Andolana originals

ಕೈ ತಂತ್ರಕ್ಕೆ ನಂಜನಗೂಡಿನಲ್ಲಿ ಮುದುಡಿದ ಕಮಲ

ನಗರಸಭೆ ಅಧ್ಯಕ್ಷರಾಗಿ ಶ್ರೀಕಂಠ, ಉಪಾಧ್ಯಕ್ಷರಾಗಿ ರೆಹನಾ ಬಾನು ಆಯ್ಕೆ

ನಂಜನಗೂಡು: ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿದ್ದು, ಅಧ್ಯಕ್ಷರಾಗಿ ಶ್ರೀಕಂಠ ಹಾಗೂ ಉಪಾಧ್ಯಕ್ಷರಾಗಿ ರೆಹನಾ ಬಾನು ಆಯ್ಕೆಯಾಗಿದ್ದಾರೆ.

31 ಸ್ಥಾನ ಬಲದ ಇಲ್ಲಿನ ನಗರಸಭೆಯ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗುವುದರೊಂದಿಗೆ ಕೈ ತಂತ್ರಕ್ಕೆ 15 ಸದಸ್ಯರ ಬಲದ ಬಿಜೆಪಿ ತತ್ತರಿಸಿದೆ.

ಎಸ್‌ಸಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನ ಹಾಗೂ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಉಪವಿಭಾಗಾಧಿಕಾರಿ ರಕ್ಷಿತ್ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಶ್ರೀಕಂಠ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಏಪ್ ನೀಡಿದ್ದ ಜಾ.ದಳ ಸದಸ್ಯೆ ರೆಹನಾ ಬಾನು ನಾಮಪತ್ರ ಸಲ್ಲಿಸಿದರು.

ಇವರಿಬ್ಬರೂ ನಾಮಪತ್ರ ಸಲ್ಲಿಸಿದ ನಂತರ ಬಿಜೆಪಿಯ ದೇವ್‌ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಉಪಾ ಧ್ಯಕ್ಷ ಸ್ಥಾನಕ್ಕೆ ಮಂಜುಳಾ ನಾಮಪತ್ರ ಸಲ್ಲಿಸಿದರು.

ನಂತರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಬಿಜೆಪಿ ಅಭ್ಯರ್ಥಿ ದೇವ್‌ ಹಾಗೂ ಮಂಜುಳಾ ಅವರಿಗೆ 12 ಮತಗಳು ಬಂದರೆ ಕಾಂಗ್ರೆಸ್ ಅಭ್ಯರ್ಥಿ ಶ್ರೀಕಂಠ ಹಾಗೂ ರೆಹನಾಬಾನು ಅವರು 16 ಮತಗಳನ್ನು ಪಡೆದಾಗ ಚುನಾವಣಾಧಿಕಾರಿ ರಕ್ಷಿತ್ ಅವರು ಶ್ರೀಕಂಠ ಹಾಗೂ ರೆಹನಾ ಬಾನು ಅವರು ಆಯ್ಕೆಯಾಗಿದ್ದಾರೆ ಎಂದು ಘೋಷಿಸು ವುದರೊಂದಿಗೆ ನಂಜನಗೂಡು ನಗರಸಭೆಯಲ್ಲಿ ಕಾಂಗ್ರೆಸ್ ಆಡಳಿತದ ಆರಂಭಕ್ಕೆ ಹಸಿರು ನಿಶಾನೆ ಸಿಕ್ಕಂತಾಯಿತು.

