Andolana originals

ನಾಳೆಯಿಂದ ಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆ

ಚಾಮರಾಜನಗರ: ಕೊಳ್ಳೇಗಾಲ ತಾಲ್ಲೂಕಿನ ಶ್ರೀ ಕ್ಷೇತ್ರ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರಾ ಮಹೋತ್ಸವ ಜ.೩ರಿಂದ ೫ ದಿನಗಳ ಕಾಲ ನಡೆಯಲಿದೆ.

ಉಚ್ಚ ನ್ಯಾಯಾಲಯ (ಹೈಕೋರ್ಟ್) ಆದೇಶದಲ್ಲಿನ ನಿಷೇಧಿತ ಚಟುವಟಿಕೆಗಳಿಗೆ ಅವಕಾಶವಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಜ.೮ರ ಮಧ್ಯರಾತ್ರಿಯವರೆಗೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಯಾವುದೇ ಘಟನೆಗಳು ಸಂಭವಿಸಿದ್ದಲ್ಲಿ ತಕ್ಷಣ ಆದೇಶಗಳನ್ನು ಹೊರಡಿಸುವ ಸಲುವಾಗಿ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಕೊಳ್ಳೇಗಾಲದ ಉಪವಿಭಾಗಾಧಿಕಾರಿ ಹಾಗೂ ತಹಸಿಲ್ದಾರರೊಂದಿಗೆ ಇನ್ನಿತರ ಅಧಿಕಾರಿಗಳನ್ನು ಹೆಚ್ಚುವರಿ ಸೆಕ್ಟರ್ ಆಫೀಸರ್‌ಗಳನ್ನಾಗಿ ಚಿಕ್ಕಲ್ಲೂರಿನ ವಿವಿಧ ವ್ಯಾಪ್ತಿಯ  ಪ್ರದೇಶ, ಸ್ಥಳಗಳಿಗೆ ನೇಮಕ ಮಾಡಿ ವಿವಿಧ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಚಿಕ್ಕಲ್ಲೂರು ಹೊಸಮಠದ ಸುತ್ತಮುತ್ತಲಿನ ಪ್ರದೇಶದಲ್ಲಿ ಮೊದಲನೇ ಪಾಳಿಯಲ್ಲಿ ಬೆಳಿಗ್ಗೆ ೮ರಿಂದ ಮಧ್ಯಾಹ್ನ ೨ ಗಂಟೆಯವರೆಗೆ ಜಿ.ಎಸ್.ರಾಜು -ಮೊ. ಸಂ.೮೬೬೦೯೯೯೩೫೪, ೨ನೇ ಪಾಳಿಯಲ್ಲಿ ಮ.೨ರಿಂದ ರಾತ್ರಿ ೧೦ ಗಂಟೆವರೆಗೆ ಎ.ಎಂ.ಕೇಶವ ಮೂರ್ತಿ-ಮೊ.ಸಂ. ೮೩೧೦೬೭೨೧೨೭, ೩ನೇ ಪಾಳಿಯಲ್ಲಿ ರಾತ್ರಿ ೧೦ರಿಂದ ಬೆ.೮ ಗಂಟೆ ಕುಮಾರ್- ಮೊ.ಸಂ.೯೯೮೦೧೩೭೭೭೯, ಚಿಕ್ಕಲ್ಲೂರು ಹಳೆಮಠದ ಸುತ್ತಮುತ್ತಲಿನ ಪ್ರದೇಶದಲ್ಲಿ ಮೊದಲ ಪಾಳಿಯಲ್ಲಿ ಬೆ.೮ರಿಂದ ಮ.೨ ಗಂಟೆವರೆಗೆ ಕೆ.ಚಿನ್ನಸ್ವಾಮಿ -ಮೊ.ಸಂ. ೮೮೮೪೦೯೮೭೭೨, ೨ನೇ ಪಾಳಿಯಲ್ಲಿ ಮ.೨ ರಿಂದ ರಾತ್ರಿ ೧೦ರವರೆಗೆ ನಂದೀಶ್ -ಮೊ.