Andolana originals

ವಿ.ನಾಲೆಯುದ್ದಕ್ಕೂ ತಡೆಗೋಡೆ ನಿರ್ಮಾಣಕ್ಕೆ ಕ್ರಮ

ಸರಣಿ ಅವಘಡಗಳ ಕೂಪ: ಕೊನೆಗೂ ಎಚ್ಚೆತ್ತ ಮಂಡ್ಯ ಜಿಲ್ಲಾಡಳಿತ

೨.೫ ಕಿ.ಮೀ. ದೂರ ಮೆಟಲ್ ಕ್ರಾಸ್‌ಬ್ಯಾರಿಯರ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿ

ಹೇಮಂತ್‌ಕುಮಾರ್

ಮಂಡ್ಯ: ಹಲವು ಅವಘಡಗಳು ಸಂಭವಿಸಿದ ಬಳಿಕ ಎಚ್ಚೆತ್ತುಕೊಂಡ ಆಡಳಿತ ಕೊನೆಗೂ ವಾಹನ ಸಂಚಾರ ದಟ್ಟಣೆ ಇರುವ ಆಯ್ದ ಸ್ಥಳಗಳಲ್ಲಿ ವಿಶ್ವೇಶ್ವರಯ್ಯ ನಾಲೆ ಏರಿಯ ಮೇಲೆ ತಡೆಗೋಡೆ ನಿರ್ಮಿಸಲು ಯೋಜನೆ ರೂಪಿಸುವ ಮೂಲಕ ಮುಂದಾಗುವ ಅನಾಹುತಗಳನ್ನು ತಡೆಗಟ್ಟಲು ಕ್ರಮ ಕೈಗೊಂಡಿರುವುದರಿಂದ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.

ಮಂಡ್ಯ ತಾಲ್ಲೂಕಿನ, ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ತಿಬ್ಬನಹಳ್ಳಿ (ಜಯಪುರ) ಗ್ರಾಮವು ಕೆಆರ್‌ಎಸ್‌ನಿಂದ ೩೨ನೇ ಕಿ.ಮೀ. ದೂರಲ್ಲಿದೆ. ಏಷ್ಯಾದ ಮೊದಲ ಜಲ ಸುರಂಗವಿರುವ ಸ್ಥಳವಿದು. ಹಾಗಾಗಿ ಟನಲ್ ಹುಲಿಕೆರೆಯೆಂದೇ ಪ್ರಸಿದ್ಧಿ. ಇಲ್ಲಿಂದ ಜಯಪುರದವರೆಗೆ ಮೂರು ಕಿ.ಮೀ. ದೂರದ ಕಾಲುವೆಯು ಬಲಭಾಗದಲ್ಲಿ ಹರಿಯುತ್ತದೆ. ಈ ಕಾಲುವೆಯ ಒಂದು ಬದಿಗೆ ತಡೆಗೋಡೆಯನ್ನು ಆರು ಅಡಿ ಎತ್ತರದಲ್ಲಿ ನಿರ್ಮಿಸಿದರೆ ಶಾಶ್ವತ ಪರಿಹಾರ ಸಿಗುತ್ತದೆ ಎಂಬುದು ಗ್ರಾಮಸ್ಥರ ಆಗ್ರಹ. ಈ ಭಾಗದಲ್ಲಿ ಶಾಲೆ ಕಾಲೇಜಿನ ಮಕ್ಕಳು ಓಡಾಡುತ್ತಿರುತ್ತಾರೆ. ಖಾಸಗಿ ಸಂಸ್ಥೆ ಬಸ್ಸುಗಳು ಹಾಗೂ ಸರ್ಕಾರಿ ಬಸ್ಸುಗಳು ಹೆಚ್ಚು ಸಂಚರಿಸುತ್ತವೆ. ಹಾಗೆಯೇ ಈ ಭಾಗದ ತರಕಾರಿ, ಕಬ್ಬು, ಭತ್ತ, ಬೆಳೆಯುವ ರೈತರು ಇದೇ ಮಾರ್ಗವಾಗಿ ಕೃಷಿ ಉತ್ಪನ್ನಗಳನ್ನು ಸಾಗಿಸುತ್ತಾರೆ.

