Andolana originals

ಹೊಸ ಮನೆ ಜೊತೆಗೇ ಕೊಚ್ಚಿಹೋದ ದಂಪತಿ!

  • ಪ್ರಸಾದ್‌ ಲಕ್ಕೂರು

ಚಾ. ನಗರ: ಕೇರಳ ರಾಜ್ಯದ ವಯನಾಡಿನ ಮೇಪ್ಪಾಡಿಯಲ್ಲಿ ಸುರಿದ ಭೀಕರ ಮಳೆ ಹಾಗೂ ಭೂ ಕುಸಿತದಿಂದ ಚೂರಲ್ ಮಲೈನಲ್ಲಿ ನಿರ್ಮಿಸಿದ್ದ ಕನಸಿನ ಮನೆ ಜೊತೆಯಲ್ಲಿಯೇ ರಾಜೇಂದ್ರ (ರಾಜನ್) ಮತ್ತು ರತ್ನಮ್ಮ (ರಜನಿ) ದಂಪತಿ ಕೊಚ್ಚಿ ಹೋಗಿದ್ದಾರೆ.

ತಾಲ್ಲೂಕಿನ ವೆಂಕಟಯ್ಯನಛತ್ರ ಗ್ರಾಮದ ರಾಜೇಂದ್ರ ಇರಸವಾಡಿ ಗ್ರಾಮದ ರತ್ನಮ್ಮಳನ್ನು ಮದುವೆಯಾಗಿದ್ದರು. ಹೆಚ್ಚು ಕೂಲಿ ಹಣ ಅರಸಿ ಕೇರಳದ ಮೇಪ್ಪಾಡಿ ಬಳಿಯ ಚೂರಲ್ ಮಲೈಗೆ ತೆರಳಿ ಕಾಫಿ ಎಸ್ಟೇಟ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು.

ಎಸ್ಟೇಟ್‌ನಲ್ಲಿ ಕೆಲಸ ಮಾಡಿ ಒಂದಷ್ಟು ಹಣ ಸಂಪಾದಿಸಿದ ರಾಜೇಂದ್ರ ದಂಪತಿ ಸ್ವಂತ ನೆಲದಲ್ಲೇ ಬದುಕು ಕಟ್ಟಿಕೊಳ್ಳಲು ಮುಂದಾಗಿ ಚಾಮರಾಜನಗರ ತಾಲ್ಲೂಕಿನ ನಾಗವಳ್ಳಿ ಗ್ರಾಮದಲ್ಲಿ ಬೇಕರಿ ತೆರೆದಿದ್ದರು. ಆದರೆ, ಬೇಕರಿ ವ್ಯಾಪಾರದಲ್ಲಿ ನಷ್ಟ ಸಂಭವಿಸಿದ್ದರಿಂದ ಮತ್ತೆ ಚೂರಲ್ ಮಲೈಗೆ ತೆರಳಿ ಎಸ್ಟೇಟ್‌ನಲ್ಲಿ ಕೂಲಿ ಕೆಲಸ ಮುಂದುವರಿಸಿದ್ದರು. ಅಲ್ಲಿಯೇ ಜಾಗ ಖರೀದಿಸಿ, ತಮ್ಮ ಕನಸಿನ ಪುಟ್ಟದೊಂದು ಮನೆಯನ್ನು ಇತ್ತೀಚೆಗೆ ನಿರ್ಮಿಸಿಕೊಂಡು ವಾಸವಿದ್ದರು. ಮಂಗಳವಾರ ತಡರಾತ್ರಿ ಸಂಭವಿಸಿದ ಜಲಪ್ರವಾಹದಿಂದ ಮನೆಯೂ ಮುಳುಗಡೆ ಯಾಗಿ ಅಣ್ಣನ ಶವ ಪತ್ತೆಯಾಗಿ, ಅತ್ತಿಗೆಯ ಗುರುತು ಸಿಗದಂತಾಗಿದೆ. ರಾಜೇಂದ್ರ ದಂಪತಿ, ತಮ್ಮ ಕನಸಿನ ಮನೆ ಜೊತೆಯಲ್ಲಿಯೇ ಕಣ್ಮರೆಯಾಗಿದ್ದಾರೆ.

