Andolana originals

ಸೋದರನಿಂದಲೇ ವಂಚನೆ: ಸೋದರಿಗಿಲ್ಲ ಸೂರು

ಅಕ್ಕನ ಮನೆಯ ಖಾತೆಯನ್ನು ತನ್ನ ಹೆಸರಿಗೆ ಬದಲಿಸಿಕೊಂಡು ವಂಚನೆ
• ಶ್ರೀಧರ್ ಆರ್ ಭಟ್

ನಂಜನಗೂಡು: ವ್ಯಕ್ತಿಯೊಬ್ಬ ತನ್ನ ಸಹೋದರಿಯ ಮನೆಯ ಖಾತೆಯನ್ನು ಅಕ್ರಮವಾಗಿ ತನ್ನ ಹೆಸರಿಗೆ ಬದಲಿಸಿಕೊಂಡು ವಂಚಿಸಿ, ಆಕೆಯನ್ನು ಮನೆಯಿಂದ ಹೊರಹಾಕಿರುವ ಘಟನೆ ತಾಲ್ಲೂಕಿನಲ್ಲಿ ನಡೆದಿದೆ.

ಚಿನ್ನದಗುಡಿಹುಂಡಿ ಗ್ರಾಮದ ಕರಿಗಮ್ಮ ತನ್ನ ಸಹೋದರನಿಂದ ವಂಚನೆಗೆ ಒಳಗಾದವರು.

ಪ್ರಾಯದಲ್ಲೇ ಬೆಂಗಳೂರು ಸೇರಿ ಅವರಿವರ ಮನೆಯ ಮುಸುರೆ ತಿಕ್ಕಿ, ಕೂಲಿ ನಾಲಿ ಮಾಡಿ, ಒಂದಿಷ್ಟು ಕಾಸು ಕೂಡಿಟ್ಟ ಕರಿಗಮ ಅವರು ತಂದೆ ಬಸವೇಗೌಡರಿಂದ ತನಗೆ ದಾನವಾಗಿ ಬಂದ ಚಿನ್ನದಗುಡಿಹುಂಡಿ ಗ್ರಾಮದ ನಿವೇಶನದಲ್ಲಿ ಕೆಲ ವರ್ಷಗಳ ಹಿಂದೆ ಮನೆ ನಿರ್ಮಿಸಿದ್ದರು. ಆದರೆ, ತಂದೆಯಿಂದ ಬಂದ ನಿವೇಶನದಲ್ಲಿ ನಿರ್ಮಿಸಿದ ಮನೆಯಲ್ಲೀಗ ಕರಿಗಮ್ಮ ಅವರಿಗೇ ಜಾಗವಿಲ್ಲವಾಗಿದೆ. ಇತ್ತ ಅವರಿಗೆ ತಂದೆಯೂ ಇಲ್ಲ, ಅತ್ತ ಪತಿಯೂ ಇಲ್ಲ, ಮಕ್ಕಳೂ ಇಲ್ಲ. ಹೀಗಾಗಿ ಕರಿಗಮ್ಮ ಅವರ ಗೋಳು ಕೇಳುವವರಾರು ಎಂಬ ಪ್ರಶ್ನೆ ಉದ್ಭವಿಸಿದೆ.

ಸಹೋದರನೇ ತನಗೆ ವಂಚನೆ ಮಾಡಬಹುದು ಎಂದು ತಿಳಿಯದ ಕರಿಗಮ್ಮ ಅವರು ಮನೆಯನ್ನು ಸಹೋದರ ನಾಗರಾಜ ಅವರ ಸುಪರ್ದಿಗೆ ವಹಿಸಿ ಮತ್ತೆ ಬೆಂಗಳೂರಿಗೆ ತೆರಳಿದ್ದರು. ಕೆಲ ವರ್ಷಗಳ ನಂತರ ಮನೆಗೆ ಬಂದರೆ ‘ನಿನಗೆ ಈ ಮನೆಯಲ್ಲಿ ಜಾಗವೇ ಇಲ್ಲ’ ಎಂಬ ಮಾತು ಸಹೋದರನಿಂದ ಬಂದಾಗ ಕರಿಗಮ್ಮನ ಸ್ಥಿತಿ ಅಯೋಮಯವಾಯಿತು.

