Andolana originals

ರಂಗನತಿಟ್ಟು ಸಮೀಪ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ: ಪರ-ವಿರೋಧ ಅಭಿಪ್ರಾಯ

ಪರಿಸರ ಪ್ರೇಮಿಗಳು, ಸಾರ್ವಜನಿಕರ ಪರ-ವಿರೋಧ ಅಭಿಪ್ರಾಯ

ಮಂಡ್ಯ: ಮೈಸೂರು ಬೈಪಾಸ್ ಮಾಡುವ ಗುರಿಯನ್ನು ಹೊಂದಿರುವ ಎನ್‌ಎಚ್ ೨೭೫ರ ವಿಸ್ತೃತ ಮಾರ್ಗವಾದ ಬೆಂಗಳೂರು-ಕುಶಾಲನಗರ ಹೆದ್ದಾರಿಯು ರಂಗನತಿಟ್ಟು ಪಕ್ಷಿಧಾಮದ ಪರಿಸರ ಸೂಕ್ಷ್ಮ ವಲಯದ ಮೂಲಕ ಹಾದುಹೋಗಲಿದ್ದು, ವನ್ಯಜೀವಿಗಳ ಮೇಲೆ ಯಾವುದೇ ಪರಿಣಾಮ ಬೀರದಂತೆ ಯೋಜನೆ ರೂಪಿಸಲು ಪರಿಸರ ಸೂಕ್ಷ ವಲಯದ ಅಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ.

ಬೆಂಗಳೂರು-ಕುಶಾಲನಗರ ಹೆದ್ದಾರಿ ನಿರ್ಮಾಣಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಽಕಾರ ಈ ಯೋಜನೆಗೆ ಅನುಮತಿ ಪಡೆದುಕೊಂಡಿದೆ. ಈ ಬಗ್ಗೆ ಸಾರ್ವಜನಿಕರು, ಪರಿಸರ ಪ್ರೇಮಿಗಳು ಸಾಧಕ ಮತ್ತು ಬಾಧಕಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಪರಿಸರ ಇಲಾಖೆ ಅನುಮತಿ ಸರಿಯಲ್ಲ…: 

ರಂಗನತಿಟ್ಟು ಪಕ್ಷಿಧಾಮ ಪರಿಸರ ಸೂಕ್ಷ  ವಲಯ. ಇಲ್ಲಿಗೆ ದೂರದ ದೇಶಗಳಿಂದ ಪಕ್ಷಿಗಳು ಸಂತಾನೋತ್ಪತ್ತಿಗಾಗಿ ಬರುತ್ತವೆ. ಹೀಗಿರುವಾಗ ಅರಣ್ಯ ಇಲಾಖೆ, ಪರಿಸರ ಇಲಾಖೆಯವರು ಹೇಗೆ ಹೈವೇ ಹಾದು ಹೋಗಲು ಒಪ್ಪಿಗೆ ಕೊಟ್ಟರು? ಡಿಪಿಆರ್ ಆಗುವ ಸಮಯದಲ್ಲಿ ಶಾಸಕರು ಇದನ್ನು ನಿರ್ಲಕ್ಷಿಸಿದರೆ ಪಕ್ಷಿಧಾಮದ ಪಕ್ಕದಲ್ಲೇ ರಸ್ತೆ ಹಾದು ಹೋಗಬೇಕೆ? ಅನತಿ ದೂರದಲ್ಲಿ ಹೋಗಿದ್ದರೆ ನಷ್ಟವೇನಾಗುತ್ತಿತ್ತು? ಅರಣ್ಯ ಮತ್ತು ಪರಿಸರ ಇಲಾಖೆ ಒಪ್ಪಿಗೆ ಕೊಟ್ಟಿದ್ದರೆ ಅವರು ಅಪರಾಧಿಗಳಾಗುತ್ತಾರೆ.

