ಗೋಡೌನ್ನಲ್ಲಿ ಇರಿಸಿದ್ದ ನೂರಾರು ವರ್ಷಗಳ ಹಿನ್ನೆಲೆಯುಳ್ಳ ದರ್ಬಾರ್ ಕುರ್ಚಿಗಳಿಗೆ ಹೊಸ ರೂಪ
ಮೈಸೂರು: ಜಗತ್ಪಸಿದ್ಧ ಅರಮನೆಯ ದರ್ಬಾರ್ ಕೊಠಡಿಯಲ್ಲಿ ಬಳಸಲಾಗುತ್ತಿದ್ದ ಕುರ್ಚಿಗಳು ನೂರು ವರ್ಷಗಳಷ್ಟು ಹಳೆಯವು. ಆದರೂ ಇಂದಿಗೂ ಅದರ ಸೌಂದರ್ಯ ಮಾಸಿಲ್ಲ. ಅರಮನೆಗೆ ಭೇಟಿ ನೀಡುವ ಬಹುತೇಕ ವಿದೇಶಿಗರಿಗೆ ಈ ಕುರ್ಚಿಗಳ ಬಗ್ಗೆ ವಿಶೇಷ ವ್ಯಾಮೋಹ. ಈ ಸಲುವಾಗಿಯೇ ಫೋಟೋಕ್ಲಿಕ್ಕಿಸಿಕೊಳ್ಳುವುದನ್ನು ಮಾತ್ರ ಅವರು ಮರೆಯುವುದಿಲ್ಲ.
ಮೈಸೂರು ಮಹಾರಾಜರು ದರ್ಬಾರ್ ನಡೆಸುವ ವೇಳೆ ಗಣ್ಯರು ಆಸೀನರಾಗುವ ಸಲುವಾಗಿ ಬಳಸುತ್ತಿದ್ದ ದರ್ಬಾರ್ ಕುರ್ಚಿಗಳದ್ದೇ ಒಂದು ಇತಿಹಾಸ, ರಾಜರ ದರ್ಬಾರು ನಡೆಯುತ್ತಿದ್ದ ವೇಳೆ ಜನರು ರಾಜರನ್ನು ಆಗಿಂದಾಗ್ಗೆ ಕಾಣಬಹುದಾಗಿತ್ತು. ಈ ಕುರ್ಚಿಗಳು ತುಂಬಾ ಐತಿಹಾಸಿಕ ಮತ್ತು ಶ್ರೀಮಂತಿಕೆಯ ಪ್ರತೀಕವಾಗಿವೆ. ಈ ಕುರ್ಚಿಗಳನ್ನು ನವಾಬ್ ಖಾಸರತ್ತುಲ್ಲಾ ಖಾನ್ ಎಂಬ ಸ್ವಾತಂತ್ರ್ಯ ಹೋರಾಟ ಗಾರರ ಮನೆತನದವರು ತಯಾರಿಸಿದ್ದಾರೆ. ಅವುಗಳ ಮೇಲೆ ಅಲಂಕಾರಿಕ ಕುಸುರಿ ಕೆಲಸ, ಶಿಲಕಲೆಯನು ಕಾಣಬಹುದು.
ನೂರಾರು ವರ್ಷಗಳ ಹಿನ್ನೆಲೆಯುಳ್ಳ ಈ ದರ್ಬಾರ್ ಕುರ್ಚಿಗಳನ್ನು ಗೋಡೌನ್ನಲ್ಲಿ ಇರಿಸಲಾಗಿತ್ತು. ಇವು ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಸುಬ್ರಮಣ್ಯ ಅವರ ಕಣ್ಣಿಗೆ ಬಿದ್ದ ಮೇಲೆ ಈ ಕುರ್ಚಿಗಳಿಗೆ ಮತ್ತೆ ಗತ ವೈಭವ ಮರುಕಳಿಸಿದೆ. ಈ ಬಗ್ಗೆ ಮಾತನಾಡಿದ ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಮಣ್ಯ, ಮಹಾರಾಜರು ದರ್ಬಾರು ನಡೆಸುವಾಗ ಈ ಕುರ್ಚಿಗಳನ್ನು ಬಳಸಲಾಗುತ್ತಿತ್ತು. ದಿವಾನರುಗಳು ಸೇರಿದಂತೆ ಅರಮನೆಗೆ ಸೇರಿದ ಗಣ್ಯರು ಈ ಕುರ್ಚಿಯಲ್ಲಿ ಆಸೀನರಾಗುತ್ತಿದ್ದರು. ಸಿ.ರಂಗಚಾರ್ಲು, ದಿವಾನ್ ಪೂರ್ಣಯ್ಯ, ಸರ್ ವಿಶ್ವೇಶ್ವರಯ್ಯ, ಸರ್ ಮಿರ್ಜಾ ಇಸ್ಮಾಯಿಲ್ ಹೀಗೆ ಅನೇಕರು ಈ ಕುರ್ಚಿಯಲ್ಲಿ ಕುಳಿತಿದ್ದಿರಬಹುದು, ಬಲ್ಲವರು ಯಾರು? ಆದ್ದರಿಂದ ಈ ಕುರ್ಚಿಗಳ ಮಹತ್ವ ಅರಿತು, ಗೋಡೌನ್ನಿಂದ ಅದನ್ನು ಅರಮನೆ ಮಂಡಳಿ ಸಭಾಂಗಣಕ್ಕೆ ಸ್ಥಳಾಂತರಿಸಲಾಗಿದೆ.
