Andolana originals

ಜಂಬೂಸವಾರಿಯ ಸುದ್ದಿ ಮುಟ್ಟಿಸುವ ಫಿರಂಗಿ ಸದ್ದು!

ಮೈಸೂರು: ಜಂಬೂಸವಾರಿ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಪ್ರವಾಸಿಗರು ಕಾತರದಿಂದ ಕಾಯುವುದು ಸರ್ವೇ ಸಾಮಾನ್ಯ. ಅದರಲ್ಲೂ ಹಳ್ಳಿಗಳಿಂದ ಆಗಮಿಸಿ ದಾರಿಯುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಕಾದು ಕೂರುವ ಮಂದಿಗೆ ಜಂಬೂಸವಾರಿ ಯಾವಾಗ ಹೊರಡುತ್ತದೆ ಎನ್ನುವುದನ್ನು ಯಾರೂ ತಲುಪಿಸಲ್ಲ.

ಆದರೆ, ಜಂಬೂ ಸವಾರಿ ದಿನ ೨೧ ಬಾರಿ ಸಿಡಿಸುವ ಸಿಡಿಮದ್ದಿನ ಸದ್ದು ಮಾತ್ರ ಮುಟ್ಟಿಸುತ್ತದೆ. ತಮ್ಮ ಕಣ್ಣೆದುರು ಬಂದಾಗ ಕಣ್ತುಂಬಿ ವೀಕ್ಷಿಸಿ ಆನಂದಿಸುವ ತನಕ ಗಂಟೆಗಟ್ಟಲೇ ಕಾಯುವ ಮನದಲ್ಲಿ ಫಿರಂಗಿ ಸದ್ದು ಕೇಳಿದೊಡನೆ ಎಲ್ಲಿಲ್ಲದ ಸಂತಸ. ಈ ಫಿರಂಗಿ ಸದ್ದು ಹೊರ ಬೀಳುತ್ತಿದ್ದಂತೆ ಕೊನೆಗೂ ಜಂಬೂಸವಾರಿ ಶುರುವಾಯ್ತು ಅನ್ನುತ್ತಲೇ ಮನಸ್ಸಿನಲ್ಲಿ ತಿಳಿದು ನೋಡುತ್ತಾರೆ. ಅಂತಹ ವಿಶೇಷತೆ ಇರುವ ಫಿರಂಗಿಗೆ ನೂರಾರು ವರ್ಷಗಳ ಇತಿಹಾಸವಿದೆ. ಸುದೀರ್ಘ ಇತಿಹಾಸ: ಫಿರಂಗಿಗಳಿಗೆ ೨೦೦ಕ್ಕೂ ಹೆಚ್ಚು ವರ್ಷಗಳ ಸುದೀರ್ಘ ಇತಿಹಾಸವಿದೆ.

ಭಾರತದಲ್ಲಿ ಈ ಮೊದಲು ಯುದ್ಧದ ಸಂದರ್ಭದಲ್ಲಿ ಕತ್ತಿ, ಗುರಾಣಿ, ಈಟಿ ಇತ್ಯಾದಿ ಸ್ವದೇಶಿ ನಿರ್ಮಿತ ಆಯುಧಗಳ ಬಳಕೆಯಾಗುತ್ತಿತ್ತು. ಬ್ರಿಟಿಷರ ಆಗಮನದ ನಂತರ ಅವರೊಂದಿಗೆ ಈ ಫಿರಂಗಿಯೂ ಬಂದಿತು. ನಂತರದ ದಿನಗಳಲ್ಲಿ ಮೈಸೂರು ಪ್ರಾಂತ್ಯವನ್ನಾಳುತ್ತಿದ್ದ ಟಿಪ್ಪು ಸುಲ್ತಾನ್ ಅವರು ಫ್ರೆಂಚರ ನೆರವಿನಿಂದ ಮೈಸೂರಿಗೆ ಫಿರಂಗಿಗಳನ್ನು ತರಿಸಿಕೊಂಡಿ ದ್ದರು. ನಂತರ ೧೭೯೨ರಲ್ಲಿ ಶ್ರೀರಂಗಪಟ್ಟಣದ ಕೋಟೆಯಲ್ಲಿ ನಡೆದ ಮೂರನೇ ಮೈಸೂರು- ಆಂಗ್ಲೋ ಯುದ್ಧದಲ್ಲಿ ಇದೇ ಫಿರಂಗಿಗಳು ಬಳಕೆಯಾಗಿದ್ದವು.