ಮೇಪ್ಪಾಡಿ ಪ್ರವಾಹದಲ್ಲಿ ಮೃತಪಟ್ಟ ರಾಜೇಂದ್ರ-ರತ್ನಮ್ಮ ?

ಚಾಮರಾಜನಗರ ಜಿಲ್ಲೆಯ ವೆಂಕಟಯ್ಯನಛತ್ರ ಮೂಲದ ಪತಿ ಪತ್ನಿ ?,  ಕೂಲಿ ಕೆಲಸಕ್ಕಾಗಿ ಮೇಪ್ಪಾಡಿಗೆ ತೆರಳಿದ್ದರು ?, ದಂಪತಿಗೆ ಮಕ್ಕಳಿರಲಿಲ್ಲ ?, ಪ್ರಳಯ ಸಂಭವಿಸುವ ಹಿಂದಿನ ದಿನವಷ್ಟೇ ಊರಿಗೆ ಮರಳಿದ್ದ ರಾಜೇಂದ್ರ ಸೋದರಿ.

ನಾವೇ ಅಂತ್ಯ ಸಂಸ್ಕಾರ ಮಾಡುತ್ತೇವೆ’

ಮಗಳು ರತ್ನಮ್ಮಳನ್ನು ವೆಂಕಟಯ್ಯನಛತ್ರದ ರಾಜೇಂದ್ರ ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ಹತ್ತಾರು ವರ್ಷಗಳ ಹಿಂದೆಯೇ ಚೂರಲ್‌ಮಲೈಗೆ ತೆರಳಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಭೂ ಕುಸಿತಕ್ಕೆ ಸಿಲುಕಿ ಇಬ್ಬರೂ ಕಣ್ಮರೆಯಾಗಿದ್ದಾರೆ. ಅವರ ಮೃತದೇಹಗಳನ್ನು ಪತ್ತೆ ಮಾಡಿಕೊಟ್ಟರೆ, ನಾವೇ ಅಂತ್ಯಕ್ರಿಯೆ ನಡೆಸುತ್ತೇವೆ.

-ನಂಜುಂಡಶೆಟ್ಟಿ, ಮೃತರಾದ ರತ್ನಮ್ಮ ಅವರ ತಂದೆ.

‘ಪ್ರವಾಹದ ಹಿಂದಿನ ದಿನವಷ್ಟೇ ವಾಪಸ್ ಬಂದೆ’

ಅತ್ತಿಗೆ ರತ್ನಮ್ಮ, ಅಣ್ಣ ರಾಜೇಂದ್ರರನ್ನು ನೋಡಲು ಕೇರಳದ ಚೂರಲ್ ಮಲೈಗೆ ಹೋಗಿದ್ದೆ. ಅದೃಷ್ಟವಶಾತ್ ಭೂ ಕುಸಿತ ಸಂಭವಿಸಿದ ಹಿಂದಿನ ದಿನವಷ್ಟೇ ಅಂದರೆ ಭಾನುವಾರ ವಾಪಸ್ ಇರಸವಾಡಿಗೆ ಬಂದುಬಿಟ್ಟಿದ್ದೆ. ಅಲ್ಲಿಯೇ ಇದ್ದಿದ್ದರೆ ಬಹುಶಃ ನಾನೂ ಕೂಡ ಜೀವಂತವಾಗಿ ಉಳಿಯುತ್ತಿರಲಿಲ್ಲ ಅನಿಸುತ್ತದೆ ಎಂದು ಮೃತ ರಾಜೇಂದ್ರ ಅವರ ಸೋದರಿ ಜ್ಯೋತಿ ಕಣ್ಣೀರಿಟ್ಟರು. ಅಣ್ಣ-ಅತ್ತಿಗೆ ಶ್ರಮ ಜೀವಿಗಳು. ಎಸ್ಟೇಟ್ ನಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆದರೆ, ಮಕ್ಕಳಿರಲಿಲ್ಲ. ಇತ್ತೀಚೆಗೆ ಗ್ರಾಮದಲ್ಲಿ ನಡೆದ ನಮ್ಮ ಸಂಬಂಽಕರ ಶುಭ ಸಮಾರಂಭಕ್ಕೂ ಬಂದಿದ್ದರು ಎಂದು ನೆನಪಿಸಿಕೊಂಡರು

 