ಅಂದಾಜು 200ಕ್ಕೂ ಹೆಚ್ಚು ಕುರ್ಚಿಗಳಿದ್ದು, ಈ ಪೈಕಿ ಅರ್ಧದಷ್ಟು ಕುರ್ಚಿಗಳು ದುರಸ್ತಿಯಲ್ಲಿವೆ. ಇವುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕಾರ್ಯಮಗ್ನರಾಗಿದ್ದೇವೆ. ಈ ದರ್ಬಾರ್ ಕುರ್ಚಿಗಳನ್ನು ದಸರಾ ಅವಧಿಯಲ್ಲಿ ವಿಶೇಷವಾಗಿ ಅರಮನೆಯ ಖಾಸಗಿ ದರ್ಬಾರಿನ ವೇಳೆಯಲ್ಲಿ ಬಳಸಲಾಗುತ್ತದೆ. ಈ ಕುರ್ಚಿಗಳು, ಮೈಸೂರಿನ ರಾಜಕುಟುಂಬದ ವೈಭವ ಮತ್ತು ಪ್ರಖ್ಯಾತಿಯ ಸಂಕೇತವಾಗಿ ಇಂದು ಕೂಡ ಉಳಿದುಕೊಂಡಿವೆ.
ಟಿ.ಎಸ್. ಸುಬ್ರಹ್ಮಣ್ಯ,
ಅರಮನೆ ಮಂಡಳಿ ಉಪ ನಿರ್ದೇಶಕ
ಕುರ್ಚಿ ನೋಡಿ ಪುಳಕಿತಗೊಂಡಿದ್ದ ಅಮೆರಿಕಾ ಕೌನ್ಸುಲೇಟ್ ಜನರಲ್
ಮೈಸೂರು: ಅರಮನೆಗೆ ಭೇಟಿ ನೀಡಿದ್ದ ಅಮೆರಿಕ ಕೌನ್ಸುಲೇಟ್ ಜನರಲ್, ದರ್ಬಾರ್ ಕುರ್ಚಿಗಳನ್ನು ಕಂಡು ಪುಳಕಿತಗೊಂಡಿದ್ದು ಮಾತ್ರವಲ್ಲದೆ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು ಅರಮನೆ ಮಂಡಳಿ ಉಪ ನಿರ್ದೇಶಕ ಸುಬ್ರಹ್ಮಣ್ಯ ಹೇಳಿದರು.
ಈ ಕುರ್ಚಿಗಳ ವಿನ್ಯಾಸದ ಬಗೆಗೂ ವಿದೇಶಿಗರಿಗೆ ಅಪಾರ ಮೆಚ್ಚುಗೆ. ಕಾರಣ ಈ ಕುರ್ಚಿಯ ಮೇಲೆ ದೀರ್ಘಕಾಲ ಕುಳಿತರೂ ಬೆನ್ನು ನೋವಿನ ಸಮಸ್ಯೆ ಕಾಡದು ಎಂಬುದು ಅವರ ಭಾವನೆಯಾಗಿದೆ ಎಂದರು.
ಅಮರಾವತಿ: ಜಗತ್ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…
ಮುಂಬೈ: ಬಾಲಿವುಡ್ನ ಭಾಯಿಜಾನ್ ಸಲ್ಮಾನ್ ಖಾನ್ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…
ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…
ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…
ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…
ಮೈಸೂರು: ಬಡವರ ಮಕ್ಕಳೇ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ವ್ಯಾಸಂಗ ಮಾಡುವ ಕಾರಣ ಶಾಲೆಗಳ ಅಭಿವೃದ್ಧಿ ಶಿಕ್ಷಕರ ಮೇಲಿದೆ. ಕ್ಷೇತ್ರದಲ್ಲಿ ಬರುವ…