Andolana originals

ನಾಳೆಯಿಂದ ಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆ

ಚಾಮರಾಜನಗರ: ಕೊಳ್ಳೇಗಾಲ ತಾಲ್ಲೂಕಿನ ಶ್ರೀ ಕ್ಷೇತ್ರ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರಾ ಮಹೋತ್ಸವ ಜ.೩ರಿಂದ ೫ ದಿನಗಳ ಕಾಲ ನಡೆಯಲಿದೆ.

ಉಚ್ಚ ನ್ಯಾಯಾಲಯ (ಹೈಕೋರ್ಟ್) ಆದೇಶದಲ್ಲಿನ ನಿಷೇಧಿತ ಚಟುವಟಿಕೆಗಳಿಗೆ ಅವಕಾಶವಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಜ.೮ರ ಮಧ್ಯರಾತ್ರಿಯವರೆಗೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಯಾವುದೇ ಘಟನೆಗಳು ಸಂಭವಿಸಿದ್ದಲ್ಲಿ ತಕ್ಷಣ ಆದೇಶಗಳನ್ನು ಹೊರಡಿಸುವ ಸಲುವಾಗಿ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಕೊಳ್ಳೇಗಾಲದ ಉಪವಿಭಾಗಾಧಿಕಾರಿ ಹಾಗೂ ತಹಸಿಲ್ದಾರರೊಂದಿಗೆ ಇನ್ನಿತರ ಅಧಿಕಾರಿಗಳನ್ನು ಹೆಚ್ಚುವರಿ ಸೆಕ್ಟರ್ ಆಫೀಸರ್‌ಗಳನ್ನಾಗಿ ಚಿಕ್ಕಲ್ಲೂರಿನ ವಿವಿಧ ವ್ಯಾಪ್ತಿಯ  ಪ್ರದೇಶ, ಸ್ಥಳಗಳಿಗೆ ನೇಮಕ ಮಾಡಿ ವಿವಿಧ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಚಿಕ್ಕಲ್ಲೂರು ಹೊಸಮಠದ ಸುತ್ತಮುತ್ತಲಿನ ಪ್ರದೇಶದಲ್ಲಿ ಮೊದಲನೇ ಪಾಳಿಯಲ್ಲಿ ಬೆಳಿಗ್ಗೆ ೮ರಿಂದ ಮಧ್ಯಾಹ್ನ ೨ ಗಂಟೆಯವರೆಗೆ ಜಿ.ಎಸ್.ರಾಜು -ಮೊ. ಸಂ.೮೬೬೦೯೯೯೩೫೪, ೨ನೇ ಪಾಳಿಯಲ್ಲಿ ಮ.೨ರಿಂದ ರಾತ್ರಿ ೧೦ ಗಂಟೆವರೆಗೆ ಎ.ಎಂ.ಕೇಶವ ಮೂರ್ತಿ-ಮೊ.ಸಂ. ೮೩೧೦೬೭೨೧೨೭, ೩ನೇ ಪಾಳಿಯಲ್ಲಿ ರಾತ್ರಿ ೧೦ರಿಂದ ಬೆ.೮ ಗಂಟೆ ಕುಮಾರ್- ಮೊ.ಸಂ.೯೯೮೦೧೩೭೭೭೯, ಚಿಕ್ಕಲ್ಲೂರು ಹಳೆಮಠದ ಸುತ್ತಮುತ್ತಲಿನ ಪ್ರದೇಶದಲ್ಲಿ ಮೊದಲ ಪಾಳಿಯಲ್ಲಿ ಬೆ.೮ರಿಂದ ಮ.೨ ಗಂಟೆವರೆಗೆ ಕೆ.ಚಿನ್ನಸ್ವಾಮಿ -ಮೊ.ಸಂ. ೮೮೮೪೦೯೮೭೭೨, ೨ನೇ ಪಾಳಿಯಲ್ಲಿ ಮ.೨ ರಿಂದ ರಾತ್ರಿ ೧೦ರವರೆಗೆ ನಂದೀಶ್ -ಮೊ.