Andolana originals

ರಿಲ್ಯಾಕ್ಸ್ ಮೂಡ್‌ನಲ್ಲಿ ದಸರಾ ಗಜಪಡೆ

* ಜಿ.ತಂಗಂ ಗೋಪಿನಾಥಂ

ಮೈಸೂರು: ಮರಕ್ಕೆ ತನ್ನ ದಂತವಿರಿಸಿ ಕೆಲ ಕಾಲ ನಿದ್ದೆಗೆ ಜಾರಿದ ಅಭಿಮನ್ಯು.. ಮಾವುತನ ಕಡೆ ಮುಖ ಮಾಡಿ ಘೀಳಿಡುತ್ತಿದ್ದ ಭೀಮ.. ಪಕ್ಕದಲ್ಲೇ ಹಾದು ಹೋಗುತ್ತಿದ್ದ ರೈಲನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದ ಗೋಪಿ ಮತ್ತು ರೋಹಿತ್.. ದಣಿವಾರಿಸಿ ಕೊಳ್ಳುತ್ತಿದ್ದ ಧನಂಜಯ.. ಫೋಟೊಗೆ ಪೋಸ್ ಕೊಡುತ್ತಿದ್ದ ಕಂಜನ್.. ಎಲ್ಲವನ್ನೂ ಗಮನಿಸುತ್ತಿದ್ದ ಏಕಲವ್ಯ..! ಇದು ನಾಡಹಬ್ಬ ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಕಾಡಿನಿಂದ ಅರಮನೆ ನಗರಿ ಮೈಸೂರಿಗೆ ಆಗಮಿಸಿರುವ ಮೊದಲ ತಂಡದ ಗಜಪಡೆ ಗುರುವಾರ ಅರಣ್ಯ ಭವನದ ಆವರಣದಲ್ಲಿ ರಿಲ್ಯಾಕ್ಸ್ ಮೂಡಿಗೆ ಜಾರಿದ್ದ ಸುಂದರ ದೃಶ್ಯಗಳು.

ಬುಧವಾರವಷ್ಟೇ ಹುಣಸೂರು ತಾಲ್ಲೂಕಿನ ನಾಗರ ಹೊಳೆರಾಷ್ಟ್ರೀಯ ಉದ್ಯಾನವನದವೀರನಹೊಸಹಳ್ಳಿಯಿಂದ ಗಜಪಯಣ ಕಾರ್ಯಕ್ರಮ ಮುಗಿಸಿ ಅಲ್ಲಿಂದ ಲಾರಿಯಲ್ಲಿ ಬಂದ 9 ಆನೆಗಳು ನಗರದ ಅಶೋಕಪುರಂನ ಅರಣ್ಯ ಭವನದಲ್ಲಿ ಠಿಕಾಣಿ ಹೂಡಿದ್ದು, ಬಹುದೂರದಿಂದ ಪ್ರಯಾಣ ಮಾಡಿದ್ದ ಆನೆಗಳು ಬೆಳಗಿನ ಸ್ನಾನ ಮುಗಿಸಿ ಹಸಿ ಹುಲ್ಲು, ಕಾಯಿ ಬೆಲ್ಲ ಮೆಲ್ಲುತ್ತಾ ಸೊಂಡಿಲು ಬೀಸಿ ರಿಲ್ಯಾಕ್ಸ್ ಮೂಡ್‌ ಗೆ ಜಾರಿದ್ದವು.

ಮಾವುತ, ಕಾವಾಡಿಗರು ತಮ್ಮ ತಮ್ಮ ಆನೆಗಳಿಗೆ ನೀರು ಕುಡಿಸಿ, ಹುಲ್ಲು ಹಾಕುವ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. 9 ಆನೆಗಳ ಮಾವುತ, ಕಾವಾಡಿಗರು, ಪ್ರತಿ ಆನೆ ಯೊಂದಿಗೆ ಬಂದಿರುವ ಸಹಾಯಕರು ಅರಣ್ಯ ಇಲಾಖೆ ನೀಡಿ ರುವ ನಿವೇಶನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆಗಾಗ ಎದ್ದು ಆನೆಗಳ ಚಲನವಲನಗಳನ್ನು ಗಮನಿಸುತ್ತಿದ್ದರ

