Andolana originals

ರಿಲ್ಯಾಕ್ಸ್ ಮೂಡ್‌ನಲ್ಲಿ ದಸರಾ ಗಜಪಡೆ

* ಜಿ.ತಂಗಂ ಗೋಪಿನಾಥಂ

ಮೈಸೂರು: ಮರಕ್ಕೆ ತನ್ನ ದಂತವಿರಿಸಿ ಕೆಲ ಕಾಲ ನಿದ್ದೆಗೆ ಜಾರಿದ ಅಭಿಮನ್ಯು.. ಮಾವುತನ ಕಡೆ ಮುಖ ಮಾಡಿ ಘೀಳಿಡುತ್ತಿದ್ದ ಭೀಮ.. ಪಕ್ಕದಲ್ಲೇ ಹಾದು ಹೋಗುತ್ತಿದ್ದ ರೈಲನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದ ಗೋಪಿ ಮತ್ತು ರೋಹಿತ್.. ದಣಿವಾರಿಸಿ ಕೊಳ್ಳುತ್ತಿದ್ದ ಧನಂಜಯ.. ಫೋಟೊಗೆ ಪೋಸ್ ಕೊಡುತ್ತಿದ್ದ ಕಂಜನ್.. ಎಲ್ಲವನ್ನೂ ಗಮನಿಸುತ್ತಿದ್ದ ಏಕಲವ್ಯ..! ಇದು ನಾಡಹಬ್ಬ ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಕಾಡಿನಿಂದ ಅರಮನೆ ನಗರಿ ಮೈಸೂರಿಗೆ ಆಗಮಿಸಿರುವ ಮೊದಲ ತಂಡದ ಗಜಪಡೆ ಗುರುವಾರ ಅರಣ್ಯ ಭವನದ ಆವರಣದಲ್ಲಿ ರಿಲ್ಯಾಕ್ಸ್ ಮೂಡಿಗೆ ಜಾರಿದ್ದ ಸುಂದರ ದೃಶ್ಯಗಳು.

ಬುಧವಾರವಷ್ಟೇ ಹುಣಸೂರು ತಾಲ್ಲೂಕಿನ ನಾಗರ ಹೊಳೆರಾಷ್ಟ್ರೀಯ ಉದ್ಯಾನವನದವೀರನಹೊಸಹಳ್ಳಿಯಿಂದ ಗಜಪಯಣ ಕಾರ್ಯಕ್ರಮ ಮುಗಿಸಿ ಅಲ್ಲಿಂದ ಲಾರಿಯಲ್ಲಿ ಬಂದ 9 ಆನೆಗಳು ನಗರದ ಅಶೋಕಪುರಂನ ಅರಣ್ಯ ಭವನದಲ್ಲಿ ಠಿಕಾಣಿ ಹೂಡಿದ್ದು, ಬಹುದೂರದಿಂದ ಪ್ರಯಾಣ ಮಾಡಿದ್ದ ಆನೆಗಳು ಬೆಳಗಿನ ಸ್ನಾನ ಮುಗಿಸಿ ಹಸಿ ಹುಲ್ಲು, ಕಾಯಿ ಬೆಲ್ಲ ಮೆಲ್ಲುತ್ತಾ ಸೊಂಡಿಲು ಬೀಸಿ ರಿಲ್ಯಾಕ್ಸ್ ಮೂಡ್‌ ಗೆ ಜಾರಿದ್ದವು.

ಮಾವುತ, ಕಾವಾಡಿಗರು ತಮ್ಮ ತಮ್ಮ ಆನೆಗಳಿಗೆ ನೀರು ಕುಡಿಸಿ, ಹುಲ್ಲು ಹಾಕುವ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. 9 ಆನೆಗಳ ಮಾವುತ, ಕಾವಾಡಿಗರು, ಪ್ರತಿ ಆನೆ ಯೊಂದಿಗೆ ಬಂದಿರುವ ಸಹಾಯಕರು ಅರಣ್ಯ ಇಲಾಖೆ ನೀಡಿ ರುವ ನಿವೇಶನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆಗಾಗ ಎದ್ದು ಆನೆಗಳ ಚಲನವಲನಗಳನ್ನು ಗಮನಿಸುತ್ತಿದ್ದರ

