Andolana originals

ಸಿಲಿಂಡರ್‌ ಬುಕ್ಕಿಂಗ್‌ನಲ್ಲಿ ಗೊಂದಲ, ಗ್ರಾಹಕರ ಪರದಾಟ

ಕೆ. ಬಿ. ರಮೇಶ ನಾಯಕ

ಮೈಸೂರು : ಮಧ್ಯಪ್ರಾಚ್ಯದೇಶಗಳಲ್ಲಿನ ಉದ್ವಿಗ್ನತೆಯಿಂದಾಗಿ ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಪಾಲಿಸುವ ವಿಚಾರದಲ್ಲಿ ತೈಲ ಕಂಪೆನಿಗಳು ಮೂಡಿಸುತ್ತಿರುವ ಗೊಂದಲದಿಂದಾಗಿ ಗ್ರಾಹಕರು ಪರದಾಡುವಂತಾಗಿದೆ. ಅಗತ್ಯವಿರುವಷ್ಟು ಎಲ್ ಪಿಜಿ ಸಿಲಿಂಡರ್ ಲಭ್ಯವಿದ್ದು, ಗ್ರಾಹಕರು ಆತಂಕಕ್ಕೆ ಒಳಗಾಗಬಾರದು ಎಂದು ಹೇಳುತ್ತಲೇ ಇದ್ದರೂ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ನೋ ರೆಸ್ಪಾನ್ಸ್ ದೊರೆಯುತ್ತಿದೆ.

ಇದರಿಂದಾಗಿ, ಗ್ರಾಹಕರು ಸಿಲಿಂಡರ್ ಬುಕ್ಕಿಂಗ್ ಮಾಡಲು ಸಾಧ್ಯವಾಗದೆ ಪರಿತಪಿಸುವಂತಾಗಿದೆ. ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ದೇಶಗಳು ಜಂಟಿಯಾಗಿ ನಡೆಸುತ್ತಿರುವ ಯುದ್ಧದಿಂದಾಗಿ ಎಲ್‌ಪಿಜಿ ಸಿಲಿಂಡರ್ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಎದುರಾಗುವ ಸಮಸ್ಯೆಗಳನ್ನು ತಡೆಯಲು ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯನ್ನು ಸ್ಥಗಿತಗೊಳಿಸಿತ್ತಾದರೂ ನಂತರ ಶೇ. ೨೦ರಷ್ಟು ಪೂರೈಕೆಗೆ ಸಮ್ಮತಿಸಿತ್ತು. ನಂತರ, ಈ ಪ್ರಮಾಣವನ್ನು ಶೇ. ೭೦ಕ್ಕೆ ಹೆಚ್ಚಿಸುವ ಮಾತನ್ನಾಡಿತ್ತು. ಅದೇ ರೀತಿ ಗೃಹಬಳಕೆಯ ಸಿಲಿಂಡರ್‌ಗಳನ್ನು ನಗರ ಪ್ರದೇಶದಲ್ಲಿ ೨೫ ದಿನಗಳು ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ೩೫ ದಿನಗಳು ಕಳೆದ ನಂತರ ಬುಕ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಗೃಹ ಬಳಕೆದಾರರು ನಿಟ್ಟುಸಿರು ಬಿಟ್ಟಿದ್ದರು. ಆದರೆ,ಇದೀಗ ಗ್ರಾಮಾಂತರ ಪ್ರದೇಶದಲ್ಲಿ ೪೫ ದಿನಗಳಿಗೆ ಒಂದು ಸಿಲಿಂಡರ್ ಎನ್ನುವುದನ್ನು ಘೋಷಣೆ ಮಾಡಲಾಗಿದೆ. ಇದೀಗ ನಗರ ಪ್ರದೇಶದ ಗೃಹ ಬಳಕೆದಾರರು ಸಿಲಿಂಡರ್ ಬುಕ್ಕಿಂಗ್ ಮಾಡಲು ಮುಂದಾದರೆ ತೆಗೆದುಕೊಳ್ಳುತ್ತಿಲ್ಲ ಎನ್ನುವುದು ಗ್ರಾಹಕರಿಗೆ ಗೊಂದಲ ಉಂಟು ಮಾಡಿದೆ. ಕೇಂದ್ರದ ಮಾರ್ಗಸೂಚಿಯಂತೆ ೨೫ ದಿನಗಳನ್ನು ಕಳೆದಿರುವ ಎಲ್‌ಪಿಜಿ ಸಿಲಿಂಡರ್ ಬಳಕೆದಾರರು ಬುಕ್ಕಿಂಗ್ ಮಾಡಲು ಮುಂದಾದರೆ ಸಾಧ್ಯವಾಗುತ್ತಿಲ್ಲ.

