Andolana originals

ಕುಟುಂಬದವರಿಂದ ಕುಟುಂಬದ ಗಣತಿ!

ಎಸ್.ಎಸ್.ಭಟ್

ಗಣತಿಗೆ ತೆರಳುವ ಶಿಕ್ಷಕರಿಗೆ ಕುಟುಂಬದವರ ಸಾಥ್ 

ನಂಜನಗೂಡು: ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ಕೈಗೆತ್ತಿಕೊಂಡಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ನಡೆಸುವ ಒತ್ತಡಕ್ಕೆಸಿಲುಕಿರುವ ಶಿಕ್ಷಕರು ಸಮೀಕ್ಷೆ ಮಾಡಲು ತಮ್ಮ ಕುಟುಂಬದವರ ನೆರವು ಪಡೆಯುತ್ತಿರುವ ವಿಷಯ ಬೆಳಕಿಗೆ ಬಂದಿದೆ.

ಹಲವು ಮಹಿಳಾ ಗಣತಿದಾರರು ತಮ್ಮ ಇಡೀ ಕುಟುಂಬವನ್ನೇ ಗಣತಿ ಕಾರ್ಯಕ್ಕೆ ಬಳಸಲಾರಂಭಿಸಿದ್ದಾರೆ. ಹೀಗಾಗಿ ಈಗ ಗಣತಿ ಶಿಕ್ಷಕರೊಂದಿಗೆ ಅವರ ಪದವೀಧರ ಮಕ್ಕಳು, ಮೊಮ್ಮಕ್ಕಳು, ಹಳೆಯ ಶಿಷ್ಯರು ಕೂಡ ಗಣತಿ ಮಾಡುವಂತಾಗಿದೆ.

ಗಣತಿ ಮಾಡಲು ಮನೆಗೆ ಹೋಗಿ ಅವರಿಂದ ೬೦ ಪ್ರಶ್ನೆಗಳಿಗೆ ಉತ್ತರ ಪಡೆದು ಅದನ್ನು ಅಪ್‌ಲೋಡ್ ಮಾಡುವ ವೇಳೆಗೆ ಕೈಕೊಡುವ ಸರ್ವರ್‌ನಿಂದಾಗಿ ದಿನಕ್ಕೆ ೧೦ ಮನೆ ಗಣತಿ ಮಾಡುವುದಿರಲಿ, ದಿನಕ್ಕೆ ಒಂದು ಮನೆಯನ್ನು ಪೂರ್ಣಗೊಳಿಸುವುದೂ ಕಷ್ಟವಾಗ ತೊಡಗಿದೆ. ನಿಗದಿತ ಅವಧಿಯಲ್ಲಿ ಗಣತಿ ಮುಗಿಸುವುದು ಹೇಗೆ ಎಂಬ ಭಯ ಶಿಕ್ಷಕರನ್ನು ಕಾಡತೊಡಗಿದೆ.

ಅಮಾನತ್ತಿನ ಆತಂಕದಿಂದಲೆ ಗಣತಿ ಆರಂಭಿಸಿರುವ ತಾಲ್ಲೂಕಿನ ಶಿಕ್ಷರೊಬ್ಬರಿಗೆ ಅವರ ಪದವೀಧರ ಮಕ್ಕಳು ಸಾಥ್ ನೀಡುತ್ತಿದ್ದು, ಬೆಳಿಗ್ಗೆ ೭ ಗಂಟೆಗೆ ಮನೆಯಿಂದ ಹೊರಡುವ ಈ ಕುಟುಂಬ ಗಣತಿ ಮುಗಿಸಿ ಮನೆಗೆ ತೆರಳುವಷ್ಟರಲ್ಲಿ ಸಂಜೆಯಾಗಿರುತ್ತದೆ. ಮತ್ತೊಬ್ಬ ಶಿಕ್ಷಕಿ ತನ್ನ ಹಳೆಯ ಶಿಷ್ಯರ ನೆರವು ಪಡೆದರೆ ಮತ್ತೊಂದು ಕಡೆ ಪತಿ ಪತ್ನಿಯ ಪರದಾಟ ನೋಡಲಾಗದೆ ಗಣತಿಗೆ ಇಳಿದಿದ್ದಾರೆ.

ಈ ಮಧ್ಯ ೩ ಜನರಿರುವ ಒಂದು ಮನೆಗೆ ಗಣತಿಗೆ ಹೋದರೆ, ಅಲ್ಲಿ ೩ ಆಹಾರ ಪಡಿತರ ಚೀಟಿಗಳು ಎದುರಾಗಿದ್ದು, ಮೂವರೂ ಬೇರೆ ಬೇರೆ ಕುಟುಂಬ ಎನ್ನುವುದನ್ನು ಕೇಳಿ ಗಣತಿದಾರರು ಮೂರ್ಛೆ ಬೀಳುವುದೊಂದೇ ಬಾಕಿಯಾಗಿದೆ. ವಿದ್ಯುತ್ ಮೀಟರ್ ಎಷ್ಟಿದೆ ಎಂದರೆ ಇರುವುದೊಂದೆ. ಮೀಟರ್‌ಗೆ ಬಣ್ಣ ಬಳಿಯಲಾಗಿದ್ದು, ವಿದ್ಯುತ್ ಬಿಲ್ ಕಾಣೆಯಾಗಿದೆ ಎಂಬ ಸಿದ್ಧ ಉತ್ತರ ಎದುರಾದಾಗ ಕಕ್ಕಾ ಬಿಕ್ಕಿಯಾಗುವ ಸಂಗತಿ ಶಿಕ್ಷಕರದ್ದಾಗಿದೆ. ಇಂತಹ ಸಂಗತಿಗಳೇ ಅನೇಕ ಮನೆಗಳಲ್ಲಿ ಕಂಡುಬರುತ್ತಿದೆ ಎನ್ನುತ್ತಾರೆ ಶಿಕ್ಷಕರು.