ಸಂ. ೮೭೨೨೦೦೦೧೦೨, ೩ನೇ ಪಾಳಿಯಲ್ಲಿ ರಾತ್ರಿ ೧೦ರಿಂದ ಬೆಳಿಗ್ಗೆ ೮ರವರೆಗೆ ಸುಧನ್ವ ನಾಗ್ -ಮೊ.ಸಂ.೯೫೯೦೯೬೧೯೬೧, ಚಿಕ್ಕಲ್ಲೂರು ಸಿದ್ದಾಪ್ಪಾಜಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಮೊದಲನೇ ಪಾಳಿಯಲ್ಲಿ ಬೆ.೮ರಿಂದ ಮ.೨ ಗಂಟೆವರೆಗೆ ರಾಮಕೃಷ್ಣ -ಮೊ.ಸಂ.೭೮೨೯೨೯೭೬೮೨೫, ೨ನೇ ಪಾಳಿಯಲ್ಲಿ ಮ.೨ರಿಂದ ರಾತ್ರಿ ೧೦ರವರೆಗೆ ಪ್ರಕಾಶ್ -ಮೊ.ಸಂ. ೯೯೬೪೮೧೫೫೮೩, ೩ನೇ ಪಾಳಿಯಲ್ಲಿ ರಾತ್ರಿ ೧೦ ರಿಂದ ಬೆ.೮ರವರೆಗೆ ರಂಗಸ್ವಾಮಿ -ಮೊ.ಸಂ. ೮೨೭೭೯೩೦೭೮೩, ಕೊತ್ತನೂರು, ಬಾಣೂರು, ಸುಂಡಳ್ಳಿ ಗ್ರಾಮಗಳ ಸುತ್ತಮುತ್ತಲ ಪ್ರದೇಶದಲ್ಲಿ ಮೊದಲನೇ ಪಾಳಿಯಲ್ಲಿ ಬೆ. ೮ರಿಂದ ಮ.೨ ಗಂಟೆವರೆಗೆ ಅಮೃತೇಶ್ವರ- ಮೊ.ಸಂ ೮೨೭೭೯೩೦೭೬೨, ಮ.೨ರಿಂದ ರಾತ್ರಿ ೧೦ ಗಂಟೆವರೆಗೆ ೨ನೇ ಪಾಳಿಯಲ್ಲಿ ರಾಜೇಶ್ -ಮೊ. ಸಂ.೮೭೨೨೫೨೬೪೧೨, ೩ನೇ ಪಾಳಿಯಲ್ಲಿ ರಾತ್ರಿ ೧೦ ರಿಂದ ಬೆಳಿಗ್ಗೆ ೮ ಗಂಟೆವರೆಗೆ ಸಿದ್ದರಾಜು -ಮೊ.ಸಂ ೯೮೪೫೯೦೭೬೬೧, ರಾಚಪ್ಪಾಜಿ ನಗರದ ಸುತ್ತಮುತ್ತಲ ಪ್ರದೇಶದಲ್ಲಿ ಮೊದಲನೇ ಪಾಳಿಯಲ್ಲಿ ಬೆ.೮ರಿಂದ ಮ.೨ ಗಂಟೆಯವರೆಗೆ ವಿನೋದ್ ಕುಮಾರ್ – ಮೊ. ಸಂ.೯೧೧೦೬೫೫೨೧೩, ೨ನೇ ಪಾಳಿಯಲ್ಲಿ ಮ.೨ರಿಂದ ರಾತ್ರಿ ೧೦ ಗಂಟೆವರೆಗೆ ನಟರಾಜು -ಮೊ.ಸಂ. ೭೦೨೨೪೪೦೩೯೦, ೩ನೇ ಪಾಳಿಯಲ್ಲಿ ರಾತ್ರಿ ೧೦ ರಿಂದ ಬೆಳಿಗ್ಗೆ ೮ ಗಂಟೆವರೆಗೆ ಪಿ.ಸಿನ್ನಣ್ಣನ್ -ಮೊ.ಸಂ.೮೨೭೭೩೧೩೯೫೪, ಬಂಡಳ್ಳಿ ರಸ್ತೆ ಮಾರ್ಗದ ಸುತ್ತಮುತ್ತಲ ಪ್ರದೇಶದಲ್ಲಿ ಮೊದಲನೇ ಪಾಳಿಯಲ್ಲಿ ಬೆ. ೮ರಿಂದ ಮ.೨ ಗಂಟೆವರೆಗೆ ಟಿ.ಎಂ. ಜಯಶೀಲ- ಮೊ.ಸಂ. ೯೭೪೧೮೪೩೨೧೮, ೨ನೇ ಪಾಳಿಯಲ್ಲಿ ಮಧ್ಯಾಹ್ನ ೨ರಿಂದ ರಾತ್ರಿ ೧೦ ಗಂಟೆವರೆಗೆ ಚಿಕ್ಕಲಿಂಗಯ್ಯ -ಮೊ.ಸಂ. ೯೧೦೮೨೫೨೫೦೨, ೩ನೇ ಪಾಳಿಯಲ್ಲಿ ರಾತ್ರಿ ೧೦ ರಿಂದ ಬೆಳಿಗ್ಗೆ ೮ ಗಂಟೆವರೆಗೆ ಪುರುಷೋತ್ತಮ -ಮೊ.ಸಂ. ೯೭೩೧೪೪೩೨೮೫ ಅವರನ್ನು ಸೆಕ್ಟರ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