ನಿದ್ದೆಗೆ ಜಾರಿದ್ದ ‘ಅಭಿಮನ್ಯು’!: ಗಜಪಡೆಗಳ ನಾಯಕನೆಂದೇ ಗುರುತಿಸಿಕೊಂಡಿರುವ ಅಂಬಾರಿ ಆನೆ ಅಭಿಮನ್ಯು ಆನೆಯನ್ನು ಅರಣ್ಯ ಭವನ ಆವರಣದ ಮೂಲೆಯಲ್ಲಿ ಇರಿಸಲಾಗಿದ್ದು, ಪಕ್ಕದಲ್ಲೇ ಹೆಣ್ಣಾನೆಗಳಾದ ವರಲಕ್ಷ್ಮೀ ಹಾಗೂ ಲಕ್ಷ್ಮೀ ಆನೆಗಳನ್ನು ಒಂದೊಂದು ಕಡೆ ಕಟ್ಟಲಾಗಿತ್ತು. ಅಭಿಮನ್ಯು ಮರಗಳಿಗೆ ತನ್ನ ದಂತವಿರಿಸಿ ಕೆಲ ಕಾಲ ನಿದ್ದೆಗೆ ಜಾರಿದ್ದ. ಇನ್ನು ಎರಡನೇ ಬಾರಿ ದಸರಾದಲ್ಲಿ ಭಾಗಿಯಾಗಲು ಬಂದಿರುವ ದುಬಾರೆ ಶಿಬಿರದ ‘ಕಂಜನ್’ ಆನೆ ಶಾಂತ ಸ್ವರೂಪಿಯಾಗಿ ತನ್ನನ್ನು ನೋಡಲು ಬಂದವರೊಂದಿಗೆ ಫೋಟೋಗೆ ಪೋಸ್ ಕೊಡುತ್ತಿದ್ದನು.

ಜನರ ನಡೆ ಗಜಪಡೆಯ ಕಡೆ…: ಅರಣ್ಯ ಭವನದೊಳಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತಾದರೂ ಅರಣ್ಯ ಭವನದ ಆವರಣ ಶನಿವಾರ ಮೃಗಾಲಯವಾಗಿ ಮಾರ್ಪಟಿತ್ತು. ಗಜಪಡೆಯನ್ನು ಕಣ್ಣುಂಬಿಕೊಳ್ಳಲು ಜನರು ಅನ್ಯ ಮಾರ್ಗದಿಂದ ಒಳ ಬಂದು ಅಂಬಾರಿ ಆನೆ ಅಭಿಮನ್ಯು, ಹೊಸ ಆನೆ ಏಕಲವ್ಯ, ಭೀಮ, ರೋಹಿತ್, ಗೋಪಿ, ಕಂಜನ್, ಧನಂಜಯ, ಲಕ್ಷ್ಮೀ, ವರಲಕ್ಷ್ಮೀ ಆನೆಗಳನ್ನು ಹತ್ತಿರದಿಂದ ವೀಕ್ಷಿಸಿ ಖುಷಿಪಟ್ಟರು.

ಎಲ್ಲರ ಚಿತ್ತ ‘ಏಕಲವ್ಯ’ನತ್ತ…: ಮೊದಲ ಬಾರಿ ದಸರೆಯಲ್ಲಿ ಭಾಗವಹಿಸುತ್ತಿರುವ ಮತ್ತಿಗೋಡು ಶಿಬಿರದ 39 ವರ್ಷದ ಆನೆ ಏಕಲವ್ಯ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಆನೆಗಳನ್ನು ನೋಡಲು ಬಂದವರು ‘ಏಕಲವ್ಯ’ ಆನೆ ಯಾವುದು ಎಂದು ಮಾವುತ, ಕಾವಾಡಿಗರಲ್ಲಿ ವಿಚಾರಿಸುತ್ತಿದ್ದರು. ಏಕಲವ್ಯ ಶಾಂತ ಸ್ವರೂಪಿಯಾಗಿ ಹುಲ್ಲು ಮೇಯುತ್ತಾ ಕುತೂಹಲದಿಂದ ಎಲ್ಲವನ್ನೂ ಗಮನಿಸುತ್ತಿದ್ದ.

ಕೋಟ್ಸ್‌))

ಬೆಳಿಗ್ಗೆ ಆನೆಗಳಿಗೆ ಹಸಿ ಹುಲ್ಲು, ಒಣ ಹುಲ್ಲು, ಆಲದ ಸೊಪ್ಪು ನೀಡ ಲಾಗಿದೆ. ಎಲ್ಲ ಆನೆಗಳೂ ಆರೋಗ್ಯವಾಗಿದ್ದು, ವಾತಾವರಣಕ್ಕೆ ಒಗ್ಗಿ ಕೊಳ್ಳುತ್ತಿವೆ ಆ.23ರಂದು ದಸರಾ ಆನೆಗಳು ಅರಮನೆ ಪ್ರವೇಶ ಮಾಡಲಿವೆ.
-ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್.