ಪ್ರಾಥಮಿಕ ಶಿಕ್ಷಕರಿಗೆ ಗಣತಿ ಮಾಡುವುದು ಕಡ್ಡಾಯ ಎಂದು ಸರ್ಕಾರ ಫಾರ್ಮಾನು ಹೊರಡಿಸಿದ್ದರೂ ತಾಲ್ಲೂಕು ಶಿಕ್ಷಕರ ಸಂಘದ ಪದಾಧಿಕಾರಿಗಾಳ್ಯಾರೂ ಗಣತಿ ಕಾರ್ಯದಲ್ಲಿ ಭಾಗಿಯಾಗದೇ ಇರುವ ಅಚ್ಚರಿಯ ಸಂಗತಿಯೂ ಬೆಳಕಿಗೆ ಬಂದಿದೆ.

ಹೀಗಿರುವಾಗ ಅ.೧೨ರೊಳಗೆ ನಿಗದಿತ ಅವಧಿಯಲ್ಲಿ ಸಮೀಕ್ಷೆಯನ್ನು ಮುಗಿಸುವ ಬಗೆ ಹೇಗೆ ಎಂಬುದು ಪ್ರತಿಯೊಬ್ಬ ಗಣತಿದಾರ ಶಿಕ್ಷಕರ ಅಳಲಾಗಿದೆ. ಜತೆಗೆ ಎರಡನೇ ಹಂತದಲ್ಲಿ ಗಣತಿ ಕಾರ್ಯಕ್ಕೆ ನಿಯೋಜನೆಗೊಂಡ ಶಿಕ್ಷಕರಿಗೆ ಯಾವುದೇ ತರಬೇತಿಯೂ ಇಲ್ಲವಾಗಿದೆ.

ಆಂದೋಲನ ಡೆಸ್ಕ್

Recent Posts

ಬಿಹಾರದ ನಳಂದಾ ದೇಗುಲದಲ್ಲಿ ಕಾಲ್ತುಳಿತ: 8 ಮಂದಿ ಸಾವು

ನಳಂದಾ: ಬಿಹಾರದ ನಳಂದಾ ಜಿಲ್ಲೆಯ ಶೀತಲಾ ದೇವಸ್ಥಾನದ ಧಾರ್ಮಿಕ ಸಮಾರಂಭವೊಂದರಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಎಂಟು ಮಂದಿ ಮಹಿಳೆಯರು ಸಾವನ್ನಪ್ಪಿದ್ದಾರೆ.…

41 seconds ago

ಕೌಟುಂಬಿಕ ಕಲಹ: ಬೆಂಗಳೂರಿನಲ್ಲಿ ಟೆಕ್ಕಿ ದಂಪತಿ ಆತ್ಮಹತ್ಯೆ

ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಟೆಕ್ಕಿ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊತ್ತನೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ…

21 mins ago

ಉಜ್ವಲ ಹೋಯ್ತು, ಈಗ ಸೌದೆ ಯೋಜನೆ ಸ್ಟಾರ್ಟ್‌: ಡಿಸಿಎಂ ಡಿ.ಕೆ.ಶಿವಕುಮಾರ್‌ ವಾಗ್ದಾಳಿ

ಬೆಂಗಳೂರು: ಸೌದೆ ಮುಕ್ತ ಭಾರತ ಮಾಡ್ತೀವಿ ಎಂದು ಹೇಳಿ ಎಲ್ಲಾ ಕಡೆ ಗ್ಯಾಸ್‌ ತಂದರು. ಹಳ್ಳಿಗಳಲ್ಲೂ ಗ್ಯಾಸ್‌ ಬಂತು. ಈಗ…

50 mins ago

ಇರಾನ್‌ನ ಇಸ್ಫಹಾನ್‌ನಲ್ಲಿ ಸರಣಿ ಸ್ಫೋಟ

ಟೆಹರಾನ್:‌ ಇರಾನ್‌ ಮೇಲೆ ಅಮೇರಿಕಾ ಹಾಗೂ ಇಸ್ರೇಲ್‌ ತನ್ನ ಪ್ರತೀಕಾರ ಮುಂದುವರಿಸಿದೆ. ಇರಾನ್‌ನ ಇಸ್ಪಹಾನ್‌ ನಗರದಲ್ಲಿರುವ ಮಿಲಿಟರಿ ಕೇಂದ್ರದ ಮೇಲೆ…

1 hour ago

ಓದುಗರ ಪತ್ರ: ಟೋಲ್ ದರ ಹೆಚ್ಚಳ ಗಾಯದ ಮೇಲೆ ಬರೆ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಏಪ್ರಿಲ್‌ನಿಂದ ಅನ್ವಯವಾಗುವಂತೆ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ದರವನ್ನು ೩೦೦೦ ರೂ.ನಿಂದ ೩೦೭೫ ರೂ. ಗೆ ಏರಿಸಿರುವುದು…

2 hours ago

ಓದುಗರ ಪತ್ರ: ಐಪಿಎಲ್ ಟಿಕೆಟ್‌ಗೆ ಗೋಗರೆಯುತ್ತಿರುವ ಶಾಸಕರು

ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್ ಪಂದ್ಯಕ್ಕೆ ಟಿಕೆಟ್ ಕೊಡಿಸಿ ಎಂದು ಎಲ್ಲಾ ಪಕ್ಷಗಳ ಕೆಲವು ಶಾಸಕರು…

2 hours ago