ದಾ. ರಾ. ಮಹೇಶ್
ವೀರನಹೊಸಹಳ್ಳಿ: ಮೆಕ್ಕೆಜೋಳಕ್ಕೆ ದರ ಕುಸಿತವಾಗಿರುವುದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಜನವರಿ ಪೂರ್ವದಲ್ಲಿ ಮೆಕ್ಕೆ ಜೋಳಕ್ಕೆ ಪ್ರತಿ ಕ್ವಿಂಟಾಲ್ಗೆ ೨,೫೦೦ ರೂ. ನಿಂದ ೩,೦೦೦ ರೂ. ವರೆಗೆ ಬೆಲೆ ಇತ್ತು. ಕಳೆದ ಮಾರ್ಚ್ನಲ್ಲಿ ೨,೮೦೦ ರೂ. ಇದ್ದ ಬೆಲೆ ಸದ್ಯ ಕ್ವಿಂಟಾಲ್ ಮೆಕ್ಕೆಜೋಳಕ್ಕೆ ೧,೪೦೦ರಿಂದ ೧,೫೦೦ ರೂ. ಗೆ ಕುಸಿದಿದೆ.
ಜೋಳದ ಶುಷ್ಕತೆ, ತೂಕ, ಗುಣಮಟ್ಟದ ಆಧಾರದಲ್ಲಿ ಬೆಲೆ ನಿರ್ಧಾರ ಆಗುತ್ತದೆ. ಹೆಚ್ಚು ದಿನ ಸಂಗ್ರಹಿಸಿಟ್ಟರೆ ಬೇಡಿಕೆ ಕಡಿಮೆ ಆಗ ಬಹುದು. ಇದೇ ರೀತಿ ದರ ಕಡಿಮೆಯಾಗುತ್ತಿದ್ದರೆ ಹಾಕಿದ ಬಂಡವಾಳವೂ ಕೈ ಸೇರುವುದಿಲ್ಲ. ಕನಿಷ್ಠ ೧,೮೦೦ರಿಂದ ೨,೦೦೦ ರೂ. ದೊರೆತರೆ ಮಾತ್ರ ಬೆಳೆಗಾರರಿಗೆ ಸ್ವಲ್ಪ ಆದಾಯ ಬರುತ್ತದೆ ಎಂದು ವಡಗೆರೆಯ ಕೃಷಿಕರು ಹೇಳುತ್ತಾರೆ. ಮಳೆಗೂ ಮೊದಲು ಧಾನ್ಯ ಕಟಾವು ಮಾಡಬೇಕು. ಮಳೆ ಹೆಚ್ಚಾದರೆ, ನಿರ್ವಹಣೆಯ ವೆಚ್ಚ ಏರುತ್ತದೆ. ಸಂಗ್ರಹಕ್ಕೂ ಹಿನ್ನಡೆಯಾಗು ತ್ತದೆ. ಇದನ್ನು ಅರಿತಿರುವ ಬೆಳೆಗಾರರು ಬೆಲೆ ಹೆಚ್ಚಾಗುವ ನಿರೀಕ್ಷೆಯಲ್ಲಿ ತೆನೆ ಕತ್ತರಿಸದೆ ಬಿಟ್ಟಿದ್ದಾರೆ.
ಮತ್ತೆ ಕೆಲವರು ಕೊಯ್ಲೋತ್ತರ ಕೆಲಸದಲ್ಲಿ ನಿರತರಾಗಿದ್ದಾರೆ. ತಾಲ್ಲೂಕಿನಲ್ಲಿ ಶೇ. ೨೫ರಷ್ಟು ಕೃಷಿಕರು ಜೋಳ ಮಾರಾಟ ಮಾಡಿದ್ದಾರೆ. ಶೇ. ೭೫ರಷ್ಟು ರೈತರು ಮಾರಾಟವನ್ನು ಮುಂದೂಡಿದ್ದಾರೆ. ನೆರೆ ರಾಜ್ಯದ ವ್ಯಾಪಾರಿಗಳು ಕೊಳ್ಳಲು ಮುಂದಾಗುತ್ತಿಲ್ಲ. ಆದರೆ, ಬಿಹಾರವು ತಮಿಳುನಾಡಿಗೆ ಕಡಿಮೆ ಬೆಲೆಗೆ ಜೋಳ ಪೂರೈಸುತ್ತಿದೆ. ಈ ಎಲ್ಲ ಕಾರಣಗಳಿಂದ ಮೆಕ್ಕೆಜೋಳ ಬೆಳೆಗಾರರು ಸ್ವಲ್ಪದಿನಗಳ ತನಕ ಕಾದು ನೋಡುವ ತಂತ್ರ ಅನುಸರಿಸಿದ್ದಾರೆ. ಸ್ಥಳೀಯ ಫಾರಂಗಳಿಗೆ ಮಾರಾಟ: ಕುಕ್ಕುಟೋದ್ಯಮಕ್ಕೆ ಪೂರೈಕೆ ಆಗುತ್ತಿದ್ದ ಮೆಕ್ಕೆಜೋಳಕ್ಕೆ ಬೇಡಿಕೆ ಹೆಚ್ಚಾಗಿದೆ. ಆದರೆ ಬೆಲೆ ಮಾತ್ರ ಹೆಚ್ಚುತ್ತಿಲ್ಲ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಕೋಳಿ ಸಾಕಣೆದಾರರು