Andolana originals

ಕೈ ತಂತ್ರಕ್ಕೆ ನಂಜನಗೂಡಿನಲ್ಲಿ ಮುದುಡಿದ ಕಮಲ

ನಗರಸಭೆ ಅಧ್ಯಕ್ಷರಾಗಿ ಶ್ರೀಕಂಠ, ಉಪಾಧ್ಯಕ್ಷರಾಗಿ ರೆಹನಾ ಬಾನು ಆಯ್ಕೆ

ನಂಜನಗೂಡು: ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿದ್ದು, ಅಧ್ಯಕ್ಷರಾಗಿ ಶ್ರೀಕಂಠ ಹಾಗೂ ಉಪಾಧ್ಯಕ್ಷರಾಗಿ ರೆಹನಾ ಬಾನು ಆಯ್ಕೆಯಾಗಿದ್ದಾರೆ.

31 ಸ್ಥಾನ ಬಲದ ಇಲ್ಲಿನ ನಗರಸಭೆಯ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗುವುದರೊಂದಿಗೆ ಕೈ ತಂತ್ರಕ್ಕೆ 15 ಸದಸ್ಯರ ಬಲದ ಬಿಜೆಪಿ ತತ್ತರಿಸಿದೆ.

ಎಸ್‌ಸಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನ ಹಾಗೂ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಉಪವಿಭಾಗಾಧಿಕಾರಿ ರಕ್ಷಿತ್ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಶ್ರೀಕಂಠ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಏಪ್ ನೀಡಿದ್ದ ಜಾ.ದಳ ಸದಸ್ಯೆ ರೆಹನಾ ಬಾನು ನಾಮಪತ್ರ ಸಲ್ಲಿಸಿದರು.

ಇವರಿಬ್ಬರೂ ನಾಮಪತ್ರ ಸಲ್ಲಿಸಿದ ನಂತರ ಬಿಜೆಪಿಯ ದೇವ್‌ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಉಪಾ ಧ್ಯಕ್ಷ ಸ್ಥಾನಕ್ಕೆ ಮಂಜುಳಾ ನಾಮಪತ್ರ ಸಲ್ಲಿಸಿದರು.

ನಂತರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಬಿಜೆಪಿ ಅಭ್ಯರ್ಥಿ ದೇವ್‌ ಹಾಗೂ ಮಂಜುಳಾ ಅವರಿಗೆ 12 ಮತಗಳು ಬಂದರೆ ಕಾಂಗ್ರೆಸ್ ಅಭ್ಯರ್ಥಿ ಶ್ರೀಕಂಠ ಹಾಗೂ ರೆಹನಾಬಾನು ಅವರು 16 ಮತಗಳನ್ನು ಪಡೆದಾಗ ಚುನಾವಣಾಧಿಕಾರಿ ರಕ್ಷಿತ್ ಅವರು ಶ್ರೀಕಂಠ ಹಾಗೂ ರೆಹನಾ ಬಾನು ಅವರು ಆಯ್ಕೆಯಾಗಿದ್ದಾರೆ ಎಂದು ಘೋಷಿಸು ವುದರೊಂದಿಗೆ ನಂಜನಗೂಡು ನಗರಸಭೆಯಲ್ಲಿ ಕಾಂಗ್ರೆಸ್ ಆಡಳಿತದ ಆರಂಭಕ್ಕೆ ಹಸಿರು ನಿಶಾನೆ ಸಿಕ್ಕಂತಾಯಿತು.