ಗ್ರಾಹಕರೊಬ್ಬರಿಗೆ ಫೆ.೨೬ರಂದು ಸಿಲಿಂಡರ್ ವಿತರಣೆ ಮಾಡಲಾಗಿದ್ದು, ಮಾ. ೨೪ರ ಬಳಿಕ ಬುಕ್ಕಿಂಗ್ ಮಾಡುವಂತೆ ಸಂದೇಶ ಬಂದಿತ್ತು. ಅದರಂತೆ, ಮಾ. ೨೫ರಂದು ಬುಕ್ಕಿಂಗ್ ಮಾಡಲು ಯತ್ನಿಸಿದಾಗ ನೀವು ಏಪ್ರಿಲ್ ೩ರಂದು ನಿಮ್ಮ ಬುಕ್ಕಿಂಗ್ ಲಭ್ಯವಿದೆ ಎನ್ನುವ ಸಂದೇಶ ಬರುತ್ತಿದೆ. ಇದನ್ನು ಗಮನಿಸಿದಾಗ ಬುಕ್ಕಿಂಗ್ ಅವಧಿಯನ್ನು ೩೫ ದಿನಗಳಿಗೆ ವಿಸ್ತರಿಸಿರುವುದು ಕಂಡು ಬರುತ್ತಿದೆ. ಇದೇ ರೀತಿ ೨೫ ದಿನಗಳ ಅವಧಿ ಕಳೆದಿರುವ ಹಲವಾರು ಗ್ರಾಹಕರು ಸಿಲಿಂಡರ್ ಬುಕ್ಕಿಂಗ್ ಮಾಡಲು ಯತ್ನಿಸಿದಾಗ ನಿಮ್ಮ ಅವಧಿಯ ಸಮಯವನ್ನು ಕಾಯಬೇಕು. ಮುಂದಿನ ದಿನದಂದು ಬುಕ್ಕಿಂಗ್ ಮಾಡುವಂತೆ ಸಂದೇಶ ಬರುತ್ತಿದೆ. ಇದರಿಂದಾಗಿ, ಅನೇಕ ಗ್ರಾಹಕರು ಗ್ಯಾಸ್ ಏಜೆನ್ಸಿಗಳ ಬಳಿ ಹೋಗಿ ವಿಚಾರಿಸಿಕೊಂಡು ಬರುತ್ತಿದ್ದಾರೆ. ಹಲವರು ಸರ್ವರ್ ಸಮಸ್ಯೆ ಇರಬಹುದೆಂದು ಹೇಳಿ ರಾತ್ರಿ ೧೦ ಗಂಟೆಯ ಮೇಲೆ ಬುಕ್ಕಿಂಗ್ ಗೆ ಯತ್ನಿಸಿದರೂ ಪ್ರಯೋಜನವಾಗುತ್ತಿಲ್ಲ. ಹೀಗಾಗಿ, ಬಹುಬೇಗನೆ ಗ್ಯಾಸ್ ಖಾಲಿ ಆದ ಗ್ರಾಹಕರು ಸಿಲಿಂಡರ್‌ಗಾಗಿ ದುಬಾರಿ ಬೆಲೆ ಕೊಟ್ಟು ಖರೀದಿಸುತ್ತಿರುವುದು ಅಲ್ಲಲ್ಲಿ ನಡೆದಿದೆ.

ಕೇಂದ್ರಸರ್ಕಾರ ೨೫ದಿನಗಳ ಅವಧಿ ಮುಗಿದ ಬಳಿಕ ಬುಕ್ಕಿಂಗ್ ಮಾಡಲು ಅವಕಾಶ ಇದೆ ಎನ್ನುವುದನ್ನು ಹೇಳಿದ್ದರೂ ತೈಲ ಕಂಪೆನಿಗಳು ಒಪ್ಪಿಲ್ಲ. ಒಂದು ವೇಳೆ ಒಪ್ಪಿಕೊಂಡಿದ್ದರೂ ತನ್ನ ಸರ್ವರ್‌ನಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿಲ್ಲ. ಹಾಗಾಗಿ, ತೈಲ ಕಂಪೆನಿಗಳು ಇವತ್ತಿಗೂ ೩೫ ದಿನಗಳ ತನಕ ಸಿಲಿಂಡರ್ ಪೂರೈಸಲು ಸಮಯಪಡೆಯುತ್ತಿದೆ. ಅದೇ ರೀತಿ ವರ್ಷಕ್ಕೆ ೧೨ ಸಿಲಿಂಡರ್ ದಾಟಿ,ಹೆಚ್ಚುವರಿಯಾಗಿ ಮೂರನ್ನು ಸೇರಿ ೧೫ ಸಿಲಿಂಡರ್‌ಗಳನ್ನು ಪಡೆದಿರುವ ಗ್ರಾಹಕರಿಗೆ ಬುಕ್ಕಿಂಗ್ ಆಗುತ್ತಿಲ್ಲ. ಆರು ತಿಂಗಳಿಂದ ಗ್ಯಾಸ್ ಬುಕ್ಕಿಂಗ್ ಮಾಡದೆ ಇದ್ದವರೂ ಏಕಾಏಕೀ ಬುಕ್ಕಿಂಗ್ ಮಾಡುತ್ತಿರುವುದರಿಂದ ತೆಗೆದುಕೊಳ್ಳುತ್ತಿಲ್ಲ.

