Andolana originals

ಸೋದರನಿಂದಲೇ ವಂಚನೆ: ಸೋದರಿಗಿಲ್ಲ ಸೂರು

ಅಕ್ಕನ ಮನೆಯ ಖಾತೆಯನ್ನು ತನ್ನ ಹೆಸರಿಗೆ ಬದಲಿಸಿಕೊಂಡು ವಂಚನೆ
• ಶ್ರೀಧರ್ ಆರ್ ಭಟ್

ನಂಜನಗೂಡು: ವ್ಯಕ್ತಿಯೊಬ್ಬ ತನ್ನ ಸಹೋದರಿಯ ಮನೆಯ ಖಾತೆಯನ್ನು ಅಕ್ರಮವಾಗಿ ತನ್ನ ಹೆಸರಿಗೆ ಬದಲಿಸಿಕೊಂಡು ವಂಚಿಸಿ, ಆಕೆಯನ್ನು ಮನೆಯಿಂದ ಹೊರಹಾಕಿರುವ ಘಟನೆ ತಾಲ್ಲೂಕಿನಲ್ಲಿ ನಡೆದಿದೆ.

ಚಿನ್ನದಗುಡಿಹುಂಡಿ ಗ್ರಾಮದ ಕರಿಗಮ್ಮ ತನ್ನ ಸಹೋದರನಿಂದ ವಂಚನೆಗೆ ಒಳಗಾದವರು.

ಪ್ರಾಯದಲ್ಲೇ ಬೆಂಗಳೂರು ಸೇರಿ ಅವರಿವರ ಮನೆಯ ಮುಸುರೆ ತಿಕ್ಕಿ, ಕೂಲಿ ನಾಲಿ ಮಾಡಿ, ಒಂದಿಷ್ಟು ಕಾಸು ಕೂಡಿಟ್ಟ ಕರಿಗಮ ಅವರು ತಂದೆ ಬಸವೇಗೌಡರಿಂದ ತನಗೆ ದಾನವಾಗಿ ಬಂದ ಚಿನ್ನದಗುಡಿಹುಂಡಿ ಗ್ರಾಮದ ನಿವೇಶನದಲ್ಲಿ ಕೆಲ ವರ್ಷಗಳ ಹಿಂದೆ ಮನೆ ನಿರ್ಮಿಸಿದ್ದರು. ಆದರೆ, ತಂದೆಯಿಂದ ಬಂದ ನಿವೇಶನದಲ್ಲಿ ನಿರ್ಮಿಸಿದ ಮನೆಯಲ್ಲೀಗ ಕರಿಗಮ್ಮ ಅವರಿಗೇ ಜಾಗವಿಲ್ಲವಾಗಿದೆ. ಇತ್ತ ಅವರಿಗೆ ತಂದೆಯೂ ಇಲ್ಲ, ಅತ್ತ ಪತಿಯೂ ಇಲ್ಲ, ಮಕ್ಕಳೂ ಇಲ್ಲ. ಹೀಗಾಗಿ ಕರಿಗಮ್ಮ ಅವರ ಗೋಳು ಕೇಳುವವರಾರು ಎಂಬ ಪ್ರಶ್ನೆ ಉದ್ಭವಿಸಿದೆ.

ಸಹೋದರನೇ ತನಗೆ ವಂಚನೆ ಮಾಡಬಹುದು ಎಂದು ತಿಳಿಯದ ಕರಿಗಮ್ಮ ಅವರು ಮನೆಯನ್ನು ಸಹೋದರ ನಾಗರಾಜ ಅವರ ಸುಪರ್ದಿಗೆ ವಹಿಸಿ ಮತ್ತೆ ಬೆಂಗಳೂರಿಗೆ ತೆರಳಿದ್ದರು. ಕೆಲ ವರ್ಷಗಳ ನಂತರ ಮನೆಗೆ ಬಂದರೆ ‘ನಿನಗೆ ಈ ಮನೆಯಲ್ಲಿ ಜಾಗವೇ ಇಲ್ಲ’ ಎಂಬ ಮಾತು ಸಹೋದರನಿಂದ ಬಂದಾಗ ಕರಿಗಮ್ಮನ ಸ್ಥಿತಿ ಅಯೋಮಯವಾಯಿತು.