ನಿದ್ದೆಗೆ ಜಾರಿದ್ದ ‘ಅಭಿಮನ್ಯು’!: ಗಜಪಡೆಗಳ ನಾಯಕನೆಂದೇ ಗುರುತಿಸಿಕೊಂಡಿರುವ ಅಂಬಾರಿ ಆನೆ ಅಭಿಮನ್ಯು ಆನೆಯನ್ನು ಅರಣ್ಯ ಭವನ ಆವರಣದ ಮೂಲೆಯಲ್ಲಿ ಇರಿಸಲಾಗಿದ್ದು, ಪಕ್ಕದಲ್ಲೇ ಹೆಣ್ಣಾನೆಗಳಾದ ವರಲಕ್ಷ್ಮೀ ಹಾಗೂ ಲಕ್ಷ್ಮೀ ಆನೆಗಳನ್ನು ಒಂದೊಂದು ಕಡೆ ಕಟ್ಟಲಾಗಿತ್ತು. ಅಭಿಮನ್ಯು ಮರಗಳಿಗೆ ತನ್ನ ದಂತವಿರಿಸಿ ಕೆಲ ಕಾಲ ನಿದ್ದೆಗೆ ಜಾರಿದ್ದ. ಇನ್ನು ಎರಡನೇ ಬಾರಿ ದಸರಾದಲ್ಲಿ ಭಾಗಿಯಾಗಲು ಬಂದಿರುವ ದುಬಾರೆ ಶಿಬಿರದ ‘ಕಂಜನ್’ ಆನೆ ಶಾಂತ ಸ್ವರೂಪಿಯಾಗಿ ತನ್ನನ್ನು ನೋಡಲು ಬಂದವರೊಂದಿಗೆ ಫೋಟೋಗೆ ಪೋಸ್ ಕೊಡುತ್ತಿದ್ದನು.

ಜನರ ನಡೆ ಗಜಪಡೆಯ ಕಡೆ…: ಅರಣ್ಯ ಭವನದೊಳಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತಾದರೂ ಅರಣ್ಯ ಭವನದ ಆವರಣ ಶನಿವಾರ ಮೃಗಾಲಯವಾಗಿ ಮಾರ್ಪಟಿತ್ತು. ಗಜಪಡೆಯನ್ನು ಕಣ್ಣುಂಬಿಕೊಳ್ಳಲು ಜನರು ಅನ್ಯ ಮಾರ್ಗದಿಂದ ಒಳ ಬಂದು ಅಂಬಾರಿ ಆನೆ ಅಭಿಮನ್ಯು, ಹೊಸ ಆನೆ ಏಕಲವ್ಯ, ಭೀಮ, ರೋಹಿತ್, ಗೋಪಿ, ಕಂಜನ್, ಧನಂಜಯ, ಲಕ್ಷ್ಮೀ, ವರಲಕ್ಷ್ಮೀ ಆನೆಗಳನ್ನು ಹತ್ತಿರದಿಂದ ವೀಕ್ಷಿಸಿ ಖುಷಿಪಟ್ಟರು.

ಎಲ್ಲರ ಚಿತ್ತ ‘ಏಕಲವ್ಯ’ನತ್ತ…: ಮೊದಲ ಬಾರಿ ದಸರೆಯಲ್ಲಿ ಭಾಗವಹಿಸುತ್ತಿರುವ ಮತ್ತಿಗೋಡು ಶಿಬಿರದ 39 ವರ್ಷದ ಆನೆ ಏಕಲವ್ಯ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಆನೆಗಳನ್ನು ನೋಡಲು ಬಂದವರು ‘ಏಕಲವ್ಯ’ ಆನೆ ಯಾವುದು ಎಂದು ಮಾವುತ, ಕಾವಾಡಿಗರಲ್ಲಿ ವಿಚಾರಿಸುತ್ತಿದ್ದರು. ಏಕಲವ್ಯ ಶಾಂತ ಸ್ವರೂಪಿಯಾಗಿ ಹುಲ್ಲು ಮೇಯುತ್ತಾ ಕುತೂಹಲದಿಂದ ಎಲ್ಲವನ್ನೂ ಗಮನಿಸುತ್ತಿದ್ದ.

ಕೋಟ್ಸ್‌))

ಬೆಳಿಗ್ಗೆ ಆನೆಗಳಿಗೆ ಹಸಿ ಹುಲ್ಲು, ಒಣ ಹುಲ್ಲು, ಆಲದ ಸೊಪ್ಪು ನೀಡ ಲಾಗಿದೆ. ಎಲ್ಲ ಆನೆಗಳೂ ಆರೋಗ್ಯವಾಗಿದ್ದು, ವಾತಾವರಣಕ್ಕೆ ಒಗ್ಗಿ ಕೊಳ್ಳುತ್ತಿವೆ ಆ.23ರಂದು ದಸರಾ ಆನೆಗಳು ಅರಮನೆ ಪ್ರವೇಶ ಮಾಡಲಿವೆ.
-ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್.

