Andolana originals

ಬೃಹತ್‌ ಎಂಸಿಸಿ ರಚನೆ ನನೆಗುದಿಗೆ

ಕೆ.ಬಿ.ರಮೇಶನಾಯಕ

ಮೈಸೂರು : ಮೈಸೂರು ಮಹಾನಗರಪಾಲಿಕೆ ಯನ್ನು ಬೃಹತ್ ಮೈಸೂರು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಿ ೫ ತಿಂಗಳು ಕಳೆದರೂ ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿಲ್ಲ. ಕೇಂದ್ರ ಸರ್ಕಾರ ದೇಶಾದ್ಯಂತ ನಡೆಸುತ್ತಿರುವ ಜನಗಣತಿ ವರದಿ ಹೊರ ಬೀಳುವ ತನಕ ಅಧಿಕೃತ ಆದೇಶ ಹೊರಡಿ ಸುವುದು ಅನುಮಾನವಾಗಿದೆ.

ಬೃಹತ್ ನಗರಪಾಲಿಕೆಯನ್ನಾಗಿ ೨೦೨೬ರ ಜನವರಿ ೮ ರಂದು ಮರು ನಾಮಕರಣ ಮಾಡಿ ಅಧಿಕೃತ ಆದೇಶ ಹೊರಡಿಸಿ ಆಕ್ಷೇಪಣೆಗೆ ನೀಡಿದ್ದ ಒಂದು ತಿಂಗಳ ಕಾಲಾವಕಾಶ ಮುಗಿದ ಮೇಲೆ ಈತನಕ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ. ಇದರಿಂದಾಗಿ, ಯಾವುದೇ ಬದಲಾವಣೆ ಇಲ್ಲದೆ ಯಥಾಸ್ಥಿತಿಯಲ್ಲೇ ಮೈಸೂರು ನಗರಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಆಡಳಿತ ನಿರ್ವ ಹಣೆ ಮುಂದುವರಿದಿದೆ.

ಬೆಂಗಳೂರು ನಂತರ ರಾಜಕೀಯ, ಪ್ರವಾ ಸೋದ್ಯಮ, ಧಾರ್ಮಿಕ, ಐಟಿ-ಬಿಟಿ ಕ್ಷೇತ್ರಗಳಲ್ಲಿ ಮುಂದುವರಿಯುತ್ತಿರುವ ಮೈಸೂರನ್ನು ಬಿಬಿ ಎಂಪಿ ಮಾದರಿಯಲ್ಲಿ ಬೃಹತ್ ನಗರಪಾಲಿಕೆಯನ್ನಾಗಿ ಮಾಡಬೇಕೆಂಬ ಕೂಗು ಎದ್ದಿತ್ತು.

ಹೀಗಾಗಿ, ಜಿಲ್ಲೆಯವರೇ ಆಗಿರುವ ಸಿದ್ದರಾಮಯ್ಯ ಅವರು ಹಲವಾರು ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಣೆ ಮಾಡುವ ಜತೆಗೆ, ಬೃಹತ್ ನಗರಪಾಲಿಕೆಯನ್ನಾಗಿ ಮಾಡುವ ಅಭಯ ನೀಡಿದ್ದರು. ಅದಕ್ಕಾಗಿ,ಮೈಸೂರಿನಲ್ಲೇ ಸಂಸದರು, ಶಾಸಕರು ಸೇರಿದಂತೆ ಅಧಿಕಾರಿಗಳ ಮಹತ್ವದ ಸಭೆ ನಡೆಸಿದ್ದರು.

