ಓದುಗರ ಪತ್ರ
ನಿವೃತ್ತ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್ ಅವರನ್ನು ಪತ್ನಿ ಮತ್ತು ಪುತ್ರಿಯೇ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಅಂತಹ ಕಾರಣ ಅವರಿಗೇನಿತ್ತು ಎಂಬುದು ಬಯಲಾಗಬೇಕಿದೆ. ಆಸ್ತಿ ವಿಚಾರ, ಕುಟುಂಬದಲ್ಲಿ ಕಲಹ ಅಥವಾ ಓಂ ಪ್ರಕಾಶ್ ಅವರ ನಡವಳಿಕೆಯಲ್ಲಿ ವಿಲಕ್ಷಣವೇನಾದರೂ ಇತ್ತೆ? ಅವರ ಪತ್ನಿ ಈಗಾಗಲೇ ಹಲವು ಬಾರಿ ಪೊಲೀಸ್ ಅಧಿಕಾರಿಗಳ
ವಾಟ್ಸಾಪ್ ಗುಂಪಿನಲ್ಲಿ ಪತಿಯ ನಡವಳಿಕೆ ಬಗ್ಗೆ ಆಕ್ಷೇಪ ಮಾಡಿದ್ದರು.
ಇದನ್ನೂ ಓದಿ:- ಓದುಗರ ಪತ್ರ: ಸರ್ಕಾರವೇ ಪ್ಲಾಸ್ಟಿಕ್ ಉತ್ಪಾದನೆ ನಿಷೇಧಿಸಲಿ
ಓಂ ಪ್ರಕಾಶ್ ಅವರೇ ಪುತ್ರಿಯ ಜೊತೆ ನನಗೂ ವಿಷ ಬೆರೆಸಿದ ಆಹಾರ ನೀಡಿ ಪರೋಕ್ಷವಾಗಿ ಕೊಲೆ ಮಾಡುವ ಸಂಚು ನಡೆಸಿದ್ದರು ಎಂದು ದೂರಿದ್ದಾರೆ ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಆದರೆ, ಓಂ ಪ್ರಕಾಶ್ ಅವರ ಪುತ್ರಿ ಪೊಲೀಸರ ವಿಚಾರಣೆಗೆ ಸೂಕ್ತವಾಗಿ ಸಹಕರಿಸುತ್ತಿಲ್ಲ ಎನ್ನಲಾಗಿದೆ. ಓಂ ಪ್ರಕಾಶ್ ಅವರ ಹತ್ಯೆಗೆ ಈ ತಾಯಿ ಮತ್ತು ಮಗಳ ಬಳಿ ಏನಾದರೂ ಪುರಾವೆ ಇದ್ದರೆ ಪೊಲೀಸರಿಗೆ ಸಲ್ಲಿಸಬಹುದು ಅಲ್ಲವೇ? ಆದರೆ, ವಿಚಾರಣೆಗೆ ಪ್ರತಿರೋಧಿಸುವುದು ಅವರ ಬಗ್ಗೆ ಸಹಜವಾಗಿ ಅನುಮಾನ ಹುಟ್ಟುಹಾಕುತ್ತದೆ. ಆದರೆ, ಕಾರಣ ಏನೇ ಆಗಿರಲಿ, ಪ್ರಾಣ ತೆಗೆಯುವುದನ್ನು ಒಪ್ಪುವುದು ಕಷ್ಟ ಸಾಧ್ಯ.
-ಆರ್.ವಿ.ಅನ್ವಿತ್, ಕುವೆಂಪುನಗರ, ಮೈಸೂರು.
ಮೈಸೂರು: ಫಲವತ್ತಾದ ಕೃಷಿ ಭೂಮಿಯನ್ನು ಉಳಿಸಿಕೊಳ್ಳುವ ಆಕಾಂಕ್ಷೆ ಪ್ರಭುತ್ವಕ್ಕೆ ಇರಬೇಕು. ಭೂಮಿ ನೀಡುವ ರೈತರ ಬದುಕಿನ ಹೊಣೆಗಾರಿಕೆಯನ್ನು ಸರ್ಕಾರ ವಹಿಸಿಕೊಳ್ಳುತ್ತದೆಯೇ…
ಮೈಸೂರು : ಶಾಲಾ ಶಿಕ್ಷಣ ಇಲಾಖೆಯ ಜಿಪಿಎಸ್ಟಿಆರ್ ಹಾಗೂ ಎಚ್ಎಸ್ಟಿಆರ್ ಶಿಕ್ಷಕರ ನೇಮಕಾತಿಯಲ್ಲಿ ಕನ್ನಡ ಭಾಷಾ ಶಿಕ್ಷಕರ ಹುದ್ದೆಗಳನ್ನು ಪ್ರತ್ಯೇಕವಾಗಿ…
ಬೆಂಗಳೂರು: ಗುಟ್ಕಾ ನಿಷೇಧ ಆದೇಶವನ್ನು ರಾಜ್ಯ ಸರ್ಕಾರ ಶೀಘ್ರದಲ್ಲೇ ವಾಪಸ್ ಪಡೆಯುವ ಸಾಧ್ಯತೆಯಿದೆ. ಆಡಳಿತರೂಢ ಕಾಂಗ್ರೆಸ್ ಶಾಸಕರಿಂದಲೇ ಸರ್ಕಾರದ ನಿರ್ಧಾರಕ್ಕೆ…
ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲ ತಾಲ್ಲೂಕಿನ ಶಿವಗಂಗೆ ಬೆಟ್ಟದಲಲಿ ಟ್ರೆಕ್ಕಿಂಗ್ಗೆ ತೆರಳಿ ನಾಪತ್ತೆಯಾಗಿದ್ದ ಟೆಕ್ಕಿ ಟದ್ವೈತ್ಗಾಗಿ ನಡೆಸುತ್ತಿದ್ದ ಶೋಧ ಕಾರ್ಯಾಚರಣೆಗೆ…
ಬೆಂಗಳೂರು: ವಿಧಾನಸಭೆಯ ನೂತನ ಸ್ಪೀಕರ್ ಆಗಿ ಜಿ.ಎಸ್.ಪಾಟೀಲ್ ಸರ್ವಾನುಮತದಿಂದ ಆಯ್ಕೆಯಾದರು. ಸಂಪ್ರದಾಯದಂತೆ ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಸಿಎಂ ಡಿ.ಕೆ.ಶಿವಕುಮಾರ್…
ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದ ಸುರಂಗದೊಳಗೆ ಏಕಾಏಕಿ ನೀರು ಮತ್ತು ಮಣ್ಣಿನ ಅವಶೇಷಗಳು…