ಸುನಂದಾ ಜಯರಾಂ, ರೈತ ಹೋರಾಟಗಾರರು

ಪಕ್ಷಿಗಳ ಸಹಜ ಜೀವನಕ್ಕೆ ತೊಂದರೆ…: 

ಈಗಾಗಲೇ ರಸ್ತೆಗಾಗಿ ಭೂಸ್ವಾಧೀನವಾಗಿರುವ ರೈತರಿಗೆ ಹಣ ಪಾವತಿಯಾಗಿದೆ. ಕಾಮಗಾರಿಯೂ ಪ್ರಗತಿಯಲ್ಲಿದೆ. ಇದು ಮೊದಲೇ ಎಚ್ಚೆತ್ತುಕೊಳ್ಳಬೇಕಾಗಿದ್ದ ವಿಚಾರ. ವಾಸ್ತವದಲ್ಲಿ ಹೈವೇನಲ್ಲಿ ಸಂಚರಿಸುವ ವಾಹನಗಳಿಂದ ಶಬ್ದ ಮಾಲಿನ್ಯ, ವಾಯು ಮಾಲಿನ್ಯ, ರಾತ್ರಿ ವೇಳೆ ಬೆಳಕಿನ ಪ್ರಭಾವ ಇವೆಲ್ಲ ಪಕ್ಷಿಗಳ ಸಹಜ ಜೀವನವನ್ನು ವಿಚಲಿತಗೊಳಿಸುವ ಸಂಗತಿ.”

ಅರ್ಜುನಹಳ್ಳಿ ಪ್ರಸನ್ನಕುಮಾರ್, ನೀರಾವರಿ ಹಾಗೂ ಪರಿಸರ ತಜ್ಞರು

ಹೈವೇ ನಿರ್ಮಾಣದ ಅಗತ್ಯ ಇರಲಿಲ್ಲ…:  ಈಗಾಗಲೇ ಬೆಂಗಳೂರು-ಮೈಸೂರು ಹೈವೇ ಚೆನ್ನಾಗಿದೆ. ಸುಗಮ ಸಂಚಾರವೂ ಇದೆ. ಹೀಗಿರುವಾಗ ಪರಿಸರ ಸೂಕ್ಷ  ವಲಯದಲ್ಲಿ ಹೈವೇ ನಿರ್ಮಾಣದ ಅಗತ್ಯವೇ ಇರಲಿಲ್ಲ. ಇನ್ನು ಮುಂದೆ ಕೆಆರ್‌ಎಸ್‌ಗೆ ಬರುವ ಕೇರಳ, ತಮಿಳುನಾಡಿನ ಪ್ರವಾಸಿಗರು, ದೊಡ್ಡ ಲಾರಿಗಳವರು ಈ ರಸ್ತೆಯನ್ನೇ ಬಳಸುತ್ತಾರೆ. ಹೆಚ್ಚು ಶಬ್ದವಾಗುವುದು, ಹೊಗೆ, ಲೈಟ್ ಇವೆಲ್ಲ ಪಕ್ಷಿಗಳ ಸಹಜ ಜೀವನಕ್ಕೆ ಮಾರಕವಾಗುತ್ತವೆ. ಖಂಡಾಂತರದಿಂದ ವಲಸೆ ಬರುವ ಪಕ್ಷಿಗಳಿಗೆ ಇದು ಅತ್ಯಂತ ಸೂಕ್ತವಾದ ಸ್ಥಳ ಎಂದೇ ಗುರುತಿಸಿಕೊಂಡಿರುತ್ತವೆ. ಒಮ್ಮೆ ಇದು ಸರಿಯಿಲ್ಲ ಎಂದಾದರೆ ವಲಸೆ ತಪ್ಪಿಹೋಗುತ್ತದೆ. ಮುಂದೆ ಇದು ಇಕೊಲಜಿ ಮೇಲೆ ಪರಿಣಾಮ ಬೀರಲಿದೆ.