ಬಳಿಕ ೧೭೯೯ರಲ್ಲಿ ನಡೆದ ನಾಲ್ಕನೇ ಯುದ್ಧದಲ್ಲಿಯೂ ಫಿರಂಗಿಗಳನ್ನು ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಬಳಸಿಕೊಳ್ಳಲಾಗಿತ್ತು. ಈ ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಸಾವನ್ನಪ್ಪಿದರು. ಇದಾದ ನಂತರ ಮತ್ತೇ ಫಿರಂಗಿಗಳನ್ನು ಬಳಸುವ ಸಂದರ್ಭ ಎದುರಾಗಲಿಲ್ಲ. ಇದೀಗ ಫಿರಂಗಿಗಳನ್ನು ದಸರಾ ಸಂದರ್ಭದಲ್ಲಿ ಬಳಸಲಾಗುತ್ತದೆ. ದಸರಾ ಮೆರವಣಿಗೆಗೆ ಚಾಲನೆ ನೀಡುವ ವೇಳೆ ಹಾಗೂ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ನಡೆಯುವ ವೇಳೆ ಫಿರಂಗಿ ಮೂಲಕ ೨೧ ಕುಶಾಲುತೋಪುಗಳನ್ನು ಹಾರಿಸಲಾಗುತ್ತದೆ. ನಂತರ ಮತ್ತೆ ಪೊಲೀಸ್ ಇಲಾಖೆ ಅವುಗಳನ್ನು ಅರಮನೆ ಮಂಡಳಿಯ ವಶಕ್ಕೆ ನೀಡುತ್ತದೆ.

೫೩ ಸೆಕೆಂಡುಗಳಲ್ಲಿ ಕೆಲಸ ಪೂರ್ಣ: ಫಿರಂಗಿ ಸಿಡಿಸುವುದು ಅಷ್ಟು ಸುಲಭವಲ್ಲ. ನಿಜಕ್ಕೂ ಅತ್ಯಂತ ರೋಮಾಂಚನ ಮತ್ತು ಅಪಾಯಕಾರಿ ಕೆಲಸ. ರಾಷ್ಟ್ರಗೀತೆಯನ್ನು ನುಡಿಸುವ ಅವಽ ೫೩ ಸೆಕೆಂಡುಗಳು ಮಾತ್ರ. ಇಷ್ಟು ಕಡಿಮೆ ಅವಽಯಲ್ಲಿ ಪೊಲೀಸರು ೨೧ ಸುತ್ತು ಕುಶಾಲು ತೋಪುಗಳನ್ನು ಹಾರಿಸಬೇಕಿದೆ. ಪೊಟಾಷಿಯಂ ಹಾಗೂ ಮದ್ದು ಪುಡಿಯ ಮಿಶ್ರಣವನ್ನು ಒಬ್ಬರು ತುಂಬಿದರೆ, ಮತ್ತೊಬ್ಬರು ಅದಕ್ಕೆ ಬೆಂಕಿಯನ್ನು ತಗುಲಿಸುವ ಕೆಲಸ ಮಾಡಬೇಕು. ಭಾರೀ ಶಬ್ದದೊಂದಿಗೆ ಕುಶಾಲು ತೋಪು ಹಾರಿದ ನಂತರ ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಅದನ್ನು ಕ್ಷಣ ಮಾತ್ರದಲ್ಲಿ ಸ್ವಚ್ಛಗೊಳಿಸಬೇಕು. ಈ ಪ್ರಕ್ರಿಯೆ ೨೧ ಸುತ್ತು ಕುಶಾಲು ತೋಪು ಹಾರಿಸುವಾಗಲೂ ನಡೆಯಬೇಕು. ಸಮಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಸ್ಥಳದಲ್ಲಿರುವ ಸಿಬ್ಬಂದಿ ಅಪಾಯಕ್ಕೆ ಸಿಲುಕಬೇಕಾಗುತ್ತದೆ.

