Andolana originals

24 ಗಂಟೆಯಲ್ಲೇ ಹರಿದು ಹೋದ ಫ್ಲೆಕ್ಸ್‌  ಎಸ್.ಎಸ್.ಭಟ್

ನಂಜನಗೂಡು: ಅಪಘಾತದ ಸ್ಥಳದಲ್ಲಿ ಕಾಟಾಚಾರದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅಳವಡಿಸಿದ್ದ ಸೂಚನಾ ಫ್ಲೆಕ್ಸ್ 24ಗಂಟೆಯಲ್ಲೇ ಹರಿದು ಹೋಗಿದೆ. ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಂದ ಕೋಟಿ ಕೋಟಿ ರೂ. ವಸೂಲಿ ಮಾಡುತ್ತಿರುವ ಹೆದ್ದಾರಿ ಪ್ರಾಧಿಕಾರವು ಕಾಟಾಚಾರದ ಪ್ಲೆಕ್ಸ್ ಅಳವಡಿಸಿದ ದಿನವೇ ಅದು ಹರಿದು ಹೋಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಗರದ ಚಾಮುಂಡಿ ಟೌನ್‌ಶಿಪ್ ಬಳಿಯ ರೈಲ್ವೆ ಮೇಲ್ಸೇತುವೆಯ ತಿರುವಿನಲ್ಲಿ ಯಾವುದೇ ಸೂಚನಾ ಫಲಕಗಳಿಲ್ಲದೆ ಅಲ್ಲಿ ಅಪಘಾತಗಳ ಸರಣಿಯೇ ನಡೆಯಲಾರಂಭಿಸಿದೆ.

ಈ ಸ್ಥಳದ ಸರಣಿ ಅಪಘಾತ ಹಾಗೂ ಸಾವು-ನೋವಿನ ಅನಾಹುತವನ್ನು ಅರಿತ ಶಾಸಕ ದರ್ಶನ್ ಧ್ರುವನಾರಾಯಣ ತಾಲ್ಲೂಕು ಪಂಚಾಯಿತಿಯಲ್ಲಿ ಸಭೆ ನಡೆಸಿ ಅಪಘಾತಗಳಾಗಿ ಅನೇಕ ಜನರ ಸಾವಿಗೆ ಕಾರಣವಾಗಿರುವ ಆ ಸ್ಥಳದಲ್ಲಿ ಎಚ್ಚರಿಕೆಯ ಸೂಚನಾ ಫಲಕವನ್ನುಅಳವಡಿಸಬೇಕು. ತಪ್ಪಿದಲ್ಲಿ ಆಗಬಹುದಾದ ಅಪಘಾತಗಳಿಗೆ ನಿಮ್ಮ ಮೇಲೆ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಎಚ್ಚರಿಕೆಯ ಸೂಚನೆ ನೀಡಿದ್ದರು. ಶಾಸಕರು ಸೂಚನೆ ನೀಡಿ ವಾರ ಕಳೆದರೂ ಫಲಕ ಅಳವಡಿಸಿರಲಿಲ್ಲ.

ಇದನ್ನು ಓದಿ : ಅಪಘಾತ : ಕೂಲಿಯಾಳು ಸಾವು, 6ಮಂದಿ ಕಾರ್ಮಿಕರು ಗಂಭೀರ

ಸೂಚನಾ ಫಲಕಗಳಿಲ್ಲದೆ ಮತ್ತೆ ಘಟಿಸಿದ ಅಪಘಾತದಲ್ಲಿ ಸಾವು ಸಂಭವಿಸಿದಾಗ ಪ್ರಾಧಿಕಾರದ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗುತ್ತಿರುವ ಅಪಘಾತ ಎಂದು ಪೊಲೀಸರು ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿದರು. ಅದಾದ ಮೇಲೆ ಅವರು ಕಾಟಾಚಾರದ ಪ್ಲೆಕ್ಸ್ ಮಾಡಿ ತಂದು ಹಾಕಿದರು. ಆದರೆ ಇದು ಹಾಕಿದ ೨೪ ಗಂಟೆಗಳೊಳಗೆ ಗಾಳಿಗೆ ಹರಿದು ಹೋಗಿದೆ. ಅಲ್ಲಿ ಸೂಚನಾಫಲಕ ಅಳವಡಿಸಿ ಅಪಘಾತಗಳನ್ನು ತಡೆಗಟ್ಟಬೇಕೆಂಬ ಶಾಸಕರ ಸದುದ್ದೇಶಕ್ಕೆ ಇದರಿಂದ ತಡೆಯಾದಂತಾಗಿದೆ.