ಎಂ.ಜಿ.ವಿನಯ್‌ಕುಮಾರ್, ಕಿರುಚಿತ್ರ ನಿರ್ದೇಶಕರು, ಅಧ್ಯಕ್ಷರು, ಕನ್ನಡ ಕರ್ನಾಟಕ ಫೌಂಡೇಶನ್‌  

ಪಕ್ಷಿಗಳು ವಿಚಲಿತವಾಗುತ್ತವೆ…: 

ರಂಗನತಿಟ್ಟು ಪಕ್ಷಿಧಾಮ ನೈಸರ್ಗಿಕವಾಗಿದ್ದು, ಇಲ್ಲಿ ಯಾವುದೇ ಅಭಿವೃದ್ಧಿಪರ ಚಟುವಟಿಕೆಗಳು ನಡೆಯಕೂಡದು ಎಂಬುದು ನಿಯಮಗಳೇ ಹೇಳುತ್ತವೆ. ಹೀಗಿರುವಾಗ ಪಕ್ಷಿಗಳು ಸೂಕ್ಷ ಜೀವಿಗಳಾಗಿದ್ದು, ಶಬ್ದ, ಬೆಳಕು ಸೇರಿದಂತೆ ಮಾನವನ ಅನೈಸರ್ಗಿಕ ಕಾಮಗಾರಿಗಳಿಂದ ಅವುಗಳು ವಿಚಲಿತವಾಗುತ್ತವೆ. ಎತ್ತರದ ಗೋಡೆ ಕಟ್ಟುವುದರಿಂದ, ಬೆಳಕು ಹಕ್ಕಿಗಳ ಆವಾಸಸ್ಥಾನಕ್ಕೆ ಬೀಳದಂತೆ ಗಿಡ ಬೆಳೆಸುತ್ತೇವೆಂಬುದು ವ್ಯರ್ಥ ಪ್ರಯತ್ನ.

ಮದನ್‌ರಾವ್, ಪ್ರವಾಸಿ ಮಾರ್ಗದರ್ಶಕರು, ಶ್ರೀರಂಗಪಟ್ಟಣ

ಈ ಮಾರ್ಗದಲ್ಲಿ ಹಾದು ಹೋಗುವುದು ಸರಿಯಲ್ಲ…: 

ಸಾವಿರಾರು ಕಿ.ಮೀ.ದೂರದಿಂದ ಸಂತಾನೋತ್ಪತ್ತಿಗಾಗಿ ಬಂದು ಹೋಗುವ ಅಪರೂಪದ ಪಕ್ಷಿಗಳಿಗೆ ಆಶ್ರಯ ತಾಣವಾಗಿರುವ ಪಕ್ಷಿಧಾಮ ಇಡೀ ಭಾರತದಲ್ಲಿಯೇ ಅಪರೂಪವಾದ ನೈಸರ್ಗಿಕ ತಾಣ. ಸಹಜವಾಗಿ ಪಕ್ಷಿಗಳು ಶಬ್ದ ಮಾಲಿನ್ಯದಿಂದ ದೂರವಿರಲು ಬಯಸುತ್ತವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನೆ ರೂಪಿಸುವಾಗ ಪಕ್ಷಿಧಾಮಕ್ಕೆ ಅನತಿ ದೂರದಲ್ಲಿ ಮಾಡಿದ್ದರೆ ಪಕ್ಷಿಗಳಿಗೆ ಯಾವುದೇ ತೊಂದರೆಯಾಗುತ್ತಿರಲಿಲ್ಲ.”

ಮಂಗಲ ಎಂ.ಯೋಗೀಶ್, ಅಧ್ಯಕ್ಷರು, ಪರಿಸರ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಮಂಡ್ಯ

ಯಾವುದೇ ಸಮಸ್ಯೆ ಇಲ್ಲ…: 

ಈ ಕುಶಾಲನಗರ ಹೈವೇ ರಸ್ತೆಯು ರಂಗನತಿಟ್ಟು ಪಕ್ಷಿಧಾಮದಿಂದ ಅನತಿ ದೂರದಲ್ಲಿರುವುದರಿಂದ ಪಕ್ಷಿಗಳಿಗೆ ಯಾವುದೇ ರೀತಿ ಧಕ್ಕೆಯಾಗುತ್ತದೆಂದು ನನಗನಿಸುತ್ತಿಲ್ಲ. ಆದಾಗ್ಯೂ ಪಕ್ಷಿಗಳಿಗೆ ತೊಂದರೆ ಆಗಬಾರದೆಂಬ ನಿಟ್ಟಿನಲ್ಲಿ ಹೈವೇ ಪ್ರಾಧಿಕಾರ ಎತ್ತರದ ಗೋಡೆ ನಿರ್ಮಾಣ ಮಾಡುತ್ತಾರೆಂಬ ವಿಚಾರ ತಿಳಿಯಿತು. ಹಾಗಾಗಿ ಸಮಸ್ಯೆ ಇಲ್ಲ.