ಶುಕ್ರವಾರದಿಂದ ಕುಶಾಲು ತೋಪು ತಾಲೀಮು

ಕುಶಾಲತೋಪು ಹಾರಿಸುವ ಸಲುವಾಗಿ ಸಿಎಆರ್ ಎಸಿಪಿ, ಎಎಸ್‌ಐ ನೇತೃತ್ವದಲ್ಲಿ ೩೦ ಮಂದಿ ಪೊಲೀಸರ ತಂಡ ಶುಕ್ರವಾರದಿಂದ ತಾಲೀಮು ಶುರು ಮಾಡಿದೆ. ಪ್ರತಿದಿನ ಬೆಳಿಗ್ಗೆ ೭ ಗಂಟೆಯಿಂದ ೧೦ ಗಂಟೆಯವರೆಗೆ ಮದ್ದು ಮಿಶ್ರಣವನ್ನು ಬಳಸದೆ ಅಭ್ಯಾಸ ನಡೆಸಲಿದೆ. ಮುಂದಿನ ದಿನಗಳಲ್ಲಿ ಆನೆಗಳು, ಅಶ್ವಾರೋಹಿ ಪಡೆಯನ್ನು ನಿಲ್ಲಿಸಿಕೊಂಡು ಕುಶಾಲು ತೋಪು ಸಿಡಿಸುವ ತಾಲೀಮು ನಡೆಯಲಿದೆ.

ಕುಶಾಲುತೋಪು ಸಿಡಿಸಲು 35 ಮಂದಿ ಬಳಕೆ: ಕುಶಾಲು ತೋಪು ಹಾರಿಸುವುದೆಂದರೆ ಅದು ಸಾಮಾನ್ಯವಾದ ವಿಷಯವಲ್ಲ. ಅದಕ್ಕೆ ನುರಿತ ಸಿಬ್ಬಂದಿ ಬೇಕು. ಕುಶಾಲು ತೋಪು ಸಿಡಿಸುವ ವೇಳೆ ಸ್ವಲ್ಪ ಏರುಪೇರಾದರೂ ಪ್ರಾಣಕ್ಕೆ ಕುತ್ತು ಬರುವುದು ಗ್ಯಾರಂಟಿ. ಹೀಗಾಗಿ ಫಿರಂಗಿ ಬಳಕೆಯ ಅನುಭವವಿರುವ ೩೫ ಮಂದಿ ಸಿಬ್ಬಂದಿಯನ್ನು ಈ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತದೆ.

ಫಿರಂಗಿ ಬಳಕೆ ತಂಡಕ್ಕೂ ಜೀವ ವಿಮೆ: ಕುಶಾಲು ತೋಪು ಸಿಡಿಸುವಾಗ ಈ ಹಿಂದೆ ಸಣ್ಣಪುಟ್ಟ ಅಹಿತಕರ ಘಟನೆಗಳು ನಡೆದು ಪೊಲೀಸರು ಗಾಯಗೊಂಡಿದ್ದು ಉಂಟು. ಹಾಗಾಗಿ, ಕಳೆದ ಮೂರು ವರ್ಷಗಳಿಂದ ಫಿರಂಗಿ ಬಳಕೆಯ ತಂಡಕ್ಕೂ ಜೀವ ವಿಮೆ ಮಾಡಿಸಲಾಗಿದೆ.

 

ಕೆ.ಬಿ. ರಮೇಶ ನಾಯಕ

ಪ್ರಸ್ತುತ ಆಂದೋಲನ ದಿನಪತ್ರಿಕೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿರುವ ನಾನು ಮೂಲತಃ ಚಾಮರಾಜನಗರ ತಾಲ್ಲೂಕು ಮತ್ತು ಜಿಲ್ಲೆಯ ಕಣ್ಣೇಗಾಲ ಗ್ರಾಮದವನು. ಚಾಮರಾಜನಗರ ತಾಲ್ಲೂಕಿನ ಆಲೂರು ಗ್ರಾಮದಲ್ಲಿ ಪ್ರಾಥಮಿಕ,ಪ್ರೌಢಶಿಕ್ಷಣ, ಚಾಮರಾಜನಗರದಲ್ಲಿ ಪಿಯುಸಿ ವ್ಯಾಸಂಗ ಮಾಡಿದ ನಾನು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದೇನೆ. 1992ರಿಂದ 2002ರವರೆಗೆ ಮೈಸೂರು ಮಿತ್ರ ಪತ್ರಿಕೆಯಲ್ಲಿ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಸೇವೆ ಸಲ್ಲಿಸಿದ ಬಳಿಕ 2002ರಿಂದ 2012ರವರೆಗೆ ಸಂಯುಕ್ತ ಕರ್ನಾಟಕ ಮೈಸೂರು ಪ್ರಾದೇಶಿಕ ಕಚೇರಿಯಲ್ಲಿ ವರದಿಗಾರನಾಗಿ, 2013ರಿಂದ 2015ರವರೆಗೆ ಹಾಸನ ಮತ್ತು ಮೈಸೂರಿನಲ್ಲಿ ವಿಜಯ ಕರ್ನಾಟಕ ಹಿರಿಯ ವರದಿಗಾರನಾಗಿ, 2015ರಿಂದ 2017ರವರೆಗೆ ಸಂಯುಕ್ತ ಕರ್ನಾಟಕ ಮುಖ್ಯ ವರದಿಗಾರನಾಗಿ, 2017ರಿಂದ 2020 ಜೂನ್‌ವರಗೆ ವಿಶ್ವವಾಣಿ ಮೈಸೂರು ಬ್ಯೂರೋ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿದ್ದೇನೆ.