ಸಂ. ೮೭೨೨೦೦೦೧೦೨, ೩ನೇ ಪಾಳಿಯಲ್ಲಿ ರಾತ್ರಿ ೧೦ರಿಂದ ಬೆಳಿಗ್ಗೆ ೮ರವರೆಗೆ ಸುಧನ್ವ ನಾಗ್ -ಮೊ.ಸಂ.೯೫೯೦೯೬೧೯೬೧, ಚಿಕ್ಕಲ್ಲೂರು ಸಿದ್ದಾಪ್ಪಾಜಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಮೊದಲನೇ ಪಾಳಿಯಲ್ಲಿ ಬೆ.೮ರಿಂದ ಮ.೨ ಗಂಟೆವರೆಗೆ ರಾಮಕೃಷ್ಣ -ಮೊ.ಸಂ.೭೮೨೯೨೯೭೬೮೨೫, ೨ನೇ ಪಾಳಿಯಲ್ಲಿ ಮ.೨ರಿಂದ ರಾತ್ರಿ ೧೦ರವರೆಗೆ ಪ್ರಕಾಶ್ -ಮೊ.ಸಂ. ೯೯೬೪೮೧೫೫೮೩, ೩ನೇ ಪಾಳಿಯಲ್ಲಿ ರಾತ್ರಿ ೧೦ ರಿಂದ ಬೆ.೮ರವರೆಗೆ ರಂಗಸ್ವಾಮಿ -ಮೊ.ಸಂ. ೮೨೭೭೯೩೦೭೮೩, ಕೊತ್ತನೂರು, ಬಾಣೂರು, ಸುಂಡಳ್ಳಿ ಗ್ರಾಮಗಳ ಸುತ್ತಮುತ್ತಲ ಪ್ರದೇಶದಲ್ಲಿ ಮೊದಲನೇ ಪಾಳಿಯಲ್ಲಿ ಬೆ. ೮ರಿಂದ ಮ.೨ ಗಂಟೆವರೆಗೆ ಅಮೃತೇಶ್ವರ- ಮೊ.ಸಂ ೮೨೭೭೯೩೦೭೬೨, ಮ.೨ರಿಂದ ರಾತ್ರಿ ೧೦ ಗಂಟೆವರೆಗೆ ೨ನೇ ಪಾಳಿಯಲ್ಲಿ ರಾಜೇಶ್ -ಮೊ. ಸಂ.೮೭೨೨೫೨೬೪೧೨, ೩ನೇ ಪಾಳಿಯಲ್ಲಿ ರಾತ್ರಿ ೧೦ ರಿಂದ ಬೆಳಿಗ್ಗೆ ೮ ಗಂಟೆವರೆಗೆ ಸಿದ್ದರಾಜು -ಮೊ.ಸಂ ೯೮೪೫೯೦೭೬೬೧, ರಾಚಪ್ಪಾಜಿ ನಗರದ ಸುತ್ತಮುತ್ತಲ ಪ್ರದೇಶದಲ್ಲಿ ಮೊದಲನೇ ಪಾಳಿಯಲ್ಲಿ ಬೆ.೮ರಿಂದ ಮ.೨ ಗಂಟೆಯವರೆಗೆ ವಿನೋದ್ ಕುಮಾರ್ – ಮೊ. ಸಂ.೯೧೧೦೬೫೫೨೧೩, ೨ನೇ ಪಾಳಿಯಲ್ಲಿ ಮ.೨ರಿಂದ ರಾತ್ರಿ ೧೦ ಗಂಟೆವರೆಗೆ ನಟರಾಜು -ಮೊ.ಸಂ. ೭೦೨೨೪೪೦೩೯೦, ೩ನೇ ಪಾಳಿಯಲ್ಲಿ ರಾತ್ರಿ ೧೦ ರಿಂದ ಬೆಳಿಗ್ಗೆ ೮ ಗಂಟೆವರೆಗೆ ಪಿ.ಸಿನ್ನಣ್ಣನ್ -ಮೊ.ಸಂ.೮೨೭೭೩೧೩೯೫೪, ಬಂಡಳ್ಳಿ ರಸ್ತೆ ಮಾರ್ಗದ ಸುತ್ತಮುತ್ತಲ ಪ್ರದೇಶದಲ್ಲಿ ಮೊದಲನೇ ಪಾಳಿಯಲ್ಲಿ ಬೆ. ೮ರಿಂದ ಮ.೨ ಗಂಟೆವರೆಗೆ ಟಿ.ಎಂ. ಜಯಶೀಲ- ಮೊ.ಸಂ. ೯೭೪೧೮೪೩೨೧೮, ೨ನೇ ಪಾಳಿಯಲ್ಲಿ ಮಧ್ಯಾಹ್ನ ೨ರಿಂದ ರಾತ್ರಿ ೧೦ ಗಂಟೆವರೆಗೆ ಚಿಕ್ಕಲಿಂಗಯ್ಯ -ಮೊ.ಸಂ. ೯೧೦೮೨೫೨೫೦೨, ೩ನೇ ಪಾಳಿಯಲ್ಲಿ ರಾತ್ರಿ ೧೦ ರಿಂದ ಬೆಳಿಗ್ಗೆ ೮ ಗಂಟೆವರೆಗೆ ಪುರುಷೋತ್ತಮ -ಮೊ.ಸಂ. ೯೭೩೧೪೪೩೨೮೫ ಅವರನ್ನು ಸೆಕ್ಟರ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

