Andolana originals

ತುಕ್ಕು ಹಿಡಿದ ರಾಜಾಸೀಟ್‌ನ ಪುಟಾಣಿ ರೈಲು

7 ವರ್ಷಗಳಿಂದ ಸ್ಥಗಿತ : ಪುನರಾರಂಭಿಸಲು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ

ಮಡಿಕೇರಿ: ದಶಕಗಳ ಕಾಲ ಮಡಿಕೇರಿ ನಗರದ ರಾಜಾಸೀಟ್‌ನ ಪ್ರಮುಖ ಆಕರ್ಷಣೆಯಾಗಿದ್ದ ಪುಟಾಣಿ ರೈಲು ಶೆಡ್ ಸೇರಿ ವರ್ಷಗಳೇ ಕಳೆದರೂ ಅದನ್ನು ಪುನರಾರಂಭಿಸುವಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಪುಟಾಣಿ ರೈಲು ನಿಂತಲ್ಲೇ ನಿಂತು ತುಕ್ಕು ಹಿಡಿಯುತ್ತಿದೆ.

ಐತಿಹಾಸಿಕ ಪ್ರವಾಸಿ ತಾಣ ರಾಜಾಸೀಟ್ ಈಗ ಗ್ರೇಟರ್ ರಾಜಾಸೀಟ್ ಆಗಿದೆ. ಸ್ಕೈರೋಪ್‌ನಂತಹ ಸಾಹಸಿ ಆಕರ್ಷಣೆ ರಾಜಾಸೀಟ್‌ನಲ್ಲಿದೆ. ಆದರೆ, ರಾಜಾಸೀಟ್ ಆವರಣದಲ್ಲಿದ್ದ ಪುಟಾಣಿ ರೈಲು ತುಕ್ಕು ಹಿಡಿದಿದ್ದು, ರೈಲು ಹಳಿಯೂ ಮಣ್ಣು ಪಾಲಾಗಿದೆ. ಕಾವೇರಿ ಪಟ್ಟಣ ಎಂಬ ಹೆಸರಿನ ಪುಟಾಣಿ ರೈಲು ನಿಲ್ದಾಣ ಈಗ ಉದ್ಯಾನವನದ ಹೂವಿನ ಕುಂಡಗಳಿಗೆ ಮಣ್ಣು ತುಂಬುವ ಸ್ಥಳವಾಗಿ ಬಳಕೆಯಾಗುತ್ತಿದೆ.

ಹಿರಿಯ ರಾಜಕಾರಣಿ, ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರು ಪುರಸಭೆ ಅಧ್ಯಕ್ಷರಾಗಿದ್ದಾಗ ರಾಜಾಸೀಟ್ ಆವರಣದಲ್ಲಿ ಮಕ್ಕಳಿಗಾಗಿ ಉದ್ಯಾನ ನಿರ್ಮಿಸಿದ್ದರು. ೧೯೯೮ರಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿದ್ದ ನಾಣಯ್ಯ ಅವರು ಮತ್ತೆ ಮಕ್ಕಳ ಉದ್ಯಾನವನ್ನು ಅಭಿವೃದ್ಧಿಪಡಿಸಿದ್ದರು. ಸುಮಾರು ೧ ಕಿ.ಮೀ. ಹಳಿಯ ಮೇಲೆ ರಾಜಾಸೀಟ್ ಬೆಟ್ಟಗಳ ನಡುವೆ ಸಂಚರಿಸುತ್ತಿದ್ದ ರೈಲಿಗೆ ‘ಕಾವೇರಿ ಎಕ್ಸ್‌ಪ್ರೆಸ್’ ಎಂದು ಹೆಸರಿಡಲಾಗಿತ್ತು.

ಸುಮಾರು ಎರಡೂವರೆ ದಶಕಗಳ ಕಾಲ ಹಿರಿಯರೂ ಸೇರಿದಂತೆ ಮಕ್ಕಳನ್ನು ರಂಜಿಸುತ್ತಿದ್ದ ಪುಟಾಣಿ ರೈಲು ಹಳೆಯದಾದಂತೆ ಆಗಾಗ ಕೆಟ್ಟು ನಿಲ್ಲುತ್ತಿತ್ತು. ಕೊನೆಗೆ ಹಳೆಯ ಇಂಜಿನ್ ಬದಲಿಸಿ ಟ್ರಾಕ್ಟರ್ ಇಂಜಿನ್ ಅಳವಡಿಸಲಾಗಿತ್ತು. ಈ ರೈಲನ್ನು ಖಾಸಗಿಯವರ ನಿರ್ವಹಣೆಗೆ ನೀಡಿ, ಕೆಲಕಾಲ ರೈಲು ಓಡುವಂತೆ ನೋಡಿಕೊಳ್ಳಲಾಯಿತಾದರೂ ಮತ್ತೆ ಕೆಟ್ಟು ಹೋದ ರೈಲು ಶೆಡ್ ಸೇರಿತು. ಇದೀಗ ರೈಲು ಗೂಡು ಸೇರಿ ವರ್ಷಗಳೇ ಕಳೆದರೂ ಅದಕ್ಕೆ ಮರುಜೀವ ನೀಡಲು ಯಾರೂ ಮುಂದಾಗಿಲ್ಲ.

ಇದನ್ನು ಓದಿ: ರಾಷ್ಟ್ರಮಟ್ಟದ ಬಾಲರಂಗೋತ್ಸವಕ್ಕೆ ಆದರ್ಶ ಬಾಲೆಯರು

ರೈಲು ಹಳಿಯ ಪಕ್ಕದಲ್ಲಿಯೇ ಇರುವ ಮಕ್ಕಳ ಉದ್ಯಾನದಲ್ಲಿ ಇತ್ತೀಚೆಗೆ ಖಾಸಗಿಯವರ ಸಹಭಾಗಿತ್ವದಲ್ಲಿ ಹಲವು ಚಟುವಟಿಕೆಗಳನ್ನು ಆರಂಭಿಸಲಾಗಿದೆ. ಹಣ ನೀಡಿ ಆಟವಾಡುವವರಿಗೆ ಎಲ್ಲಾ ಸಾಹಸ ಚಟುವಟಿಕೆಗಳು ಇವೆಯಾದರೂ, ಉಚಿತವಾಗಿ ಬಡ ಮತ್ತು ಮಧ್ಯಮ ವರ್ಗಗಳ ಮಕ್ಕಳು ಆಟವಾಡಲು ಇದ್ದ ಒಂದು ಪುಟಾಣಿ ಉದ್ಯಾನವನ್ನು ನಿರ್ಲಕ್ಷಿಸಲಾಗಿದೆ. ಪುಟಾಣಿ ರೈಲು ಸಂಚಾರಕ್ಕೂ ಗ್ರಹಣ ಹಿಡಿದಿದೆ. ಇಂತಹ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗುತ್ತಿದೆ.

ಕಾರ್ಯರೂಪಕ್ಕೆ ಬಾರದ ಯೋಜನೆ..!: 

ಗ್ರೇಟರ್ ರಾಜಾಸೀಟ್ ಅಭಿವೃದ್ಧಿಯ ಬಳಿಕ ಪುಟಾಣಿ ರೈಲಿಗೂ ಕಾಯಕಲ್ಪ ನೀಡುವ ಯೋಜನೆಯೊಂದನ್ನು ರೂಪಿಸಲಾಗಿತ್ತು. ಅಂದು ಜಿಲ್ಲಾಧಿಕಾರಿಯಾಗಿದ್ದ ಸತೀಶ್ ಮತ್ತು ತೋಟಗಾರಿಕಾ ಇಲಾಖೆ ಪ್ರಭಾರ ಉಪನಿರ್ದೇಶಕರಾಗಿದ್ದ ಪ್ರಮೋದ್ ಅವರು ರಾಜಾಸೀಟ್ ಅಭಿವೃದ್ಧಿ ಸಮಿತಿಯಲ್ಲಿದ್ದ ಹಣ ಮತ್ತು ತೋಟಗಾರಿಕಾ ಇಲಾಖೆ ಅನುದಾನವನ್ನು ಬಳಸಿ ಮಕ್ಕಳ ಉದ್ಯಾನ ಮತ್ತು ಪುಟಾಣಿ ರೈಲು ಅಭಿವೃದ್ಧಿಗೆ ಯೋಜನೆ ರೂಪಿಸಿದ್ದರು. ಪುಟಾಣಿ ರೈಲಿನ ಸಂಚಾರವನ್ನು ಗ್ರೇಟರ್ ರಾಜಾಸೀಟ್‌ಗೆ ವಿಸ್ತರಿಸುವುದು, ಕಾವೇರಿ ಪಟ್ಟಣ ನಿಲ್ದಾಣದಲ್ಲಿ ಅಂಗಡಿ ಮಳಿಗೆಗಳಿಗೂ ಅವಕಾಶ ನೀಡಿ ನೈಜ ರೈಲ್ವೇ ಫ್ಲಾಟ್‌ಫಾರಂನಂತೆ ಅಭಿವೃದ್ಧಿಪಡಿಸುವುದು ಯೋಜನೆಯಲ್ಲಿ ಒಳಗೊಂಡಿತ್ತು. ಆದರೆ ಈ ಯೋಜನೆ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ

” ಭಾರತೀಯ ರೈಲ್ವೆ ಇಲಾಖೆಯಿಂದ ತಜ್ಞರ ತಂಡ ಬಂದು ರಾಜಾಸೀಟ್ ಉದ್ಯಾನವನ್ನು ಪರಿಶೀಲನೆ ಮಾಡಿ ಹೋಗಿದೆ. ಅವರ ವರದಿಯನ್ನು ಮುಂದಿನ ಸಭೆಯಲ್ಲಿ ಮಂಡಿಸಲಾಗುವುದು. ಪುಟಾಣಿ ರೈಲು ಆರಂಭಿಸುವ ಪ್ರಯತ್ನ ಮಾಡಲಾಗುವುದು.”

-ಶಶಿಧರ್, ಉಪನಿರ್ದೇಶಕರು, ತೋಟಗಾರಿಕಾ ಇಲಾಖೆ

ಆಂದೋಲನ ಡೆಸ್ಕ್

Recent Posts

ಹಣ ದ್ವಿಗುಣಗೊಳಿಸುವುದಾಗಿ ೨೮ ಲಕ್ಷ ರೂ. ವಂಚನೆ; ದೂರು ದಾಖಲು

ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…

55 mins ago

ಅಂಬಳೆ: ಚಾಮುಂಡೇಶ್ವರಿ ದೇಗುಲದಲ್ಲಿ ಕಳ್ಳತನ

ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…

1 hour ago

ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ ಬೆನ್ನಲ್ಲೇ ಪೈಲಟ್‌ಗಳ ರಜಾ ನಿಯಮ ಸಡಿಲಿಸಿದ ಡಿಜಿಸಿಎ

ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…

2 hours ago

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ: ಸತೀಶ್‌ ಜಾರಕಿಹೊಳಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…

3 hours ago

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಬೋಧನೆ: ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ಎಚ್‌ಡಿಕೆ ಪತ್ರ

ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…

4 hours ago

ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ: ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು

ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…

5 hours ago