ಆಂದೋಲನ ಡೆಸ್ಕ್

Recent Posts

ಇ-ಸ್ವತ್ತು ತಂತ್ರಾಂಶದಲ್ಲಿ ಬದಲಾವಣೆ : ತ್ವರಿತ ಸೇವೆಗೆ ಕ್ರಮ

ಬೆಂಗಳೂರು : ಇ-ಸ್ವತ್ತು 2.0 ತಂತ್ರಾಂಶದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಸಾರ್ವಜನಿಕರಿಗೆ ತ್ವರಿತ ಸೇವೆಯನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ…

3 hours ago

‘ವಿಮುಕ್ತಿ’ ಮಾದಕ ವಸ್ತು ಮುಕ್ತ ಮೈಸೂರಿನತ್ತ ಹೆಜ್ಜೆ : ಪೋಸ್ಟರ್ ಬಿಡುಗಡೆ ಮಾಡಿದ ಗೃಹ ಸಚಿವ

ಮೈಸೂರು : ಡ್ರಗ್ಸ್ ಮುಕ್ತ ಮೈಸೂರು ಮಾಡಲು ಮುಂದಾಗಿರುವ ಮೈಸೂರು ನಗರ ಪೊಲೀಸರು ‘ವಿಮುಕ್ತಿ’ ಮಾದಕ ವಸ್ತು ಮುಕ್ತ ಮೈಸೂರಿನತ್ತ…

4 hours ago

ರಂಗನತಿಟ್ಟು ಬಳಿ NH-275 ಹೆದ್ದಾರಿ : ವನ್ಯಜೀವಿ ಸುರಕ್ಷತೆಗೆ ನಿರ್ದೇಶನ

ಮಂಡ್ಯ : ಮೈಸೂರು ಬೈಪಾಸ್ ಮಾಡುವ ಗುರಿಯನ್ನು ಹೊಂದಿರುವ ಎನ್‌ಎಚ್ 275ರ ವಿಸ್ತೃತ ಮಾರ್ಗವಾದ ಬೆಂಗಳೂರು-ಕುಶಾಲನಗರ ಹೆದ್ದಾರಿಯು ರಂಗನತಿಟ್ಟು ಪಕ್ಷಿಧಾಮದ…

4 hours ago

ಕಿಡಿಗೇಡಿಗಳಿಂದ ಬೆಂಕಿ : ಐದಾರು ಎಕರೆ ಭೂ ಪ್ರದೇಶಕ್ಕೆ ಹಾನಿ

ಹಲಗೂರು : ಪ್ರತ್ಯೇಕ ಎರಡು ಕಡೆಗಳಲ್ಲಿ ಆಕಸ್ಮಿಕವಾಗಿ ಬೆಂಕಿ ಬಿದ್ದು ಐದಾರು ಎಕರೆ ಭೂ ಪ್ರದೇಶದಲ್ಲಿ ಸಣ್ಣಪುಟ್ಟ ಗಿಡಗಳು ಸುಟ್ಟು…

4 hours ago

ಮೈಸೂರು ಮೃಗಾಲಯದ ಜೀಬ್ರಾ ʼಪ್ರಾಚಿʼ ಸಾವು

ಮೈಸೂರು : ಶ್ರೀ  ಚಾಮರಾಜೇಂದ್ರ ಮೃಗಾಲಯದ ಹೆಣ್ಣು ಜೀಬ್ರಾ ‘ಪ್ರಾಚಿ’ ಅನಾರೋಗ್ಯದಿಂದ ಶನಿವಾರ ಬೆಳಿಗ್ಗೆ 11ರ ಸುಮಾರಿಗೆ ಸಾವನ್ನಪ್ಪಿದೆ. ಅದಕ್ಕೆ…

5 hours ago

ಭಾರತ-ಯುಎಸ್ ವ್ಯಾಪಾರ ಒಪ್ಪಂದ ಅಧಿಕೃತ ; ಶೇ.18ಕ್ಕೆ ಸುಂಕ ಇಳಿಕೆ

ವಾಷಿಂಗ್ಟನ್ : ಭಾರತ ಮತ್ತು ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಚೌಕಟ್ಟನ್ನು ತಲುಪಿವೆ ಎಂದು ಘೋಷಿಸಿವೆ. ಇದರ ಅಡಿಯಲ್ಲಿ ಭಾರತ…

5 hours ago