Recent Posts

ಸರ್ಕಾರಿ ಅಧಿಕಾರಿಗಳಿಗೆ ಲೋಕಾ ಶಾಕ್‌ : ಮೈಸೂರು ಸೇರಿ ಹಲವೆಡೆ ದಾಳಿ

ಮೈಸೂರು : ಲೋಕಾಯುಕ್ತ ಅಧಿಕಾರಿಗಳು ಮೈಸೂರು, ದಾವಣಗೆರೆ, ಬೆಂಗಳೂರು, ಧಾರವಾಡ, ಶಿವಮೊಗ್ಗ ಸೇರಿ ರಾಜ್ಯದ ಹಲವೆಡೆ ಏಕಕಾಲದಲ್ಲಿ ಮಿಂಚಿನ ದಾಳಿ…

29 mins ago

ಭಾರತ್‌ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಹೊಸದಿಲ್ಲಿ : ಕೇಂದ್ರ ಸರ್ಕಾರದ ಕಾರ್ಮಿಕ, ರೈತ ಮತ್ತು ’ಕಾರ್ಪೊರೇಟ್ ಪರ’ ನೀತಿಗಳನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಗಳ ಜಂಟಿ…

44 mins ago

ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ : ಮಂಡ್ಯ ರಮೇಶ್, ಸಾಧು ಕೋಕಿಲಾ ಕೇಸ್‌ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು : ಕನ್ನಡದ ಜನಪ್ರಿಯ ನಟ, ಸಂಗೀತ ನಿರ್ದೇಶಕ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿರುವ ಸಾಧು ಕೋಕಿಲಾ ಹಾಗೂ…

1 hour ago

ಯತೀಂದ್ರ ಸಿದ್ಧರಾಮಯ್ಯ ಅವಹೇಳನ ಪ್ರಕರಣ: ಪ್ರತಾಪ್ ಸಿಂಹ ಹಾಗೂ ಬಿಜೆಪಿ ಐಟಿ ಸೆಲ್ ವಿರುದ್ಧ ದೂರು ದಾಖಲು

ಮೈಸೂರು: ಎಂಎಲ್‌ಸಿ ಯತಿಂದ್ರ ಸಿದ್ದರಾಮಯ್ಯ ವಿರುದ್ಧ ಅವಹೇಳನ ಪೋಸ್ಟ್‌ ಮಾಡಿದ್ದ ಮಾಜಿ ಸಂಸದ ಪ್ರತಾಪ್‌ ಸಿಂಹ ಹಾಗೂ ಬಿಜೆಪಿ ಐಟಿ…

5 hours ago

ಫೆಬ್ರವರಿ.13ರಿಂದ ಹಂಪಿ ಉತ್ಸವ-2026

ವಿಜಯನಗರ: ವಿಜಯನಗರ ಸಾಮ್ರಾಜ್ಯದ ಗತವೈಭವ ನೆನಪು ಮಾಡಿಕೊಡುವ ಹಂಪಿ ಉತ್ಸವದ ತಯಾರಿ ನಡೆಯುತ್ತಿದೆ. ಫೆಬ್ರವರಿ.13, 14 ಹಾಗೂ 15ರಂದು ಹಂಪಿ…

5 hours ago

ಹನೂರು ಕ್ಷೇತ್ರದಲ್ಲಿ 15 ವರ್ಷಗಳಿಂದ ಆಗದೇ ಇದ್ದ ಅಭಿವೃದ್ಧಿ ಕಾರ್ಯ ನಾನು ಮಾಡಿ ತೋರಿಸಿದ್ದೇನೆ: ಶಾಸಕ ಎಂ.ಆರ್.ಮಂಜುನಾಥ್‌

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ವಿಧಾನಸಭಾ ಕ್ಷೇತ್ರದ ಮತದಾರರ ಋಣದಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಚುನಾವಣಾ ಪೂರ್ವದಲ್ಲಿ…

5 hours ago