ಕರಿಗಮ್ಮ ಅವರು ತಮ್ಮ ತಂದೆ ಬಸವೇಗೌಡರಿಂದ ಬಂದ ನಿವೇಶನದ ಜಂಜರ್ ನಂ.633ರ 30X40 ಚದರಡಿ ನಿವೇಶನದಲ್ಲಿ ಮನೆ ನಿರ್ಮಿಸಿ ಪಂಚಾಯಿತಿಯಿಂದ ಖಾತೆಯನ್ನೂ ಮಾಡಿಸಿಕೊಂಡಿದ್ದರು. ಆದರೆ ಈಗ ಆ ಮನೆ ಕರಿಗಮ್ಮನಿಗೆ ತಿಳಿಯದ ಹಾಗೆ ಸಹೋದರ ನಾಗರಾಜು ಹೆಸರಿಗೆ ಖಾತೆಯಾಗಿದೆ.

ಸಹೋದರ ನಾಗರಾಜು ನೋಟರಿಯವರಿಂದ ಒಂದು ಅಫಿಡವಿಟ್ ಸಿದ್ಧಪಡಿಸಿ, ಆ ದಾಖಲೆಯ ಮೇಲೆ ಬದನವಾಳು ಪಂಚಾಯಿತಿಗೆ ತೆರಳಿ ಕುತಂತ್ರ ಮಾಡಿ ತನ್ನ ಹೆಸರಿಗೆ ಮನೆಯ ಖಾತೆಯನ್ನು ಬದಲಾಯಿಸಿ ಕೊಂಡು ನಾನು ಕಟ್ಟಿದ ಮನೆಯಿಂದ ನನ್ನನ್ನು ಹೊರಹಾಕಿದ್ದಾನೆ ಎಂಬುದು ಕರಿಗಮ್ಮನವರ ಆರೋಪವಾಗಿದೆ.

ಮನೆಯಿಲ್ಲದ ಈ ವಯೋವೃದ್ಧೆ ಈಗ ಅವರಿವರ ಮನೆಯ ಜಗುಲಿಯ ಮೇಲೆ ಕಾಲ ಕಳೆಯುತ್ತಾ, ಬೆಳಗಾದರೆ ನ್ಯಾಯಕ್ಕಾಗಿ ಕಂಡ ಕಂಡ ಮುಖಂಡರು ಮತ್ತು ಅಧಿಕಾರಿಗಳ ಮನೆ ಬಾಗಿಲಿಗೆ ಎಡತಾಕುತ್ತಿದ್ದಾರೆ.

ನೋಟರಿ ಅಫಿಡವಿಟ್ ಆಧಾರದ ಮೇಲೆ ಖಾತೆ ಬದಲಾವಣೆ ಮಾಡಿರುವುದು ಅಕ್ಷಮ್ಯ ಅಪರಾಧ. ಈ ಕುರಿತು ವರದಿ ತರಿಸಿಕೊಂಡು ತಪ್ಪಾಗಿದ್ದಲ್ಲಿ ಈ ಖಾತೆಯನ್ನು ರದ್ದುಪಡಿಸಲಾಗುವುದು.
-ಜೆರಾಲ್ಡ್ ರಾಜೇಶ್, ಇಒ, ತಾಪಂ.