ಮೆಕ್ಕೆಜೋಳ ಕೊಳ್ಳಲು ಸ್ಥಳೀಯ ದಲ್ಲಾಳಿಗಳು ಬಿಡುತ್ತಿಲ್ಲ ಎಂದು ಸ್ಥಳಿಯ ರೈತರು ದೂರುತ್ತಾರೆ. ಹೀಗಾಗಿ ಯಾರೂ ಕೂಡ ಮೆಕ್ಕೆಜೋಳವನ್ನು ಕೊಳ್ಳಲು ಮುಂದಾಗುತ್ತಿಲ್ಲ. ಇದರಿಂದಾಗಿ ಸ್ಥಳೀಯ ಫಾರಂಗಳಿಗೆ ಧಾನ್ಯ ಮಾರಾಟ ಮಾಡಬೇಕಿದೆ ಎಂದು ರೈತ ಕೃಷ್ಣೇಗೌಡ ಹೇಳಿದರು.
ಸರ್ಕಾರ ಮೆಕ್ಕೆಜೋಳಕ್ಕೆ ಕನಿಷ್ಠ ೨,೫೦೦ ರೂ. ಬೆಂಬಲ ಬೆಲೆ ಘೋಷಿಸಬೇಕು. ಇದರಿಂದ ರೈತರ ಬದುಕು ಹಸನಾಗುತ್ತದೆ. -ರಾಜೇಗೌಡ (ಅಜ್ಜ), ರೈತರು
ನಮ್ಮ ಜಿಲ್ಲೆಯಲ್ಲಿ ಭತ್ತ, ರಾಗಿ ಹಾಗೂ ಹೆಸರುಕಾಳು ಗಳಿಗೆ ಮಾತ್ರ ಬೆಂಬಲ ಬೆಲೆಗೆ ಅವಕಾಶವಿದ್ದು, ಹುಣಸೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು ರೈತರು ಮೆಕ್ಕೆ ಜೋಳ ಬೆಳೆಯನ್ನು ಬೆಳೆಯುತ್ತಿದ್ದಾರೆ. ಮೆಕ್ಕೆಜೋಳಕ್ಕೂ ಸಹ ಸರ್ಕಾರ ಬೆಂಬಲ ಬೆಲೆ ನೀಡಬೇಕು ಎಂಬ ಒತ್ತಾಯವಿದೆ. ಇದಕ್ಕೆ ಸಂಬಂಽಸಿದಂತೆ ಹಿರಿಯ ಅಽಕಾರಿಗಳ ಗಮನಕ್ಕೆ ತರಲಾಗುವುದು. -ಹಂಪಣ್ಣ, ಕಾರ್ಯದರ್ಶಿ, ಎಪಿಎಂಸಿ, ಹುಣಸೂರು
ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಲ್ಗಳು ಮುಡಾ ಕಚೇರಿಯಲ್ಲಿರುವುದಕ್ಕಿಂತ ಸಚಿವ ಭೈರತಿ ಸುರೇಶ್ ಮನೆಯಲ್ಲೇ ಅಧಿಕವಾಗಿವೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ…
ಮಂಡ್ಯ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಭೂಮಿಯನ್ನು ಲಪಾಟಾಯಿಸಿದ್ದಾರೆ, ಅದಕ್ಕೆ ಆ ನಿವೇಶನಗಳನ್ನು ವಾಪಾಸ್ಸು ಮಾಡಿದ್ದಾರೆ ಎಂದು ಕೇಂದ್ರ…
ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…
ಬೆಂಗಳೂರು: ಮುಡಾ ಕೇಸ್ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…
ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್ಐಟಿ…
ಮೈಸೂರು: ಮುಡಾದಲ್ಲಿ ಹಗರಣ ನಡೆದಿದೆ ಎಂದು ಆರ್ಐಟಿ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇ.ಡಿ.ಗೆ ದೂರು ನೀಡಿದ್ದರು. ಈ ದೂರಿನ ಆಧಾರದ…