ಕೆಲವರಿಗೆ ಇ-ಕೆವೈಸಿ ಮಾಡಿಸಿಕೊಳ್ಳುವಂತೆ ಸಂದೇಶ ರವಾನೆಯಾಗುತ್ತಿದೆ. ಕೇಂದ್ರ ಸರ್ಕಾರ ಹೇಳುವಂತೆ ನಗರ ಪ್ರದೇಶದವರಿಗೆ ೨೫ ದಿನಗಳು ಕಳೆದ ಮೇಲೆ ಬುಕ್ಕಿಂಗ್ ಆಗುತ್ತಿಲ್ಲ ಎಂದು ಎಲ್‌ಪಿಜಿ ವಿತರಕರೊಬ್ಬರು ಹೇಳಿದರು.

ನಗರ ಪ್ರದೇಶದ ೨೫ ಮತ್ತು ಗ್ರಾಮಾಂತರ ೩೫ ದಿನಗಳ ಬಳಿಕ ಗ್ಯಾಸ್ ಬುಕ್ಕಿಂಗ್‌ಗೆ ನೋ ರೆಸ್ಪಾನ್ಸ್ ಕೇಂದ್ರ ಸರ್ಕಾರ ಹೇಳಿದರೂ ೩೫ ದಿನಗಳ ತನಕ ಬುಕ್ಕಿಂಗ್ ಇಲ್ಲವೆಂದು ಮಾಹಿತಿ ರವಾನೆ ನಗರ ಹಾಗೂ ಗ್ರಾಮಾಂತರ ಪ್ರದೇಶಕ್ಕೆ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಮಾಡುವ ಸಮಯ ನಿಗದಿಪಡಿಸಲಾಗಿದ್ದರೂ ೨೫ ದಿನಗಳು ಕಳೆದ ಮೇಲೆ ಬುಕ್ಕಿಂಗ್ ತೆಗೆದುಕೊಳ್ಳಲಾಗುತ್ತಿದೆ. ೩೦ ಅಥವಾ ೩೫ ದಿನಗಳು ಅಂತೇನಿಲ್ಲ. ಏನಾದರೂ ಸರ್ವರ್ ಸಮಸ್ಯೆ ಇದ್ದರೆ ತಡೆಯಾಗಬಹುದು. ಒಂದು ವೇಳೆ ೩೫ ದಿನಗಳು ಕಳೆದರೂ ಬುಕ್ಕಿಂಗ್ ಆಗಿಲ್ಲದಿರುವ ಪ್ರಕರಣಗಳು ಇದ್ದರೆ ತಮ್ಮನ್ನು ಸಂಪರ್ಕಿಸಬಹುದಾಗಿದೆ. -ಮಂಟೇಸ್ವಾಮಿ, ಜಂಟಿ ನಿರ್ದೇಶಕ, ಆಹಾರ,ನಾಗರಿಕ ಮತ್ತು ಸರಬರಾಜು ಪೂರೈಕೆ ಇಲಾಖೆ

ನಾನು ೨೫ ದಿನಗಳ ನಂತರ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಮಾಡಲು ಮುಂದಾದಾಗ ೩೦ ದಿನಗಳು ಕಳೆಯಬೇಕು ಎನ್ನುವ ಮೆಸೇಜ್ ಬಂತು. ೩೦ ದಿನಗಳ ಗಡುವು ಮುಗಿದ ಮೇಲೆ ಮಾಡಿದಾಗ ಐದು ದಿನಗಳು ಬಿಟ್ಟು ಮಾಡುವಂತೆ ಹೇಳಿರುವುದನ್ನು ನೋಡಿದರೆ ೩೫ ದಿನಗಳಾಗುತ್ತಿದೆ. ನಮಗೆ ಯಾವಾಗ ಬುಕ್ಕಿಂಗ್ ಮಾಡಬೇಕು ಎಂಬುದೇ ಗೊಂದಲಕ್ಕೆ ಕಾರಣವಾಗಿದೆ. -ಶಿವಸ್ವಾಮಿ, ಎಲ್‌ಪಿಜಿ ಸಿಲಿಂಡರ್ ಗ್ರಾಹಕ