ಆಂದೋಲನ ಡೆಸ್ಕ್

Recent Posts

ಅಧಿವೇಶನವನ್ನು ಒಂದು ವಾರ ವಿಸ್ತರಿಸಲು ಮನವಿ : ಸ್ಪೀಕರ್‌ಗೆ ಪತ್ರ ಬರೆದ ಪ್ರತಿಪಕ್ಷ ನಾಯಕ ಆರ್‌.ಅಶೋಕ

ಬೆಳಗಾವಿ : ಉತ್ತರ ಕರ್ನಾಟಕದ ಸಮಸ್ಯೆ, ಕಾನೂನು ಸುವ್ಯವಸ್ಥೆಯಲ್ಲಿ ಲೋಪ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಇನ್ನೂ ದೀರ್ಘ ಚರ್ಚೆ…

7 hours ago

ಮೊಟ್ಟೆಯಲ್ಲಿ ಕ್ಯಾನ್ಸರ್‌ ಅಂಶ : ವರದಿ ನೀಡಲು ಸೂಚಿಸಿದ ಆರೋಗ್ಯ ಇಲಾಖೆ

ಬೆಳಗಾವಿ : ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿದೆ ಎಂಬ ವಿಚಾರದ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿ ವರದಿ ನೀಡಲು ಇಲಾಖೆಗೆ ಸೂಚಿಸಲಾಗಿದೆ ಎಂದು…

8 hours ago

ಹವಾಮಾನ ವೈಪರೀತ್ಯ : ವಿಮಾನದಲ್ಲೇ ಸಿಲುಕಿದ್ದ ಕರ್ನಾಟಕದ 21 ಶಾಸಕರು ಮತ್ತು 7 ಸಚಿವರು

ಹೊಸದಿಲ್ಲಿ : ದಿಲ್ಲಿಯಲ್ಲಿ ಉಂಟಾದ ದಟ್ಟವಾದ ಹೊಗೆ ಹಾಗೂ ತೀವ್ರ ಹವಾಮಾನ ವೈಪರೀತ್ಯದಿಂದಾಗಿ ಕರ್ನಾಟಕದ 21 ಶಾಸಕರು ಮತ್ತು 7…

9 hours ago

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ : ದಿಲ್ಲಿ ಪೊಲೀಸರ ನೋಟಿಸ್‌ಗೆ ಕಾಲಾವಕಾಶ ಕೋರುವೆ ಎಂದ ಡಿಕೆಶಿ

ಹೊಸದಿಲ್ಲಿ : ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ನೋಟೀಸ್ʼಗೆ ಉತ್ತರ ನೀಡಲು ಕಾಲಾವಕಾಶ ಕೋರುವೆ ಎಂದು ಡಿಸಿಎಂ…

9 hours ago

ಆಕಸ್ಮಿಕ ಬೆಂಕಿ : ಯಮಹಾ ಬೈಕ್‌ ಸಾಗಿಸುತ್ತಿದ್ದ ಲಾರಿ ಭಸ್ಮ : ಸುಟ್ಟು ಕರಕಲಾದ 40ಬೈಕ್‌ಗಳು

ಬಳ್ಳಾರಿ : ನಗರದಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಲಾರಿಯಲ್ಲಿ ಸಾಗಿಸುತ್ತಿದ್ದ ಯಮಹಾ ಕಂಪನಿಯ 40 ಬೈಕ್‌ಗಳು ಸಂಪೂರ್ಣವಾಗಿ ಸುಟ್ಟು…

9 hours ago

ಆಸ್ಟ್ರೇಲಿಯಾದಲ್ಲಿ ಉಗ್ರರ ದಾಳಿ : ದಿಲ್ಲಿ, ಬೆಂಗಳೂರಿನಲ್ಲಿ ಹೈ ಅಲರ್ಟ್‌

ಬೆಂಗಳೂರು : ಆಸ್ಪ್ರೇಲಿಯಾದ ಬೀಚ್‌ನಲ್ಲಿ ಭಾನುವಾರ ಮಧ್ಯಾಹ್ನ ಭೀಕರ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಪೊಲೀಸರು ಸೇರಿದಂತೆ 12 ಮಂದಿ…

11 hours ago