ಏಕಮುಖ ವಾಹನ ಸಂಚಾರಕ್ಕೆ ಆದೇಶ:  ಜಾತ್ರೆಗೆ ಆಗಮಿಸುವ ಭಕ್ತಾಧಿಗಳು, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹಾಗೂ ಸುಗಮ ಸಂಚಾರದ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಜ.೩ ರಿಂದ ೮ರವರೆಗೆ (ತಾತ್ಕಾಲಿಕವಾಗಿ) ಏಕಮುಖ ಮಾರ್ಗದಲ್ಲಿ ಮಾತ್ರ ವಾಹನಗಳು ಸಂಚರಿಸಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಮಾರ್ಗ-೧ : ಚಿಕ್ಕಲ್ಲೂರು ಗ್ರಾಮಕ್ಕೆ ಒಳ ಬರಲು ಕೊತ್ತನೂರು ಗ್ರಾಮ- ಬಾಣೂರು ಕ್ರಾಸ್ ಬಾಣೂರು-ಸುಂಡ್ರಳ್ಳಿ ಮಾರ್ಗ ಹಾಗೂ ಮಾರ್ಗ-೨: ಚಿಕ್ಕಲ್ಲೂರು ಗ್ರಾಮದಿಂದ ಹೊರ ಹೋಗಲು ಚಿಕ್ಕಲ್ಲೂರು-ಬಾಣೂರು ಕ್ರಾಸ್-ಕೊತ್ತನೂರು ಮಾರ್ಗದಲ್ಲಿ ಸಂಚರಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ

ಆಂದೋಲನ ಡೆಸ್ಕ್

Recent Posts

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೇ ಈಗ ರಾಜ್ಯಸಭೆ ಅಭ್ಯರ್ಥಿ

ನವದೆಹಲಿ: ರಾಜ್ಯಸಭೆ ಚುನಾವಣೆಗೆ ಬಿಜೆಪಿ 9 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನಬಿನ್‌ ಅವರು ಬಿಹಾರದಿಂದ…

6 mins ago

ದುಬೈನಲ್ಲಿ ಸಿಲುಕಿರುವ ಕನ್ನಡಿಗರಿಗೆ ವಿಡಿಯೋ ಕಾಲ್‌ ಮಾಡಿ ಧೈರ್ಯ ಹೇಳಿದ ವಿಜಯೇಂದ್ರ

ಬೆಂಗಳೂರು: ಅಮೇರಿಕಾ, ಇಸ್ರೇಲ್‌-ಇರಾನ್‌ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ದುಬೈನಲ್ಲಿ ಸಿಲುಕಿ ಆತಂಕದಲ್ಲಿರುವ ಕನ್ನಡಿಗರ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ…

26 mins ago

ಬೂದಬಾಳು ಗ್ರಾಮದ ಕೆರೆಗೆ ಬಾಗಿನ ಸಮರ್ಪಿಸಿದ ಶಾಸಕ ಎಂ.ಆರ್.ಮಂಜುನಾಥ್

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಬರಪೀಡಿತ ಪ್ರದೇಶಗಳಲ್ಲಿ ಒಂದಾದ ಬೂದಬಾಳು ಕೆರೆಗೆ ಕಾವೇರಿ ನದಿ ಮೂಲದಿಂದ…

38 mins ago

ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಪ್ರತಿಯೊಬ್ಬ ರೈತರಿಗೂ ದೊರಕಿಸಿ: ಬಿಜೆಪಿ ಜಿಲ್ಲಾಧ್ಯಕ್ಷ ನಿರಂಜನ್ ಕುಮಾರ್

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ಷೇರುದಾರರು ನಿಮ್ಮ ಮೇಲೆ ವಿಶ್ವಾಸವಿಟ್ಟು ಕೃಷಿ ಪತ್ತಿನ ಸಹಕಾರ ಸಂಘದ…

1 hour ago

ಹಾರ್ಮುಜ್‌ ಜನಸಂಧಿಯನ್ನು ಮುಚ್ಚಿದ ಇರಾನ್: ತೈಲ ಬೆಲೆಯಲ್ಲಿ ಭಾರೀ ಏರಿಕೆ

ಟೆಹರಾನ್:‌ ಅಮೇರಿಕಾ ಹಾಗೂ ಇಸ್ರೇಲ್‌ ದೇಶಗಳು ಇರಾನ್‌ ಜೊತೆ ನಡೆಸುತ್ತಿರುವ ಯುದ್ಧವು ಇದೀಗ ವಿಶ್ವದ ಅತ್ಯಂತ ನಿರ್ಣಾಯಕ ಇಂಧನ ಮಾರ್ಗಗಳಲ್ಲಿ…

1 hour ago

ಮಾರ್ಚ್.‌10ರಂದು ಡಿಕೆಶಿ ಡಿನ್ನರ್‌ ಪಾರ್ಟಿ: ಸಿದ್ದರಾಮಯ್ಯಗೂ ಆಹ್ವಾನ

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಮಾರ್ಚ್.10ರಂದು ಡಿನ್ನರ್‌ ಪಾರ್ಟಿ ಆಯೋಜನೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮಾರ್ಚ್.‌6ರಂದು ಡಿ.ಕೆ.ಶಿವಕುಮಾರ್‌ ಕೆಪಿಸಿಸಿ…

2 hours ago