ಹಿಂದಿದ್ದ ಪಿಡಿಒ ಈ ಖಾತೆ ಬದಲಾವಣೆ ಮಾಡಿದ್ದಾರೆ. ಮೇಲಧಿಕಾರಿಗಳಿಂದ ಆದೇಶ ಮಾಡಿಸಿದರೆ ಈ ಖಾತೆಯನ್ನು ಸ್ಥಗಿತಗೊಳಿ ಸುವೆ. ಈ ಕುರಿತು ಈಗಾಗಲೇ ಮೇಲಧಿಕಾರಿ ಗಳಿಗೆ ವರದಿ ನೀಡಿದ್ದೇನೆ.
-ಕರಿಯಪ್ಪ, ಪಿಡಿಒ, ಬದನವಾಳು ಗ್ರಾಪಂ

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನವಾಗಲಿ

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ೨೦೧೪ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕರ್ನಾಟಕವು ಮೇಕೆದಾಟು ಜಲಾಶಯ ನಿರ್ಮಿಸಲು ತಮಿಳುನಾಡು ಸೇರಿದಂತೆ ಯಾವುದೇ…

1 hour ago

ಓದುಗರ ಪತ್ರ: ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಚುರುಕುಗೊಳ್ಳಲಿ

ಮೈಸೂರು ನಗರದಲ್ಲಿ ಅನೇಕ ಕಡೆ ಪಾದಚಾರಿಗಳಿಗೆ ಅಡಚಣೆಯಾಗಿದ್ದ ಫುಟ್‌ಪಾತ್ ವ್ಯಾಪಾರಿಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಬಹುತೇಕ ಕಡೆ…

1 hour ago

ಓದುಗರ ಪತ್ರ: ಕೂಡ್ಲಾಪುರ ಗ್ರಾಮಕ್ಕೆ ಕಬಿನಿ ನೀರು ಕೊಡಿ

ನಂಜನಗೂಡು ತಾಲ್ಲೂಕಿನ ಕೂಡ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬರ ಪರಿಸ್ಥಿತಿಯಿಂದಾಗಿ ಕೆರೆಗಳು ಬತ್ತಿಹೋಗಿದ್ದು, ಕುಡಿಯುವ ನೀರು ಸಿಗದೆ ತೊಂದರೆಯಾಗಿದೆ. ನಂಜನಗೂಡು…

1 hour ago

ಗಾಮೀಣ ಜನರ ಏಳಿಗೆಗೆ IHDUA ಪಣ

ಪ್ರಸನ್ನ ಎಂ.ಕೆ. ಖ್ಯಾತ ಕ್ಯಾನ್ಸರ್ ರೋಗ ತಜ್ಞರು, ಭಾರತ್ ಕ್ಯಾನ್ಸರ್ ಹಾಸ್ಪಿಟಲ್ ಹಾಗೂ ಎಚ್‌ಸಿಜಿ ಆಸ್ಪತ್ರೆ ಛೇರ್ಮನ್ ಮತ್ತು ಸಂಸ್ಥಾಪಕರು,…

1 hour ago

ಸತ್ಯಮಂಗಲ-ಮೀಣ್ಯಂ ರಸ್ತೆಯಲ್ಲಿ ಸಂಚಾರ ದುಸ್ತರ

ಮಾದೇಶ್ ಗೌಡ ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಸವಾರರ ಆಗ್ರಹ; ಅಭಿವೃದ್ಧಿಯಾಗದಿದ್ದರೆ ಪ್ರತಿಭಟನೆ ಎಚ್ಚರಿಕೆ ಹನೂರು: ತಾಲ್ಲೂಕಿನ ಮೀಣ್ಯಂ ಗ್ರಾಪಂ ವ್ಯಾಪ್ತಿಯ…

1 hour ago

ಪಿರಿಯಾಪಟ್ಟಣ: ಗರಿಗೆದರಿದ ತಂಬಾಕು ಕೃಷಿ ಚಟುವಟಿಕೆ

ನವೀನ್‌ಕುಮಾರ್ ತಂಬಾಕು ಹದಗೊಳಿಸುವ ಕಾರ್ಯ ಚುರುಕು; ಉತ್ತಮ ಬೆಲೆ ನಿರೀಕ್ಷೆಯಲ್ಲಿ ರೈತರು ಪಿರಿಯಾಪಟ್ಟಣ: ತಾಲ್ಲೂಕಿನಾದ್ಯಂತ ತಂಬಾಕು ಕೃಷಿ ಚಟುವಟಿಕೆಗಳು ಗರಿಗೆದರಿವೆ.…

1 hour ago