10 ಸದಸ್ಯ ಬಲ ಹೊಂದಿದ ಕಾಂಗ್ರೆಸ್ ಆರಂಭದಲ್ಲೇ ಪಕ್ಷೇತರರನ್ನು ಒಲಿಸಿಕೊಂಡು ಶಾಸಕ, ಸಂಸದರೊಡಗೂಡಿ ತನ್ನ ಬಲವನ್ನು 15ಕ್ಕೇರಿಸಿಕೊಂಡು ಜಾ.ದಳ ಹಾಗೂ ಕೆಲ ಬಿಜೆಪಿ ಸದಸ್ಯರೊಡನೆ ಗುಪ್ತ ಮಾತುಕತೆ ನಡೆಸಿ ಚುನಾವಣಾ ತಂತ್ರಗಾರಿಕೆ ಆರಂಭಿಸಿದ್ದರೆ ಬಿಜೆಪಿ ತನ್ನ 15 ಸದಸ್ಯರೊಡನೆ ಜಾ.ದಳದ ಮೂವರು ಸದಸ್ಯರ ಬಲ ನಂಬಿ ಬಹುಮತದ ಆತ್ಮವಿಶ್ವಾಸ ದೊಂದಿಗೆ ಚುನಾವಣಾ ಕಣಕ್ಕಿಳಿದಿತ್ತು.

ಚುನಾವಣೆಯಲ್ಲಿ ಬಿಜೆಪಿಯ ನಾಲ್ವರು ಸದಸ್ಯರು ಗೈರಾಗಿದ್ದರೆ, ಬಿಜೆಪಿ ಉಪಾಧ್ಯಕ್ಷ ಸ್ಥಾನಕ್ಕೆ ಹೆಸರಿಸಿ ಎಪ್ ನೀಡಿದ್ದ ಜಾ.ದಳದ ರೆಹನಾ ಬಾನು ಕಾಂಗ್ರೆಸ್ ಸದಸ್ಯರೊಡಗೂಡಿ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.

ಕೊನೆಗೆ ಕಾಂಗ್ರೆಸ್‌ನ ಶ್ರೀಕಂಠ ಮತ್ತು ಜಾ.ದಳದ ರೆಹನಾಬಾನು ಶಾಸಕ ದರ್ಶನ್ ಧ್ರುವನಾರಾಯಣ ಹಾಗೂ ಸಂಸದಸುನಿಲ್ ಬೋಸ್ ಅವರೊಡಗೂಡಿ ಮೂವರು ಬಲ ಪಡೆದು 16 ಮತ ಗಳಿಸಿ ವಿಜಯದ ನಗೆ ಬೀರಿದರು.

ಬಿಜೆಪಿಯ 15 ಸದಸ್ಯರಲ್ಲಿ ನಾಲ್ವರು ಚುನಾವಣೆಯಲ್ಲಿ ಭಾಗಿಯಾಗದೆ ದೂರ ಉಳಿದ ಪರಿಣಾಮ ಆ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ದೇವ್‌ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಂಜುಳಾ 11 ಮತಗಳು ಮತ್ತು ಜಾ.ದಳದ ಗಿರೀಶ್ (ಸಣ್ಣಕ್ಕಿ) ಬಾಬು ಅವರ ಮತದೊಂದಿಗೆ 12 ಮತಗಳನ್ನು ಗಳಿಸಿ ಪರಾಭವಗೊಂಡರು.

ಜಾ.ದಳ ಸದಸ್ಯ ಖಾಲೀದ್‌ ಚುನಾವಣೆಯಲ್ಲಿ ಭಾಗಿಯಾದರೂ ಯಾರಿಗೂ ಮತ ನೀಡದೆ ತಟಸ್ಥ ನಿಲುವು ತಳೆದಿದ್ದು ಗಮನ ಸೆಳೆಯಿತು.

ಬಿಜೆಪಿಯಿಂದ ಆಯ್ಕೆಯಾಗಿ ಮನೆ ಬಾಗಿಲಿಗೆ ಎಪ್ ಅಂಟಿಸಿಕೊಂಡರೂ ಚುನಾವಣಾ ಪ್ರಕ್ರಿಯೆ ಯಿಂದ ಮೀನಾಕ್ಷಿ ನಾಗರಾಜ್, ಗಿರೀಶ, ಗಾಯತ್ರಿ ಮುರುಗೇಶ, ಹಾಗೂ ವಿಜಯಲಕ್ಷ್ಮಿ ದೂರ ಉಳಿದರು.