ಏಕಮುಖ ವಾಹನ ಸಂಚಾರಕ್ಕೆ ಆದೇಶ:  ಜಾತ್ರೆಗೆ ಆಗಮಿಸುವ ಭಕ್ತಾಧಿಗಳು, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹಾಗೂ ಸುಗಮ ಸಂಚಾರದ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಜ.೩ ರಿಂದ ೮ರವರೆಗೆ (ತಾತ್ಕಾಲಿಕವಾಗಿ) ಏಕಮುಖ ಮಾರ್ಗದಲ್ಲಿ ಮಾತ್ರ ವಾಹನಗಳು ಸಂಚರಿಸಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಮಾರ್ಗ-೧ : ಚಿಕ್ಕಲ್ಲೂರು ಗ್ರಾಮಕ್ಕೆ ಒಳ ಬರಲು ಕೊತ್ತನೂರು ಗ್ರಾಮ- ಬಾಣೂರು ಕ್ರಾಸ್ ಬಾಣೂರು-ಸುಂಡ್ರಳ್ಳಿ ಮಾರ್ಗ ಹಾಗೂ ಮಾರ್ಗ-೨: ಚಿಕ್ಕಲ್ಲೂರು ಗ್ರಾಮದಿಂದ ಹೊರ ಹೋಗಲು ಚಿಕ್ಕಲ್ಲೂರು-ಬಾಣೂರು ಕ್ರಾಸ್-ಕೊತ್ತನೂರು ಮಾರ್ಗದಲ್ಲಿ ಸಂಚರಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ

ಆಂದೋಲನ ಡೆಸ್ಕ್

Recent Posts

ರಾಜ್ಯದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಅಂತ್ಯ

5,54,32,314 ಎನ್ಯುಮರೇಷನ್ ಫಾರಂ ಹಂಚಿಕೆ ; ಶೇ.100 ರಷ್ಟು ಡಿಜಿಟಲೀಕರಣ ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)…

7 hours ago

ಮೈಸೂರು | ದಸರಾ ವೇಳೆಗೆ ಫುಟ್‌ಪಾತ್‌ಗಳ ದುರಸ್ತಿಗೆ ಸೂಚನೆ

ಮೈಸೂರು‌ : ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸರ್ಕಾರ 6 ಕೋಟಿ ರೂ. ಬಿಡುಗಡೆ ಮಾಡಿದ್ದು,…

7 hours ago

ಪ.ಬಂಗಾಳ | ಬೆಂಕಿ ಅವಘಡದಲ್ಲಿ ಏಳು ಮಂದಿ ಸಾವು, ಹಲವರು ಗಂಭೀರ

ತಾರಾಪಿತ್ (ಪಶ್ಚಿಮ ಬಂಗಾಳ) : ಬೆಂಕಿ ಅವಘಡದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದು, ಹಲವರು ಗಂಭೀರ ಗಾಯಗೊಂಡಿರುವ ಘಟನೆ ಪಶ್ಚಿಮ…

8 hours ago

ಯಳಂದೂರು | ಚಿರತೆ ದಾಳಿಗೆ ಕರು ಬಲಿ

ಯಳಂದೂರು : ಚಿರತೆ ದಾಳಿಗೆ ಕರು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಯರಗಂಬಳ್ಳಿ ಗ್ರಾಮದಲ್ಲಿ ನಡೆದಿದೆ. ಯರಗಂಬಳ್ಳಿ ಗ್ರಾಮದ ಶೋಭಾ ಕೋಂ…

9 hours ago

ಸಿಡಬ್ಲ್ಯುಎಂಎ ಆದೇಶ ಪಾಲಿಸಿ ; ಕರ್ನಾಟಕಕ್ಕೆ ಸುಪ್ರೀಂ ಸೂಚನೆ

ಹೊಸದಿಲ್ಲಿ : ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಸಂಬಂಧದ ವಿವಾದ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕಾವೇರಿ ನೀರು ನಿರ್ವಹಣಾ…

9 hours ago

ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಎಚ್1ಎನ್1‌ ಸೋಂಕು ದೃಢ

ಬೆಂಗಳೂರು : ನಗರದ ಖಾಸಗಿ ಶಾಲೆಯೊಂದರ ಇಬ್ಬರು ಶಿಕ್ಷಕರಿಗೆ ಹೆಚ್1ಎನ್1 (H1N1) ದೃಢಪಟ್ಟಿದ್ದು ಆತಂಕ ಮೂಡಿಸಿದೆ. ಸದ್ಯಕ್ಕೆ ಹೈಸ್ಕೂಲ್ ಮಾತ್ರ…

10 hours ago