ಪ್ರಸಾದ್‌ ಲಕ್ಕೂರು

ಚಾಮರಾಜನಗರ ಜಿಲ್ಲೆಯ ಲಕ್ಕೂರು ಗ್ರಾಮದವನಾದ ನಾನು ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ.ಪತ್ರಿಕೋದ್ಯಮ ಪದವಿ ಪಡೆದಿದ್ದು ಕಳೆದ 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿದ್ದೇನೆ. ರಾಜ್ಯ ಮಟ್ಟದ ಉಷಾ ಕಿರಣ, ವಿಜಯ ಕರ್ನಾಟಕ, ವಿಜಯವಾಣಿ, ಜಿಲ್ಲಾ ಮಟ್ಟದ ಪ್ರಜಾನುಡಿ, ಜನಮಿತ್ರ ಪತ್ರಿಕೆಗಳಲ್ಲಿ ಚಾ.ನಗರ ಜಿಲ್ಲಾ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಕಳೆದ 2 ವರ್ಷಗಳಿಂದ ಆಂದೋಲನ ದಿನಪತ್ರಿಕೆಯಲ್ಲಿ ಚಾ.ನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ.

Recent Posts

ಪೂರ್ಣ ಸಿದ್ಧವಾಗದ ಎಕ್ಸ್‌ಪ್ರೇಸ್‌ ವೇ : ಟೋಲ್‌ ಕಡಿತ

ಹೊಸದಿಲ್ಲಿ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮಹತ್ವದ ಸುದ್ದಿಯೊಂದನ್ನು ನೀಡಿದೆ.…

5 hours ago

ಸೇವಾ ತೀರ್ಥ ಸಂಕೀರ್ಣ ಉದ್ಘಾಟಿಸಿದ ಪ್ರಧಾನಿ ಮೋದಿ

ಹೊಸದಿಲ್ಲಿ : ಪ್ರಧಾನ ಮಂತ್ರಿ ಕಾರ್ಯಾಲಯ (ಪಿಎಂಒ), ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಮತ್ತು ಸಂಪುಟ ಸಚಿವಾಲಯಗಳನ್ನು ಒಳಗೊಂಡಿರುವ ‘ಸೇವಾ…

6 hours ago

T20 World Cup | ಕೆನಡಾ ವಿರುದ್ಧ ಯುಎಇಗೆ ರೋಚಕ ಜಯ

ಹೊಸದಿಲ್ಲಿ : ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ‘ಡಿ’ಗುಂಪಿನ ಪಂದ್ಯದಲ್ಲಿ ಯುಎಇ ಕ್ರಿಕೆಟ್ ತಂಡವು ಕೆನಡಾ ತಂಡವನ್ನು ಐದು…

6 hours ago

ದಳಪತಿ ವಿಜಯ್‌ ರ‍್ಯಾಲಿಯಲ್ಲಿ ನಿಲ್ಲದ ದುರಂತ : ಮತ್ತೊಬ್ಬನ ಸಾವು

ಸೇಲಂ : ತಮಿಳಿಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ರ‍್ಯಾಲಿ ವೇಳೆ ಕುಸಿದು ಬಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗದ ಮಧ್ಯೆ…

7 hours ago

ರೈಲ್‌ಒನ್‌ ಆಪ್‌ : ಒಂದೇ ಕಡೆ ಸಿಗಲಿದೆ ರೈಲು ಸೌಲಭ್ಯಗಳು

ಬೆಂಗಳೂರು : ಭಾರತೀಯ ರೈಲ್ವೆಯು ತನ್ನ ಅಧಿಕೃತ ಆಪ್ ‘ರೈಲ್‌ಒನ್’ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದರಲ್ಲಿ ರೈಲ್ವೆ ಸೇವೆಗಳೆಲ್ಲವೂ…

7 hours ago

ತಾರಿಖ್‌ ರೆಹಮಾನ್‌ ಬಾಂಗ್ಲಾದೇಶದ ನೂತನ ಪ್ರಧಾನಿ

ಢಾಕಾ : ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ(ಬಿಎನ್‌ಪಿ) ಗೆದ್ದು ಬೀಗಿದೆ. ಸಂಸತ್ತಿನ ಒಟ್ಟು 300 ಸ್ಥಾನಗಳ ಪೈಕಿ…

7 hours ago