ಮೂರು ಪಾಲಾದ ಜಾ.ದಳ: ಜಾ.ದಳದ ಗಿರೀಶ ಬಾಬು ಮೈತ್ರಿಗೆ ಸಹಕರಿಸಿ ಬಿಜೆಪಿಗೆ ಮತ ನೀಡಿದರೆ ರೆಹನಾ ಬಾನು ಬಿಜೆಪಿಯಿಂದ ವಿಪ್ ಪಡೆದರೂ ಕಾಂಗ್ರೆಸ್ ಜತೆ ಸೇರಿ ಉಪಾಧ್ಯಕ್ಷ ಸ್ಥಾನವನ್ನೇರಿದರು. ಮತ್ತೊಬ್ಬ ಸದಸ್ಯ ಖಾಲಿದ್ ಬಿಜೆಪಿಯನ್ನೂ ಬೆಂಬಲಿಸದೆ, ಕಾಂಗ್ರೆಸ್‌ಗೂ ಮತ ನೀಡದೇ ತಟಸ್ಥ ಧೋರಣೆ ತಾಳಿದರು. ಹೀಗೆ ಮೂವರು ಸದಸ್ಯರೂ ಮೂರು ದಿಕ್ಕಿಗೆ ಮುಖ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹದೇವಪ್ಪ, ಸಂಸದ ಸುನಿಲ್ ಬೋಸ್ ಹಾಗೂ ತಾವು ಮತ್ತು ಮಾಜಿ ಶಾಸಕ ಕಳಲೆ ಕೇಶವಮೂರ್ತಿಯವರ ತಂಡದ ಎರಡು ತಿಂಗಳ ಶ್ರಮದ ಫಲ ನಗರಸಭೆ ವರಿಷ್ಠರ ಚುನಾವಣೆಯ ವಿಜಯ.
-ದರ್ಶನ್ ಧ್ರುವನಾರಾಯಣ, ಶಾಸಕ

ಈ ಸೋಲು ನಮಗೆ ಆಘಾತವಲ್ಲ, ಇದು ಆಡಳಿತ ಪಕ್ಷದ ಅಧಿಕಾರ ದುರುಪಯೋಗದ ವಿಜಯ. ಇಂದು ನಂಜನಗೂಡು, ನಾಳೆ ಗುಂಡ್ಲುಪೇಟೆ ಎಲ್ಲೆಡೆ ಇದೇ ನಡೆಯುತ್ತದೆ. ಇನ್ನು 15 ತಿಂಗಳುಗಳ ನಂತರ ಇದೇ ಮತದಾರರೇ ಕಾಂಗ್ರೆಸ್‌ನ ಅಧಿಕಾರ ದಾಹಕ್ಕೆ ಉತ್ತರ ನೀಡಲಿದ್ದಾರೆ.
-ಬಿ.ಹರ್ಷವರ್ಧನ್, ಮಾಜಿ ಶಾಸಕ

ಕಾಂಗ್ರೆಸ್ ಆಮಿಷಕ್ಕೆ ನಮ್ಮ ಸದಸ್ಯರಾದ ಮೀನಾಕ್ಷಿ ನಾಗರಾಜ್, ಗಿರೀಶ, ಗಾಯತ್ರಿ ಮುರುಗೇಶ, ವಿಜಯಲಕ್ಷ್ಮಿ ಅವರು ಬಲಿಯಾಗಿ ಪಕ್ಷಕ್ಕೆ ಮತ್ತು ಮತ ನೀಡಿ ಗೆಲ್ಲಿಸಿದ ಮತದಾರರಿಗೆ ದ್ರೋಹ ಬಗೆದಿದ್ದಾರೆ. ಇವರ ವಿರುದ್ಧ ಪಕ್ಷ ಕಾನೂನು ಕ್ರಮ ಜರುಗಿಸಲಿದೆ.
-ಸಿದ್ದರಾಜು, ಬಿಜೆಪಿ ನಗರಾಧ್ಯಕ್ಷ