ನಂತರ ಜನವರಿ ೮ರಂದು ರಾಜ್ಯಪತ್ರ ಹೊರಡಿಸಲಾಗಿತ್ತು. ಬೃಹತ್ ಪಾಲಿಕೆ ರಚನೆ ವಿಚಾರದಲ್ಲಿ ಏನಾದರೂ ಆಕ್ಷೇಪಣೆಗಳಿದ್ದಲ್ಲಿ ಪೌರಾಡಳಿತ ನಿರ್ದೇಶನಾಲಯಕ್ಕೆ ೩೦ದಿನಗಳ ಒಳಗಾಗಿ ಸಲ್ಲಿಸಬಹುದೆಂದು ಪ್ರಕಟಣೆ ಹೊರಡಿಸಿತ್ತು. ಆಕ್ಷೇಪಣೆ ಅವಧಿ ಫೆ.೮ಕ್ಕೆ ಮುಗಿದ ಮೇಲೆ ಈತನಕ ಯಾವುದೇ ಬೆಳವಣಿಗೆಗಳು ನಡೆಯದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪೌರಾಡಳಿತ ನಿರ್ದೇಶನಾಲಯ ಹೊರಡಿಸಿರುವ ಆದೇಶದ ಪ್ರಕಾರ ಆಕ್ಷೇಪಣೆ ಗಡುವು ಮುಗಿಯುತ್ತಿದ್ದಂತೆ ರಾಜ್ಯಸರ್ಕಾರ ಅಂತಿಮ ಆದೇಶ ಹೊರಡಿಸಬೇಕಿತ್ತಾದರೂ ಆಂತರಿಕವಾಗಿ ನಡೆದಿರುವ ಕೆಲವು ವಿದ್ಯಮಾನಗಳು ವಿಳಂಬಕ್ಕೆ ಕಾರಣ ಎನ್ನಲಾಗಿದೆ.

ಜನಗಣತಿ ವರದಿ ಅಡ್ಡಿ
ಕೇಂದ್ರ ಸರ್ಕಾರ ದೇಶಾದ್ಯಂತ ನಡೆಸುತ್ತಿರುವ ಜನಗಣತಿ ವರದಿ ಹೊರ ಬೀಳುವ ತನಕ ಅಂತಿಮ ಅಧಿಸೂಚನೆ ಹೊರಡಿಸುವುದು ಅನುಮಾನವಾಗಿದೆ ಎಂದು ಬಲ್ಲ ಮೂಲಗಳು ಹೇಳಿವೆ. ೨೦೧೧ರ ಜನಗಣತಿ ಪ್ರಕಾರ ಮೈಸೂರು ನಗರದಲ್ಲಿ ೯,೨೦,೫೫೦ ಜನಸಂಖ್ಯೆ ಇದ್ದು,ಪ್ರಸ್ತುತ ೧೧,೪೬,೦೬೯ ಜನಸಂಖ್ಯೆ ಇರಬಹುದೆಂದು ಅಂದಾಜಿಸಲಾಗಿದೆ. ಘೋಷಿತವಾಗಿರುವ ಬೃಹತ್ ಮೈಸೂರು ನಗರಪಾಲಿಕೆಯಲ್ಲಿ ೧೪,೧೬,೬೭೧ ಜನಸಂಖ್ಯೆ ಇರಬಹುದು ಎಂದು ಹೇಳಲಾಗಿದೆ. ಜನಗಣತಿ ವರದಿ ಬಂದ ಮೇಲೆ ಮೈಸೂರು ನಗರದ ಜನಸಂಖ್ಯೆಯು ನಿಖರವಾಗಿ ಗೊತ್ತಾಗುವ ಕಾರಣ ಮುಂದಿನ ದಿನಗಳಲ್ಲಿ ಒಂದಿಷ್ಟು ಬದಲಾವಣೆ, ಸೇರ್ಪಡೆ, ವಾರ್ಡುಗಳ ವಿಂಗಡಣೆ ಮೊದಲಾದ ವಿಚಾರಗಳಲ್ಲಿ ನಿರ್ಧರಿಸಬೇಕಿರುವ ಕಾರಣ ಅಲ್ಲಿಯವರೆಗೆ ಅಂತಿಮ ಅಧಿಸೂಚನೆ ಹೊರಡಿವುದು ಅನುಮಾನವಾಗಿದೆ.

ಯಥಾಸ್ಥಿತಿಯಲ್ಲೇ ಸ್ಥಳೀಯ ಸಂಸ್ಥೆಗಳ ಆಡಳಿತ
ಬೃಹತ್ ನಗರಪಾಲಿಕೆಯನ್ನಾಗಿ ಸರ್ಕಾರ ಅಂತಿಮ ಅಽಸೂಚನೆ ಹೊರಡಿಸದ ಕಾರಣ ಮಹಾನಗರಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಅಧಿಕಾರಿಗಳ ಬದಲಾವಣೆ ಸೇರಿದಂತೆ ಇನ್ನಿತರ ಕೆಲಸಗಳು ಎಂದಿನಂತೆ ನಡೆಯುತ್ತಿದೆ. ಹೂಟಗಳ್ಳಿ ನಗರಸಭೆ, ಬೋಗಾದಿ, ಶ್ರೀರಾಂಪುರ, ಕಡಕೊಳ, ರಮ್ಮನಹಳ್ಳಿ ಪಪಂ, ಸೇರ್ಪಡೆಗೊಂಡಿರುವ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಪಪಂಗಳಿಗೆ ತಹಸಿಲ್ದಾರ್‌ಗಳನ್ನು ಆಡಳಿತಾಧಿಕಾರಿಗಳನ್ನಾಗಿ, ಗ್ರಾಪಂಗಳಿಗೆ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಿಸಲಾಗಿದೆ.

 

ಆಂದೋಲನ ಡೆಸ್ಕ್

Recent Posts

25ನೇ ಸಿಎಂ ಆಗಿ ಇಂದು ಡಿಕೆಶಿ ಪ್ರಮಾಣ ವಚನ ; ಸಂಭ್ರಮದ ಸಿದ್ಧತೆ

ಬೆಂಗಳೂರು : ರಾಜ್ಯ ರಾಜಕಾರಣದ ಅತ್ಯಂತ ಮಹತ್ವದ ಘಟ್ಟಕ್ಕೆ ರಾಜಧಾನಿ ಬೆಂಗಳೂರು ಸಾಕ್ಷಿಯಾಗುತ್ತಿದ್ದು, ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್…

26 mins ago

ಪಂಜು ಗಂಗೊಳ್ಳಿ ಅವರ ವಾರದ ಅಂಕಣ | ನೀರಿಲ್ಲದ ನೀರಿನ ಟ್ಯಾಂಕಿನಲ್ಲಿ ಕಲಿಯುವ ಮಕ್ಕಳ ಕಲರವ!

90ರ ದಶಕದಲ್ಲಿ ಪೊತುಕುಚಿ ಶ್ರೀನಿವಾಸ್ ಹೈದರಾಬಾದಿನ ಮಿಯಾಪುರದಲ್ಲಿದ್ದ ಒಂದು ಜರ್ಮನ್ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಿದ್ದರು. ಅವರ ಕಂಪೆನಿಯ ಪಕ್ಕದಲ್ಲಿ ಒಂದು…

29 mins ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜೂನ್‌ 03 ಬುಧವಾರ

1 hour ago

ಮತ್ತೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ: ಈಶ್ವರ್‌ ಖಂಡ್ರೆ

ನವದೆಹಲಿ: ಸಿದ್ದರಾಮಯ್ಯ ಸಂಪುಟದಲ್ಲಿ ಅರಣ್ಯ ಸಚಿವರಾಗಿದ್ದ ಈಶ್ವರ್‌ ಖಂಡ್ರೆ ಅವರು ಮತ್ತೆ ಸಚಿವ ಸ್ಥಾನ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ…

16 hours ago

ಕೊಡಗಿನ ಮೂಲಕ ಹಾದುಹೋಗುವ ಯಾವುದೇ ರೈಲು ಮಾರ್ಗದ ಪ್ರಸ್ತಾವನೆ ಇಲ್ಲ: ಸಂಸದ ಯದುವೀರ್‌ ಒಡೆಯರ್‌ ಸ್ಪಷ್ಟನೆ

ಮಡಿಕೇರಿ: ಕೊಡಗು ಜಿಲ್ಲೆಯ ಮೂಲಕ ಹಾದುಹೋಗುವ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಪ್ರಸ್ತುತ ರೈಲ್ವೆ ಸಚಿವಾಲಯದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ…

16 hours ago

ಬಿಜೆಪಿಗೆ ಅಣ್ಣಾಮಲೈ ಗುಡ್‌ಬೈ: ನಿತಿನ್‌ ನಬಿನ್‌ಗೆ ರಾಜೀನಾಮೆ ಸಲ್ಲಿಕೆ

ನವದೆಹಲಿ: ಮಾಜಿ ಐಪಿಎಸ್‌ ಅಧಿಕಾರಿ ಕೆ.ಅಣ್ಣಾಮಲೈ ಬಿಜೆಪಿಗೆ ಗುಡ್‌ಬೈ ಹೇಳಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನಬಿನ್‌ ಅವರನ್ನು ಭೇಟಿಯಾಗಿ ರಾಜೀನಾಮೆ…

18 hours ago