 

ಆಂದೋಲನ ಡೆಸ್ಕ್

Recent Posts

2.20ಕೋಟಿ ರೂ.ಮೌಲ್ಯದ ಚಿನ್ನಾಭರಣ ವಶ ; 26 ಮಂದಿ ಬಂಧನ.

ಮಂಡ್ಯ : ಜಿಲ್ಲೆಯ ನಾಲ್ಕು ಪೊಲೀಸ್ ಉಪ ವಿಭಾಗಗಳಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳನ್ನು ಪೊಲೀಸರು ಬೇಧಿಸಿದ್ದಾರೆ. 28 ಮಂದಿ ಆರೋಪಿಗಳನ್ನು…

4 hours ago

ತಳಸಮುದಾಯಕ್ಕೆ ಆರ್ಥಿಕ ಸಾಮಾಜಿಕ ಶಕ್ತಿ ಅಗತ್ಯ : ಸಿಎಂ

ಬಾಗಲಕೋಟೆ : ಕಾಂಗ್ರೆಸ್ ಸರ್ಕಾರ ಮಹಿಳೆಯರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಶೋಷಿತ ವರ್ಗಗಳ ಏಳಿಗೆಗೆ ಶ್ರಮಿಸುತ್ತಿದೆ. ತಳಸಮುದಾಯದವರಿಗೆ ಆರ್ಥಿಕ…

5 hours ago

ಅಭಿವೃದ್ಧಿ ವಿಷಯದಲ್ಲಿ ರಾಜ್ಯ ಸರ್ಕಾರದ ಜತೆ ನಿಲ್ಲುತ್ತೇನೆ : ಕೇಂದ್ರ ಸಚಿವ ಎಚ್‌ಡಿಕೆ

ರಾಯಚೂರು : ಜಿಲ್ಲೆಯ ಸಿಂಧನೂರು ಪಟ್ಟಣದ ಶ್ರೀ ಕೃಷ್ಣದೇವರಾಯ ವಿದ್ಯಾಸಂಸ್ಥೆಯಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಸೈನಿಕ ಶಾಲೆಯನ್ನು ಕೇಂದ್ರದ ಬೃಹತ್ ಕೈಗಾರಿಕೆ…

5 hours ago

IPL 2026 | ಮುಂಬೈ ವಿರುದ್ಧ ಡೆಲ್ಲಿಗೆ ಭರ್ಜರಿ ಜಯ

ನವದೆಹಲಿ : ಸಮೀರ್ ರಿಜ್ವಿ ಸ್ಫೋಟಕ ಬ್ಯಾಟಿಂಗ್ ಜತೆಗೆ ಸಂಘಟಿತ ಬೌಲಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್…

5 hours ago

ಇರಾನ್ ಮೇಲೆ ಕ್ಷಿಪಣಿ ದಾಳಿ ; ಬುಶೆಹರ್ ಅಣುಸ್ಥಾವರದ ಬಳಿ ಹಾನಿ

ಟೆಹ್ರಾನ್ : ಅಮೆರಿಕದ ಮಿತ್ರರಾಷ್ಟ್ರಗಳಲ್ಲಿನ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ಮುಂದುವರಿದಿರುವಂತೆಯೇ ಇತ್ತ ಇರಾನ್ ಮೇಲೆ ಮುಗಿಬಿದ್ದಿರುವ…

6 hours ago

ಇಂಧನ ವ್ಯತ್ಯಯ ಆತಂಕ ; ಎಲೆಕ್ಟ್ರಿಕ್‌ ವಾಹನ ಮಾರಾಟದಲ್ಲಿ ಏರಿಕೆ

ಬೆಂಗಳೂರು : ಯುದ್ಧದ ಪರಿಣಾಮ ಕೆಲ ಉದ್ಯಮಗಳಿಗೆ ಹೊಡೆತ ನೀಡಿದರೆ, ಇನ್ನೂ ಕೆಲವು ಕ್ಷೇತ್ರಗಳಿಗೆ ಅದೇ ಅವಕಾಶವಾಗಿ ಪರಿಣಮಿಸಿದೆ. ಅದರಲ್ಲೂ…

6 hours ago