Andolana originals

ಓದುಗರ ಪತ್ರ: ʼಅನ್ನ’ ಉಳ್ಳವರು ಮತ್ತು ಇಲ್ಲದವರ ನಡುವಿನ ಕಂದಕ

ಅಪ್ಪ-ಅವ್ವ ಕಳೆದುಹೋದ ಮಗನನ್ನು ಹುಡುಕಿ ಬರುತ್ತಾರೆ. ಅಪ್ಪ-ಅವ್ವನನ್ನು ನೋಡಿದ ಮಗ ಓಡಿ ಹೋಗುತ್ತಾನೆ. ಮಧ್ಯೆ ಒಂದು ಕಂದಕ ಹಾಗೆಯೇ ಇದೆ. ಅಪ್ಪ-ಅವ್ವನನ್ನು ನೋಡಿ ಓಡಿ ಹೋಗುವಂತೆ ಮಾಡಿದ್ದು, ಅದೇನು? ‘ಅನ್ನ’.

ಅಕ್ಕಿ ಮೂಟೆಯನ್ನು ಮುಟ್ಟುವ ಬಸವರಾಜು… ಒಂದು ಹಿಡಿ ಅನ್ನಕ್ಕೆ ಒಂದು ಕಡೆ ಮೂಟೆ ಮೂಟೆ ಪೇರಿಸಿರುವ ಅಕ್ಕಿ ಮೂಟೆ… ಮತ್ತೊಂದೆಡೆ ತುತ್ತು ಅನ್ನ ತಿನ್ನುವುದಕ್ಕೆ ಹಂಬಲಿಸುವ ಗುಡಿಸಲುಗಳು… ಇದರ ಮಧ್ಯೆ ನಡೆಯುವುದೇ ‘ಅನ್ನ’ ಸಿನೆಮಾ.

ಹನೂರು ಚನ್ನಪ್ಪ ಅವರ ಕತೆಯನ್ನು ನಿರ್ದೇಶಕ ಇಸ್ಲಾಹುದ್ದೀನ್ ಸಿನೆಮಾ ಮಾಡಿದ್ದಾರೆ. ಅನ್ನಕ್ಕಾಗಿ ಅಷ್ಟು ಆಸೆ ಪಡುವ ಪರಿಸ್ಥಿತಿ ಇಂದು ಇಲ್ಲ. ಆದರೆ ಇಲ್ಲಿಯತನಕ ಬರುವುದಕ್ಕೆ ಒಂದು ವರ್ಗ ಪಟ್ಟಪಾಡು, ಅದರ ದಾರುಣತೆಯನ್ನು ತೆರೆದಿಡುವ ಅನ್ನ ಸಿನೆಮಾ ನೋಡಿದ ಪ್ರೇಕ್ಷಕರನ್ನು ಅಲ್ಲಾಡಿಸಿಬಿಡುತ್ತದೆ. ಸಂಪತ್ ಮೈತ್ರೇಯ ಮತ್ತು ಪದ್ಮಶ್ರೀ ಅವರು ಸಿನಿಮಾದಲ್ಲಿ ಪಾತ್ರಗಳಲ್ಲಿ ಜೀವಿಸಿಬಿಟ್ಟಿದ್ದಾರೆ ಎನ್ನುವಂತಿದೆ. ಸಿನೆಮಾದುದ್ದಕ್ಕೂ ಯಾವ ಪಾತ್ರವೂ ಕಪ್ಪು ಬಿಳುಪಾಗಿರದೇ ಅಪಟ ಮನುಷ್ಯರಾಗಿ ಕಾಣಿಸುವುದರಿಂದ ಇದು ಭಿನ್ನವಾಗಿ ಕಾಣುತ್ತದೆ. ಬಹುತೇಕ ಚಾಮರಾಜನಗರ ಭಾಗದ ಕಲಾವಿದರನ್ನೇ ಆಯ್ಕೆ ಮಾಡಿಕೊಂಡಿರುವುದು ಅಲ್ಲಿನ ಭಾಷಾ ಸೊಗಡನ್ನು ಅದು ಇರುವ ಹಾಗೆಯೇ ಅನುಭವಕ್ಕೆ ಬರುತ್ತದೆ. ‘ನನ್ನ ಮಗ ಮಾದೇವ ಚಿನ್ನ ಕೇಳಿಲ್ಲ ಬೆಳ್ಳಿ ಕೇಳಿಲ್ಲ. ಅನ್ನ ಕೇಳ ಅದ್ದೂ ಕೊಡಕ್ಕಾಗಿಲ್ಲ’ ಅಂತ ಹೇಳುವ ತಂದೆಯ ಮಾತು’, ‘ನೀನು ಆಟ ಸಾಮಾನು ತೆಕ್ಕೊಟ್ಟಿದ್ರೆ ಒಯ್ದಿದ್ದಾ ಮಗ’ ಎನ್ನುವ ತಾಯಿಯ ಮಾತು ಎಂಥವರನ್ನೂ ಸಂಕಟಕ್ಕೆ ಒಯ್ಯುತ್ತದೆ. ಒಂದೇ ದೃಶ್ಯದಲ್ಲಿ ಮಗನನ್ನು ಕಳೆದುಕೊಂಡ ಇಬ್ಬರು ತಾಯಿಯರು ಬದುಕಿನ ಸಂದಿಗ್ಧತೆಯನ್ನು ಎದುರಿಗಿಟ್ಟರೆ, ಎಲ್ಲಿಗೆ ಹೋಗಬೇಕು ಎನ್ನುವ ಮಾದೇವನ ಆಯ್ಕೆಯ ಸಂಕಟದಲ್ಲಿ ಬಡತನ ದಾರುಣತೆ ಅನುಭವಕ್ಕೆ ಬರುತ್ತದೆ. ಅನ್ನ ಕೊಡಲಿಕ್ಕಾಗದೇ ತನ್ನ ಮಗನನ್ನೇ ಬೇಡುವ ಅಪ್ಪ-ಅವ್ವ ನೋಡುಗರನ್ನು ಕಾಡುತ್ತಲೇ ಇರುತ್ತಾರೆ. ಅನ್ನಕ್ಕಾಗಿ ಅಪ್ಪ-ಅವ್ವನನ್ನೆ ಬಿಟ್ಟು ಓಡಿ ಹೋಗುವ ಮಾದೇವನಿಗೆ ಅವರ ಮೇಲೆ ಅಪಾರ ಪ್ರೀತಿಯಿದೆ. ಅವರನ್ನು ನೆನಪಿಸಿಕೊಂಡು ಅಳುತ್ತಾನೆ. ಆದರೆ ಅವರ ಬಳಿ ಹೋಗಲಾರ. ಇಂಥ ಮಾದೇವರು ನಮ್ಮ ಸುತ್ತಲೂ ಕಾಣುತ್ತಾರೆ.
-ಚಿತ್ರಾ ವೆಂಕಟರಾಜು, ಚಾಮರಾಜನಗರ