ವೈ.ರಮೇಶ್, ಪರಿಸರ ಪ್ರೇಮಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ಶ್ರೀರಂಗಪಟ್ಟಣ

 

 

ಆಂದೋಲನ ಡೆಸ್ಕ್

Recent Posts

ತಿರುಪತಿ ಲಡ್ಡುಗೆ ಕಲಬೆರಕೆ ತುಪ್ಪ: ಸಿಬಿಐ ತನಿಖೆಯಲ್ಲಿ ಶಾಕಿಂಗ್‌ ಮಾಹಿತಿ ಬಹಿರಂಗ

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ಎಂದೇ ಹೇಳಲಾಗುವ ತಿರುಪಯಯಿ ತಿರುಮಲ ಶ್ರೀ ವೆಂಕಟೇಶ್ವರ ದೇಗುಲದ ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪ…

5 mins ago

ಸರಗಳ್ಳರಿಂದ ಬಿಡಿಸಿಕೊಳ್ಳುವಾಗ ಕುಸಿದು ಬಿದ್ದು ಮಹಿಳೆ ಸಾವು

ಬೆಂಗಳೂರು: ಸರಗಳ್ಳರಿಂದ ಬಿಡಿಸಿಕೊಳ್ಳುವಾಗ ಕುಸಿದು ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಹುಸ್ಕೂರು ಗ್ರಾಮದಲ್ಲಿ…

29 mins ago

ಮೈಸೂರು: ಹಳೆಯ ವಸ್ತು ಸಂಗ್ರಹಿಸಿದ್ದ ಗೋದಾಮಿನಲ್ಲಿ ಬೆಂಕಿ

ಮೈಸೂರು: ಹಳೆಯ ವಸ್ತುಗಳನ್ನು ಸಂಗ್ರಹಿಸಿದ್ದ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಮೈಸೂರಿನ ಎನ್.ಆರ್.‌ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೈಸೂರು-ಬೆಂಗಳೂರು ರಸ್ತೆಯ…

1 hour ago

ವಿಬಿ ಜಿ ರಾಮ್ ಜಿ ಗೊಂದಲ ನಿವಾರಣೆ ಕೇಂದ್ರದ ಹೊಣೆ

ವಿಬಿ- ಜಿ ರಾಮ್ ಜಿ (ವಿಕಸಿತ್ ಭಾರತ್- ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕ ಮಿಷನ್ (ಗ್ರಾಮೀಣ್)- ೨೦೨೫) ಕಾಯ್ದೆಯು…

9 hours ago

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ಸಿಎಂ ಶಿಶಿರ್ ಚಂದ್ರ ಏಕೆ ಕೆಳಗಿಳಿಯುತ್ತಿಲ್ಲ?

ಜನನಾಯಕ ಅನ್ನಿಸಿಕೊಂಡವರ ಅಧಿಕಾರ ಬದಲಿಸುವುದು ಅಷ್ಟು ಸುಲಭದ ಕೆಲಸವಲ್ಲ  ಅವತ್ತು ವಿಧಾನಸಭೆಯ ಮೊಗಸಾಲೆಗೆ ಪ್ರವೇಶ ಮಾಡುತ್ತಿದ್ದಂತೆಯೇ ಪತ್ರಕರ್ತ ರಾಕೇಶನ ಮುಖದಲ್ಲಿ…

9 hours ago

ಅಳಿವಿನತ್ತ ರಾಜ್ಯದ ಮೊದಲ ಬಾಲಕಿಯರ ಶಾಲೆ

ವರಹಳ್ಳಿ ಆನಂದ, ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿಶ್ವವಿದ್ಯಾನಿಲಯ ಮೈಸೂರು: ಹೆಣ್ಣುಮಕ್ಕಳಿಗಾಗಿ ರಾಜ್ಯದಲ್ಲಿ ಸ್ಥಾಪಿಸಿದ ಮೊದಲ ಶಾಲೆ ಇದು. ಶತೋತ್ತರ ಅರ್ಧ…

9 hours ago