10 ಸದಸ್ಯ ಬಲ ಹೊಂದಿದ ಕಾಂಗ್ರೆಸ್ ಆರಂಭದಲ್ಲೇ ಪಕ್ಷೇತರರನ್ನು ಒಲಿಸಿಕೊಂಡು ಶಾಸಕ, ಸಂಸದರೊಡಗೂಡಿ ತನ್ನ ಬಲವನ್ನು 15ಕ್ಕೇರಿಸಿಕೊಂಡು ಜಾ.ದಳ ಹಾಗೂ ಕೆಲ ಬಿಜೆಪಿ ಸದಸ್ಯರೊಡನೆ ಗುಪ್ತ ಮಾತುಕತೆ ನಡೆಸಿ ಚುನಾವಣಾ ತಂತ್ರಗಾರಿಕೆ ಆರಂಭಿಸಿದ್ದರೆ ಬಿಜೆಪಿ ತನ್ನ 15 ಸದಸ್ಯರೊಡನೆ ಜಾ.ದಳದ ಮೂವರು ಸದಸ್ಯರ ಬಲ ನಂಬಿ ಬಹುಮತದ ಆತ್ಮವಿಶ್ವಾಸ ದೊಂದಿಗೆ ಚುನಾವಣಾ ಕಣಕ್ಕಿಳಿದಿತ್ತು.

ಚುನಾವಣೆಯಲ್ಲಿ ಬಿಜೆಪಿಯ ನಾಲ್ವರು ಸದಸ್ಯರು ಗೈರಾಗಿದ್ದರೆ, ಬಿಜೆಪಿ ಉಪಾಧ್ಯಕ್ಷ ಸ್ಥಾನಕ್ಕೆ ಹೆಸರಿಸಿ ಎಪ್ ನೀಡಿದ್ದ ಜಾ.ದಳದ ರೆಹನಾ ಬಾನು ಕಾಂಗ್ರೆಸ್ ಸದಸ್ಯರೊಡಗೂಡಿ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.

ಕೊನೆಗೆ ಕಾಂಗ್ರೆಸ್‌ನ ಶ್ರೀಕಂಠ ಮತ್ತು ಜಾ.ದಳದ ರೆಹನಾಬಾನು ಶಾಸಕ ದರ್ಶನ್ ಧ್ರುವನಾರಾಯಣ ಹಾಗೂ ಸಂಸದಸುನಿಲ್ ಬೋಸ್ ಅವರೊಡಗೂಡಿ ಮೂವರು ಬಲ ಪಡೆದು 16 ಮತ ಗಳಿಸಿ ವಿಜಯದ ನಗೆ ಬೀರಿದರು.

ಬಿಜೆಪಿಯ 15 ಸದಸ್ಯರಲ್ಲಿ ನಾಲ್ವರು ಚುನಾವಣೆಯಲ್ಲಿ ಭಾಗಿಯಾಗದೆ ದೂರ ಉಳಿದ ಪರಿಣಾಮ ಆ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ದೇವ್‌ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಂಜುಳಾ 11 ಮತಗಳು ಮತ್ತು ಜಾ.ದಳದ ಗಿರೀಶ್ (ಸಣ್ಣಕ್ಕಿ) ಬಾಬು ಅವರ ಮತದೊಂದಿಗೆ 12 ಮತಗಳನ್ನು ಗಳಿಸಿ ಪರಾಭವಗೊಂಡರು.

ಜಾ.ದಳ ಸದಸ್ಯ ಖಾಲೀದ್‌ ಚುನಾವಣೆಯಲ್ಲಿ ಭಾಗಿಯಾದರೂ ಯಾರಿಗೂ ಮತ ನೀಡದೆ ತಟಸ್ಥ ನಿಲುವು ತಳೆದಿದ್ದು ಗಮನ ಸೆಳೆಯಿತು.

ಬಿಜೆಪಿಯಿಂದ ಆಯ್ಕೆಯಾಗಿ ಮನೆ ಬಾಗಿಲಿಗೆ ಎಪ್ ಅಂಟಿಸಿಕೊಂಡರೂ ಚುನಾವಣಾ ಪ್ರಕ್ರಿಯೆ ಯಿಂದ ಮೀನಾಕ್ಷಿ ನಾಗರಾಜ್, ಗಿರೀಶ, ಗಾಯತ್ರಿ ಮುರುಗೇಶ, ಹಾಗೂ ವಿಜಯಲಕ್ಷ್ಮಿ ದೂರ ಉಳಿದರು.