ಕರಿಗಮ್ಮ ಅವರು ತಮ್ಮ ತಂದೆ ಬಸವೇಗೌಡರಿಂದ ಬಂದ ನಿವೇಶನದ ಜಂಜರ್ ನಂ.633ರ 30X40 ಚದರಡಿ ನಿವೇಶನದಲ್ಲಿ ಮನೆ ನಿರ್ಮಿಸಿ ಪಂಚಾಯಿತಿಯಿಂದ ಖಾತೆಯನ್ನೂ ಮಾಡಿಸಿಕೊಂಡಿದ್ದರು. ಆದರೆ ಈಗ ಆ ಮನೆ ಕರಿಗಮ್ಮನಿಗೆ ತಿಳಿಯದ ಹಾಗೆ ಸಹೋದರ ನಾಗರಾಜು ಹೆಸರಿಗೆ ಖಾತೆಯಾಗಿದೆ.

ಸಹೋದರ ನಾಗರಾಜು ನೋಟರಿಯವರಿಂದ ಒಂದು ಅಫಿಡವಿಟ್ ಸಿದ್ಧಪಡಿಸಿ, ಆ ದಾಖಲೆಯ ಮೇಲೆ ಬದನವಾಳು ಪಂಚಾಯಿತಿಗೆ ತೆರಳಿ ಕುತಂತ್ರ ಮಾಡಿ ತನ್ನ ಹೆಸರಿಗೆ ಮನೆಯ ಖಾತೆಯನ್ನು ಬದಲಾಯಿಸಿ ಕೊಂಡು ನಾನು ಕಟ್ಟಿದ ಮನೆಯಿಂದ ನನ್ನನ್ನು ಹೊರಹಾಕಿದ್ದಾನೆ ಎಂಬುದು ಕರಿಗಮ್ಮನವರ ಆರೋಪವಾಗಿದೆ.

ಮನೆಯಿಲ್ಲದ ಈ ವಯೋವೃದ್ಧೆ ಈಗ ಅವರಿವರ ಮನೆಯ ಜಗುಲಿಯ ಮೇಲೆ ಕಾಲ ಕಳೆಯುತ್ತಾ, ಬೆಳಗಾದರೆ ನ್ಯಾಯಕ್ಕಾಗಿ ಕಂಡ ಕಂಡ ಮುಖಂಡರು ಮತ್ತು ಅಧಿಕಾರಿಗಳ ಮನೆ ಬಾಗಿಲಿಗೆ ಎಡತಾಕುತ್ತಿದ್ದಾರೆ.

ನೋಟರಿ ಅಫಿಡವಿಟ್ ಆಧಾರದ ಮೇಲೆ ಖಾತೆ ಬದಲಾವಣೆ ಮಾಡಿರುವುದು ಅಕ್ಷಮ್ಯ ಅಪರಾಧ. ಈ ಕುರಿತು ವರದಿ ತರಿಸಿಕೊಂಡು ತಪ್ಪಾಗಿದ್ದಲ್ಲಿ ಈ ಖಾತೆಯನ್ನು ರದ್ದುಪಡಿಸಲಾಗುವುದು.
-ಜೆರಾಲ್ಡ್ ರಾಜೇಶ್, ಇಒ, ತಾಪಂ.

ಹಿಂದಿದ್ದ ಪಿಡಿಒ ಈ ಖಾತೆ ಬದಲಾವಣೆ ಮಾಡಿದ್ದಾರೆ. ಮೇಲಧಿಕಾರಿಗಳಿಂದ ಆದೇಶ ಮಾಡಿಸಿದರೆ ಈ ಖಾತೆಯನ್ನು ಸ್ಥಗಿತಗೊಳಿ ಸುವೆ. ಈ ಕುರಿತು ಈಗಾಗಲೇ ಮೇಲಧಿಕಾರಿ ಗಳಿಗೆ ವರದಿ ನೀಡಿದ್ದೇನೆ.
-ಕರಿಯಪ್ಪ, ಪಿಡಿಒ, ಬದನವಾಳು ಗ್ರಾಪಂ

ಆಂದೋಲನ ಡೆಸ್ಕ್

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

9 hours ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

13 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

13 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

13 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

13 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

13 hours ago