ನಮ್ಮ ತಂತ್ರಗಾರಿಕೆಗೆ ಸಿಕ್ಕ ಜಯ ಇದಾಗಿದೆ. ಚುನಾವಣೆ ಮುಗಿದಿದೆ, ಇನ್ನೇನಿದ್ದರೂ ಎಲ್ಲರೂ ಒಂದಾಗಿ ನಂಜನಗೂಡು ನಗರಸಭೆಯ 31 ವಾರ್ಡುಗಳನ್ನೂ ಅಭಿವೃದ್ಧಿಪಡಿಸುವತ್ತ ಹೆಜ್ಜೆ ಹಾಕೋಣ.
-ಸುನಿಲ್ ಬೋಸ್, ಸಂಸದ

ಆಂದೋಲನ ಡೆಸ್ಕ್

Recent Posts

ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಬಂಡೀಪುರ-ನಾಗರಹೊಳೆ ಸಫಾರಿ ಆರಂಭಿಸಿ: ಸಿಎಂ ಡಿ.ಕೆ.ಶಿವಕುಮಾರ್‌ ಸೂಚನೆ

ಬೆಂಗಳೂರು: ಅಗತ್ಯ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಬಂಡೀಪುರ ಹಾಗೂ ನಾಗರಹೊಳೆ ಉದ್ಯಾನಗಳಲ್ಲಿ ಸಫಾರಿ ಆರಂಭಿಸಿ ಎಂದು ಸಿಎಂ ಡಿ.ಕೆ.ಶಿವಕುಮಾರ್‌…

11 hours ago

ವೆನೆಜುವೆಲಾ ಭೂಕಂಪ: ಮೃತರ ಸಂಖ್ಯೆ 1700ಕ್ಕೆ ಏರಿಕೆ

ವೆನೆಜುವೆಲಾ: ಇಲ್ಲಿ ಬುಧವಾರ ಸಂಜೆ ಸಂಭವಿಸಿದ ಎರಡು ಪ್ರಬಲ ಭೂಕಂಪಗಳಲ್ಲಿ ಮೃತಪಟ್ಟವರ ಸಂಖ್ಯೆ 1700ಕ್ಕೆ ಏರಿಕೆಯಾಗಿದೆ. ಈ ದುರಂತದಲ್ಲಿ 5000ಕ್ಕೂ…

11 hours ago

ರಾಜಸ್ಥಾನದಲ್ಲಿ ಪ್ಯಾರಾಮೆಡಿಕಲ್‌ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ: ನಾಲ್ವರು ಅರೆಸ್ಟ್‌

ಜೈಪುರ: ರಾಜಸ್ಥಾನ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಪ್ಯಾರಾಮೆಡಿಕಲ್‌ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆಯುತ್ತಿದ್ದ ವೇಳೆಯೇ ಪರೀಕ್ಷೆ ಹಾಲ್‌ ಮೇಲೆ ಪೊಲೀಸರು…

12 hours ago

ಎಸ್‌ಐಆರ್‌ ಬಗ್ಗೆ ಗಾಬರಿ ಬೇಡ: ಬಾನು ಮುಷ್ತಾಕ್‌

ಹಾಸನ: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಆರಂಭವಾಗಿದೆ. ಹಾಸನದಲ್ಲಿ ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌…

12 hours ago

ನಾಡಿನ ಖ್ಯಾತ ಕಲಾವಿದ ಕೆ.ಟಿ.ಶಿವಪ್ರಸಾದ್‌ ನಿಧನ

ಬೆಂಗಳೂರು: ನಾಡಿನ ಖ್ಯಾತ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಾದ, ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತ ‌ಕೆ.ಟಿ. ಶಿವಪ್ರಸಾದ್(77) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.…

13 hours ago

ಕೈಕೊಟ್ಟ ಮುಂಗಾರು: 126 ವರ್ಷಗಳಲ್ಲೇ ಮೂರನೇ ಬಾರಿ ದೇಶದಲ್ಲಿ ಮಳೆ ಕೊರತೆ

ನವದೆಹಲಿ: ದೇಶದಲ್ಲಿ ಈ ಬಾರಿ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದು, ಕಳೆದ 126 ವರ್ಷಗಳ ಇತಿಹಾಸದಲ್ಲೇ ಜೂನ್‌ ತಿಂಗಳಿನಲ್ಲಿ ಮೂರನೇ…

13 hours ago