ಮೂರು ಪಾಲಾದ ಜಾ.ದಳ: ಜಾ.ದಳದ ಗಿರೀಶ ಬಾಬು ಮೈತ್ರಿಗೆ ಸಹಕರಿಸಿ ಬಿಜೆಪಿಗೆ ಮತ ನೀಡಿದರೆ ರೆಹನಾ ಬಾನು ಬಿಜೆಪಿಯಿಂದ ವಿಪ್ ಪಡೆದರೂ ಕಾಂಗ್ರೆಸ್ ಜತೆ ಸೇರಿ ಉಪಾಧ್ಯಕ್ಷ ಸ್ಥಾನವನ್ನೇರಿದರು. ಮತ್ತೊಬ್ಬ ಸದಸ್ಯ ಖಾಲಿದ್ ಬಿಜೆಪಿಯನ್ನೂ ಬೆಂಬಲಿಸದೆ, ಕಾಂಗ್ರೆಸ್‌ಗೂ ಮತ ನೀಡದೇ ತಟಸ್ಥ ಧೋರಣೆ ತಾಳಿದರು. ಹೀಗೆ ಮೂವರು ಸದಸ್ಯರೂ ಮೂರು ದಿಕ್ಕಿಗೆ ಮುಖ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹದೇವಪ್ಪ, ಸಂಸದ ಸುನಿಲ್ ಬೋಸ್ ಹಾಗೂ ತಾವು ಮತ್ತು ಮಾಜಿ ಶಾಸಕ ಕಳಲೆ ಕೇಶವಮೂರ್ತಿಯವರ ತಂಡದ ಎರಡು ತಿಂಗಳ ಶ್ರಮದ ಫಲ ನಗರಸಭೆ ವರಿಷ್ಠರ ಚುನಾವಣೆಯ ವಿಜಯ.
-ದರ್ಶನ್ ಧ್ರುವನಾರಾಯಣ, ಶಾಸಕ

ಈ ಸೋಲು ನಮಗೆ ಆಘಾತವಲ್ಲ, ಇದು ಆಡಳಿತ ಪಕ್ಷದ ಅಧಿಕಾರ ದುರುಪಯೋಗದ ವಿಜಯ. ಇಂದು ನಂಜನಗೂಡು, ನಾಳೆ ಗುಂಡ್ಲುಪೇಟೆ ಎಲ್ಲೆಡೆ ಇದೇ ನಡೆಯುತ್ತದೆ. ಇನ್ನು 15 ತಿಂಗಳುಗಳ ನಂತರ ಇದೇ ಮತದಾರರೇ ಕಾಂಗ್ರೆಸ್‌ನ ಅಧಿಕಾರ ದಾಹಕ್ಕೆ ಉತ್ತರ ನೀಡಲಿದ್ದಾರೆ.
-ಬಿ.ಹರ್ಷವರ್ಧನ್, ಮಾಜಿ ಶಾಸಕ

ಕಾಂಗ್ರೆಸ್ ಆಮಿಷಕ್ಕೆ ನಮ್ಮ ಸದಸ್ಯರಾದ ಮೀನಾಕ್ಷಿ ನಾಗರಾಜ್, ಗಿರೀಶ, ಗಾಯತ್ರಿ ಮುರುಗೇಶ, ವಿಜಯಲಕ್ಷ್ಮಿ ಅವರು ಬಲಿಯಾಗಿ ಪಕ್ಷಕ್ಕೆ ಮತ್ತು ಮತ ನೀಡಿ ಗೆಲ್ಲಿಸಿದ ಮತದಾರರಿಗೆ ದ್ರೋಹ ಬಗೆದಿದ್ದಾರೆ. ಇವರ ವಿರುದ್ಧ ಪಕ್ಷ ಕಾನೂನು ಕ್ರಮ ಜರುಗಿಸಲಿದೆ.
-ಸಿದ್ದರಾಜು, ಬಿಜೆಪಿ ನಗರಾಧ್ಯಕ್ಷ

ನಮ್ಮ ತಂತ್ರಗಾರಿಕೆಗೆ ಸಿಕ್ಕ ಜಯ ಇದಾಗಿದೆ. ಚುನಾವಣೆ ಮುಗಿದಿದೆ, ಇನ್ನೇನಿದ್ದರೂ ಎಲ್ಲರೂ ಒಂದಾಗಿ ನಂಜನಗೂಡು ನಗರಸಭೆಯ 31 ವಾರ್ಡುಗಳನ್ನೂ ಅಭಿವೃದ್ಧಿಪಡಿಸುವತ್ತ ಹೆಜ್ಜೆ ಹಾಕೋಣ.
-ಸುನಿಲ್ ಬೋಸ್, ಸಂಸದ

