವ ಮೈಸೂರಿನ ಕೆ.ಆರ್.ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ, ಟ್ರಾಮಾ ಕೇರ್, ಪಿಕೆಟಿಬಿ ಆಸ್ಪತ್ರೆಗಳಲ್ಲಿ ರೋಗಿಗಳ ಹಸಿವನ್ನು ನೀಗಿಸಬೇಕಾದ ಅನ್ನ ಕಸದ ತೊಟ್ಟಿ ಪಾಲಾಗುತ್ತಿರುವುದು ವಿಷಾದಕರ ಸಂಗತಿ.
ಆಸ್ಪತ್ರೆಯ ಫುಡ್ ಮೆನುವಿನಲ್ಲಿ ಮಧ್ಯಾಹ್ನ ಒಂದು ಕಪ್ ಮೊಸರು, ರಾತ್ರಿ ಮಜ್ಜಿಗೆ ಕೊಡಬೇಕು ಎಂದಿದ್ದರೂ ಒಂದೇ ಒಂದು ದಿನವೂ ಮೊಸರು ಮತ್ತು ಮಜ್ಜಿಗೆಯನ್ನು ನೀಡಿಲ್ಲ ಎಂಬುದು ಒಳ ರೋಗಿಗಳ ಆಪಾದನೆಯಾಗಿದೆ.
ಪಿಕೆಟಿಬಿ ಮತ್ತು ಚೆಲುವಾಂಬ ಆಸ್ಪತ್ರೆಗಳಲ್ಲಿ ಮೊಟ್ಟೆ ನೀಡಲಾಗುತ್ತಿದೆ, ಆದರೆ ಕೆ.ಆರ್.ಆಸ್ಪತ್ರೆಯಲ್ಲಿ ವಿಶೇಷ ದಿನಗಳಲ್ಲಿ ವಿಶೇಷ ಅಡುಗೆ ಮಾಡಲಾಗುತ್ತಿತ್ತು, ಈಗ ಅದ್ಯಾವುದೂ ಇಲ್ಲದೆ ಪ್ರತಿ ದಿನವೂ ಒಂದೇ ತರಹದ ತರಕಾರಿ ಸಾರು ನೀಡುತ್ತಿದ್ದು, ಭಾನುವಾರ ಬೆಳಿಗ್ಗೆ ತಿಂಡಿ ಬದಲು ಮೂರು ಪೀಸ್ ಬ್ರೆಡ್ – ಕಾಫಿ ನೀಡಲಾಗುತ್ತಿದೆ. ಒಳರೋಗಿಗಳಿಗ ನಿಗದಿತ ಸಮಯದಲ್ಲಿ ಊಟ ನೀಡದೆ, ರಾತ್ರಿ ಊಟವನ್ನು ಮಧ್ಯಾಹ್ನ ೩ ರಿಂದ ೫ ಗಂಟೆಯೊಳಗೆ ನೀಡುತ್ತಿರುವುದರಿಂದ ಅನ್ನವನ್ನು ತಿನ್ನಲಾಗದೆ ಬಹುತೇಕ ರೋಗಿಗಳು ಊಟವನ್ನು ಕಸದ ತೊಟ್ಟಿಗೆ ಬಿಸಾಡುತ್ತಿದ್ದಾರೆ. ಜಯದೇವ ಆಸ್ಪತ್ರೆಯ ಹಳೆಯ ಕಟ್ಟಡದಲ್ಲಿರುವ ಅನಾಥ ಒಳರೋಗಿಗಳಿಗೆ ಊಟವನ್ನು ಪಾರ್ಸೆಲ್ ಕವರ್ನಲ್ಲಿ ಪ್ಯಾಕ್ ಮಾಡಿ ನೀಡುತ್ತಾರೆ. ಆದರೆ ಅದೂ ಕಸದ ತೊಟ್ಟಿಗೆ ಸೇರುತ್ತಿದೆ. ಇನ್ನು ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ರೋಗಿಗಳಿಗೆ ಸಕಾಲಕ್ಕೆ ಉತ್ತಮ ಗುಣಮಟ್ಟದ ಊಟ ನೀಡಲು ಕ್ರಮ ಕೈಗೊಳ್ಳಬೇಕಾಗಿದೆ.
– ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಈ ಬಾರಿ ದಸರಾ ಗಜಪಡೆಯ ಪಟ್ಟಿಯಲ್ಲಿ ಮಹತ್ವದ…
ಚೆನ್ನೈ: ಹನೂರು ಶೂಟೌಟ್ ಪ್ರಕರಣದಲ್ಲಿ ಮೃತರ ಕುಟುಂಬಗಳಿಗೆ ತಮಿಳುನಾಡು ಸರ್ಕಾರದಿಂದಲೂ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ.…
ಗುಂಡ್ಲುಪೇಟೆ: ಪಟ್ಟಣದ ಕೇರಳ ರಸ್ತೆಯಲ್ಲಿರುವ ಗ್ಯಾರೇಜ್ಗೆ ಬೆಂಕಿ ತಗುಲಿ ಸಂಪೂರ್ಣ ಗ್ಯಾರೇಜ್ ಸುಟ್ಟುಹೋಗಿರುವ ಘಟನೆ ನಡೆದಿದೆ. ಪಟ್ಟಣದ ವಾಹಿದ್ ಎಂಬುವವರಿಗೆ…
ಮಂಡ್ಯ: ರಾಜ್ಯದಲ್ಲಿ ಕೆಆರ್ಎಸ್ ಜಲಾಶಯದ ನೀರಿನ ವಿಚಾರವೂ ಚರ್ಚೆಗೆ ಬಂದಿದ್ದು, ಕೇವಲ 1951 ಕ್ಯೂಸೆಕ್ಸ್ ನೀರು ಹರಿದು ಬರುತ್ತಿರುವ ಡ್ಯಾಂನಿಂದ…
ಕೊಡಗು: ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಮೂರು ಗಂಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಆದೇಶ ನೀಡಿದೆ. ಇಂದು ಬೆಳಿಗ್ಗೆ 10…
ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಹನೂರು ಎನ್ಕೌಂಟರ್ ಬಗ್ಗೆ ಮೊದಲ ಬಾರಿಗೆ ಕಾವೇರಿ ವನ್ಯಧಾಮದ ACF ಮರಿಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ…