Andolana originals

ಅಂಬೇಡ್ಕರ್ ಜೀವನವನ್ನು ಬಿಚ್ಚಿಟ್ಟ ನಾಟಕ!

ಮೈಸೂರು: ಹಿರಿಯ ರಂಗಕರ್ಮಿ ಅಡ್ಡಂಡ ಸಿ. ಕಾರ್ಯಪ್ಪ ನಿರ್ದೇಶನದ ‘ನಿಜ ಮಹಾತ್ಮ ಬಾಬಾ ಸಾಹೇಬ’ ನಾಟಕ ಸೋಮವಾರ ಸಂಜೆ ಕಿರುರಂಗ ಮಂದಿರದಲ್ಲಿ ಚೊಚ್ಚಲ ಸಾರ್ವಜನಿಕ ಪ್ರದರ್ಶನ ಕಂಡಿತು.

ಡಾ.ಬಿ.ಆರ್.ಅಂಬೇಡ್ಕರ್ ಜೀವನಾಧಾರಿತ ನಾಟಕವೂ ಅಂಬೇಡ್ಕರ್ ನಿಷ್ಠುರತೆ, ಆರ್‌ಎಸ್‌ಎಸ್ ಕುರಿತು ಅವರಿಗಿದ್ದ ನಿಲುವು, ಭಾರತ-ಪಾಕಿಸ್ತಾನ ವಿಭಜನೆಯ ಸಂದರ್ಭದಲ್ಲಿ ಮುಸಲ್ಮಾನರ ಬಗ್ಗೆ ಅವರ ಅಭಿಪ್ರಾಯ, ಕಾಂಗ್ರೆಸ್ ಮುಚ್ಚಿಟ್ಟಿದೆ ಎನ್ನಲಾದ ಸಂಗತಿಗಳನ್ನು ರಂಗದ ಮೇಲೆ ಬಿಚ್ಚುಟ್ಟು ನೆರೆದಿದ್ದ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿತು.

ಅಂಬೇಡ್ಕರ್ ಸಾಯುವವರೆಗೆ, ಸತ್ತ ಮೇಲೂ ಅವಮಾನಿಸಿದ, ಅವರ ಸಾಧನೆಗಳನ್ನು ಮರೆಯಲ್ಲಿಟ್ಟಿದ್ದ ಕಾಂಗ್ರೆಸ್, ವೋಟ್ ಬ್ಯಾಂಕ್‌ಗಾಗಿ ಅವರ ಹೆಸರು, ಭಾವಚಿತ್ರ ಬಳಸಿಕೊಳ್ಳುತ್ತಿದೆ. ಅವರ ವಿಷಯದಲ್ಲಿ ಬಚ್ಚಿಟ್ಟ ಅನೇಕ ಸಂಗತಿಗಳನ್ನು ಬಿಚ್ಚಿಡುವ ಪ್ರಯತ್ನವನ್ನೇ ಮಾಡುತ್ತಿದೆ ಎನ್ನುವುದನ್ನು ರಂಗರೂಪದಲ್ಲಿ ಕಟ್ಟಿಕೊಡಲಾಯಿತು.

ಡಾ.ಬಿ.ಆರ್.ಅಂಬೇಡ್ಕರ್ ನಿಧನಕ್ಕೆ ಸ್ಥಳ ಕೊಡಲು ನೆಹರು ಒಪ್ಪಲಿಲ್ಲ ಎನ್ನಲಾಗುವ ಸನ್ನಿವೇಶ ಕಾಂಗ್ರೆಸ್ ಅಂಬೇಡ್ಕರ್‌ಗೆ ಮಾಡಿತ್ತು ಎನ್ನಲಾಗುವ ದ್ರೋಹಗಳು ಮತ್ತು ಮುಸ್ಲಿಂರ ಬಗ್ಗೆ ಅಂಬೇಡ್ಕರ್ ಅವರಿಗಿದ್ದ ನಿಲುವುಗಳು ಅಡ್ಡಂಡ ಕಾರ್ಯಪ್ಪ ನಿರ್ದೇಶನದಲ್ಲಿ ಮೂಡಿ ಬಂದು ಪ್ರೇಕ್ಷಕರ ಮನ ಗೆದ್ದಿತ್ತು. ಲಿಖಿತ ಎಂಬವರು ಅಂಬೇಡ್ಕರ್ ಪಾತ್ರದಲ್ಲಿ ಮತ್ತು ಅನಿತಾ ಕಾರ್ಯಪ್ಪ ಸವಿತಾ ಅಂಬೇಡ್ಕರ್ ಪಾತ್ರದಲ್ಲಿ ನಟಿಸಿ ಚಪ್ಪಾಳೆ ಗಿಟ್ಟಿಸಿದರು.

ನಟರಾದ ಮನೋಜ್‌ಕುಮಾರ್, ಎಂ.ಮಧು, ಸಚಿನ್ ಭಟ್, ಶಿವಕುಮಾರ್, ಸರ್ವೇಶ್, ಶರಣು ಬಸವ ಯಲವ, ಗೌಡ ಅಶೋಕ್, ಶ್ರೇಯಸ್ ಅವರು ಸುಧಾಮ, ನಾನಕ್ ಚಂದ್ ರತ್ತು, ಭಗತ್ ಅಮೀನ್ ಚಂದ್, ಜವಾಹರಲಾಲ್ ನೆಹರು, ದತ್ತೋಪಂಥ ಠೇಂಗಡಿ, ಟಿ.ವಿ.ಬೋನ್ ಸ್ಲೆ, ಶಂಕರಾನಂದ ಶಾಸಿ, ಗಾಯಕವಾಡ್, ಮಹಾತ್ಮ ಗಾಂಧಿ, ವೀರ ಸವರ್ಕರ್, ಡಾ.ಬಾಬು ರಾಜೇಂದ್ರ ಪ್ರಸಾದ್ ಪಾತ್ರಗಳನ್ನು ಅಭಿನಯಿಸಿ ಸೈ ಅನಿಸಿಕೊಂಡರು. ರವಿ ಮೂರೂರು ಸಂಗೀತ, ಸುಬ್ರಹ್ಮಣ್ಯ ಮೈಸೂರು ಧ್ವನಿ ವಿನ್ಯಾಸ, ತೀರ್ಥಹಳ್ಳಿ ಶಿವಕುಮಾರ್ ಬೆಳಕಿನ ಸಂಯೋಜನೆಯಲ್ಲಿ ತೊಡಗಿದ್ದರು.

” ಅಂಬೇಡ್ಕರ್ ಅವರು ಹಿಂದೂ ಧರ್ಮವನ್ನು ಬೈದಿರುವುದನ್ನುನಾಟಕದಲ್ಲಿ ತೋರಿಸಲಾಗಿದೆ. ಇದರ ಜೊತೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಮೆಚ್ಚಿಕೊಂಡು ಹಾಡಿರುವ ಪ್ರಸಂಗವೂ ನಾಟಕದಲ್ಲಿದೆ. ಸಚಿವ ಪ್ರಿಯಾಂಕ್ ಖರ್ಗೆ ಈ ಸತ್ಯವನ್ನು ಓದಿಲ್ಲ. ಹೀಗಾಗಿ ನಾಟಕದ ಮೂಲಕ ನಾವು ಈ ಸತ್ಯವನ್ನು ತೋರಿಸುತ್ತೇವೆ. ಸಾಧ್ಯವಾದರೆ ವಿಧಾನಸೌಧದಲ್ಲಿ ಪ್ರದರ್ಶನಕ್ಕೆ ಅನುವು ಮಾಡಿಕೊಡಲಿ.”

-ಅಡ್ಡಂಡ ಸಿ.ಕಾರ್ಯಪ್ಪ, ಹಿರಿಯ ರಂಗಕರ್ಮಿ

೨೦೦ ಟಿಕೆಟ್‌ಗಳು ಸಂಪೂರ್ಣ ಮಾರಾಟ: ಕಾರ್ಯಪ್ಪ

ಮೈಸೂರು: ೨ ತಿಂಗಳ ಕಾಲ ಹರಿವಿದ್ಯಾಲಯದಲ್ಲಿ ತಾಲೀಮು ನಡೆಸಿ ನಾಟಕ ಪ್ರದರ್ಶನ ಮಾಡಲಾಗು ತ್ತಿದೆ. ಸಂಪೂರ್ಣ ಹೊಸ ಕಲಾವಿದರೇ ನಾಟಕದಲ್ಲಿ ಅಭಿನಯಿಸಿದ್ದಾರೆ. ಇಂದಿನ ಪ್ರದರ್ಶನದ ೨೦೦ ಟಿಕೆಟ್ ಗಳೂ ಸಂಪೂರ್ಣವಾಗಿ ಮಾರಾಟವಾಗಿವೆ ಎಂದು ಹಿರಿಯ ರಂಗಕರ್ಮಿ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು.

ಜೈಲಿಗೆ ಹೋಗಲು ಸಿದ್ಧ: ಸ್ವಯಂ ಸೇವಕನೆ ಪ್ರಧಾನಿ, ರಾಷ್ಟ್ರಪತಿಗಳೇ ಸ್ವಯಂ ಸೇವಕ ಸಂಘದವರು, ದೇಶದ ಅನೇಕ ರಾಜ್ಯದ ಮುಖ್ಯಮಂತ್ರಿಗಳು, ರಾಜ್ಯಪಾಲರು ಸ್ವಯಂ ಸೇವಕರ ಸಂಘದವರೇ. ಸಚಿವ ಪ್ರಿಯಾಂಕ್ ಖರ್ಗೆಗೆ ಇತಿಹಾಸ ತಿಳಿದಿಲ್ಲ. ಸರ್ಕಾರದ ಜಾಗದಲ್ಲಿ ಆರ್‌ಎಸ್‌ಎಸ್ ನಿಷೇಧಿಸುತ್ತೇವೆ ಎನ್ನಲು ಸರ್ಕಾರಿ ಜಾಗಗಳು ಯಾರಪ್ಪಂದು ಅಲ್ಲ ಎಂದರು. ದೇವಸ್ಥಾನಕ್ಕೆ ಕಲ್ಲು ಹೊಡೆದವರು, ಪಾಕಿಸ್ತಾನ ಜಿಂದಾಬಾದ್ ಎನ್ನುವವರನ್ನು ಏಕೆ ಬ್ಯಾನ್ ಮಾಡಲಿಲ್ಲ. ರಾಷ್ಟ್ರ ಭಕ್ತರನ್ನು ಬ್ಯಾನ್ ಮಾಡು ವುದು ಒಂದು ಸಮುದಾಯದ ವೋಟಿಗಾಗಿ. ಆದರೆ, ಸ್ವಯಂ ಸೇವಕರಿಗೆ ದೇಶ ಮುಖ್ಯ. ಜೈಲಿಗೆ ಹೋಗಲು ನಾವು ಸಿದ್ಧ. ಸತ್ಯ ಹೇಳುವುದನ್ನು ನಿಲ್ಲಿಸುವುದಿಲ್ಲ ಎಂದರು.

ಆಂದೋಲನ ಡೆಸ್ಕ್

Recent Posts

2026ರ ದಸರಾ ಗಜಪಡೆ ಪಟ್ಟಿ ಬಿಡುಗಡೆ: ಅಂಬಾರಿ ಸಾರಥಿ ಅಭಿಮನ್ಯುವಿಗೆ ಕೊಕ್‌

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಈ ಬಾರಿ ದಸರಾ ಗಜಪಡೆಯ ಪಟ್ಟಿಯಲ್ಲಿ ಮಹತ್ವದ…

22 mins ago

ಹನೂರು ಶೂಟೌಟ್‌ ಪ್ರಕರಣ: ತಮಿಳುನಾಡು ಸರ್ಕಾರದಿಂದಲೂ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ

ಚೆನ್ನೈ: ಹನೂರು ಶೂಟೌಟ್ ಪ್ರಕರಣದಲ್ಲಿ ಮೃತರ ಕುಟುಂಬಗಳಿಗೆ ತಮಿಳುನಾಡು ಸರ್ಕಾರದಿಂದಲೂ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ.…

44 mins ago

ಗ್ಯಾರೇಜ್‌ಗೆ ಬೆಂಕಿ ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

ಗುಂಡ್ಲುಪೇಟೆ: ಪಟ್ಟಣದ ಕೇರಳ ರಸ್ತೆಯಲ್ಲಿರುವ ಗ್ಯಾರೇಜ್‌ಗೆ ಬೆಂಕಿ ತಗುಲಿ ಸಂಪೂರ್ಣ ಗ್ಯಾರೇಜ್ ಸುಟ್ಟುಹೋಗಿರುವ ಘಟನೆ ನಡೆದಿದೆ. ಪಟ್ಟಣದ ವಾಹಿದ್ ಎಂಬುವವರಿಗೆ…

1 hour ago

ಕೆಆರ್‌ಎಸ್‌ನಿಂದ ತಮಿಳುನಾಡಿಗೆ 4917 ಕ್ಯೂಸೆಕ್‌ ನೀರು ಬಿಡುಗಡೆ

ಮಂಡ್ಯ: ರಾಜ್ಯದಲ್ಲಿ ಕೆಆರ್‌ಎಸ್‌ ಜಲಾಶಯದ ನೀರಿನ ವಿಚಾರವೂ ಚರ್ಚೆಗೆ ಬಂದಿದ್ದು, ಕೇವಲ 1951 ಕ್ಯೂಸೆಕ್ಸ್‌ ನೀರು ಹರಿದು ಬರುತ್ತಿರುವ ಡ್ಯಾಂನಿಂದ…

2 hours ago

ಕಾಡಾನೆಗಳ ಸೆರೆಗೆ ಕಾರ್ಯಾಚರಣೆ: ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ಜಾರಿ

ಕೊಡಗು: ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಮೂರು ಗಂಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಆದೇಶ ನೀಡಿದೆ. ಇಂದು ಬೆಳಿಗ್ಗೆ 10…

7 hours ago

ಹನೂರು ಎನ್‌ಕೌಂಟರ್: ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದೆವು: ACF ಮರಿಸ್ವಾಮಿ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಹನೂರು ಎನ್‌ಕೌಂಟರ್ ಬಗ್ಗೆ ಮೊದಲ ಬಾರಿಗೆ ಕಾವೇರಿ ವನ್ಯಧಾಮದ ACF ಮರಿಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ…

7 hours ago