ಆಂದೋಲನ ಡೆಸ್ಕ್

Recent Posts

ಜ್ಞಾನದ ಜೊತೆ ಕೌಶಲವೂ ಮುಖ್ಯ : ಪರೀಕ್ಷಾಂಗ ಕುಲಸಚಿವ ನಾಗರಾಜು ಅಭಿಮತ

ಮೈಸೂರು : ಇಂದಿನ ಕಾಲದಲ್ಲಿ ಜ್ಞಾನದ ಜೊತೆಗೆ ಕೌಶಲ ತುಂಬಾ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು,…

5 mins ago

ಡಿ.ಕೆ.ಶಿವಕುಮಾರ್‌ ನಿಯತ್ತಿನ ಸೈನಿಕ: ಶಾಸಕ ರವಿಕುಮಾರ್‌ ಗಣಿಗ ಬ್ಯಾಟಿಂಗ್‌

ಮಂಡ್ಯ: ಸಚಿವ ಎಚ್‌.ಸಿ.ಮಹದೇವಪ್ಪ ಅವರ ಬೀದಿನಾಯಿ ಹೇಳಿಕೆ ಕುರಿತು ಸಾಕಷ್ಟು ಚರ್ಚೆಯಾಗುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ಶಾಸಕ…

2 hours ago

ಸಾಗರದಲ್ಲಿ ಭಾರತದ ಸಾರ್ವಭೌಮತ್ವ: ವಿಶಾಖಪಟ್ಟಣಂನಲ್ಲಿ ರಾಷ್ಟ್ರಪತಿ ಮುರ್ಮುರಿಂದ ನೌಕಾಶಕ್ತಿ ಪ್ರದರ್ಶನ ವೀಕ್ಷಣೆ

ವಿಶಾಖಪಟ್ಟಣಂ: ಭಾರತೀಯ ನೌಕಾಪಡೆಯ ವಿಶ್ವದ ವಿವಿಧ ದೇಶಗಳ ನೌಕಾಪಡೆಗಳೊಂದಿಗೆ ಸೇರಿ ತನ್ನ ಅಪ್ರತಿಮ ಶೌರ್ಯ ಹಾಗೂ ಸನ್ನದ್ಧತೆಯನ್ನು ಬುಧವಾರ ವಿಶಾಖಪಟ್ಟಣಂ…

3 hours ago

ಗುಂಡ್ಲುಪೇಟೆ| ಹುಲಿ ದಾಳಿಗೆ ಹಸು ಸಾವು

ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು  ಗುಂಡ್ಲುಪೇಟೆ: ತಾಲ್ಲೂಕಿನ ಮಾದಾಪಟ್ಟಣ ಗ್ರಾಮದಲ್ಲಿ ಹಸುವಿನ ಮೇಲೆ ಹುಲಿ‌ ದಾಳಿ ನಡೆಸಿ ಕೊಂದು…

3 hours ago

ರಾಜ್ಯ ಸರ್ಕಾರಕ್ಕೆ ಮಾಧ್ಯಮಗಳನ್ನು ಕಂಡರೆ ನಡುಕವೇಕೆ?: ಜೆಡಿಎಸ್‌ ಲೇವಡಿ

ಬೆಂಗಳೂರು: ವಿಧಾನಸೌಧಕ್ಕೆ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ ಹೇರಿರುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಜೆಡಿಎಸ್‌ ಲೇವಡಿ ಮಾಡಿದೆ. ಪ್ರಶ್ನೆ ಕೇಳುವ…

4 hours ago

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ: ಪತ್ರ ವೈರಲ್‌

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರ ಮಾಧ್ಯಮಗಳಿಗೆ ರಾಜ್ಯದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ನಿರ್ಬಂಧ ಹೇರಲಿದೆ. ಈ ಕುರಿತು ಸರ್ಕಾರದ…

4 hours ago