ಕಳಪೆ ಫ್ಲೆಕ್ಸ್ ಅಳವಡಿಕೆ:  ಯಾವುದೋ ಮದುವೆ ಅಥವಾ ಗೃಹ ಪ್ರವೇಶದ ಮನೆಗಳಿಗೆ ದಾರಿ ತೋರುವಂತಿದ್ದ ಪ್ಲಾಸ್ಟಿಕ್ ಪ್ಲೆಕ್ಸ್ ತಂದು ಅಳವಡಿಸಲಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಂದ ಕೋಟಿ ಕೋಟಿ ರೂ. ಸಂಚಾರ ಶುಲ್ಕ ವಸೂಲಿ ಮಾಡುವ ಪ್ರಾಧಿಕಾರಕ್ಕೆ ಸಂಚಾರಿಗಳ ಪ್ರಾಣ ರಕ್ಷಣೆಗಾಗಿ ಗುಣಮಟ್ಟದ ಸೂಚನಾ ಫಲಕ ಅಳವಡಿಸಲು ಹಣವಿಲ್ಲವೇ? ಒಂದೇ ದಿನದಲ್ಲಿ ಹರಿದು ಚಿಂದಿಯಾಗಿರುವ ಕಳಪೆ ಗುಣಮಟ್ಟದ ಪ್ಲೆಕ್ಸ್ ಏಕೆ? ಮತ್ತೇ ಇಲ್ಲಿ ಸರಣಿ ಅಪಘಾತ ಮುಂದುವರಿಯುವುದು ಹೆದ್ದಾರಿ ಪ್ರಾಧಿಕಾರಕ್ಕೆ ಬೇಕೆ ಎಂಬ ಸಾರ್ವಜನಿಕರ ಪ್ರಶ್ನೆಗೆ ಈಗ ಉತ್ತರಿಸುವವರ‍್ಯಾರು?

ಆಂದೋಲನ ಡೆಸ್ಕ್

Recent Posts

ಮೈಸೂರು-ಬೆಂಗಳೂರು ಮೇಲ್ಸೇತುವೆ ಕಾಮಗಾರಿ ಪ್ರಕ್ರಿಯೆ ಆರಂಭ: ಸಂಸದ ಯದುವೀರ್‌ ಒಡೆಯರ್‌

ಮೈಸೂರು: ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರ ಪ್ರಯತ್ನದ ಫಲವಾಗಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇಯ ಮಣಿಪಾಲ್‌ ಜಂಕ್ಷನ್‌ ಫ್ಲೈಓವರ್‌…

4 mins ago

ಮಡಿಕೇರಿ| ಗೋಮಾಂಸ ಸಾಗಾಟ ಮಾಡುತ್ತಿದ್ದ ಆರೋಪಿ ಬಂಧನ

ಮಡಿಕೇರಿ: ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಣಸೂರಿನ ರತ್ನಪುರಿ ನಿವಾಸಿ ಜಾಹಿರ್‌…

38 mins ago

ಕಾರು ಹರಿದು ನಾಟಕ ನೋಡಿ ಮಲಗಿದ್ದ ವ್ಯಕ್ತಿ ಸಾವು

ನಂಜನಗೂಡು: ತಾಲ್ಲೂಕಿನ ಸುತ್ತೂರಿನಲ್ಲಿ ನಡೆಯುತ್ತಿರುವ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ಆಯೋಜಿಸಿದ್ದ ನಾಟಕ ನೋಡಿ ಅಲ್ಲೇ ಪಕ್ಕದಲ್ಲಿ ಮಲಗಿ…

1 hour ago

ರಾಸಲೀಲೆ ವಿಡಿಯೋ ವೈರಲ್‌: ಡಿಜಿಪಿ ರಾಮಚಂದ್ರರಾವ್‌ ಅಮಾನತುಗೊಳಿಸಿ ಆದೇಶ

ಬೆಂಗಳೂರು: ರಾಸಲೀಲೆ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಡಿಜಿಪಿ ರಾಮಚಂದ್ರರಾವ್‌ ಅವರನ್ನು ಸರ್ಕಾರ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ವಿಡಿಯೋ ವೈರಲ್‌…

2 hours ago

ನಂಜನಗೂಡು| ಮನೆ ಮುಂದೆ ಕಟ್ಟಿದ್ದ ನಾಯಿ ಹೊತ್ತೊಯ್ದ ಚಿರತೆ: ಜನರಲ್ಲಿ ಆತಂಕ

ನಂಜನಗೂಡು: ಮೈಸೂರು ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಉಪಟಳ ಮುಂದುವರಿದಿದ್ದು, ನಂಜನಗೂಡು ಭಾಗದ ಪ್ರದೇಶಕ್ಕೆ ಚಿರತೆ ಪ್ರವೇಶಿಸಿ ಭೀತಿಯನ್ನುಂಟು ಮಾಡಿದೆ. ನಂಜನಗೂಡು ತಾಲ್ಲೂಕಿನ…

2 hours ago

ಎಲ್ಲಾ ಸರ್ಕಾರಿ ಕಚೇರಿಗಳಿಗೂ ಸಿಸಿ ಕ್ಯಾಮರಾ ಅಳವಡಿಸಿ: ಸ್ನೇಹಮಯಿ ಕೃಷ್ಣ ಮನವಿ

ಮೈಸೂರು: ಮಹಿಳಾ ಸಿಬ್ಬಂದಿ ಜೊತೆ ಡಿಜಿಪಿ ರಾಮಚಂದ್ರರಾವ್‌ ರಾಸಲೀಲೆ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ…

2 hours ago