 

ಆಂದೋಲನ ಡೆಸ್ಕ್

Recent Posts

ಚಾಮರಾಜನಗರ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆ

ಚಾಮರಾಜನಗರ: ನಗರದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶ ಬಂದ ಹಿನ್ನೆಲೆಯಲ್ಲಿ ಪೊಲೀಸರು,…

27 mins ago

ಬಿಆರ್‌ಟಿ ವ್ಯಾಪ್ತಿಯಲ್ಲಿ ಕಾಡಾನೆ ಕಳೇಬರ ಪತ್ತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ವನ್ಯಜೀವಿ ವಲಯ ವ್ಯಾಪ್ತಿಯ ಕಾರೆಪಾಳ್ಯ ಗಸ್ತಿನ ಸಮೀಪ ಅರಣ್ಯ ಪ್ರದೇಶದಿಂದ ಸುಮಾರು…

48 mins ago

ತೊಟ್ಟಿಲುಶಾಸ್ತ್ರ, ಸಿದ್ದಪ್ಪಾಜಿ ಕಂಡಾಯೋತ್ಸವದಲ್ಲಿ ತಾರಾ, ಶಶಿಕುಮಾರ್ ಭಾಗಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ದೊಡ್ಡಾಲತ್ತೂರು ಗ್ರಾಮದ ಶ್ರೀ ಮಕ್ಕಳೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ…

52 mins ago

ಬೆಳೆಗೆ ಸಿಗದ ಬೆಲೆ: ಯುವ ರೈತ ಆತ್ಮಹತ್ಯೆ

ಕೆ.ಆರ್.ನಗರ: ತಂಬಾಕು ಬೆಳೆಗೆ ಸರಿಯಾಗಿ ಬೆಲೆ ಸಿಗದೇ ನಷ್ಟವಾದ ಹಿನ್ನೆಲೆಯಲ್ಲಿ ಮಾಡಿದ್ದ ಸಾಲ ತೀರಿಸಲಾಗದೆ ಮನನೊಂದು ರೈತರೊಬ್ಬರು ತಮ್ಮ ಜಮೀನಿನಲ್ಲಿ…

2 hours ago

ಮುಂದಿನ ಒಂದು ವಾರಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಗಾಳಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಿಕ್ಕಮಗಳೂರು, ಹಾಸನ, ಶಿವಮೊಗ್ಗ,…

3 hours ago

ಸಾಲಬಾಧೆ; ರೈತ ಆತ್ಮಹತ್ಯೆ

ರಾವಂದೂರು: ರೈತರೊಬ್ಬರು ತಾವು ಬೆಳೆದ ತಂಬಾಕಿಗೆ ಸೂಕ್ತ ಬೆಲೆ ಸಿಗದೆ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.…

5 hours ago