ಮಂಡ್ಯದಿಂದ ಹುಲಿಕೆರೆ ಮಾರ್ಗವಾಗಿ ಪಾಂಡವಪುರ, ಮೈಸೂರು-ಬೆಂಗಳೂರಿಗೆ ಹೋಗುವ ಖಾಸಗಿ ವಾಹನಗಳು ಸೇರಿದಂತೆ ಇತರ ಹಳ್ಳಿಗಳಿಗೆ ಹೋಗುವ ಬಸ್ಸುಗಳು ಕೂಡ ಇದೇ ಹಾದಿಯಲ್ಲಿ ಸಾಗುತ್ತವೆ. ಈಗಾಗಲೇ ಈ ಭಾಗದಲ್ಲಿ ಸರಣಿ ದುರಂತಗಳು ಸಂಭವಿಸಿವೆ.

ನಾಮಕಾವಸ್ತೆಗೆ ತಡೆಗೋಡೆ ನಿರ್ಮಾಣ ಜಯಪುರ ಗ್ರಾಮದಲ್ಲಿ ಹೆಚ್ಚು ಕಡಿದಾದ ತಿರುವಿದೆ. ನಾಮಕಾವಸ್ತೆಗೆ ಅರ್ಧ ಕಿ.ಮೀ. ಮಾತ್ರ ತಾತ್ಕಾಲಿಕ ತಡೆಗೋಡೆ ನಿರ್ಮಿಸಿದ್ದಾರೆ. ಇಂತಹ ಅನಾಹುತಗಳನ್ನು ತಡೆಯಲು ಕಾಲುವೆಯ ಪಕ್ಕ ತಡೆಗೋಡೆ ಹಾಗೂ ಒತ್ತುವರಿಯಾಗಿರುವ ಜಾಗವನ್ನು ತೆರವು ಮಾಡಿ ಜಾಗವನ್ನು ವಿಸ್ತರಿಸಿ ಪೂರ್ಣ ಪ್ರಮಾಣದ ರಸ್ತೆಯನ್ನು ನಿರ್ಮಿಸುವ ಮೂಲಕ ಅವಘಡಗಳನ್ನು ತಡೆಗಟ್ಟುವಂತೆ ಜಯಪುರದ ಗ್ರಾಮಸ್ಥರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದರು.

ಕಾಮಗಾರಿ ಆರಂಭ: ಇದೀಗ ಜಿಲ್ಲಾಡಳಿತ, ನೀರಾವರಿ ಇಲಾಖೆ ಎಚ್ಚೆತ್ತುಕೊಂಡಿದ್ದು, ವಿಸಿ ನಾಲೆ ಟನಲ್‌ನ ಎಕ್ಸಿಟ್ ಪಾಯಿಂಟ್‌ನಿಂದ ಹಳೆ ಮದ್ದೂರು ಶಾಖಾ ನಾಲೆಯವರೆಗೆ ತಡೆಗೋಡೆ ನಿರ್ಮಿಸುವ ಕಾಮಗಾರಿ ಆರಂಭಿಸಿದೆ.ತಮ್ಮ ಮನವಿಗೆ ಸ್ಪಂದಿಸಿದ್ದಕ್ಕಾಗಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತು ಜಿಲ್ಲಾಧಿಕಾರಿ ಕುಮಾರ್ ಅವರಿಗೆ ಸ್ಥಳೀಯ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.

ಅಸಲಿಗೆ ಇದು ವಾಹನ ಸಂಚಾರದ ರಸ್ತೆಯೇ ಅಲ್ಲ!:

ಮಂಡ್ಯ: ಯಾವುದೇ ಅವಘಡಗಳು ಸಂಭವಿಸಿದ ಕೂಡಲೇ ನೀರಾವರಿ ಇಲಾಖೆಯವರು ತಡೆಗೋಡೆ ನಿರ್ಮಿಸಿಲ್ಲ. ಅವರಿಗೆ ಮಾನವೀಯತೆಯೇ ಇಲ್ಲ ಎಂದು ಜನರು ಆರೋಪಿಸುವುದು ವಾಡಿಕೆಯಾಗಿದೆ. ಆದರೆ, ವಾಸ್ತವವೇ ಬೇರೆ ಇದೆ. ಟನಲ್ ಹುಲಿಕೆರೆ ಉದ್ದಕ್ಕೂ ಇರುವ ರಸ್ತೆಯು ವಿ.ನಾಲೆಯ ಸರ್ವೀಸ್ ರಸ್ತೆಯಾಗಿದ್ದು, ಇದನ್ನು ಲೋಕೋಪಯೋಗಿ ಇಲಾಖೆ ಸಾರ್ವಜನಿಕ ಸಂಚಾರ ರಸ್ತೆಯನ್ನಾಗಿ ಬಳಸಿಕೊಂಡು ಡಾಂಬರು ಹಾಕಿ ವಾಹನಗಳಿಗೆ ಅನುವು ಮಾಡಿಕೊಟ್ಟಿದೆ. ಆದರೂ ನಮ್ಮ ಕಾವೇರಿ ನೀರಾವರಿ ನಿಗಮವು ಮಾನವೀಯತೆ ದೃಷ್ಟಿಯಿಂದ ಸುಮಾರು ೨.೫ ಕಿ.ಮೀ. ದೂರ ಮೆಟಲ್ ಕ್ರಾಸ್‌ಬ್ಯಾರಿಯರ್ ಅಳವಡಿಸುವ ಕಾರ್ಯ ಕೈಗೊಂಡಿದೆ ಎಂದು ನಿಗಮದ ಪಾಂಡವಪುರ ವಿಭಾಗದ ಎಇಇ ಜಯರಾಮ್ ತಿಳಿಸಿದ್ದಾರೆ.

ಅವಘಡಗಳ ಸರಣಿ: 

■ ೨೦೧೮ ನವೆಂಬರ್: ಪಾಂಡವಪುರ ತಾಲ್ಲೂಕಿನ ಕನಗನಮರಡಿಯ ವಿಶ್ವೇಶ್ವರಯ್ಯ ವಿತರಣಾ ನಾಲೆ ಯಲ್ಲಿ ಬಸ್ ಅಪಘಾತಕ್ಕೆ ಒಳಗಾಗಿ ೩೦ ಜನ ಸಾವು

■ ೨೦೨೩ನವೆಂಬರ್ ೭: ಪಾಂಡವಪುರ ಬಳಿಯ ಬನಘಟ್ಟದ ವಿ.ನಾಲೆಯಲ್ಲಿ ಕಾರು ಬಿದ್ದು, ಐವರು ಸಾವನ್ನಪ್ಪಿದ್ದರು

■ ೨೦೨೩ ಜುಲೈ ೨೭: ಮಂಡ್ಯ ತಾಲ್ಲೂಕಿನ ತಿಬ್ಬನಹಳ್ಳಿ ಬಳಿ ಕಾರು ವಿ.ನಾಲೆಗೆ ಪಲ್ಟಿಯಾಗಿ, ಚಾಲಕ ಲೋಕೇಶ್ ಮೃತಪಟ್ಟಿದ್ದರು.

 ■೨೦೨೩ ಜುಲೈ ೨೯: ಶ್ರೀರಂಗಪಟ್ಟಣ ತಾಲ್ಲೂಕಿನ ಗಾಮನಹಳ್ಳಿ ಬಳಿ ಕಾರೊಂದು ವಿ.ನಾಲೆಗೆ ಬಿದ್ದು, ನಾಲ್ವರು ಮೃತಪಟ್ಟಿದ್ದರು.

■ ೨೦೨೩ ನವೆಂಬರ್ ೮: ಪಾಂಡವಪುರ ತಾಲ್ಲೂಕಿನ ಬನಘಟ್ಟ ಬಳಿ ಕಾರು ವಿ.ನಾಲೆಗೆ ಬಿದ್ದು ಐವರು ದಾರುಣವಾಗಿ ಸಾವನ್ನಪ್ಪಿದ್ದರು.

■ ೨೦೨೪ ಮಾ.೧೨: ಮಂಡ್ಯದ ಅವ್ವೇರಹಳ್ಳಿ ಗ್ರಾಮದ ಬಳಿ ಸ್ವಿಫ್ಟ್ ಕಾರೊಂದು ನಾಲೆಯೊಳಗೆ ಬಿದ್ದು, ಕಾರಿನಲ್ಲಿದ್ದ ಇಬ್ಬರ ಪೈಕಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು.

ಆಂದೋಲನ ಡೆಸ್ಕ್

Recent Posts

ದರ್ಶನ್‌ ಪತ್ನಿ ವಿರುದ್ಧ ಅಶ್ಲೀಲ ಕಮೆಂಟ್‌ ಪ್ರಕರಣ: 6 ಮಂದಿ ವಿರುದ್ಧ ಚಾರ್ಜ್‌ಶೀಟ್‌

ಬೆಂಗಳೂರು: ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಅವರಿಗೆ ಸೋಷಿಯಲ್‌ ಮೀಡಿಯಾದಲ್ಲಿ ಅಶ್ಲೀಲ ಕಮೆಂಟ್‌ ಪ್ರಕರಣದ ತನಿಖೆ ಕೊನೆಯ ಹಂತಕ್ಕೆ ಬಂದು…

5 mins ago

ರಾಜ್ಯ ಸರ್ಕಾರ ವೇಣುಗೋಪಾಲ್‌ ಕಿವಿ ಹಿಂಡಬೇಕು: ಬಿ.ವೈ.ವಿಜಯೇಂದ್ರ

ಬೆಂಗಳೂರು: ಕೇರಳ ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮೊದಲ ಭಾಷೆಯಾಗಿ ಮಲೆಯಾಳಂ ಕಡ್ಡಾಯ ಕಲಿಕೆ ಮಸೂದೆ ಜಾರಿಗೆ ಮುಂದಾಗಿರುವ ವಿಚಾರಕ್ಕೆ…

28 mins ago

ಶೀತದಲೆ ಹಿನ್ನೆಲೆ: ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ

ಬೆಂಗಳೂರು: ರಾಜ್ಯಾದ್ಯಂತ ಚಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಲವು ಜಿಲ್ಲೆಗಳಲ್ಲಿ ಶೀತಗಾಳಿ, ಶೀತದ ಅಬ್ಬರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಶೀತದಲೆ…

1 hour ago

‘ಸಾವಿನ ನಂತರವೂ ಜನಮಾನಸದಲ್ಲಿ ಉಳಿದ ವೀರಭದ್ರಪ್ಪ’

ಯಳಂದೂರು: ನುಡಿನಮನ ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಬಣ್ಣನೆ  ಯಳಂದೂರು: ಜನರ ಪ್ರೀತಿ ಗಳಿಕೆಯೇ ಸಾರ್ಥಕಜೀವನವಾಗಿದ್ದು, ಮನುಕುಲವನ್ನು ಕೃತಾರ್ಥ ಮಾಡುವ ಕೆಲಸವನ್ನು…

5 hours ago

ಓದುಗರ ಪತ್ರ: ಮಹಿಳೆ ವಿವಸ ಪ್ರಕರಣ ತನಿಖೆಯಲ್ಲಿ ಪೂರ್ವಗ್ರಹ ಬೇಡ

ಹುಬ್ಬಳ್ಳಿಯಲ್ಲಿ ನಡೆದ ಮಹಿಳೆಯ ವಿವಸ ಪ್ರಕರಣ ಅತ್ಯಂತ ಅಮಾನವೀಯವಾದುದು. ಸಂತ್ರಸ್ತ ಮಹಿಳೆ ಬಿಜೆಪಿಯೋ, ಕಾಂಗ್ರೆಸ್ಸೋ ಎನ್ನುವುದು ನಂತರದ ವಿಚಾರ. ಮೊದಲಿಗೆ…

5 hours ago

ಓದುಗರ ಪತ್ರ: ಶಾಲೆ ಬಳಿಯೇ ಕಸದ ಗುಡ್ಡೆ!

ನಂಜನಗೂಡು ಬಜಾರ್ ರಸ್ತೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ಇದೆ. ಇದನ್ನು ದಳವಾಯಿ ಶಾಲೆ…

5 hours ago